<p><strong>ಹೈದರಾಬಾದ್:</strong> ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನರೆಡ್ಡಿ ಮತ್ತು ಅವರ ಬಾವ ಬಿ.ವಿ. ಶ್ರೀನಿವಾಸರೆಡ್ಡಿ ಅವರನ್ನು ಪ್ರಶ್ನಿಸುತ್ತಿರುವ ಸಿಬಿಐ, ಶುಕ್ರವಾರ ಮಾಜಿ ಸಚಿವ ಗಾಲಿ ಕರುಣಾಕರ ರೆಡ್ಡಿ ಅವರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿತು.<br /> <br /> ಇಲ್ಲಿನ ಸಿಬಿಐ ಕಚೇರಿಗೆ ಶುಕ್ರವಾರ ಬೆಳಿಗ್ಗೆ ಹಾಜರಾದ ಕರುಣಾಕರ ರೆಡ್ಡಿ ಅವರನ್ನು ಸಿಬಿಐ ಅಧಿಕಾರಿಗಳು 10 ಗಂಟೆಗಳ ಕಾಲ ವಿಚಾರಣೆಗೆ ಗುರಿಪಡಿಸಿದರು.<br /> <br /> ಈ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕರುಣಾಕರ ರೆಡ್ಡಿ, `ಈ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. 2004ರಲ್ಲೇ ನಾನು ಓಬಳಾಪುರಂ ಮೈನಿಂಗ್ ಕಂಪೆನಿ ನಿರ್ದೇಶಕ ಸ್ಥಾನವನ್ನು ತೊರೆದಿದ್ದೇನೆ. ಸಿಬಿಐ ನೋಟಿಸ್ ಜಾರಿ ಮಾಡಿದ್ದರಿಂದ ವಿಚಾರಣೆಗೆ ಹಾಜರಾದೆ~ ಎಂದರು. ವಿಚಾರಣಾ ಅಧಿಕಾರಿಗಳು ಗುರುವಾರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರನ್ನು ಪ್ರಶ್ನಿಸಿದ್ದರು.<br /> <br /> <strong>ತುಟಿ ಬಿಚ್ಚದ ಜನಾರ್ದನ ರೆಡ್ಡಿ: </strong>ಸಿಬಿಐ ಎಷ್ಟೇ ಪ್ರಶ್ನಿಸಿದರೂ ಸಹ ರೆಡ್ಡಿದ್ವಯರು ತುಟಿ ಬಿಚ್ಚುತ್ತಿಲ್ಲ. ಇದು ಸಿಬಿಐಗೆ ತಲೆನೋವಾಗಿ ಪರಿಣಮಿಸಿದೆ. <br /> <br /> ಇನ್ನು ಎರಡು ದಿನಗಳಲ್ಲಿ ಸಿಬಿಐ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕಾಗಿದ್ದು, ಅಷ್ಟರಲ್ಲಿ ಅವರಿಂದ ಸಾಧ್ಯವಾದಷ್ಟು ಮಾಹಿತಿ ಪಡೆಯಲು ಯತ್ನಿಸುತ್ತಿದೆ.<br /> <br /> ವಿಚಾರಣಾ ಅಧಿಕಾರಿಗಳು ಕೇಳುವ ಪ್ರಶೆಗೆ ಜನಾರ್ದನರೆಡ್ಡಿ ಯಾವುದೇ ಉತ್ತರ ನೀಡುತ್ತಿಲ್ಲ. ಅತ್ತ ಶ್ರೀನಿವಾಸ ರೆಡ್ಡಿ ತನಗೆ ಮರೆಗುಳಿ ರೋಗ ಇದ್ದು, ಕೇಳಿದ ಪ್ರಶ್ನೆಗಳಿಗೆ `ನೆನಪಿಲ್ಲ~ ಎನ್ನುವ ಉತ್ತರವನ್ನು ನೀಡುತ್ತಿದ್ದಾರೆ.<br /> <br /> ಓಬಳಾಪುರಂ ಗಣಿ ಪ್ರದೇಶದ ನಕ್ಷೆಯನ್ನು ತೋರಿಸಿದರೂ ಸಹ, ತನಗೆ ಯಾವುದೇ ನೆನಪಿಲ್ಲ ಎನ್ನುವ ಉತ್ತರವನ್ನು ಶ್ರೀನಿವಾರೆಡ್ಡಿ ನೀಡುತ್ತಿದ್ದಾರೆ.<br /> <br /> ಸಿಬಿಐ ಜಂಟಿ ನಿರ್ದೇಶಕ ಲಕ್ಷ್ಮಿನಾರಾಯಣ ಮತ್ತು ಎಸ್ಪಿ ವೆಂಕಟೇಶ್ ಅವರು ಕೇಳುವ ಪ್ರಶ್ನೆಗಳಿಗೆ ಜನಾರ್ದನ ರೆಡ್ಡಿ ನೇರ ಉತ್ತರ ನೀಡುತ್ತಿಲ್ಲ. ಅಕ್ರಮ ಗಣಿಗಾರಿಕೆಯಲ್ಲಿ ಸಹಕರಿಸಿದ ಸರ್ಕಾರಿ ಅಧಿಕಾರಿಗಳು ಹಾಗೂ ಮುಖಂಡರ ಹೆಸರು ತಿಳಿದುಕೊಳ್ಳಲು ವಿಚಾರಣಾ ಅಧಿಕಾರಿಗಳು ಮಾಡಿದ ಯತ್ನ ಫಲ ನೀಡುತ್ತಿಲ್ಲ.<br /> <br /> ವಿಚಾರಣೆಗೆ ಸಹಕರಿಸದಿದ್ದರೆ ಇಬ್ಬರನ್ನೂ ಮಂಪರು ಪರೀಕ್ಷೆಗೆ ಒಳಪಡಿಸುವುದು ಸಿಬಿಐಗೆ ಅನಿವಾರ್ಯವಾಗಲಿದೆ. ಜತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಜಿ ನಿರ್ದೇಶಕ ವಿ.ಡಿ.ರಾಜಗೋಪಾಲ್ ಅವರನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.<br /> <br /> <strong>ಸೌಲಭ್ಯ ಒದಗಿಸಲು ಸೂಚನೆ: </strong>ಈ ನಡುವೆ ಸಿಬಿಐ ವಿಶೇಷ ನ್ಯಾಯಾಲಯ ರೆಡ್ಡಿದ್ವಯರಿಗೆ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ವಿಚಾರಣಾ ಅಧಿಕಾರಿಗಳಿಗೆ ಸೂಚನೆ ನೀಡಿದೆ.<br /> <br /> ಇಬ್ಬರಿಗೂ ಕನಿಷ್ಠ ಸೌಲಭ್ಯವನ್ನು ವಿಚಾರಣಾ ಅಧಿಕಾರಿಗಳು ನೀಡುತ್ತಿಲ್ಲ ಎಂದು ಜನಾರ್ದನರೆಡ್ಡಿ ಪರ ವಕೀಲರು ಗುರುವಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಕಲ್ಪಿಸಲು ಸೂಚಿಸುವಂತೆ ಕೋರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನರೆಡ್ಡಿ ಮತ್ತು ಅವರ ಬಾವ ಬಿ.ವಿ. ಶ್ರೀನಿವಾಸರೆಡ್ಡಿ ಅವರನ್ನು ಪ್ರಶ್ನಿಸುತ್ತಿರುವ ಸಿಬಿಐ, ಶುಕ್ರವಾರ ಮಾಜಿ ಸಚಿವ ಗಾಲಿ ಕರುಣಾಕರ ರೆಡ್ಡಿ ಅವರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿತು.<br /> <br /> ಇಲ್ಲಿನ ಸಿಬಿಐ ಕಚೇರಿಗೆ ಶುಕ್ರವಾರ ಬೆಳಿಗ್ಗೆ ಹಾಜರಾದ ಕರುಣಾಕರ ರೆಡ್ಡಿ ಅವರನ್ನು ಸಿಬಿಐ ಅಧಿಕಾರಿಗಳು 10 ಗಂಟೆಗಳ ಕಾಲ ವಿಚಾರಣೆಗೆ ಗುರಿಪಡಿಸಿದರು.<br /> <br /> ಈ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕರುಣಾಕರ ರೆಡ್ಡಿ, `ಈ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. 2004ರಲ್ಲೇ ನಾನು ಓಬಳಾಪುರಂ ಮೈನಿಂಗ್ ಕಂಪೆನಿ ನಿರ್ದೇಶಕ ಸ್ಥಾನವನ್ನು ತೊರೆದಿದ್ದೇನೆ. ಸಿಬಿಐ ನೋಟಿಸ್ ಜಾರಿ ಮಾಡಿದ್ದರಿಂದ ವಿಚಾರಣೆಗೆ ಹಾಜರಾದೆ~ ಎಂದರು. ವಿಚಾರಣಾ ಅಧಿಕಾರಿಗಳು ಗುರುವಾರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರನ್ನು ಪ್ರಶ್ನಿಸಿದ್ದರು.<br /> <br /> <strong>ತುಟಿ ಬಿಚ್ಚದ ಜನಾರ್ದನ ರೆಡ್ಡಿ: </strong>ಸಿಬಿಐ ಎಷ್ಟೇ ಪ್ರಶ್ನಿಸಿದರೂ ಸಹ ರೆಡ್ಡಿದ್ವಯರು ತುಟಿ ಬಿಚ್ಚುತ್ತಿಲ್ಲ. ಇದು ಸಿಬಿಐಗೆ ತಲೆನೋವಾಗಿ ಪರಿಣಮಿಸಿದೆ. <br /> <br /> ಇನ್ನು ಎರಡು ದಿನಗಳಲ್ಲಿ ಸಿಬಿಐ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕಾಗಿದ್ದು, ಅಷ್ಟರಲ್ಲಿ ಅವರಿಂದ ಸಾಧ್ಯವಾದಷ್ಟು ಮಾಹಿತಿ ಪಡೆಯಲು ಯತ್ನಿಸುತ್ತಿದೆ.<br /> <br /> ವಿಚಾರಣಾ ಅಧಿಕಾರಿಗಳು ಕೇಳುವ ಪ್ರಶೆಗೆ ಜನಾರ್ದನರೆಡ್ಡಿ ಯಾವುದೇ ಉತ್ತರ ನೀಡುತ್ತಿಲ್ಲ. ಅತ್ತ ಶ್ರೀನಿವಾಸ ರೆಡ್ಡಿ ತನಗೆ ಮರೆಗುಳಿ ರೋಗ ಇದ್ದು, ಕೇಳಿದ ಪ್ರಶ್ನೆಗಳಿಗೆ `ನೆನಪಿಲ್ಲ~ ಎನ್ನುವ ಉತ್ತರವನ್ನು ನೀಡುತ್ತಿದ್ದಾರೆ.<br /> <br /> ಓಬಳಾಪುರಂ ಗಣಿ ಪ್ರದೇಶದ ನಕ್ಷೆಯನ್ನು ತೋರಿಸಿದರೂ ಸಹ, ತನಗೆ ಯಾವುದೇ ನೆನಪಿಲ್ಲ ಎನ್ನುವ ಉತ್ತರವನ್ನು ಶ್ರೀನಿವಾರೆಡ್ಡಿ ನೀಡುತ್ತಿದ್ದಾರೆ.<br /> <br /> ಸಿಬಿಐ ಜಂಟಿ ನಿರ್ದೇಶಕ ಲಕ್ಷ್ಮಿನಾರಾಯಣ ಮತ್ತು ಎಸ್ಪಿ ವೆಂಕಟೇಶ್ ಅವರು ಕೇಳುವ ಪ್ರಶ್ನೆಗಳಿಗೆ ಜನಾರ್ದನ ರೆಡ್ಡಿ ನೇರ ಉತ್ತರ ನೀಡುತ್ತಿಲ್ಲ. ಅಕ್ರಮ ಗಣಿಗಾರಿಕೆಯಲ್ಲಿ ಸಹಕರಿಸಿದ ಸರ್ಕಾರಿ ಅಧಿಕಾರಿಗಳು ಹಾಗೂ ಮುಖಂಡರ ಹೆಸರು ತಿಳಿದುಕೊಳ್ಳಲು ವಿಚಾರಣಾ ಅಧಿಕಾರಿಗಳು ಮಾಡಿದ ಯತ್ನ ಫಲ ನೀಡುತ್ತಿಲ್ಲ.<br /> <br /> ವಿಚಾರಣೆಗೆ ಸಹಕರಿಸದಿದ್ದರೆ ಇಬ್ಬರನ್ನೂ ಮಂಪರು ಪರೀಕ್ಷೆಗೆ ಒಳಪಡಿಸುವುದು ಸಿಬಿಐಗೆ ಅನಿವಾರ್ಯವಾಗಲಿದೆ. ಜತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಜಿ ನಿರ್ದೇಶಕ ವಿ.ಡಿ.ರಾಜಗೋಪಾಲ್ ಅವರನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.<br /> <br /> <strong>ಸೌಲಭ್ಯ ಒದಗಿಸಲು ಸೂಚನೆ: </strong>ಈ ನಡುವೆ ಸಿಬಿಐ ವಿಶೇಷ ನ್ಯಾಯಾಲಯ ರೆಡ್ಡಿದ್ವಯರಿಗೆ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ವಿಚಾರಣಾ ಅಧಿಕಾರಿಗಳಿಗೆ ಸೂಚನೆ ನೀಡಿದೆ.<br /> <br /> ಇಬ್ಬರಿಗೂ ಕನಿಷ್ಠ ಸೌಲಭ್ಯವನ್ನು ವಿಚಾರಣಾ ಅಧಿಕಾರಿಗಳು ನೀಡುತ್ತಿಲ್ಲ ಎಂದು ಜನಾರ್ದನರೆಡ್ಡಿ ಪರ ವಕೀಲರು ಗುರುವಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಕಲ್ಪಿಸಲು ಸೂಚಿಸುವಂತೆ ಕೋರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>