<p><strong>ಬೆಂಗಳೂರು:</strong> `ಕಲೆ ಮತ್ತು ಸಂಸ್ಕೃತಿಯು ಕೇಂದ್ರೀಕರಣವಾಗದೆ ಎಲ್ಲೆಡೆ ಹರಡಬೇಕು' ಎಂದು ಸಾಹಿತಿ ಡಾ. ಎಸ್. ಜಿ.ಸಿದ್ದರಾಮಯ್ಯ ಹೇಳಿದರು.ರಂಗದರ್ಶನ ತಂಡವು ಸೋಮವಾರ ಮಲ್ಲೇಶ್ವರದ ಸೇವಾಸದನದಲ್ಲಿ ಆಯೋಜಿಸಿದ್ದ ಚಲನಚಿತ್ರ ನಟ ಲೋಕೇಶ್ ನೆನಪಿನ `ಕೆಂಪಾದವೊ ಎಲ್ಲ ಕೆಂಪಾದವೊ' ಬಡಾವಣೆ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಸಾಂಸ್ಕೃತಿಕ ನಗರಿ ಎಂದರೆ ಬೆಂಗಳೂರು, ಸಂಸ್ಕೃತಿ, ಕಲೆಯೆಂದರೆ ರವೀಂದ್ರ ಕಲಾಕ್ಷೇತ್ರ ಎಂಬಂತಾಗಿದೆ. ಆದರೆ, ಕಲೆಯನ್ನು ಯಾವುದೇ ಒಂದು ನಗರ ಅಥವಾ ಒಂದು ಸ್ಥಳಕ್ಕೆ ಕೇಂದ್ರೀಕರಣಗೊಳಿಸಬಾರದು. ಕಲೆಯನ್ನು ವಿಕೇಂದ್ರೀಕರಣಗೊಳಿಸಬೇಕು' ಎಂದು ಅಭಿಪ್ರಾಯಪಟ್ಟರು.<br /> <br /> `ಲಂಕೇಶ್ ನಿರ್ದೇಶಿಸಿದ ಎಲ್ಲ ಚಿತ್ರಗಳು ಪ್ರಯೋಗಾತ್ಮಕವಾಗಿದ್ದವು. ಅವರ ಚಿತ್ರದ ಕೆಂಪಾದವೋ ಹಾಡು ಚಲನಚಿತ್ರದ ಪೂರ್ಣ ಆಶಯವನ್ನು ವ್ಯಕ್ತಪಡಿಸುತ್ತಿತ್ತು. ಅದು ಇಡೀ ಚಿತ್ರದ ಚಿತ್ರರೂಪಕವಾಗಿತ್ತು' ಎಂದು ಹೇಳಿದರು.<br /> <br /> `ಇಂದಿನ ಚಿತ್ರಗಳಲ್ಲಿ ಕೀಳು ಅಭಿರುಚಿ ಹೆಚ್ಚಾಗುತ್ತಿದೆ. ಕೆಟ್ಟ ಗೀತೆಗಳಿಗೆ ಇಂದು ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಗೀತೆಗಳನ್ನು ವಿಕಾರಗೊಳಿಸುವವರಿಗೆ ಮಾನ್ಯತೆ ನೀಡಲಾಗುತ್ತಿದೆ. ಗೀತೆ ವಿಕಾರಗೊಳಿಸಿದವರನ್ನು ಒಳ್ಳೆಯ ಸಂಗೀತ ನಿರ್ದೇಶಕರು, ಗೀತೆ ರಚನಾಕಾರರು ಎಂದು ಕೊಂಡಾಡಲಾಗುತ್ತಿದೆ' ಎಂದು ವಿಷಾದಿಸಿದರು.<br /> <br /> `ಇಂದಿನ ಯುವ ಪೀಳಿಗೆಯು ಹವ್ಯಾಸಿ ರಂಗ ಭೂಮಿಯ ಕುರಿತು ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇಂದು ಹವ್ಯಾಸಿ ರಂಗಭೂಮಿಯು ಒಳ್ಳೆಯ ಗುಣಮಟ್ಟದಲ್ಲಿ ಬೆಳೆಯುತ್ತಿದೆ. ಇದು ಮುಂದಿನ ಭವಿಷ್ಯದ ಕುರಿತು ಆಶಾಕಿರಣವನ್ನು ಮೂಡಿಸಿದೆ' ಎಂದು ಅವರು ತಿಳಿಸಿದರು.<br /> <br /> `ನಮ್ಮ ನಾಡಿನಲ್ಲಿ ಅನೇಕ ಕಲಾವಿದರಿಗೆ ಯಾವುದೇ ಮಾನ್ಯತೆಯು ದೊರೆಯುತ್ತಿಲ್ಲ. ಇದರಿಂದ, ಎಷ್ಟೋ ಒಳ್ಳೆಯ ಕಲಾವಿದರು ಬೇಲಿಯ ಮೇಲಿನ ಹೂವಿನಂತೆ ಅಲ್ಲೇ ಅರಳಿ ಬಾಡಿ ಹೋಗುತ್ತಿದ್ದಾರೆ. ಇದು ತಪ್ಪಬೇಕು. ಅರ್ಹ ಕಲಾವಿದರಿಗೆ ಮಾನ್ಯತೆ ನೀಡಬೇಕು' ಎಂದು ಒತ್ತಾಯಿಸಿದರು.<br /> <br /> ಚಲನಚಿತ್ರ ನಿರ್ದೇಶಕ ರವೀಂದ್ರನಾಥ್ ಮಾತನಾಡಿ, `ಲೋಕೇಶ್ ಒಬ್ಬ ಭಾವನಾಜೀವಿ. ನಾನು ಕುಡುಕನಲ್ಲ, ಭಾವನೆಗಳ ತಿರುಕ ಎಂದು ಅವನೇ ಹಲವು ಬಾರಿ ಹೇಳಿಕೊಳ್ಳುತ್ತಿದ್ದ. ತಾನು ಅಳಿದ ನಂತರವೂ ತಾನು ಉಪಯೋಗವಾಗಬೇಕು ಎಂದು ಬಯಸಿ ತಮ್ಮ ದೇಹದಾನ ಮಾಡಿದ ಮಹಾನುಭಾವ' ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಕಲೆ ಮತ್ತು ಸಂಸ್ಕೃತಿಯು ಕೇಂದ್ರೀಕರಣವಾಗದೆ ಎಲ್ಲೆಡೆ ಹರಡಬೇಕು' ಎಂದು ಸಾಹಿತಿ ಡಾ. ಎಸ್. ಜಿ.ಸಿದ್ದರಾಮಯ್ಯ ಹೇಳಿದರು.ರಂಗದರ್ಶನ ತಂಡವು ಸೋಮವಾರ ಮಲ್ಲೇಶ್ವರದ ಸೇವಾಸದನದಲ್ಲಿ ಆಯೋಜಿಸಿದ್ದ ಚಲನಚಿತ್ರ ನಟ ಲೋಕೇಶ್ ನೆನಪಿನ `ಕೆಂಪಾದವೊ ಎಲ್ಲ ಕೆಂಪಾದವೊ' ಬಡಾವಣೆ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಸಾಂಸ್ಕೃತಿಕ ನಗರಿ ಎಂದರೆ ಬೆಂಗಳೂರು, ಸಂಸ್ಕೃತಿ, ಕಲೆಯೆಂದರೆ ರವೀಂದ್ರ ಕಲಾಕ್ಷೇತ್ರ ಎಂಬಂತಾಗಿದೆ. ಆದರೆ, ಕಲೆಯನ್ನು ಯಾವುದೇ ಒಂದು ನಗರ ಅಥವಾ ಒಂದು ಸ್ಥಳಕ್ಕೆ ಕೇಂದ್ರೀಕರಣಗೊಳಿಸಬಾರದು. ಕಲೆಯನ್ನು ವಿಕೇಂದ್ರೀಕರಣಗೊಳಿಸಬೇಕು' ಎಂದು ಅಭಿಪ್ರಾಯಪಟ್ಟರು.<br /> <br /> `ಲಂಕೇಶ್ ನಿರ್ದೇಶಿಸಿದ ಎಲ್ಲ ಚಿತ್ರಗಳು ಪ್ರಯೋಗಾತ್ಮಕವಾಗಿದ್ದವು. ಅವರ ಚಿತ್ರದ ಕೆಂಪಾದವೋ ಹಾಡು ಚಲನಚಿತ್ರದ ಪೂರ್ಣ ಆಶಯವನ್ನು ವ್ಯಕ್ತಪಡಿಸುತ್ತಿತ್ತು. ಅದು ಇಡೀ ಚಿತ್ರದ ಚಿತ್ರರೂಪಕವಾಗಿತ್ತು' ಎಂದು ಹೇಳಿದರು.<br /> <br /> `ಇಂದಿನ ಚಿತ್ರಗಳಲ್ಲಿ ಕೀಳು ಅಭಿರುಚಿ ಹೆಚ್ಚಾಗುತ್ತಿದೆ. ಕೆಟ್ಟ ಗೀತೆಗಳಿಗೆ ಇಂದು ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಗೀತೆಗಳನ್ನು ವಿಕಾರಗೊಳಿಸುವವರಿಗೆ ಮಾನ್ಯತೆ ನೀಡಲಾಗುತ್ತಿದೆ. ಗೀತೆ ವಿಕಾರಗೊಳಿಸಿದವರನ್ನು ಒಳ್ಳೆಯ ಸಂಗೀತ ನಿರ್ದೇಶಕರು, ಗೀತೆ ರಚನಾಕಾರರು ಎಂದು ಕೊಂಡಾಡಲಾಗುತ್ತಿದೆ' ಎಂದು ವಿಷಾದಿಸಿದರು.<br /> <br /> `ಇಂದಿನ ಯುವ ಪೀಳಿಗೆಯು ಹವ್ಯಾಸಿ ರಂಗ ಭೂಮಿಯ ಕುರಿತು ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇಂದು ಹವ್ಯಾಸಿ ರಂಗಭೂಮಿಯು ಒಳ್ಳೆಯ ಗುಣಮಟ್ಟದಲ್ಲಿ ಬೆಳೆಯುತ್ತಿದೆ. ಇದು ಮುಂದಿನ ಭವಿಷ್ಯದ ಕುರಿತು ಆಶಾಕಿರಣವನ್ನು ಮೂಡಿಸಿದೆ' ಎಂದು ಅವರು ತಿಳಿಸಿದರು.<br /> <br /> `ನಮ್ಮ ನಾಡಿನಲ್ಲಿ ಅನೇಕ ಕಲಾವಿದರಿಗೆ ಯಾವುದೇ ಮಾನ್ಯತೆಯು ದೊರೆಯುತ್ತಿಲ್ಲ. ಇದರಿಂದ, ಎಷ್ಟೋ ಒಳ್ಳೆಯ ಕಲಾವಿದರು ಬೇಲಿಯ ಮೇಲಿನ ಹೂವಿನಂತೆ ಅಲ್ಲೇ ಅರಳಿ ಬಾಡಿ ಹೋಗುತ್ತಿದ್ದಾರೆ. ಇದು ತಪ್ಪಬೇಕು. ಅರ್ಹ ಕಲಾವಿದರಿಗೆ ಮಾನ್ಯತೆ ನೀಡಬೇಕು' ಎಂದು ಒತ್ತಾಯಿಸಿದರು.<br /> <br /> ಚಲನಚಿತ್ರ ನಿರ್ದೇಶಕ ರವೀಂದ್ರನಾಥ್ ಮಾತನಾಡಿ, `ಲೋಕೇಶ್ ಒಬ್ಬ ಭಾವನಾಜೀವಿ. ನಾನು ಕುಡುಕನಲ್ಲ, ಭಾವನೆಗಳ ತಿರುಕ ಎಂದು ಅವನೇ ಹಲವು ಬಾರಿ ಹೇಳಿಕೊಳ್ಳುತ್ತಿದ್ದ. ತಾನು ಅಳಿದ ನಂತರವೂ ತಾನು ಉಪಯೋಗವಾಗಬೇಕು ಎಂದು ಬಯಸಿ ತಮ್ಮ ದೇಹದಾನ ಮಾಡಿದ ಮಹಾನುಭಾವ' ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>