<p>ನವಲಗುಂದ: ಈ ಭಾಗದ ರೈತರ ಉಸಿರಾಗಿರುವ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ಒತ್ತಾಯಿಸಿ ರೈತಸೇನಾ ಕರ್ನಾಟಕ ಹಾಗೂ ಕಳಸಾ ಬಂಡೂರಿ ಹೋರಾಟ ಸಮಿತಿಯ ಆಶ್ರಯದಲ್ಲಿ ಬದಾಮಿಯ ಬನಶಂಕರಿ ದೇವಸ್ಥಾನದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರಾರಂಭಿಸಿರುವ ರಥಯಾತ್ರೆ ಶುಕ್ರವಾರ ನವಲಗುಂದಕ್ಕೆ ಆಗಮಿಸಿ ರೈತರಲ್ಲಿ ಜಾಗೃತಿ ಮೂಡಿಸಿತು. <br /> <br /> ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ರೈತರ ನೆಮ್ಮದಿಯ ಬದುಕಿಗೆ ಕಳಸಾ ಬಂಡೂರಿ ನಾಲಾ ಯೋಜನೆಯ ಅವಶ್ಯಕತೆ ಕುರಿತು ತಿಳಿಹೇಳಲಾಯಿತು. ಈ ಯೋಜನೆಯ ಹೆಸರಿನ ಮೇಲೆ ರೈತರ ಶೋಷಣೆ ನಿಲ್ಲಬೇಕು. ರೈತ ಬಾಂಧವರು ಈ ಹೋರಾಟದಲ್ಲಿ ಪಕ್ಷಾತೀತವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.<br /> <br /> ಹರಿಮಂದಿರದ ಮುಂದೆ ಸಭೆಯಲ್ಲಿ ರೈತ ಸೇನಾದ ಅಧ್ಯಕ್ಷ ವಿರೇಶ ಸೊಬರದಮಠ ಮಾತನಾಡಿ, ಬರದಿಂದ ಕಂಗೆಟ್ಟಿರುವ ರೈತರ ಸಮಸ್ಯೆಗಳಿಗೆ ಕಳಸಾ ಬಂಡೂರಿ ನಾಲಾ ಯೋಜನೆಯೊಂದೇ ಪರಿಹಾರ ಎಂದರು.<br /> <br /> ಬದಾಮಿ ಬನಶಂಕರಿ ದೇವಸ್ಥಾನದಿಂದ ಆಕ್ಟೋಬರ್ 25 ರಿಂದ ಪ್ರಾರಂಭವಾಗಿರುವ ಈ ರಥಯಾತ್ರೆ ಇಂದಿಗೆ 21 ದಿನಗಳಾಗಿವೆ. ಇದೇ 20 ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಯೋಜನೆ ಅನುಷ್ಠಾನವಾಗು ವವರೆಗೆ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.<br /> <br /> ಆನಂದ ಹೊಸಗೌಡರ, ಎಚ್.ಕೆ. ಲಕ್ಕಣ್ಣವರ, ಕೆಂಚಪ್ಪನವರ, ಸುಭಾಸ ಬಾಳಿಕಾಯಿ, ಎಸ್.ಆರ್.ಅಂಬಲಿ, ಅಪ್ಪಣ್ಣ ಹಿರಗಣ್ಣವರ, ಈಶ್ವರ ಮೀಸಿ, ಶರಣಪ್ಪ ಕೊಪ್ಪದ, ಪ್ರದೀಪ ಪೂಜಾರ, ಕಲ್ಲನಗೌಡ ಬಸನಗೌಡ್ರ, ಬಸವರಾಜ ಕುಂದಗೋಳ, ಈರಣ್ಣ ಮೊರಬಣ್ಣವರ, ಪಿ.ಸಿ.ಚೆನ್ನಪ್ಪಗೌಡರ, ಎಸ್.ಪಿ.ಕೆಂಚಪ್ಪನವರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವಲಗುಂದ: ಈ ಭಾಗದ ರೈತರ ಉಸಿರಾಗಿರುವ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ಒತ್ತಾಯಿಸಿ ರೈತಸೇನಾ ಕರ್ನಾಟಕ ಹಾಗೂ ಕಳಸಾ ಬಂಡೂರಿ ಹೋರಾಟ ಸಮಿತಿಯ ಆಶ್ರಯದಲ್ಲಿ ಬದಾಮಿಯ ಬನಶಂಕರಿ ದೇವಸ್ಥಾನದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರಾರಂಭಿಸಿರುವ ರಥಯಾತ್ರೆ ಶುಕ್ರವಾರ ನವಲಗುಂದಕ್ಕೆ ಆಗಮಿಸಿ ರೈತರಲ್ಲಿ ಜಾಗೃತಿ ಮೂಡಿಸಿತು. <br /> <br /> ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ರೈತರ ನೆಮ್ಮದಿಯ ಬದುಕಿಗೆ ಕಳಸಾ ಬಂಡೂರಿ ನಾಲಾ ಯೋಜನೆಯ ಅವಶ್ಯಕತೆ ಕುರಿತು ತಿಳಿಹೇಳಲಾಯಿತು. ಈ ಯೋಜನೆಯ ಹೆಸರಿನ ಮೇಲೆ ರೈತರ ಶೋಷಣೆ ನಿಲ್ಲಬೇಕು. ರೈತ ಬಾಂಧವರು ಈ ಹೋರಾಟದಲ್ಲಿ ಪಕ್ಷಾತೀತವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.<br /> <br /> ಹರಿಮಂದಿರದ ಮುಂದೆ ಸಭೆಯಲ್ಲಿ ರೈತ ಸೇನಾದ ಅಧ್ಯಕ್ಷ ವಿರೇಶ ಸೊಬರದಮಠ ಮಾತನಾಡಿ, ಬರದಿಂದ ಕಂಗೆಟ್ಟಿರುವ ರೈತರ ಸಮಸ್ಯೆಗಳಿಗೆ ಕಳಸಾ ಬಂಡೂರಿ ನಾಲಾ ಯೋಜನೆಯೊಂದೇ ಪರಿಹಾರ ಎಂದರು.<br /> <br /> ಬದಾಮಿ ಬನಶಂಕರಿ ದೇವಸ್ಥಾನದಿಂದ ಆಕ್ಟೋಬರ್ 25 ರಿಂದ ಪ್ರಾರಂಭವಾಗಿರುವ ಈ ರಥಯಾತ್ರೆ ಇಂದಿಗೆ 21 ದಿನಗಳಾಗಿವೆ. ಇದೇ 20 ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಯೋಜನೆ ಅನುಷ್ಠಾನವಾಗು ವವರೆಗೆ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.<br /> <br /> ಆನಂದ ಹೊಸಗೌಡರ, ಎಚ್.ಕೆ. ಲಕ್ಕಣ್ಣವರ, ಕೆಂಚಪ್ಪನವರ, ಸುಭಾಸ ಬಾಳಿಕಾಯಿ, ಎಸ್.ಆರ್.ಅಂಬಲಿ, ಅಪ್ಪಣ್ಣ ಹಿರಗಣ್ಣವರ, ಈಶ್ವರ ಮೀಸಿ, ಶರಣಪ್ಪ ಕೊಪ್ಪದ, ಪ್ರದೀಪ ಪೂಜಾರ, ಕಲ್ಲನಗೌಡ ಬಸನಗೌಡ್ರ, ಬಸವರಾಜ ಕುಂದಗೋಳ, ಈರಣ್ಣ ಮೊರಬಣ್ಣವರ, ಪಿ.ಸಿ.ಚೆನ್ನಪ್ಪಗೌಡರ, ಎಸ್.ಪಿ.ಕೆಂಚಪ್ಪನವರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>