<p>ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ಪರ್ಧಿಸುತ್ತಿರುವವರ ಭಾಷಾಜ್ಞಾನ ಮತ್ತು ಕಾಗುಣಿತ ದೋಷಗಳಿಗಿಂತ ಗಂಭೀರವಾದ ಸಮಸ್ಯೆಗಳ ಸುಳಿಯಲ್ಲಿ ಪರಿಷತ್ತು ಇಂದು ನಲುಗುತ್ತಿದೆ (ಪ್ರವಾ. ಮಾ.29, ಶೇಷನಾರಾಯಣ ಲೇಖನ). ಚುನಾವಣೆ ವ್ಯವಸ್ಥೆಗೆ ಅಂಟಿಕೊಂಡಿರುವ ಹಣ, ಹೆಂಡ, ಜಾತಿಯ ಲಾಬಿಗಳು ಪರಿಷತ್ತಿಗೂ ಹಬ್ಬಿರುವುದು ಖೇದಕರ. <br /> <br /> ಸಂವೇದನಾಶೀಲ ಸಾಹಿತಿಗಳು ಪರಿಷತ್ತಿನ ಸಮೀಪವೂ ಸುಳಿಯಲು ಸಾಧ್ಯವಾಗದ ವಾತಾವರಣ ಇದೆ.ಏಕೆಂದರೆ ಚುನಾವಣೆಯೇ ಖರ್ಚಿನ ಬಾಬತ್ತು. ಪರಿಷತ್ತಿನ ಮತದಾರರಿಗೆ ಅಭ್ಯರ್ಥಿಗಳು ಮನವಿ ಪತ್ರ ಕಳಿಸಲು ಲಕ್ಷಾಂತರ ರೂಪಾಯಿ ಬೇಕು. ಇನ್ನು ಇಡೀ ಕರ್ನಾಟಕವನ್ನು ಸುತ್ತಿ ಬರಲು ಇನ್ನೂ ಹೆಚ್ಚಿನ ಹಣ ಬೇಕು. <br /> <br /> ಇಷ್ಟೆಲ್ಲ ಖರ್ಚು ಮಾಡಿಕೊಳ್ಳುವ ಹುರಿಯಾಳುಗಳಿಗೆ ಹೂಡಿದ ಬಂಡವಾಳನ್ನು ಮರಳಿ ಪಡೆಯಬೇಕೆಂಬ ತವಕವಿದ್ದರೆ ಅದು ಅಕಾರಣವೇನಲ್ಲ.ಅಧ್ಯಕ್ಷಗಿರಿಯೆನ್ನುವುದು ಜಾತಿ ಸಂವರ್ಧನೆ, ಸ್ವಜನಹಿತಾಸಕ್ತಿ, ಅಧಿಕಾರದ ನೆಟ್ವರ್ಕ್ಗಳನ್ನು ಸ್ಥಾಪಿಸಿಕೊಳ್ಳುವ ಸಾಧನಗಳಾಗಿವೆ. <br /> <br /> ಸಾಹಿತಿಗಳೇ ಪರಿಷತ್ತಿನ ಪದಾಧಿಕಾರಿಗಳಾಗಬೇಕೆಂಬ ನಿಯಮವೇನೂ ಇಲ್ಲ. ಉತ್ತಮ ಸಂಘಟಕರು, ಕ್ರಿಯಾಶೀಲ ಆಡಳಿತಗಾರರು ಅದರ ಚುಕ್ಕಾಣಿ ಹಿಡಿದರೂ ಸಾಕೆಂಬ ಮನೋಭಾವವನ್ನು ಮತದಾರರಲ್ಲಿ ಬೆಳೆಸಲಾಗಿದೆ. ಆದರೆ, ಇತ್ತೀಚಿಗೆ ಈ ಮಾನದಂಡಗಳು ಕೂಡಾ ಅನ್ವಯವಾಗುತ್ತಿಲ್ಲ. <br /> <br /> ಬೇಕಾಬಿಟ್ಟಿ ಹಣ, ಧೂರ್ತ ರಾಜಕಾರಣಿಗಳ ಬೆಂಬಲ, ಜಾತಿ ಸಮೀಕರಣ, ಅಸಹ್ಯಕರ ತಂತ್ರಗಾರಿಕೆಗಳೇ ಇಂದು ಸೇರಿಕೊಳ್ಳುತ್ತಿರುವುದು ಸಾಂಸ್ಕೃತಿಕ ಲೋಕದ ದಿವಾಳಿತನವೇ ಆಗಿದೆ.<br /> <br /> ಸಾಹಿತಿಗಳಲ್ಲದವರಿಗೆ ಸ್ವಹಿತಾಸಕ್ತಿಗಾಗಿ ಪರಿಷತ್ತಿನ ಚುಕ್ಕಾಣಿ ಹಿಡಿಯಬೇಕಾಗಿದೆ. ಇಂಥ ಅವಸ್ಥೆಯಲ್ಲಿ ಸಾಹಿತಿ ಮತದಾರರು ದಿಕ್ಕು ತೋಚದೆ ಅತಂತ್ರ ಸ್ಥಿತಿಯಲ್ಲಿ ನಿಂತಿದ್ದಾರೆ. ಆದ್ದರಿಂದ ಇದು ಕಾಗುಣಿತ ದೋಷ ಮಾಡುವ ಸ್ಪರ್ಧಾಳುಗಳ ಉಪದ್ರವಕಿಂತ ಹೆಚ್ಚು ಕಳವಳಕಾರಿ ಸಂಗತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ಪರ್ಧಿಸುತ್ತಿರುವವರ ಭಾಷಾಜ್ಞಾನ ಮತ್ತು ಕಾಗುಣಿತ ದೋಷಗಳಿಗಿಂತ ಗಂಭೀರವಾದ ಸಮಸ್ಯೆಗಳ ಸುಳಿಯಲ್ಲಿ ಪರಿಷತ್ತು ಇಂದು ನಲುಗುತ್ತಿದೆ (ಪ್ರವಾ. ಮಾ.29, ಶೇಷನಾರಾಯಣ ಲೇಖನ). ಚುನಾವಣೆ ವ್ಯವಸ್ಥೆಗೆ ಅಂಟಿಕೊಂಡಿರುವ ಹಣ, ಹೆಂಡ, ಜಾತಿಯ ಲಾಬಿಗಳು ಪರಿಷತ್ತಿಗೂ ಹಬ್ಬಿರುವುದು ಖೇದಕರ. <br /> <br /> ಸಂವೇದನಾಶೀಲ ಸಾಹಿತಿಗಳು ಪರಿಷತ್ತಿನ ಸಮೀಪವೂ ಸುಳಿಯಲು ಸಾಧ್ಯವಾಗದ ವಾತಾವರಣ ಇದೆ.ಏಕೆಂದರೆ ಚುನಾವಣೆಯೇ ಖರ್ಚಿನ ಬಾಬತ್ತು. ಪರಿಷತ್ತಿನ ಮತದಾರರಿಗೆ ಅಭ್ಯರ್ಥಿಗಳು ಮನವಿ ಪತ್ರ ಕಳಿಸಲು ಲಕ್ಷಾಂತರ ರೂಪಾಯಿ ಬೇಕು. ಇನ್ನು ಇಡೀ ಕರ್ನಾಟಕವನ್ನು ಸುತ್ತಿ ಬರಲು ಇನ್ನೂ ಹೆಚ್ಚಿನ ಹಣ ಬೇಕು. <br /> <br /> ಇಷ್ಟೆಲ್ಲ ಖರ್ಚು ಮಾಡಿಕೊಳ್ಳುವ ಹುರಿಯಾಳುಗಳಿಗೆ ಹೂಡಿದ ಬಂಡವಾಳನ್ನು ಮರಳಿ ಪಡೆಯಬೇಕೆಂಬ ತವಕವಿದ್ದರೆ ಅದು ಅಕಾರಣವೇನಲ್ಲ.ಅಧ್ಯಕ್ಷಗಿರಿಯೆನ್ನುವುದು ಜಾತಿ ಸಂವರ್ಧನೆ, ಸ್ವಜನಹಿತಾಸಕ್ತಿ, ಅಧಿಕಾರದ ನೆಟ್ವರ್ಕ್ಗಳನ್ನು ಸ್ಥಾಪಿಸಿಕೊಳ್ಳುವ ಸಾಧನಗಳಾಗಿವೆ. <br /> <br /> ಸಾಹಿತಿಗಳೇ ಪರಿಷತ್ತಿನ ಪದಾಧಿಕಾರಿಗಳಾಗಬೇಕೆಂಬ ನಿಯಮವೇನೂ ಇಲ್ಲ. ಉತ್ತಮ ಸಂಘಟಕರು, ಕ್ರಿಯಾಶೀಲ ಆಡಳಿತಗಾರರು ಅದರ ಚುಕ್ಕಾಣಿ ಹಿಡಿದರೂ ಸಾಕೆಂಬ ಮನೋಭಾವವನ್ನು ಮತದಾರರಲ್ಲಿ ಬೆಳೆಸಲಾಗಿದೆ. ಆದರೆ, ಇತ್ತೀಚಿಗೆ ಈ ಮಾನದಂಡಗಳು ಕೂಡಾ ಅನ್ವಯವಾಗುತ್ತಿಲ್ಲ. <br /> <br /> ಬೇಕಾಬಿಟ್ಟಿ ಹಣ, ಧೂರ್ತ ರಾಜಕಾರಣಿಗಳ ಬೆಂಬಲ, ಜಾತಿ ಸಮೀಕರಣ, ಅಸಹ್ಯಕರ ತಂತ್ರಗಾರಿಕೆಗಳೇ ಇಂದು ಸೇರಿಕೊಳ್ಳುತ್ತಿರುವುದು ಸಾಂಸ್ಕೃತಿಕ ಲೋಕದ ದಿವಾಳಿತನವೇ ಆಗಿದೆ.<br /> <br /> ಸಾಹಿತಿಗಳಲ್ಲದವರಿಗೆ ಸ್ವಹಿತಾಸಕ್ತಿಗಾಗಿ ಪರಿಷತ್ತಿನ ಚುಕ್ಕಾಣಿ ಹಿಡಿಯಬೇಕಾಗಿದೆ. ಇಂಥ ಅವಸ್ಥೆಯಲ್ಲಿ ಸಾಹಿತಿ ಮತದಾರರು ದಿಕ್ಕು ತೋಚದೆ ಅತಂತ್ರ ಸ್ಥಿತಿಯಲ್ಲಿ ನಿಂತಿದ್ದಾರೆ. ಆದ್ದರಿಂದ ಇದು ಕಾಗುಣಿತ ದೋಷ ಮಾಡುವ ಸ್ಪರ್ಧಾಳುಗಳ ಉಪದ್ರವಕಿಂತ ಹೆಚ್ಚು ಕಳವಳಕಾರಿ ಸಂಗತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>