<p><strong>ಹೊಳಲ್ಕೆರೆ</strong>: ಮುಂದಿನ ಒಂದು ವರ್ಷದಲ್ಲಿ ಹಳ್ಳಿಗಳಲ್ಲಿ ರೂ 30 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.ತಾಲ್ಲೂಕಿನ ಗಂಜಿಗಟ್ಟೆಯಲ್ಲಿ ಭಾನುವಾರ ರೂ 10 ಲಕ್ಷ ವೆಚ್ಚದ ವಾಲ್ಮೀಕಿ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.<br /> <br /> ನಾನು ಶಾಸಕನಾದಾಗ ಇಡೀ ತಾಲ್ಲೂಕಿನಲ್ಲಿ ಉತ್ತಮ ರಸ್ತೆಗಳೇ ಇರಲಿಲ್ಲ. ಆದ್ದರಿಂದ ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ, ಹೆಚ್ಚಿನ ಅನುದಾನ ರಸ್ತೆ ನಿರ್ಮಾಣಕ್ಕಾಗಿ ಬಳಸಿದ್ದೇನೆ. ಕಳೆದ ನಾಲ್ಕು ವರ್ಷಗಳಲ್ಲಿ ರಸ್ತೆಗಳ ಅಭಿವೃದ್ಧಿಗಾಗಿಯೇ ಸುಮಾರು ರೂ 300 ಕೋಟಿ ಖರ್ಚು ಮಾಡಲಾಗಿದೆ. <br /> <br /> ಭರಮಸಾಗರ ಸೇರಿ ಈ ಕ್ಷೇತ್ರದಲ್ಲಿ 493 ಹಳ್ಳಿಗಳಿದ್ದು, ಈಗ ಪ್ರತಿ ಗ್ರಾಮದಲ್ಲೂ ಒಂದಿಲ್ಲೊಂದು ರಸ್ತೆ ನಿರ್ಮಿಸಲಾಗಿದೆ. ತಾಲ್ಲೂಕಿನ ಗಡಿಗ್ರಾಮ ಬಂಡೆ ಬೊಮ್ಮೇನಹಳ್ಳಿಯಿಂದ ರಾಜ್ಯ ಹೆದ್ದಾರಿ-47ರಲ್ಲಿ ರಸ್ತೆ ಅಭಿವೃದ್ಧಿಪಡಿಸಲು ರೂ 25 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.<br /> <br /> ಚಿಕ್ಕಜಾಜೂರು ಗ್ರಾಮದ ಮುಖ್ಯರಸ್ತೆಯನ್ನು ರೂ 4 ಕೋಟಿ ವೆಚ್ಚದಲ್ಲಿ ಸುಮಾರು 100 ಅಡಿ ವಿಸ್ತರಿಸಲಾಗಿದೆ. ಈ ಭಾಗದ ಮುತ್ತಗದೂರು ಕೆರೆಗೆ ರೂ 1 ಕೋಟಿ, ಕಾಗಳಗೆರೆ ಕೆರೆಗೆ ರೂ 1 ಕೋಟಿ, ಅಂದನೂರು ಕೆರೆಗೆ ರೂ 80 ಲಕ್ಷ ವೆಚ್ಚಮಾಡಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.<br /> <br /> 65 ವರ್ಷಗಳನ್ನು ರಾಜಕಾರಣಿಗಳ ಆಶ್ವಾಸನೆಗಳಲ್ಲೇ ಕಳೆದಿದ್ದೇವೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಮತದಾರರು ಕೆಲವು ನಿರೀಕ್ಷೆಗಳನ್ನು ಇಟ್ಟುಕೊಂಡು ಜನಪ್ರತಿನಿಧಿಗಳನ್ನು ಆರಿಸುತ್ತಾರೆ. ಅವರ ಕನಿಷ್ಠ ನಿರೀಕ್ಷೆಗಳನ್ನಾದರೂ, ಈಡೇರಿಸುವ ಜವಾಬ್ದಾರಿ ರಾಜಕಾರಣಿಗೆ ಇರಬೇಕು. <br /> <br /> ರಸ್ತೆ ವಿಸ್ತರಣೆ, ಹೊಸ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಾಗ ಅನೇಕ ಅಡೆತಡೆಗಳು ಎದುರಾಗುತ್ತವೆ. ಆದರೆ, ಒಬ್ಬಿಬ್ಬರ ವೈಯಕ್ತಿಕ ಹಿತಾಸಕ್ತಿಗಳಿಗೆ ಮಣಿದು ಸಾರ್ವಜನಿಕ ಕೆಲಸ ನಿಲ್ಲಿಸುವ ಜಾಯಮಾನ ನನ್ನದಲ್ಲ ಎಂದರು.<br /> <br /> ತಾಲ್ಲೂಕು ಪಂಚಾಯ್ತಿ ಸದಸ್ಯ ಓಂಕಾರಸ್ವಾಮಿ ಮಾತನಾಡಿ, ಶಾಸಕರು ರೂ 500 ಕೋಟಿ ಅನುದಾನ ತಂದಿದ್ದಾರೆ. ಅಭಿವೃದ್ಧಿ ಕಾರ್ಯ ನೋಡಿ, ಮೆಚ್ಚುಗೆ ವ್ಯಕ್ತಪಡಿಸಬೇಕೇ ಹೊರತು, ಕಾಲೆಳೆಯಬಾರದು. ಮುಂದಿನ ದಿನಗಳಲ್ಲಿ ಜಾತಿ, ಪಕ್ಷ ನೋಡದೆ ಉತ್ತಮ ವ್ಯಕ್ತಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.<br /> ರೂ 75 ಲಕ್ಷ ವೆಚ್ಚದ ಚಿಕ್ಕಜಾಜೂರು- ಕಾವಲು, ರೂ 10 ಲಕ್ಷ ವೆಚ್ಚದ ಗ್ಯಾರಹಳ್ಳಿ ವಡ್ಡರಹಟ್ಟಿಯ ಕಾಂಕ್ರಿಟ್ ರಸ್ತೆ ಉದ್ಘಾಟಿಸಲಾಯಿತು.<br /> <br /> ಡಿ.ಸಿ. ಮೋಹನ್, ಎಪಿಎಂಸಿ ಅಧ್ಯಕ್ಷ ಬಸವಂತಪ್ಪ, ನಿರ್ದೇಶಕ ಮರುಳಸಿದ್ದಪ್ಪ, ರಮೇಶ ನಾಯ್ಕ, ಪಾಲಪ್ಪ, ನಾಗಪ್ಪ, ಹಾಲೇಶ್, ಅಚ್ಚತಾನಂದ, ಮಹಮದ್ ಸಾಬ್, ದಯಾನಂದ್, ಆಂಜನಪ್ಪ, ಜಮೀರ್ ಬಾಷಾ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳಲ್ಕೆರೆ</strong>: ಮುಂದಿನ ಒಂದು ವರ್ಷದಲ್ಲಿ ಹಳ್ಳಿಗಳಲ್ಲಿ ರೂ 30 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.ತಾಲ್ಲೂಕಿನ ಗಂಜಿಗಟ್ಟೆಯಲ್ಲಿ ಭಾನುವಾರ ರೂ 10 ಲಕ್ಷ ವೆಚ್ಚದ ವಾಲ್ಮೀಕಿ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.<br /> <br /> ನಾನು ಶಾಸಕನಾದಾಗ ಇಡೀ ತಾಲ್ಲೂಕಿನಲ್ಲಿ ಉತ್ತಮ ರಸ್ತೆಗಳೇ ಇರಲಿಲ್ಲ. ಆದ್ದರಿಂದ ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ, ಹೆಚ್ಚಿನ ಅನುದಾನ ರಸ್ತೆ ನಿರ್ಮಾಣಕ್ಕಾಗಿ ಬಳಸಿದ್ದೇನೆ. ಕಳೆದ ನಾಲ್ಕು ವರ್ಷಗಳಲ್ಲಿ ರಸ್ತೆಗಳ ಅಭಿವೃದ್ಧಿಗಾಗಿಯೇ ಸುಮಾರು ರೂ 300 ಕೋಟಿ ಖರ್ಚು ಮಾಡಲಾಗಿದೆ. <br /> <br /> ಭರಮಸಾಗರ ಸೇರಿ ಈ ಕ್ಷೇತ್ರದಲ್ಲಿ 493 ಹಳ್ಳಿಗಳಿದ್ದು, ಈಗ ಪ್ರತಿ ಗ್ರಾಮದಲ್ಲೂ ಒಂದಿಲ್ಲೊಂದು ರಸ್ತೆ ನಿರ್ಮಿಸಲಾಗಿದೆ. ತಾಲ್ಲೂಕಿನ ಗಡಿಗ್ರಾಮ ಬಂಡೆ ಬೊಮ್ಮೇನಹಳ್ಳಿಯಿಂದ ರಾಜ್ಯ ಹೆದ್ದಾರಿ-47ರಲ್ಲಿ ರಸ್ತೆ ಅಭಿವೃದ್ಧಿಪಡಿಸಲು ರೂ 25 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.<br /> <br /> ಚಿಕ್ಕಜಾಜೂರು ಗ್ರಾಮದ ಮುಖ್ಯರಸ್ತೆಯನ್ನು ರೂ 4 ಕೋಟಿ ವೆಚ್ಚದಲ್ಲಿ ಸುಮಾರು 100 ಅಡಿ ವಿಸ್ತರಿಸಲಾಗಿದೆ. ಈ ಭಾಗದ ಮುತ್ತಗದೂರು ಕೆರೆಗೆ ರೂ 1 ಕೋಟಿ, ಕಾಗಳಗೆರೆ ಕೆರೆಗೆ ರೂ 1 ಕೋಟಿ, ಅಂದನೂರು ಕೆರೆಗೆ ರೂ 80 ಲಕ್ಷ ವೆಚ್ಚಮಾಡಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.<br /> <br /> 65 ವರ್ಷಗಳನ್ನು ರಾಜಕಾರಣಿಗಳ ಆಶ್ವಾಸನೆಗಳಲ್ಲೇ ಕಳೆದಿದ್ದೇವೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಮತದಾರರು ಕೆಲವು ನಿರೀಕ್ಷೆಗಳನ್ನು ಇಟ್ಟುಕೊಂಡು ಜನಪ್ರತಿನಿಧಿಗಳನ್ನು ಆರಿಸುತ್ತಾರೆ. ಅವರ ಕನಿಷ್ಠ ನಿರೀಕ್ಷೆಗಳನ್ನಾದರೂ, ಈಡೇರಿಸುವ ಜವಾಬ್ದಾರಿ ರಾಜಕಾರಣಿಗೆ ಇರಬೇಕು. <br /> <br /> ರಸ್ತೆ ವಿಸ್ತರಣೆ, ಹೊಸ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಾಗ ಅನೇಕ ಅಡೆತಡೆಗಳು ಎದುರಾಗುತ್ತವೆ. ಆದರೆ, ಒಬ್ಬಿಬ್ಬರ ವೈಯಕ್ತಿಕ ಹಿತಾಸಕ್ತಿಗಳಿಗೆ ಮಣಿದು ಸಾರ್ವಜನಿಕ ಕೆಲಸ ನಿಲ್ಲಿಸುವ ಜಾಯಮಾನ ನನ್ನದಲ್ಲ ಎಂದರು.<br /> <br /> ತಾಲ್ಲೂಕು ಪಂಚಾಯ್ತಿ ಸದಸ್ಯ ಓಂಕಾರಸ್ವಾಮಿ ಮಾತನಾಡಿ, ಶಾಸಕರು ರೂ 500 ಕೋಟಿ ಅನುದಾನ ತಂದಿದ್ದಾರೆ. ಅಭಿವೃದ್ಧಿ ಕಾರ್ಯ ನೋಡಿ, ಮೆಚ್ಚುಗೆ ವ್ಯಕ್ತಪಡಿಸಬೇಕೇ ಹೊರತು, ಕಾಲೆಳೆಯಬಾರದು. ಮುಂದಿನ ದಿನಗಳಲ್ಲಿ ಜಾತಿ, ಪಕ್ಷ ನೋಡದೆ ಉತ್ತಮ ವ್ಯಕ್ತಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.<br /> ರೂ 75 ಲಕ್ಷ ವೆಚ್ಚದ ಚಿಕ್ಕಜಾಜೂರು- ಕಾವಲು, ರೂ 10 ಲಕ್ಷ ವೆಚ್ಚದ ಗ್ಯಾರಹಳ್ಳಿ ವಡ್ಡರಹಟ್ಟಿಯ ಕಾಂಕ್ರಿಟ್ ರಸ್ತೆ ಉದ್ಘಾಟಿಸಲಾಯಿತು.<br /> <br /> ಡಿ.ಸಿ. ಮೋಹನ್, ಎಪಿಎಂಸಿ ಅಧ್ಯಕ್ಷ ಬಸವಂತಪ್ಪ, ನಿರ್ದೇಶಕ ಮರುಳಸಿದ್ದಪ್ಪ, ರಮೇಶ ನಾಯ್ಕ, ಪಾಲಪ್ಪ, ನಾಗಪ್ಪ, ಹಾಲೇಶ್, ಅಚ್ಚತಾನಂದ, ಮಹಮದ್ ಸಾಬ್, ದಯಾನಂದ್, ಆಂಜನಪ್ಪ, ಜಮೀರ್ ಬಾಷಾ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>