<p><strong>ಕಾಬೂಲ್ (ಪಿಟಿಐ):</strong> ತಾಲಿಬಾನ್ ಉಗ್ರರು ಇಲ್ಲಿನ ಸಂಸತ್ ಭವನ, ರಾಯಭಾರ ಕಚೇರಿಗಳು, ಸರ್ಕಾರಿ ಕಚೇರಿಗಳು, ವಿಮಾನ ನಿಲ್ದಾಣವನ್ನು ಗುರಿಯಾಗಿರಿಸಿಕೊಂಡು ಭಾನುವಾರ ಏಕಾಏಕಿ ನಡೆಸಿದ ಸಂಯೋಜಿತ ದಾಳಿಗಳಿಂದ ಕಾಬೂಲ್ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ.</p>.<table align="right" border="1" cellpadding="4" cellspacing="3" width="200"> <tbody> <tr> <td bgcolor="#f2f0f0"> <p><strong>ಭಾರತೀಯರು ಸುರಕ್ಷಿತ<br /> </strong><span style="font-size: small">ಆಫ್ಘಾನಿಸ್ತಾನದಲ್ಲಿ ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದು, ಅವರನ್ನು ಗುರಿಯಾಗಿರಿಸಿ ನಡೆಸಿದ ದಾಳಿ ಇದಲ್ಲ ಎಂದು ಭಾರತೀಯ ರಾಯಭಾರಿ ಗೌತಮ್ ಮುಖ್ಯೋಪಾಧ್ಯಾಯ ತಿಳಿಸಿದ್ದಾರೆ.<br /> ದಾಳಿ ನಡೆದ ಸ್ಥಳದಿಂದ ಭಾರತೀಯ ರಾಯಭಾರ ಕಚೇರಿಯು 2-3 ಕಿ.ಮೀ ದೂರದಲ್ಲಿದ್ದು, ಅದಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಐಟಿಬಿಪಿ ಪ್ರಧಾನ ನಿರ್ದೇಶಕ ಜನರಲ್ ರಂಜಿತ್ ಸಿನ್ಹಾ ತಿಳಿಸಿದ್ದಾರೆ.</span></p> </td> </tr> </tbody> </table>.<p><br /> <br /> ಘಟನೆಯಲ್ಲಿ 7 ಉಗ್ರರು ಸಾವಿಗೀಡಾಗಿದ್ದಾರೆ. ಜೊತೆಗೆ ನಾಗರಿಕರು ಸೇರಿದಂತೆ ಇತರ ಹಲವರು ಸತ್ತಿರಬಹುದು ಎಂದು ಶಂಕಿಸಲಾಗಿದೆ. 11 ಪೊಲೀಸರು ಗಾಯಗೊಂಡಿದ್ದಾರೆ. ಆದರೆ ಸಾವು ನೋವಿನ ನಿಖರ ಸಂಖ್ಯೆ ಲಭ್ಯವಾಗಿಲ್ಲ ಎಂದು ಒಳಾಡಳಿತ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.<br /> <br /> ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಕೈಬಾಂಬ್ಗಳನ್ನು ಹೊಂದಿದ್ದ ಉಗ್ರರು ವಜೀರ್ ಅಕ್ಬರ್ ಖಾನ್ ಪ್ರದೇಶದಲ್ಲಿನ ನೂತನ ಐಶಾರಾಮಿ ಹೋಟೆಲ್ `ಕಾಬೂಲ್ ಸ್ಟಾರ್~ ಮೇಲೆ ಆತ್ಮಾಹುತಿ ದಾಳಿ ನಡೆಸಿ ಅದನ್ನು ವಶಕ್ಕೆ ತೆಗೆದುಕೊಂಡರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಬೂಲ್ (ಪಿಟಿಐ):</strong> ತಾಲಿಬಾನ್ ಉಗ್ರರು ಇಲ್ಲಿನ ಸಂಸತ್ ಭವನ, ರಾಯಭಾರ ಕಚೇರಿಗಳು, ಸರ್ಕಾರಿ ಕಚೇರಿಗಳು, ವಿಮಾನ ನಿಲ್ದಾಣವನ್ನು ಗುರಿಯಾಗಿರಿಸಿಕೊಂಡು ಭಾನುವಾರ ಏಕಾಏಕಿ ನಡೆಸಿದ ಸಂಯೋಜಿತ ದಾಳಿಗಳಿಂದ ಕಾಬೂಲ್ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ.</p>.<table align="right" border="1" cellpadding="4" cellspacing="3" width="200"> <tbody> <tr> <td bgcolor="#f2f0f0"> <p><strong>ಭಾರತೀಯರು ಸುರಕ್ಷಿತ<br /> </strong><span style="font-size: small">ಆಫ್ಘಾನಿಸ್ತಾನದಲ್ಲಿ ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದು, ಅವರನ್ನು ಗುರಿಯಾಗಿರಿಸಿ ನಡೆಸಿದ ದಾಳಿ ಇದಲ್ಲ ಎಂದು ಭಾರತೀಯ ರಾಯಭಾರಿ ಗೌತಮ್ ಮುಖ್ಯೋಪಾಧ್ಯಾಯ ತಿಳಿಸಿದ್ದಾರೆ.<br /> ದಾಳಿ ನಡೆದ ಸ್ಥಳದಿಂದ ಭಾರತೀಯ ರಾಯಭಾರ ಕಚೇರಿಯು 2-3 ಕಿ.ಮೀ ದೂರದಲ್ಲಿದ್ದು, ಅದಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಐಟಿಬಿಪಿ ಪ್ರಧಾನ ನಿರ್ದೇಶಕ ಜನರಲ್ ರಂಜಿತ್ ಸಿನ್ಹಾ ತಿಳಿಸಿದ್ದಾರೆ.</span></p> </td> </tr> </tbody> </table>.<p><br /> <br /> ಘಟನೆಯಲ್ಲಿ 7 ಉಗ್ರರು ಸಾವಿಗೀಡಾಗಿದ್ದಾರೆ. ಜೊತೆಗೆ ನಾಗರಿಕರು ಸೇರಿದಂತೆ ಇತರ ಹಲವರು ಸತ್ತಿರಬಹುದು ಎಂದು ಶಂಕಿಸಲಾಗಿದೆ. 11 ಪೊಲೀಸರು ಗಾಯಗೊಂಡಿದ್ದಾರೆ. ಆದರೆ ಸಾವು ನೋವಿನ ನಿಖರ ಸಂಖ್ಯೆ ಲಭ್ಯವಾಗಿಲ್ಲ ಎಂದು ಒಳಾಡಳಿತ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.<br /> <br /> ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಕೈಬಾಂಬ್ಗಳನ್ನು ಹೊಂದಿದ್ದ ಉಗ್ರರು ವಜೀರ್ ಅಕ್ಬರ್ ಖಾನ್ ಪ್ರದೇಶದಲ್ಲಿನ ನೂತನ ಐಶಾರಾಮಿ ಹೋಟೆಲ್ `ಕಾಬೂಲ್ ಸ್ಟಾರ್~ ಮೇಲೆ ಆತ್ಮಾಹುತಿ ದಾಳಿ ನಡೆಸಿ ಅದನ್ನು ವಶಕ್ಕೆ ತೆಗೆದುಕೊಂಡರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>