<p>ಡ್ರಾಸ್ (ಜಮ್ಮು ಮತ್ತು ಕಾಶ್ಮೀರ) (ಪಿಟಿಐ): ಕಾರ್ಗಿಲ್ ವಿಜಯದ 13ನೇ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿನ ಡ್ರಾಸ್ ಉಪವಲಯದ ಕಾರ್ಗಿಲ್ ಸ್ಮಾರಕದಲ್ಲಿ ಬುಧವಾರ 15 ಕಿ.ಗ್ರಾಂ. ತೂಕದ ಭಾರೀ ತ್ರಿವರ್ಣ ಧ್ವಜವನ್ನು ಅರಳಿಸಲಾಯಿತು.<br /> <br /> ಮೂವತ್ತ ಏಳೂವರೆ ಅಡಿ ಉದ್ದ, 25 ಅಗಲದ ಈ ತ್ರಿವರ್ಣ ಧ್ವಜದ ತೂಕ 15 ಕಿ.ಗ್ರಾಂ.ಗಳು ಎಂದು ಭಾರತದ ರಾಷ್ಟ್ರೀಯ ಧ್ವಜ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕಮಾಂಡರ್ (ನಿವೃತ್ತ) ಕೆ.ವಿ. ಸಿಂಗ್ ಪಿಟಿಐಗೆ ತಿಳಿಸಿದರು.<br /> <br /> ಶ್ರೀನಗರದಿಂದ 150 ಕಿ.ಮೀ. ದೂರದಲ್ಲಿರುವ ಇಲ್ಲಿನ ಡ್ರಾಸ್ ನ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಈ ಧ್ವಜವನ್ನು ಅರಳಿಸಲಾಯಿತು. ಇದು ನವದೆಹಲಿಯಲ್ಲಿನ ಸಂಸತ್ ಭವನ ಹಾಗೂ ಕೆಂಪುಕೋಟೆಯ ಮೇಲೆ ಅರಳಿಸಲಾಗುವ ರಾಷ್ಟ್ರಧ್ವಜಗಳ ಎರಡು ಪಟ್ಟಿಗಿಂತಲೂ ಹೆಚ್ಚು ವಿಸ್ತಾರದ್ದು ಎಂದು ಸಿಂಗ್ ನುಡಿದರು.<br /> <br /> ಈ ಬೃಹತ್ ಧ್ವಜವನ್ನು ಹಾರಿಸಲು 3 ಟನ್ ತೂಕ, 101 ಅಡಿ ಎತ್ತರದ ಧ್ವಜಸ್ಥಂಭವನ್ನು ವಿಶೇಷವಾಗಿ ನಿರ್ಮಿಸಲಾಗಿದೆ. ಧ್ವಜದ ತೂಕ ತಡೆಯುವ ಸಲುವಾಗಿ ಈ ಧ್ವಜಸ್ಥಂಭವನ್ನು ಭೂಮಿಯೊಳಗೆ 15 ಅಡಿಗಳಷ್ಟು ಆಳಕ್ಕೆ ಇಳಿಸಿ ಭದ್ರಗೊಳಿಸಲಾಗಿದೆ.<br /> <br /> ನೌಕಾದಳದ ನಿವೃತ್ತ ಕಮಾಂಡರ್ ಆಗಿರುವ ಸಿಂಗ್ ಅವರು ಪ್ರತಿಷ್ಠಾನದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದು ಇಲ್ಲಿನ ಸೇನಾ ಘಟಕಕ್ಕೆ ಈ ಧ್ವಜವನ್ನು ನೀಡಿದ್ದಾರೆ. ಸ್ಮರಣೀಯ ಸ್ಥಳದಲ್ಲಿ ಅರಳಿಸುವ ಮೂಲಕ ರಾಷ್ಠ್ರಧ್ವಜದ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸುವುದು ತಮ್ಮ ಉದ್ಧೇಶ ಎಂದು ಅವರು ನುಡಿದರು.<br /> <br /> 1999ರ ಕಾರ್ಗಿಲ್ ಸಮರದ ವಿಜಯದ 13ನೇ ವಾರ್ಷಿಕೋತ್ಸವ ಆಚರಣೆ ಅಂಗವಾಗಿ ಸೇನೆಯು ಇಲ್ಲಿ ಎರಡು ದಿನಗಳ ಸಮಾರಂಭ ಹಮ್ಮಿಕೊಂಡಿದ್ದು ಬುಧವಾರ ಉದ್ಘಾಟನೆಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಡ್ರಾಸ್ (ಜಮ್ಮು ಮತ್ತು ಕಾಶ್ಮೀರ) (ಪಿಟಿಐ): ಕಾರ್ಗಿಲ್ ವಿಜಯದ 13ನೇ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿನ ಡ್ರಾಸ್ ಉಪವಲಯದ ಕಾರ್ಗಿಲ್ ಸ್ಮಾರಕದಲ್ಲಿ ಬುಧವಾರ 15 ಕಿ.ಗ್ರಾಂ. ತೂಕದ ಭಾರೀ ತ್ರಿವರ್ಣ ಧ್ವಜವನ್ನು ಅರಳಿಸಲಾಯಿತು.<br /> <br /> ಮೂವತ್ತ ಏಳೂವರೆ ಅಡಿ ಉದ್ದ, 25 ಅಗಲದ ಈ ತ್ರಿವರ್ಣ ಧ್ವಜದ ತೂಕ 15 ಕಿ.ಗ್ರಾಂ.ಗಳು ಎಂದು ಭಾರತದ ರಾಷ್ಟ್ರೀಯ ಧ್ವಜ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕಮಾಂಡರ್ (ನಿವೃತ್ತ) ಕೆ.ವಿ. ಸಿಂಗ್ ಪಿಟಿಐಗೆ ತಿಳಿಸಿದರು.<br /> <br /> ಶ್ರೀನಗರದಿಂದ 150 ಕಿ.ಮೀ. ದೂರದಲ್ಲಿರುವ ಇಲ್ಲಿನ ಡ್ರಾಸ್ ನ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಈ ಧ್ವಜವನ್ನು ಅರಳಿಸಲಾಯಿತು. ಇದು ನವದೆಹಲಿಯಲ್ಲಿನ ಸಂಸತ್ ಭವನ ಹಾಗೂ ಕೆಂಪುಕೋಟೆಯ ಮೇಲೆ ಅರಳಿಸಲಾಗುವ ರಾಷ್ಟ್ರಧ್ವಜಗಳ ಎರಡು ಪಟ್ಟಿಗಿಂತಲೂ ಹೆಚ್ಚು ವಿಸ್ತಾರದ್ದು ಎಂದು ಸಿಂಗ್ ನುಡಿದರು.<br /> <br /> ಈ ಬೃಹತ್ ಧ್ವಜವನ್ನು ಹಾರಿಸಲು 3 ಟನ್ ತೂಕ, 101 ಅಡಿ ಎತ್ತರದ ಧ್ವಜಸ್ಥಂಭವನ್ನು ವಿಶೇಷವಾಗಿ ನಿರ್ಮಿಸಲಾಗಿದೆ. ಧ್ವಜದ ತೂಕ ತಡೆಯುವ ಸಲುವಾಗಿ ಈ ಧ್ವಜಸ್ಥಂಭವನ್ನು ಭೂಮಿಯೊಳಗೆ 15 ಅಡಿಗಳಷ್ಟು ಆಳಕ್ಕೆ ಇಳಿಸಿ ಭದ್ರಗೊಳಿಸಲಾಗಿದೆ.<br /> <br /> ನೌಕಾದಳದ ನಿವೃತ್ತ ಕಮಾಂಡರ್ ಆಗಿರುವ ಸಿಂಗ್ ಅವರು ಪ್ರತಿಷ್ಠಾನದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದು ಇಲ್ಲಿನ ಸೇನಾ ಘಟಕಕ್ಕೆ ಈ ಧ್ವಜವನ್ನು ನೀಡಿದ್ದಾರೆ. ಸ್ಮರಣೀಯ ಸ್ಥಳದಲ್ಲಿ ಅರಳಿಸುವ ಮೂಲಕ ರಾಷ್ಠ್ರಧ್ವಜದ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸುವುದು ತಮ್ಮ ಉದ್ಧೇಶ ಎಂದು ಅವರು ನುಡಿದರು.<br /> <br /> 1999ರ ಕಾರ್ಗಿಲ್ ಸಮರದ ವಿಜಯದ 13ನೇ ವಾರ್ಷಿಕೋತ್ಸವ ಆಚರಣೆ ಅಂಗವಾಗಿ ಸೇನೆಯು ಇಲ್ಲಿ ಎರಡು ದಿನಗಳ ಸಮಾರಂಭ ಹಮ್ಮಿಕೊಂಡಿದ್ದು ಬುಧವಾರ ಉದ್ಘಾಟನೆಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>