<p>ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರೇ ಬೆನ್ನೆಲುಬು; ಅಧಿಕಾರ ಇರಲಿ, ಇಲ್ಲದಿರಲಿ ಪಕ್ಷಕ್ಕೆ ನಿಷ್ಠೆಯಿಂದ ಶ್ರಮಿಸುವವರು. ಆದರೆ, ಇಂದು ಎಲ್ಲಾ ರಾಜಕೀಯ ಪಕ್ಷಗಳು ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿವೆ. ಕಾರ್ಯಕರ್ತರಿಗೆ ಸಿಗಬೇಕಾದ ಸೂಕ್ತ ಸ್ಥಾನಮಾನಗಳು ಪಕ್ಷಗಳ ನಾಯಕರ ಕುಟುಂಬದ ಕುಡಿಗಳ ಪಾಲಾಗುತ್ತಿದೆ. <br /> <br /> ಕುಟುಂಬ ರಾಜಕಾರಣದಿಂದ ಇಂದು ಕಾರ್ಯಕರ್ತರು ಅತಂತ್ರರಾಗುತ್ತಿದ್ದಾರೆ. ಕಾಂಗ್ರೆಸ್ನ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿದ್ದ ಬಿಜೆಪಿ ಮತ್ತು ಜನತಾ ಪರಿವಾರಗಳಲ್ಲಿಯೂ ಇಂದು ಕುಟುಂಬ ರಾಜಕಾರಣ ಸಾಮಾನ್ಯ ವಿದ್ಯಮಾನವಾಗಿದೆ. <br /> <br /> ತಂದೆಯ ರಾಜಕೀಯ ಪ್ರಭಾವ ಬಿಟ್ಟರೆ ಈ ಯುವ ನಾಯಕರ ರಾಜಕೀಯ ಅನುಭವವೇನು? ಇವರ ರಾಜಕೀಯ ಪ್ರವೇಶ, ಪಕ್ಷದ ಯುವ ಘಟಕಗಳ ಅಧ್ಯಕ್ಷರಾಗುವುದು, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾಗುವುದು, ಇಲ್ಲವೆ ತಂದೆಗೆ ಬೆಂಬಲ ನೀಡಿದ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ವಿಧಾನ ಸೌಧ ಪ್ರವೇಶಿಸುವುದು.<br /> <br /> ಯಾವುದೇ ರಾಜಕೀಯ ತಿಳುವಳಿಕೆ, ಸೈದ್ಧಾಂತಿಕ ನಿಲುವುಗಳನ್ನು ಬೆಳೆಸಿಕೊಳ್ಳದೆ, ಜನರ ಕಷ್ಟಗಳನ್ನು, ಕಾರ್ಯಕರ್ತರ ಶ್ರಮವನ್ನು ಅರಿಯದೇ ಸುಲಭವಾಗಿ ಆಧಿಕಾರವನ್ನು ಪಡೆಯವುದು. <br /> <br /> ಯಾವುದೇ ಪ್ರತಿಫಲ ಅಪೇಕ್ಷಿಸದೆ ತಮ್ಮ ನೆಚ್ಚಿನ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವ ಕಾರ್ಯಕರ್ತರಿಗೆ ಸಿಗಬೇಕಾದ ರಾಜಕೀಯ ಅಧಿಕಾರವನ್ನು ಕುಟುಂಬ ರಾಜಕಾರಣ ಇಂದು ನುಂಗಿ ಹಾಕುತ್ತಿದೆ. ಈ ಬಗ್ಗೆ ಎಲ್ಲಾ ಪಕ್ಷಗಳ ಕಾರ್ಯಕರ್ತರು ಆಲೋಚಿಸಿ ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರೇ ಬೆನ್ನೆಲುಬು; ಅಧಿಕಾರ ಇರಲಿ, ಇಲ್ಲದಿರಲಿ ಪಕ್ಷಕ್ಕೆ ನಿಷ್ಠೆಯಿಂದ ಶ್ರಮಿಸುವವರು. ಆದರೆ, ಇಂದು ಎಲ್ಲಾ ರಾಜಕೀಯ ಪಕ್ಷಗಳು ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿವೆ. ಕಾರ್ಯಕರ್ತರಿಗೆ ಸಿಗಬೇಕಾದ ಸೂಕ್ತ ಸ್ಥಾನಮಾನಗಳು ಪಕ್ಷಗಳ ನಾಯಕರ ಕುಟುಂಬದ ಕುಡಿಗಳ ಪಾಲಾಗುತ್ತಿದೆ. <br /> <br /> ಕುಟುಂಬ ರಾಜಕಾರಣದಿಂದ ಇಂದು ಕಾರ್ಯಕರ್ತರು ಅತಂತ್ರರಾಗುತ್ತಿದ್ದಾರೆ. ಕಾಂಗ್ರೆಸ್ನ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿದ್ದ ಬಿಜೆಪಿ ಮತ್ತು ಜನತಾ ಪರಿವಾರಗಳಲ್ಲಿಯೂ ಇಂದು ಕುಟುಂಬ ರಾಜಕಾರಣ ಸಾಮಾನ್ಯ ವಿದ್ಯಮಾನವಾಗಿದೆ. <br /> <br /> ತಂದೆಯ ರಾಜಕೀಯ ಪ್ರಭಾವ ಬಿಟ್ಟರೆ ಈ ಯುವ ನಾಯಕರ ರಾಜಕೀಯ ಅನುಭವವೇನು? ಇವರ ರಾಜಕೀಯ ಪ್ರವೇಶ, ಪಕ್ಷದ ಯುವ ಘಟಕಗಳ ಅಧ್ಯಕ್ಷರಾಗುವುದು, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾಗುವುದು, ಇಲ್ಲವೆ ತಂದೆಗೆ ಬೆಂಬಲ ನೀಡಿದ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ವಿಧಾನ ಸೌಧ ಪ್ರವೇಶಿಸುವುದು.<br /> <br /> ಯಾವುದೇ ರಾಜಕೀಯ ತಿಳುವಳಿಕೆ, ಸೈದ್ಧಾಂತಿಕ ನಿಲುವುಗಳನ್ನು ಬೆಳೆಸಿಕೊಳ್ಳದೆ, ಜನರ ಕಷ್ಟಗಳನ್ನು, ಕಾರ್ಯಕರ್ತರ ಶ್ರಮವನ್ನು ಅರಿಯದೇ ಸುಲಭವಾಗಿ ಆಧಿಕಾರವನ್ನು ಪಡೆಯವುದು. <br /> <br /> ಯಾವುದೇ ಪ್ರತಿಫಲ ಅಪೇಕ್ಷಿಸದೆ ತಮ್ಮ ನೆಚ್ಚಿನ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವ ಕಾರ್ಯಕರ್ತರಿಗೆ ಸಿಗಬೇಕಾದ ರಾಜಕೀಯ ಅಧಿಕಾರವನ್ನು ಕುಟುಂಬ ರಾಜಕಾರಣ ಇಂದು ನುಂಗಿ ಹಾಕುತ್ತಿದೆ. ಈ ಬಗ್ಗೆ ಎಲ್ಲಾ ಪಕ್ಷಗಳ ಕಾರ್ಯಕರ್ತರು ಆಲೋಚಿಸಿ ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>