<p><strong>ಶಹಾಪುರ</strong>: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಕಾಲುವೆ ಒಡೆದು ಅಕ್ರಮವಾಗಿ ಕೆರೆ ನಿರ್ಮಿಸುತ್ತಿದ್ದು ನಿಗಮದ ಎಂಜಿನಿಯರ್ಗಳು ಯಾವುದೆ ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು ಆರೋಪಿಸಿ ಜೆಡಿಎಸ್ ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಬಿ.ಎಚ್.ಶರಣುರಡ್ಡಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.<br /> <br /> ಕೆಬಿಜೆಎನ್ಎಲ್ ನಿಗಮದ ಉಪ ವಿಭಾಗದ ಕಚೇರಿಯ ಕೂಗಳತೆಯ ದೂರದಲ್ಲಿಯೇ ಕಾಲುವೆ ಒಡೆದು ಕೆರೆ ನಿರ್ಮಿಸಿದ್ದಾರೆ. ಎಂಜಿನಿಯರ್ ಮಾತ್ರ ಯಾವುದೇ ಕ್ರಮ ತೆಗೆದೊಳ್ಳುತ್ತಿಲ್ಲ. ಅದರಲ್ಲಿ ಆಂಧ್ರವಲಸಿಗರು ಇಂತಹ ಅಕ್ರಮ ಕೆರೆಗಳನ್ನು ನಿರ್ಮಿಸಿದ್ದಾರೆ. ಕೆಳಭಾಗದ ರೈತರಿಗೆ ನೀರು ದೊರೆಯುತ್ತಿಲ್ಲವೆಂದು ಅವರು ದೂರಿದ್ದಾರೆ.<br /> <br /> ಬರುವ ದಿನಗಳಲ್ಲಿ ನೀರಿಗಾಗಿ ರೈತರ ನಡುವೆ ಸಂಘರ್ಷ ನಡೆಯುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ ಕಾನೂನು ಉಲ್ಲಂಘಿ ಸಿದ ರೈತರ ವಿರುದ್ಧ ಹಾಗೂ ಕೆರೆ ನಿರ್ಮಿಸಲು ಅವಕಾಶ ನೀಡಿದ ಜಮೀನು ಮಾಲಿಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.<br /> <br /> ದಲಿತ ಮುಖಂಡ ದೇವಿಂದ್ರ ಚಲುವಾದಿ, ಭೀಮರಾಯ ಗಡ್ಡೆಸೂಗೂರ, ವಿರೇಶ ಕೊಳ್ಳೂರ, ರಾಯಪ್ಪ ವಡಿಗೇರಾ, ನಿಂಗಪ್ಪ ಅನಕಸೂಗೂರ ಮತ್ತಿತರರು ಇದ್ದರು.<br /> <br /> ಸ್ಪಷ್ಟನೆ: ಹತ್ತಿಗುಡೂರ ಗ್ರಾಮದ ಬಳಿ 3 ಕೆರೆ ನಿರ್ಮಿಸಿದ್ದಾರೆ. ನಿಗಮದ ಸಿಬ್ಬಂದಿಯ ಜೊತೆಯಲ್ಲಿ ಜಂಟಿ ಸಮೀಕ್ಷೆ ನಡೆಸಿ ಕಾಲುವೆ ಒಡೆದು ಕೆರೆ ನಿರ್ಮಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯ ಗಮನಕ್ಕೆ ತರಲಾಗಿದೆ.<br /> <br /> ಅಲ್ಲದೆ ಶಹಾಪುರ ಪೊಲೀಸ್ ಠಾಣೆಗೆ ಲಿಖಿತವಾಗಿ ದೂರು ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ದೂರು ನೀಡಲಾಗಿದೆ ಎಂದು ಹತ್ತಿಗುಡೂರ ಉಪ ವಿಭಾಗದ ಸಹಾಯಕ ಎಂಜಿನಿಯರ್ ಕಾಂಬ್ಳೆ ಸ್ಪಷ್ಟಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ</strong>: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಕಾಲುವೆ ಒಡೆದು ಅಕ್ರಮವಾಗಿ ಕೆರೆ ನಿರ್ಮಿಸುತ್ತಿದ್ದು ನಿಗಮದ ಎಂಜಿನಿಯರ್ಗಳು ಯಾವುದೆ ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು ಆರೋಪಿಸಿ ಜೆಡಿಎಸ್ ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಬಿ.ಎಚ್.ಶರಣುರಡ್ಡಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.<br /> <br /> ಕೆಬಿಜೆಎನ್ಎಲ್ ನಿಗಮದ ಉಪ ವಿಭಾಗದ ಕಚೇರಿಯ ಕೂಗಳತೆಯ ದೂರದಲ್ಲಿಯೇ ಕಾಲುವೆ ಒಡೆದು ಕೆರೆ ನಿರ್ಮಿಸಿದ್ದಾರೆ. ಎಂಜಿನಿಯರ್ ಮಾತ್ರ ಯಾವುದೇ ಕ್ರಮ ತೆಗೆದೊಳ್ಳುತ್ತಿಲ್ಲ. ಅದರಲ್ಲಿ ಆಂಧ್ರವಲಸಿಗರು ಇಂತಹ ಅಕ್ರಮ ಕೆರೆಗಳನ್ನು ನಿರ್ಮಿಸಿದ್ದಾರೆ. ಕೆಳಭಾಗದ ರೈತರಿಗೆ ನೀರು ದೊರೆಯುತ್ತಿಲ್ಲವೆಂದು ಅವರು ದೂರಿದ್ದಾರೆ.<br /> <br /> ಬರುವ ದಿನಗಳಲ್ಲಿ ನೀರಿಗಾಗಿ ರೈತರ ನಡುವೆ ಸಂಘರ್ಷ ನಡೆಯುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ ಕಾನೂನು ಉಲ್ಲಂಘಿ ಸಿದ ರೈತರ ವಿರುದ್ಧ ಹಾಗೂ ಕೆರೆ ನಿರ್ಮಿಸಲು ಅವಕಾಶ ನೀಡಿದ ಜಮೀನು ಮಾಲಿಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.<br /> <br /> ದಲಿತ ಮುಖಂಡ ದೇವಿಂದ್ರ ಚಲುವಾದಿ, ಭೀಮರಾಯ ಗಡ್ಡೆಸೂಗೂರ, ವಿರೇಶ ಕೊಳ್ಳೂರ, ರಾಯಪ್ಪ ವಡಿಗೇರಾ, ನಿಂಗಪ್ಪ ಅನಕಸೂಗೂರ ಮತ್ತಿತರರು ಇದ್ದರು.<br /> <br /> ಸ್ಪಷ್ಟನೆ: ಹತ್ತಿಗುಡೂರ ಗ್ರಾಮದ ಬಳಿ 3 ಕೆರೆ ನಿರ್ಮಿಸಿದ್ದಾರೆ. ನಿಗಮದ ಸಿಬ್ಬಂದಿಯ ಜೊತೆಯಲ್ಲಿ ಜಂಟಿ ಸಮೀಕ್ಷೆ ನಡೆಸಿ ಕಾಲುವೆ ಒಡೆದು ಕೆರೆ ನಿರ್ಮಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯ ಗಮನಕ್ಕೆ ತರಲಾಗಿದೆ.<br /> <br /> ಅಲ್ಲದೆ ಶಹಾಪುರ ಪೊಲೀಸ್ ಠಾಣೆಗೆ ಲಿಖಿತವಾಗಿ ದೂರು ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ದೂರು ನೀಡಲಾಗಿದೆ ಎಂದು ಹತ್ತಿಗುಡೂರ ಉಪ ವಿಭಾಗದ ಸಹಾಯಕ ಎಂಜಿನಿಯರ್ ಕಾಂಬ್ಳೆ ಸ್ಪಷ್ಟಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>