<p>ಮಕರ ಸಂಕ್ರಾಂತಿ ದಿನ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನದ ಕ್ಷಣಗಣನೆ ಆರಂಭವಾದರೆ, ಇಲ್ಲಿ ಬೆಂಗಳೂರಿನಲ್ಲಿ ಅಪೂರ್ವ ಸಂಗಮಕ್ಕಾಗಿ ಭಕ್ತಾದಿಗಳ ಕಾತರ. ಈ ಸಂಕ್ರಾತಿಯಂದು (ಭಾನುವಾರ) ದಕ್ಷಿಣಾಭಿಮುಖ ಶಿವನನ್ನು ಸೂರ್ಯನು ಸ್ಪರ್ಶಿಸುವ ಅದ್ಭುತ ಕ್ಷಣಗಳನ್ನು ಉದ್ಯಾನನಗರಿಯ ಭಕ್ತರು ಕಣ್ಣಲ್ಲಿ ತುಂಬಿಕೊಳ್ಳಲಿದ್ದಾರೆ.<br /> <br /> ಸಂಕ್ರಾಂತಿಯ ಮೊದಲ ಹತ್ತು ದಿನ ಸೂರ್ಯ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಚಲಿಸುವ ಎಲ್ಲಾ ಲಕ್ಷಣಗಳು ಗವಿಪುರಂನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಕಾಣಸಿಗುತ್ತವೆ. <br /> <br /> ಆದರೆ ಮಕರ ಸಂಕ್ರಾಂತಿಯಂದು ಸೂರ್ಯಾಸ್ತ ಸಮಯದಲ್ಲಿ ದೇವಸ್ಥಾನದ ಪಶ್ಚಿಮ ಭಾಗದ ಕಿಟಕಿಯ ಮೂಲಕ ಪ್ರವೇಶಿಸುವ ಕಿರಣಗಳು ದೇವದ್ವಾರದ ಮೂಲಕ ಹಾದು ನಂದಿಯ ಕೋಡುಗಳ ಮಧ್ಯಭಾಗದಿಂದ ಶಿವಲಿಂಗದ ಪಾದವನ್ನು ನೇರವಾಗಿ ಸ್ಪರ್ಶಿಸುತ್ತವೆ. ಈ ಮೂಲಕ ಸಂಪೂರ್ಣವಾಗಿ ಪಥ ಬದಲಿಸುವ ಘಳಿಗೆಯನ್ನು ಕಣ್ತುಂಬಿಕೊಳ್ಳಬಹುದು.<br /> <br /> ಮಧ್ಯಾಹ್ನ ಮೂರು ಗಂಟೆಯಿಂದಲೇ ಈ ಅಪೂರ್ವ ದೃಶ್ಯ ನೋಡಲು ಭಕ್ತಾದಿಗಳು ಗವಿ ಗಂಗಾಧರೇಶ್ವರ ದೇಗುಲದಲ್ಲಿ ಸೇರುತ್ತಾರೆ. ಸಂಜೆ 5ರಿಂದ 5.20ರ ಮಧ್ಯೆ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುತ್ತವೆ. ಭಕ್ತಾದಿಗಳಿಗೆ ಇದು ರೋಮಾಂಚಕ ಕ್ಷಣ.<br /> ಈ ಗುಹಾಂತರ ದೇವಾಲಯಕ್ಕೆ ಸಹಸ್ರಾರು ವರ್ಷಗಳ ಐತಿಹ್ಯವಿದೆ. ಇದು ತ್ರೇತಾಯುಗದಲ್ಲಿ ಗೌತಮ ಮಹರ್ಷಿ ಹಾಗೂ ಭಾರದ್ವಾಜ ಮುನಿಗಳು ಪೂಜೆ ಮಾಡಿದ ಸ್ಥಳ. ಇವರು ಪ್ರಾತಃ ಕಾಲದಲ್ಲಿ ಕಾಶಿ, ಮಧ್ಯಾಹ್ನ ಗಂಗಾಧರೇಶ್ವರನಿಗೆ, ಸಂಜೆ ಶಿವಗಂಗೆಯಲ್ಲಿ ಪೂಜೆ ಸಲ್ಲಿಸುತ್ತಿದ್ದರು ಎಂಬ ನಂಬಿಕೆಯಿದೆ. <br /> <br /> ದೇವಾಲಯದ ಗರ್ಭಗುಡಿಯ ಹಿಂಭಾಗದಲ್ಲಿ ಎರಡು ಗುಹೆಗಳಿವೆ. ಒಂದು ಕಾಶಿಗೂ ಮತ್ತೊಂದು ಶಿವಗಂಗೆಗೂ ಹೋಗುತ್ತದೆ ಎಂಬ ಐತಿಹ್ಯವಿದೆ. <br /> <br /> ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಸ್ಥಾನವು ಕೆಂಪೇಗೌಡರ ಕಾಲದಲ್ಲಿ ಜೀರ್ಣೋದ್ಧಾರವಾಯಿತು. ಇಲ್ಲಿನ ಸ್ವಯಂಭೂ ಲಿಂಗದ ಬಲಭಾಗದಲ್ಲಿ ಪಾರ್ವತಿ, ಆಕೆಯ ಪಕ್ಕ ದುರ್ಗೆಯಿದ್ದಾಳೆ. ಇದು ಶಕ್ತಿ ಸ್ಥಳ ಎಂದು ಹೇಳುತ್ತಾರೆ ಪ್ರಧಾನ ಅರ್ಚಕ ಎಸ್.ಸೋಮಸುಂದರ ದೀಕ್ಷಿತರು.<br /> <br /> ಇಪ್ಪತ್ತೈದು ವರ್ಷಗಳ ಹಿಂದೆ ಈ ಅಪೂರ್ವ ಸಂಗಮವನ್ನು ವೀಕ್ಷಿಸಲು ಹೆಚ್ಚೆಂದರೆ 50-60 ಭಕ್ತರು ಬರುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ, ಒಳಭಾಗ ತುಂಬಾ ವಿಶಾಲವಾಗಿಲ್ಲ. ಹಾಗಾಗಿ ಭಕ್ತರಿಗೆ ಈ ಕ್ಷಣದ ದರ್ಶನ ಮಾಡಿಸಲು ದೇವಾಲಯದ ಮುಂಭಾಗದಲ್ಲಿ ಬೃಹತ್ ವಿಡಿಯೊ ಪರದೆ ಅಳವಡಿಸಲಾಗುತ್ತಿದೆ.<br /> <br /> ಸೂರ್ಯಸ್ನಾನಕ್ಕೂ ಮುನ್ನ ಗಂಗಾಧರನಿಗೆ ಕ್ಷೀರಾಭಿಷೇಕ ಮಾಡಲಾಗುತ್ತದೆ. ಅಂದು ರಾತ್ರಿ11ರವರೆಗೂ ವಿಶೇಷ ಪೂಜೆ ಸಲ್ಲುತ್ತದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಕರ ಸಂಕ್ರಾಂತಿ ದಿನ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನದ ಕ್ಷಣಗಣನೆ ಆರಂಭವಾದರೆ, ಇಲ್ಲಿ ಬೆಂಗಳೂರಿನಲ್ಲಿ ಅಪೂರ್ವ ಸಂಗಮಕ್ಕಾಗಿ ಭಕ್ತಾದಿಗಳ ಕಾತರ. ಈ ಸಂಕ್ರಾತಿಯಂದು (ಭಾನುವಾರ) ದಕ್ಷಿಣಾಭಿಮುಖ ಶಿವನನ್ನು ಸೂರ್ಯನು ಸ್ಪರ್ಶಿಸುವ ಅದ್ಭುತ ಕ್ಷಣಗಳನ್ನು ಉದ್ಯಾನನಗರಿಯ ಭಕ್ತರು ಕಣ್ಣಲ್ಲಿ ತುಂಬಿಕೊಳ್ಳಲಿದ್ದಾರೆ.<br /> <br /> ಸಂಕ್ರಾಂತಿಯ ಮೊದಲ ಹತ್ತು ದಿನ ಸೂರ್ಯ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಚಲಿಸುವ ಎಲ್ಲಾ ಲಕ್ಷಣಗಳು ಗವಿಪುರಂನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಕಾಣಸಿಗುತ್ತವೆ. <br /> <br /> ಆದರೆ ಮಕರ ಸಂಕ್ರಾಂತಿಯಂದು ಸೂರ್ಯಾಸ್ತ ಸಮಯದಲ್ಲಿ ದೇವಸ್ಥಾನದ ಪಶ್ಚಿಮ ಭಾಗದ ಕಿಟಕಿಯ ಮೂಲಕ ಪ್ರವೇಶಿಸುವ ಕಿರಣಗಳು ದೇವದ್ವಾರದ ಮೂಲಕ ಹಾದು ನಂದಿಯ ಕೋಡುಗಳ ಮಧ್ಯಭಾಗದಿಂದ ಶಿವಲಿಂಗದ ಪಾದವನ್ನು ನೇರವಾಗಿ ಸ್ಪರ್ಶಿಸುತ್ತವೆ. ಈ ಮೂಲಕ ಸಂಪೂರ್ಣವಾಗಿ ಪಥ ಬದಲಿಸುವ ಘಳಿಗೆಯನ್ನು ಕಣ್ತುಂಬಿಕೊಳ್ಳಬಹುದು.<br /> <br /> ಮಧ್ಯಾಹ್ನ ಮೂರು ಗಂಟೆಯಿಂದಲೇ ಈ ಅಪೂರ್ವ ದೃಶ್ಯ ನೋಡಲು ಭಕ್ತಾದಿಗಳು ಗವಿ ಗಂಗಾಧರೇಶ್ವರ ದೇಗುಲದಲ್ಲಿ ಸೇರುತ್ತಾರೆ. ಸಂಜೆ 5ರಿಂದ 5.20ರ ಮಧ್ಯೆ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುತ್ತವೆ. ಭಕ್ತಾದಿಗಳಿಗೆ ಇದು ರೋಮಾಂಚಕ ಕ್ಷಣ.<br /> ಈ ಗುಹಾಂತರ ದೇವಾಲಯಕ್ಕೆ ಸಹಸ್ರಾರು ವರ್ಷಗಳ ಐತಿಹ್ಯವಿದೆ. ಇದು ತ್ರೇತಾಯುಗದಲ್ಲಿ ಗೌತಮ ಮಹರ್ಷಿ ಹಾಗೂ ಭಾರದ್ವಾಜ ಮುನಿಗಳು ಪೂಜೆ ಮಾಡಿದ ಸ್ಥಳ. ಇವರು ಪ್ರಾತಃ ಕಾಲದಲ್ಲಿ ಕಾಶಿ, ಮಧ್ಯಾಹ್ನ ಗಂಗಾಧರೇಶ್ವರನಿಗೆ, ಸಂಜೆ ಶಿವಗಂಗೆಯಲ್ಲಿ ಪೂಜೆ ಸಲ್ಲಿಸುತ್ತಿದ್ದರು ಎಂಬ ನಂಬಿಕೆಯಿದೆ. <br /> <br /> ದೇವಾಲಯದ ಗರ್ಭಗುಡಿಯ ಹಿಂಭಾಗದಲ್ಲಿ ಎರಡು ಗುಹೆಗಳಿವೆ. ಒಂದು ಕಾಶಿಗೂ ಮತ್ತೊಂದು ಶಿವಗಂಗೆಗೂ ಹೋಗುತ್ತದೆ ಎಂಬ ಐತಿಹ್ಯವಿದೆ. <br /> <br /> ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಸ್ಥಾನವು ಕೆಂಪೇಗೌಡರ ಕಾಲದಲ್ಲಿ ಜೀರ್ಣೋದ್ಧಾರವಾಯಿತು. ಇಲ್ಲಿನ ಸ್ವಯಂಭೂ ಲಿಂಗದ ಬಲಭಾಗದಲ್ಲಿ ಪಾರ್ವತಿ, ಆಕೆಯ ಪಕ್ಕ ದುರ್ಗೆಯಿದ್ದಾಳೆ. ಇದು ಶಕ್ತಿ ಸ್ಥಳ ಎಂದು ಹೇಳುತ್ತಾರೆ ಪ್ರಧಾನ ಅರ್ಚಕ ಎಸ್.ಸೋಮಸುಂದರ ದೀಕ್ಷಿತರು.<br /> <br /> ಇಪ್ಪತ್ತೈದು ವರ್ಷಗಳ ಹಿಂದೆ ಈ ಅಪೂರ್ವ ಸಂಗಮವನ್ನು ವೀಕ್ಷಿಸಲು ಹೆಚ್ಚೆಂದರೆ 50-60 ಭಕ್ತರು ಬರುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ, ಒಳಭಾಗ ತುಂಬಾ ವಿಶಾಲವಾಗಿಲ್ಲ. ಹಾಗಾಗಿ ಭಕ್ತರಿಗೆ ಈ ಕ್ಷಣದ ದರ್ಶನ ಮಾಡಿಸಲು ದೇವಾಲಯದ ಮುಂಭಾಗದಲ್ಲಿ ಬೃಹತ್ ವಿಡಿಯೊ ಪರದೆ ಅಳವಡಿಸಲಾಗುತ್ತಿದೆ.<br /> <br /> ಸೂರ್ಯಸ್ನಾನಕ್ಕೂ ಮುನ್ನ ಗಂಗಾಧರನಿಗೆ ಕ್ಷೀರಾಭಿಷೇಕ ಮಾಡಲಾಗುತ್ತದೆ. ಅಂದು ರಾತ್ರಿ11ರವರೆಗೂ ವಿಶೇಷ ಪೂಜೆ ಸಲ್ಲುತ್ತದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>