<p>ಕುಣಿಗಲ್: ಪುರಸಭೆ ಪಟ್ಟಣದ ವಿವಿಧ ವಾರ್ಡ್ಗಳಿಗೆ ಗುರುವಾರ ಕುಡಿಯಲು ವಾಸನೆಯಿಂದ ಕೂಡಿದ ಮಲೀನ ನೀರು ಪೂರೈಸಿದ ಕಾರಣ ಆಕ್ರೋಶಗೊಂಡ ಗೖಹಿಣಿಯರು ಪುರಸಭೆ ಕಾರ್ಯವೈಖರಿ ಖಂಡಿಸಿ ಶುದ್ಧ ನೀರು ಪೂರೈಸುವಂತೆ ಆಗ್ರಹಿಸಿದರು.<br /> <br /> ಪಟ್ಟಣದ 9, 3, 4ನೇ ವಾರ್ಡ್ ಪ್ರದೇಶಕ್ಕೆ ಎರಡು ವಾರಗಳಿಂದ ನೀರು ಪೂರೈಸದ ಪುರಸಭೆ ಆಡಳಿತ ಗುರುವಾರ ಮಧ್ಯಾಹ್ನ ನೀರು ಪೂರೈಸಿತು. ನೀರು ಸಂಗ್ರಹಿಸಲು ಗೃಹಿಣಿಯರು ಮುಂದಾದಾಗ ಕೊಳಾಯಿಯಲ್ಲಿ ಕುಡಿಯುವ ನೀರಿನ ಬದಲು ಚರಂಡಿ ನೀರು ಬಂದಿದೆ.<br /> <br /> ಕೆಲ ಮನೆಗಳಲ್ಲಿನ ಸಂಪ್ಗೂ ಚರಂಡಿ ನೀರು ಬೆರೆತು ಇಡೀ ವಾತಾವರಣವೇ ಅಸಹ್ಯ ಮೂಡಿಸಿದೆ. ಸಂಪ್ನ ನೀರು ಹಾಳಾಗಿದ್ದರಿಂದ ನಾಗರಿಕರು ವಾಲ್ವ್ಮನ್ ವಿಚಾರಿಸಿದ್ದಾರೆ. ಆದರೆ ಆತ ಸೂಕ್ತವಾಗಿ ಉತ್ತರಿಸಿಲ್ಲ.<br /> <br /> ಇದರಿಂದ ಆಕ್ರೋಶಗೊಂಡ ವಿಜಿಯಮ್ಮ, ರೇಣುಕಮ್ಮ, ಭಾಗ್ಯಮ್ಮ, ನಾಗಮ್ಮ, ಯಶೋಧಮ್ಮ, ಮುಖಂಡ ರಾಜು ಇತರರು ಪುರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.<br /> <br /> <strong>ರಸ್ತೆ ಉಬ್ಬು: ಗ್ರಾಮಸ್ಥರ ಧರಣಿ</strong><br /> ಕುಣಿಗಲ್: -ಅವೈಜ್ಞಾನಿಕ ರಸ್ತೆ ಉಬ್ಬು ಖಂಡಿಸಿ ಬಿದನಗೆರೆ ಗ್ರಾಮಸ್ಥರು ಗುರುವಾರ ಹಳೇ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪ್ರತಿಭಟನೆ ನಡೆಸಿದರು.<br /> <br /> ಪಟ್ಟಣದ ಪುರಸಭೆಯ ಒಂದನೇ ವಾರ್ಡ್ ಪ್ರದೇಶದಲ್ಲಿನ ಬಿದನಗೆರೆಯ ಬಳಿ ಹಳೇ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹೇಮಾವತಿ ನಾಲಾ ಕಾಲುವೆ ನಿರ್ಮಾಣ ಕಾಮಗಾರಿಗಾಗಿ ರಸ್ತೆ ಉಬ್ಬು ಹಾಕಲಾಗಿದೆ. ಈ ಕುರಿತು ಯಾವುದೇ ಸೂಚನೆ ಫಲಕ, ಎಚ್ಚರಿಕೆ ಸಂಕೇತ ಹಾಕಿಲ್ಲ. ಇದರಿಂದ ಹಲ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.<br /> <br /> ಗುರುವಾರ ಬೆಳಿಗ್ಗೆ ಮಗು ಸಮೇತ ಬೈಕ್ ಸವಾರ ಕೆಳಗೆ ಬಿದ್ದು ಗಾಯಗೊಂಡರು. ಈ ಘಟನೆಯಿಂದ ಕೆರಳಿದ ಗ್ರಾಮಸ್ಥರು ಮುಖಂಡರಾದ ಶಿವಕುಮಾರ, ಸೀನಪ್ಪ ನೇತೃತ್ವದಲ್ಲಿ ರಸ್ತೆತಡೆ ನಡೆಸಿ, ಪ್ರತಿಭಟನೆ ನಡೆಸಿದರು. ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಗ್ರಾಮಸ್ಥರನ್ನು ಸಮಾಧಾನಗೊಳಿಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.<br /> <br /> <strong>ಅತಿಕ್ರಮ ಪ್ರವೇಶ: ದಂಡ</strong><br /> ಕುಣಿಗಲ್: ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಮಾಲೀಕನಿಗೆ ಅವಾಚ್ಯಶಬ್ಧಗಳಿಂದ ನಿಂದಿಸಿ, ಗೋಡೆಗೆ ಜಖಂ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯ ದಂಡ ವಿಧಿಸಿದೆ.<br /> <br /> ಅಮೖತೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಪಾಳ್ಯ ಗ್ರಾಮದಲ್ಲಿ ಕೖಷ್ಣಾಚಾರ್ ಎಂಬುವರ ಮನೆಗೆ 11–-1–-2010ರಲ್ಲಿ ಚಿಕ್ಕತಾಯಮ್ಮ, ಸ್ವಾಮಿ, ಲಕ್ಷ್ಮಮ್ಮ ಎಂಬುವರು ಮನೆಗೆ ನುಗ್ಗಿ, ಗೋಡೆಗೆ ಹಾನಿ ಮಾಡಿ, ಕೃಷ್ಣಾಚಾರ್ ಪತ್ನಿಗೆ ಅವಾಚ್ಯಶಬ್ಧಗಳಿಂದ ನಿಂದಿಸಿದ್ದರು ಎಂದು ದೂರು ದಾಖಲಾಗಿತ್ತು.<br /> <br /> ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಆರ್.ಶಾರದ ಆರೋಪಿಗಳಿಗೆ ತಲಾ ಎರಡು ಸಾವಿರ ದಂಡ, ದಂಡ ಪಾವತಿಸಲು ವಿಫಲರಾದಲ್ಲಿ 45 ದಿನ ಸಾದ ಸಜೆ ವಿಧಿಸಿ, ಗೋಡೆ ಹಾನಿ ಮಾಡಿದ್ದಕ್ಕೆ, ಕೃಷ್ಣಾಚಾರ್ಗೆ ₨ ಮೂರು ಸಾವಿರ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ. ಎಪಿಪಿ ಸುರೇಖಾ ಹಿರೇಮಠ ಸರ್ಕಾರದ ಪರವಾಗಿ ವಾದಿಸಿದ್ದರು.<br /> <br /> <strong>ನಿಯಮ ಉಲ್ಲಂಘನೆ: ಎಚ್ಚರಿಕೆ</strong><br /> ಕುಣಿಗಲ್: ಸಾರಿಗೆ ನಿಗಮದ ಕೆಲ ಬಸ್ಗಳು ನಿಯಮ ಉಲ್ಲಂಘಿಸಿ, ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತಿವೆ. 15 ದಿನದೊಳಗೆ ನಿಗಮದ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಕರವೇ ವತಿಯಿಂದ ಬೈಪಾಸ್ ರಸ್ತೆಯಲ್ಲಿ ಸಾಗುವ ಬಸ್ಗಳನ್ನು ತಡೆದು, ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅಧ್ಯಕ್ಷ ಮಂಜುನಾಥ್ ತಿಳಿಸಿದರು.<br /> <br /> ಪಟ್ಟಣದ ಸಾರಿಗೆ ಘಟಕಕ್ಕೆ ಗುರುವಾರ ಭೇಟಿ ನೀಡಿದ್ದ ತುಮಕೂರು ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.<br /> <br /> ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ದಿನೇಶ್, ಕಿರಣ್ ಕುಮಾರ, ಅವಿನಾಶ್, ಅನಿಲ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಣಿಗಲ್: ಪುರಸಭೆ ಪಟ್ಟಣದ ವಿವಿಧ ವಾರ್ಡ್ಗಳಿಗೆ ಗುರುವಾರ ಕುಡಿಯಲು ವಾಸನೆಯಿಂದ ಕೂಡಿದ ಮಲೀನ ನೀರು ಪೂರೈಸಿದ ಕಾರಣ ಆಕ್ರೋಶಗೊಂಡ ಗೖಹಿಣಿಯರು ಪುರಸಭೆ ಕಾರ್ಯವೈಖರಿ ಖಂಡಿಸಿ ಶುದ್ಧ ನೀರು ಪೂರೈಸುವಂತೆ ಆಗ್ರಹಿಸಿದರು.<br /> <br /> ಪಟ್ಟಣದ 9, 3, 4ನೇ ವಾರ್ಡ್ ಪ್ರದೇಶಕ್ಕೆ ಎರಡು ವಾರಗಳಿಂದ ನೀರು ಪೂರೈಸದ ಪುರಸಭೆ ಆಡಳಿತ ಗುರುವಾರ ಮಧ್ಯಾಹ್ನ ನೀರು ಪೂರೈಸಿತು. ನೀರು ಸಂಗ್ರಹಿಸಲು ಗೃಹಿಣಿಯರು ಮುಂದಾದಾಗ ಕೊಳಾಯಿಯಲ್ಲಿ ಕುಡಿಯುವ ನೀರಿನ ಬದಲು ಚರಂಡಿ ನೀರು ಬಂದಿದೆ.<br /> <br /> ಕೆಲ ಮನೆಗಳಲ್ಲಿನ ಸಂಪ್ಗೂ ಚರಂಡಿ ನೀರು ಬೆರೆತು ಇಡೀ ವಾತಾವರಣವೇ ಅಸಹ್ಯ ಮೂಡಿಸಿದೆ. ಸಂಪ್ನ ನೀರು ಹಾಳಾಗಿದ್ದರಿಂದ ನಾಗರಿಕರು ವಾಲ್ವ್ಮನ್ ವಿಚಾರಿಸಿದ್ದಾರೆ. ಆದರೆ ಆತ ಸೂಕ್ತವಾಗಿ ಉತ್ತರಿಸಿಲ್ಲ.<br /> <br /> ಇದರಿಂದ ಆಕ್ರೋಶಗೊಂಡ ವಿಜಿಯಮ್ಮ, ರೇಣುಕಮ್ಮ, ಭಾಗ್ಯಮ್ಮ, ನಾಗಮ್ಮ, ಯಶೋಧಮ್ಮ, ಮುಖಂಡ ರಾಜು ಇತರರು ಪುರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.<br /> <br /> <strong>ರಸ್ತೆ ಉಬ್ಬು: ಗ್ರಾಮಸ್ಥರ ಧರಣಿ</strong><br /> ಕುಣಿಗಲ್: -ಅವೈಜ್ಞಾನಿಕ ರಸ್ತೆ ಉಬ್ಬು ಖಂಡಿಸಿ ಬಿದನಗೆರೆ ಗ್ರಾಮಸ್ಥರು ಗುರುವಾರ ಹಳೇ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪ್ರತಿಭಟನೆ ನಡೆಸಿದರು.<br /> <br /> ಪಟ್ಟಣದ ಪುರಸಭೆಯ ಒಂದನೇ ವಾರ್ಡ್ ಪ್ರದೇಶದಲ್ಲಿನ ಬಿದನಗೆರೆಯ ಬಳಿ ಹಳೇ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹೇಮಾವತಿ ನಾಲಾ ಕಾಲುವೆ ನಿರ್ಮಾಣ ಕಾಮಗಾರಿಗಾಗಿ ರಸ್ತೆ ಉಬ್ಬು ಹಾಕಲಾಗಿದೆ. ಈ ಕುರಿತು ಯಾವುದೇ ಸೂಚನೆ ಫಲಕ, ಎಚ್ಚರಿಕೆ ಸಂಕೇತ ಹಾಕಿಲ್ಲ. ಇದರಿಂದ ಹಲ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.<br /> <br /> ಗುರುವಾರ ಬೆಳಿಗ್ಗೆ ಮಗು ಸಮೇತ ಬೈಕ್ ಸವಾರ ಕೆಳಗೆ ಬಿದ್ದು ಗಾಯಗೊಂಡರು. ಈ ಘಟನೆಯಿಂದ ಕೆರಳಿದ ಗ್ರಾಮಸ್ಥರು ಮುಖಂಡರಾದ ಶಿವಕುಮಾರ, ಸೀನಪ್ಪ ನೇತೃತ್ವದಲ್ಲಿ ರಸ್ತೆತಡೆ ನಡೆಸಿ, ಪ್ರತಿಭಟನೆ ನಡೆಸಿದರು. ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಗ್ರಾಮಸ್ಥರನ್ನು ಸಮಾಧಾನಗೊಳಿಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.<br /> <br /> <strong>ಅತಿಕ್ರಮ ಪ್ರವೇಶ: ದಂಡ</strong><br /> ಕುಣಿಗಲ್: ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಮಾಲೀಕನಿಗೆ ಅವಾಚ್ಯಶಬ್ಧಗಳಿಂದ ನಿಂದಿಸಿ, ಗೋಡೆಗೆ ಜಖಂ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯ ದಂಡ ವಿಧಿಸಿದೆ.<br /> <br /> ಅಮೖತೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಪಾಳ್ಯ ಗ್ರಾಮದಲ್ಲಿ ಕೖಷ್ಣಾಚಾರ್ ಎಂಬುವರ ಮನೆಗೆ 11–-1–-2010ರಲ್ಲಿ ಚಿಕ್ಕತಾಯಮ್ಮ, ಸ್ವಾಮಿ, ಲಕ್ಷ್ಮಮ್ಮ ಎಂಬುವರು ಮನೆಗೆ ನುಗ್ಗಿ, ಗೋಡೆಗೆ ಹಾನಿ ಮಾಡಿ, ಕೃಷ್ಣಾಚಾರ್ ಪತ್ನಿಗೆ ಅವಾಚ್ಯಶಬ್ಧಗಳಿಂದ ನಿಂದಿಸಿದ್ದರು ಎಂದು ದೂರು ದಾಖಲಾಗಿತ್ತು.<br /> <br /> ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಆರ್.ಶಾರದ ಆರೋಪಿಗಳಿಗೆ ತಲಾ ಎರಡು ಸಾವಿರ ದಂಡ, ದಂಡ ಪಾವತಿಸಲು ವಿಫಲರಾದಲ್ಲಿ 45 ದಿನ ಸಾದ ಸಜೆ ವಿಧಿಸಿ, ಗೋಡೆ ಹಾನಿ ಮಾಡಿದ್ದಕ್ಕೆ, ಕೃಷ್ಣಾಚಾರ್ಗೆ ₨ ಮೂರು ಸಾವಿರ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ. ಎಪಿಪಿ ಸುರೇಖಾ ಹಿರೇಮಠ ಸರ್ಕಾರದ ಪರವಾಗಿ ವಾದಿಸಿದ್ದರು.<br /> <br /> <strong>ನಿಯಮ ಉಲ್ಲಂಘನೆ: ಎಚ್ಚರಿಕೆ</strong><br /> ಕುಣಿಗಲ್: ಸಾರಿಗೆ ನಿಗಮದ ಕೆಲ ಬಸ್ಗಳು ನಿಯಮ ಉಲ್ಲಂಘಿಸಿ, ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತಿವೆ. 15 ದಿನದೊಳಗೆ ನಿಗಮದ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಕರವೇ ವತಿಯಿಂದ ಬೈಪಾಸ್ ರಸ್ತೆಯಲ್ಲಿ ಸಾಗುವ ಬಸ್ಗಳನ್ನು ತಡೆದು, ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅಧ್ಯಕ್ಷ ಮಂಜುನಾಥ್ ತಿಳಿಸಿದರು.<br /> <br /> ಪಟ್ಟಣದ ಸಾರಿಗೆ ಘಟಕಕ್ಕೆ ಗುರುವಾರ ಭೇಟಿ ನೀಡಿದ್ದ ತುಮಕೂರು ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.<br /> <br /> ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ದಿನೇಶ್, ಕಿರಣ್ ಕುಮಾರ, ಅವಿನಾಶ್, ಅನಿಲ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>