<p><strong>ಬೆಂಗಳೂರು: `</strong>ಪ್ರೊ.ಬಿ.ಸಿ.ಮೈಲಾರಪ್ಪ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲ ಸಚಿವರನ್ನಾಗಿ ನೇಮಕ ಮಾಡಿರುವುದು ತಪ್ಪು, ವಿ.ವಿಯ ಕುಲಪತಿಗೆ ಕಿರುಕುಳ ನೀಡುವ ಕಾರಣಕ್ಕಾಗಿಯೆ ಕೆಲವು ನೇಮಕಗಳನ್ನು ಸರ್ಕಾರ ಮಾಡಿದೆ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ನೇರವಾಗಿ ಆಪಾದಿಸಿದರು.<br /> <br /> ನಗರದಲ್ಲಿ ಸೋಮವಾರ ನಡೆದ ಬೆಂಗಳೂರು ವಿ.ವಿ ಕುಲಪತಿ ಡಾ.ಎನ್.ಪ್ರಭುದೇವ್ ಅವರು ಬರೆದಿರುವ `ಹಿಯರ್ ಅಂಡ್ ದೇರ್~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> `ವಿಶ್ವವಿದ್ಯಾಲಯಕ್ಕೆ ನೀವು ಮಹತ್ವದ ಸೇವೆ ಸಲ್ಲಿಸಿ ಯಶಸ್ವಿ ಕುಲಪತಿ ಆಗಿದ್ದೀರ. ಆದರೆ ನಿಮಗೆ ಕಿರುಕುಳ ನೀಡಲಾಗುತ್ತಿದೆ. ನಿಮಗೆ ತೊಂದರೆ ನೀಡಲು ಯಾವುದೇ ಕಾರಣವಿಲ್ಲ. ಕುಲಪತಿಗೆ ಕುಲಸಚಿವರು ಕಿರುಕುಳ ನೀಡುತ್ತಾರೆ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ತಪ್ಪನ್ನು ಸರಿಪಡಿಸಲು ನನಗೆ ಅಧಿಕಾರವಿಲ್ಲ. ಉತ್ತಮ ಕೆಲಸ ಮಾಡುತ್ತಿರುವ ನೀವು ಮಾತ್ರ ಈ ವಿಶ್ವವಿದ್ಯಾಲಯವನ್ನು ನಿಭಾಯಿಸಬಲ್ಲಿರಿ~ ಎಂದರು.<br /> <br /> `ಆರಂಭದಲ್ಲಿ ಕೆಲವರು ನನಗೂ ತೊಂದರೆ ನೀಡಿದರು. ನಿಮ್ಮ ವಿಷಯದಲ್ಲೂ ಇದೇ ಆಗುತ್ತಿದೆ. ಈ ಅಡೆತಡೆಗಳನ್ನು ಎದುರಿಸಬಲ್ಲಿರಿ. ಶೈಕ್ಷಣಿಕ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಹಿಂದೆ ವಿಶ್ವವಿದ್ಯಾಲಯದ ಯಾವುದೇ ವಿಷಯದಲ್ಲಿ ಸರ್ಕಾರಗಳು ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಯುಜಿಸಿ ನಿಯಮಗಳನ್ನು ಎಲ್ಲ ವಿ.ವಿಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ಕುಲಪತಿಗಳ ಸಮ್ಮೇಳನದಲ್ಲಿ ನಾನು ಹೇಳಿದ್ದೇನೆ~ ಎಂದು ಅವರು ತಿಳಿಸಿದರು.<br /> <br /> `ವಿಶ್ವವಿದ್ಯಾಲಯದಲ್ಲಿ ತಂದ ಸುಧಾರಣೆಗಳ ಬಗ್ಗೆ ತೃಪ್ತಿ ಇದೆ. ಪರೀಕ್ಷೆಯ ವಿಷಯಗಳಲ್ಲಿ ಸಂಪೂರ್ಣ ಬದಅಲಾವಣೆ ತಂದೆ. ದಿಢೀರ್ ಬದಲಾವಣೆಗೆ ಒಗ್ಗಿಕೊಳ್ಳಲಾಗದ ವಿದ್ಯಾರ್ಥಿಗಳಿಂದ ವಿರೋಧ ಎದುರಿಸಿದೆ. ವಿ.ವಿ ಒಳಗೆ ಹಾಗೂ ಹೊರಗಿನ ಸಮಾಜಘಾತುಕ ಶಕ್ತಿಗಳು ನನ್ನ ವಿರುದ್ಧ ಕೆಲಸ ಮಾಡುತ್ತಿವೆ. <br /> <br /> ವಿ.ವಿಗೆ ಧಕ್ಕೆಯಾಗುವಂತಹ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ತಿರುಗಿಬೀಳುವ ಮನೋಭಾವದವನು. ಎಲ್ಲ ಸವಾಲುಗಳನ್ನು ಎದುರಿಸಿ ಗೆಲವು ಕಾಣುತ್ತೇನೆ~ ಎಂದು ಪ್ರಭುದೇವ್ ಹೇಳಿದರು`ಕುಲಪತಿ ಪ್ರಭುದೇವ್ ಅವರು ಆಡಳಿತ, ಪರೀಕ್ಷೆ, ಪ್ರವೇಶ ಮುಂತಾದ ವಿಷಯಗಳಲ್ಲಿ ಪ್ರಮುಖ ಸುಧಾರಣೆಗಳನ್ನು ತಂದಿದ್ದಾರೆ. ಅವರು ತಮ್ಮ ಪುಸ್ತಕದಲ್ಲಿ ವಿಜ್ಞಾನ, ಕ್ರೀಡೆ, ಮಾಧ್ಯಮ, ಮಹಿಳೆ ಮುಂತಾದ ವಿಷಯಗಳ ಬಗ್ಗೆ ಚೆನ್ನಾಗಿ ಬರೆದಿದ್ದಾರೆ.<br /> <br /> ಯುವಕರು ಭವಿಷ್ಯದ ನಾಯಕರು ಮಾತ್ರವಲ್ಲ ಇಂದಿನ ಸಹಭಾಗಿಗಳು ಎಂಬ ಅಂಶವನ್ನೂ ಪುಸ್ತಕದಲ್ಲಿ ಬರೆದಿದ್ದಾರೆ. ಇಂತಹ ಹಲವು ಅಂಶಗಳನ್ನು ಪುಸ್ತಕದಲ್ಲಿ ಓದಬಹುದು~ ಎಂದು ಪುಸ್ತಕ ವಿಮರ್ಶೆ ಮಾಡಿದ ಮನಶಾಸ್ತ್ರಜ್ಞ ಎಂ.ಎ.ಅತಾವುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು.ಕುಲಪತಿ ಅವರ ಪುತ್ರ ನಿತಿನ್ ಪ್ರಭುದೇವ್ ಸ್ವಾಗತಿಸಿದರು. ವಿಧಾನಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಶಕ್ತಿ ಬುಕ್ಸ್ನ ಜಿ.ಸಂತಾನಮ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: `</strong>ಪ್ರೊ.ಬಿ.ಸಿ.ಮೈಲಾರಪ್ಪ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲ ಸಚಿವರನ್ನಾಗಿ ನೇಮಕ ಮಾಡಿರುವುದು ತಪ್ಪು, ವಿ.ವಿಯ ಕುಲಪತಿಗೆ ಕಿರುಕುಳ ನೀಡುವ ಕಾರಣಕ್ಕಾಗಿಯೆ ಕೆಲವು ನೇಮಕಗಳನ್ನು ಸರ್ಕಾರ ಮಾಡಿದೆ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ನೇರವಾಗಿ ಆಪಾದಿಸಿದರು.<br /> <br /> ನಗರದಲ್ಲಿ ಸೋಮವಾರ ನಡೆದ ಬೆಂಗಳೂರು ವಿ.ವಿ ಕುಲಪತಿ ಡಾ.ಎನ್.ಪ್ರಭುದೇವ್ ಅವರು ಬರೆದಿರುವ `ಹಿಯರ್ ಅಂಡ್ ದೇರ್~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> `ವಿಶ್ವವಿದ್ಯಾಲಯಕ್ಕೆ ನೀವು ಮಹತ್ವದ ಸೇವೆ ಸಲ್ಲಿಸಿ ಯಶಸ್ವಿ ಕುಲಪತಿ ಆಗಿದ್ದೀರ. ಆದರೆ ನಿಮಗೆ ಕಿರುಕುಳ ನೀಡಲಾಗುತ್ತಿದೆ. ನಿಮಗೆ ತೊಂದರೆ ನೀಡಲು ಯಾವುದೇ ಕಾರಣವಿಲ್ಲ. ಕುಲಪತಿಗೆ ಕುಲಸಚಿವರು ಕಿರುಕುಳ ನೀಡುತ್ತಾರೆ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ತಪ್ಪನ್ನು ಸರಿಪಡಿಸಲು ನನಗೆ ಅಧಿಕಾರವಿಲ್ಲ. ಉತ್ತಮ ಕೆಲಸ ಮಾಡುತ್ತಿರುವ ನೀವು ಮಾತ್ರ ಈ ವಿಶ್ವವಿದ್ಯಾಲಯವನ್ನು ನಿಭಾಯಿಸಬಲ್ಲಿರಿ~ ಎಂದರು.<br /> <br /> `ಆರಂಭದಲ್ಲಿ ಕೆಲವರು ನನಗೂ ತೊಂದರೆ ನೀಡಿದರು. ನಿಮ್ಮ ವಿಷಯದಲ್ಲೂ ಇದೇ ಆಗುತ್ತಿದೆ. ಈ ಅಡೆತಡೆಗಳನ್ನು ಎದುರಿಸಬಲ್ಲಿರಿ. ಶೈಕ್ಷಣಿಕ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಹಿಂದೆ ವಿಶ್ವವಿದ್ಯಾಲಯದ ಯಾವುದೇ ವಿಷಯದಲ್ಲಿ ಸರ್ಕಾರಗಳು ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಯುಜಿಸಿ ನಿಯಮಗಳನ್ನು ಎಲ್ಲ ವಿ.ವಿಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ಕುಲಪತಿಗಳ ಸಮ್ಮೇಳನದಲ್ಲಿ ನಾನು ಹೇಳಿದ್ದೇನೆ~ ಎಂದು ಅವರು ತಿಳಿಸಿದರು.<br /> <br /> `ವಿಶ್ವವಿದ್ಯಾಲಯದಲ್ಲಿ ತಂದ ಸುಧಾರಣೆಗಳ ಬಗ್ಗೆ ತೃಪ್ತಿ ಇದೆ. ಪರೀಕ್ಷೆಯ ವಿಷಯಗಳಲ್ಲಿ ಸಂಪೂರ್ಣ ಬದಅಲಾವಣೆ ತಂದೆ. ದಿಢೀರ್ ಬದಲಾವಣೆಗೆ ಒಗ್ಗಿಕೊಳ್ಳಲಾಗದ ವಿದ್ಯಾರ್ಥಿಗಳಿಂದ ವಿರೋಧ ಎದುರಿಸಿದೆ. ವಿ.ವಿ ಒಳಗೆ ಹಾಗೂ ಹೊರಗಿನ ಸಮಾಜಘಾತುಕ ಶಕ್ತಿಗಳು ನನ್ನ ವಿರುದ್ಧ ಕೆಲಸ ಮಾಡುತ್ತಿವೆ. <br /> <br /> ವಿ.ವಿಗೆ ಧಕ್ಕೆಯಾಗುವಂತಹ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ತಿರುಗಿಬೀಳುವ ಮನೋಭಾವದವನು. ಎಲ್ಲ ಸವಾಲುಗಳನ್ನು ಎದುರಿಸಿ ಗೆಲವು ಕಾಣುತ್ತೇನೆ~ ಎಂದು ಪ್ರಭುದೇವ್ ಹೇಳಿದರು`ಕುಲಪತಿ ಪ್ರಭುದೇವ್ ಅವರು ಆಡಳಿತ, ಪರೀಕ್ಷೆ, ಪ್ರವೇಶ ಮುಂತಾದ ವಿಷಯಗಳಲ್ಲಿ ಪ್ರಮುಖ ಸುಧಾರಣೆಗಳನ್ನು ತಂದಿದ್ದಾರೆ. ಅವರು ತಮ್ಮ ಪುಸ್ತಕದಲ್ಲಿ ವಿಜ್ಞಾನ, ಕ್ರೀಡೆ, ಮಾಧ್ಯಮ, ಮಹಿಳೆ ಮುಂತಾದ ವಿಷಯಗಳ ಬಗ್ಗೆ ಚೆನ್ನಾಗಿ ಬರೆದಿದ್ದಾರೆ.<br /> <br /> ಯುವಕರು ಭವಿಷ್ಯದ ನಾಯಕರು ಮಾತ್ರವಲ್ಲ ಇಂದಿನ ಸಹಭಾಗಿಗಳು ಎಂಬ ಅಂಶವನ್ನೂ ಪುಸ್ತಕದಲ್ಲಿ ಬರೆದಿದ್ದಾರೆ. ಇಂತಹ ಹಲವು ಅಂಶಗಳನ್ನು ಪುಸ್ತಕದಲ್ಲಿ ಓದಬಹುದು~ ಎಂದು ಪುಸ್ತಕ ವಿಮರ್ಶೆ ಮಾಡಿದ ಮನಶಾಸ್ತ್ರಜ್ಞ ಎಂ.ಎ.ಅತಾವುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು.ಕುಲಪತಿ ಅವರ ಪುತ್ರ ನಿತಿನ್ ಪ್ರಭುದೇವ್ ಸ್ವಾಗತಿಸಿದರು. ವಿಧಾನಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಶಕ್ತಿ ಬುಕ್ಸ್ನ ಜಿ.ಸಂತಾನಮ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>