<p><strong>ಕುಷ್ಟಗಿ:</strong> ತಾಲ್ಲೂಕಿನಾದ್ಯಂತ 2 ದಿನಗಳ ಹಿಂದೆ ಮಳೆ ಸುರಿದಿದ್ದು ಮುಂಗಾರು ಹಂಗಾಮಿನ ಬಿತ್ತನೆಗೆ ಚಾಲನೆ ಸಿಕ್ಕಿದೆ.<br /> <br /> ಕೃತ್ತಿಕಾ ಮಳೆ ಕೈಕೊಟ್ಟರೂ ರೋಹಿಣಿ ನೆರವಿಗೆ ಬಂದಿರುವುದರಿಂದ ರೈತರು ಸಂಭ್ರಮ-ಉಲ್ಲಾಸದೊಂದಿಗೆ ಬಿತ್ತನೆ ಕಾರ್ಯದಲ್ಲಿ ತಲ್ಲೆನರಾಗಿದ್ದು ಬುಧವಾರ ಕಂಡುಬಂದಿತು. <br /> <br /> `ಭೂಮಿ ಭಾಳಾ ಹಸಿಯಾಗೇತ್ರಿ ಮಳಿ ಒಂದು ವಾರ ಬರದಿದ್ರೂ ಬಿತ್ತಕ ಅಡ್ಡಿ ಇಲ್ರಿ~ ಎಂದೆ ಹೆಸರು ಬಿತ್ತನೆಯಲ್ಲಿ ನಿರತನಾಗಿದ್ದ ನೆರೆಬೆಂಚಿ ಗ್ರಾಮದ ರೈತರು ಹರ್ಷ ವ್ಯಕ್ತಪಡಿಸಿದರು.<br /> <br /> ಬಹುತೇಕ ರೈತರು ಅಲ್ಪಾವಧಿ ತಳಿ ಹೆಸರು ಬಿತ್ತನೆಗೆ ಆದ್ಯತೆ ನೀಡಿದ್ದು ಈ ಬೆಳೆ ಕಟಾವು ಮಾಡಿದ ನಂತರ ಸಜ್ಜೆ ಅಥವಾ ಹುರುಳಿ ಬಿತ್ತನೆ ನಡೆಸಬಹುದೆಂಬುದು ಮಸಾರಿ (ಕೆಂಪು) ಜಮೀನಿನ ರೈತರು ಹೇಳಿದರು.<br /> ಉತ್ತಮ ಮಳೆಯಾಗುತ್ತಿದ್ದಂತೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಯಲ್ಲಿ ರೈತರು ತಲ್ಲೆನರಾಗಿದ್ದಾರೆ. ಗೊಬ್ಬರ, ಬೀಜದಂಗಡಿಗಳಲ್ಲಿ ರೈತರು ಖರೀದಿ ಧಾವಂತದಲ್ಲಿ ತೊಡಗಿದ್ದರು. <br /> <br /> ಅದೇ ರೀತಿ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದಲ್ಲಿನ ಬಿತ್ತನೆ ಬೀಜ ವಿತರಣೆ ಆರಂಭಗೊಂಡಿದ್ದು ಹೆಸರು, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೀಜಗಳಿಗೆ ಸಾಕಷ್ಟು ಬೇಡಿಕೆ ಇತ್ತು. ಸರ್ಕಾರಿ ಬೀಜಕ್ಕೆ ದಾಖಲೆ ಒಯ್ಯಬೇಕು, ಸರದಿಯಲ್ಲಿ ನಿಲ್ಲಬೇಕು.ಹೀಗಾಗಿ ಖಾಸಗಿಯಲ್ಲಿ ಬೀಜ ಖರೀದಿಸಿದ್ದಾಗಿ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ:</strong> ತಾಲ್ಲೂಕಿನಾದ್ಯಂತ 2 ದಿನಗಳ ಹಿಂದೆ ಮಳೆ ಸುರಿದಿದ್ದು ಮುಂಗಾರು ಹಂಗಾಮಿನ ಬಿತ್ತನೆಗೆ ಚಾಲನೆ ಸಿಕ್ಕಿದೆ.<br /> <br /> ಕೃತ್ತಿಕಾ ಮಳೆ ಕೈಕೊಟ್ಟರೂ ರೋಹಿಣಿ ನೆರವಿಗೆ ಬಂದಿರುವುದರಿಂದ ರೈತರು ಸಂಭ್ರಮ-ಉಲ್ಲಾಸದೊಂದಿಗೆ ಬಿತ್ತನೆ ಕಾರ್ಯದಲ್ಲಿ ತಲ್ಲೆನರಾಗಿದ್ದು ಬುಧವಾರ ಕಂಡುಬಂದಿತು. <br /> <br /> `ಭೂಮಿ ಭಾಳಾ ಹಸಿಯಾಗೇತ್ರಿ ಮಳಿ ಒಂದು ವಾರ ಬರದಿದ್ರೂ ಬಿತ್ತಕ ಅಡ್ಡಿ ಇಲ್ರಿ~ ಎಂದೆ ಹೆಸರು ಬಿತ್ತನೆಯಲ್ಲಿ ನಿರತನಾಗಿದ್ದ ನೆರೆಬೆಂಚಿ ಗ್ರಾಮದ ರೈತರು ಹರ್ಷ ವ್ಯಕ್ತಪಡಿಸಿದರು.<br /> <br /> ಬಹುತೇಕ ರೈತರು ಅಲ್ಪಾವಧಿ ತಳಿ ಹೆಸರು ಬಿತ್ತನೆಗೆ ಆದ್ಯತೆ ನೀಡಿದ್ದು ಈ ಬೆಳೆ ಕಟಾವು ಮಾಡಿದ ನಂತರ ಸಜ್ಜೆ ಅಥವಾ ಹುರುಳಿ ಬಿತ್ತನೆ ನಡೆಸಬಹುದೆಂಬುದು ಮಸಾರಿ (ಕೆಂಪು) ಜಮೀನಿನ ರೈತರು ಹೇಳಿದರು.<br /> ಉತ್ತಮ ಮಳೆಯಾಗುತ್ತಿದ್ದಂತೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಯಲ್ಲಿ ರೈತರು ತಲ್ಲೆನರಾಗಿದ್ದಾರೆ. ಗೊಬ್ಬರ, ಬೀಜದಂಗಡಿಗಳಲ್ಲಿ ರೈತರು ಖರೀದಿ ಧಾವಂತದಲ್ಲಿ ತೊಡಗಿದ್ದರು. <br /> <br /> ಅದೇ ರೀತಿ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದಲ್ಲಿನ ಬಿತ್ತನೆ ಬೀಜ ವಿತರಣೆ ಆರಂಭಗೊಂಡಿದ್ದು ಹೆಸರು, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೀಜಗಳಿಗೆ ಸಾಕಷ್ಟು ಬೇಡಿಕೆ ಇತ್ತು. ಸರ್ಕಾರಿ ಬೀಜಕ್ಕೆ ದಾಖಲೆ ಒಯ್ಯಬೇಕು, ಸರದಿಯಲ್ಲಿ ನಿಲ್ಲಬೇಕು.ಹೀಗಾಗಿ ಖಾಸಗಿಯಲ್ಲಿ ಬೀಜ ಖರೀದಿಸಿದ್ದಾಗಿ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>