<p><strong>ಶಿವಪ್ರಿಯ ನೃತ್ಯಶಾಲೆ:</strong> ಶುಕ್ರವಾರ ಕೃತಿ ಭರತನಾಟ್ಯ ರಂಗಪ್ರವೇಶ (ನಟುವಾಂಗ ಮತ್ತು ಸಂಗೀತ: ಡಾ. ಸಂಜಯ್ ಶಾಂತಾರಾಮ್. ಮೃದಂಗ: ಜಿ. ಗುರುಮೂರ್ತಿ. ವಯಲಿನ್: ನಟರಾಜ ಮೂರ್ತಿ. ಕೊಳಲು: ವಿದ್ವಾನ್ ಗಣೇಶ. ರಿದಂ ಪ್ಯಾಡ್: ಕಾರ್ತಿಕ್ ದಾತಾರ್).<br /> <br /> ಆರರ ಎಳವೆಯಲ್ಲೇ ಶಿವಪ್ರಿಯ ನೃತ್ಯಶಾಲೆಯ ಡಾ. ಸಂಜಯ್ ಶಾಂತಾರಾಮ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ಮೊದಲ ಹೆಜ್ಜೆ ಇಟ್ಟ ಕೃತಿ ಈಗ ಉದಯೋನ್ಮುಖ ಕಲಾವಿದೆ. ಒಂಬತ್ತು ವರ್ಷಗಳಿಂದ ಶ್ರದ್ಧೆಯಿಂದ ನೃತ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾಳೆ. <br /> <br /> ಭರತನಾಟ್ಯದಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆ ಉತ್ತೀರ್ಣಳಾಗಿದ್ದಾಳೆ. ಹಲವು ವೇದಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದಾಳೆ. ಪ್ರಸ್ತುತ ಸಿಂಧಿ ಹೈಸ್ಕೂಲ್ನಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಕೃತಿ ತನ್ನ ಪಾಲಕರು ಮತ್ತು ಗುರುಗಳ ಮಾರ್ಗದರ್ಶನದಿಂದ ನೃತ್ಯ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಇಡುವ ಆಕಾಂಕ್ಷೆ ಹೊಂದಿದ್ದಾಳೆ.<br /> <br /> ಡಾ. ಸಂಜಯ್ ಶಾಂತಾರಾಮ್ ನೃತ್ಯ ಕ್ಷೇತ್ರದಲ್ಲಿ ಖ್ಯಾತನಾಮರು. ಗುರು ಜಿ. ಎಸ್. ರಾಜಲಕ್ಷ್ಮಿ ಮತ್ತು ಗುರು ನರ್ಮದಾ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿರುವ ಅವರು ಸುನಂದಾ ದೇವಿ ಅವರ ಬಳಿ ಕೂಚಿಪುಡಿ ಕಲಿತರು. <br /> <br /> ಭರತನಾಟ್ಯದ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಮೊದಲ ರ್ಯಾಂಕ್ ಪಡೆದು ಉತ್ತೀರ್ಣರಾದವರು.<br /> <br /> ನೃತ್ಯದ ಜತೆ ಸುಮಧುರ ಕಂಠಸಿರಿಗಾಗಿಯೂ ಪ್ರಸಿದ್ಧಿ ಪಡೆದಿರುವ ಅವರು, ನೃತ್ಯ ಕಾರ್ಯಕ್ರಮಕ್ಕಾಗಿ ವಿಶೇಷವಾಗಿ ಹಾಡುತ್ತಾರೆ. ದೇಶ, ವಿದೇಶದ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.<br /> <strong>ಸ್ಥಳ</strong>: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6.15 </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಪ್ರಿಯ ನೃತ್ಯಶಾಲೆ:</strong> ಶುಕ್ರವಾರ ಕೃತಿ ಭರತನಾಟ್ಯ ರಂಗಪ್ರವೇಶ (ನಟುವಾಂಗ ಮತ್ತು ಸಂಗೀತ: ಡಾ. ಸಂಜಯ್ ಶಾಂತಾರಾಮ್. ಮೃದಂಗ: ಜಿ. ಗುರುಮೂರ್ತಿ. ವಯಲಿನ್: ನಟರಾಜ ಮೂರ್ತಿ. ಕೊಳಲು: ವಿದ್ವಾನ್ ಗಣೇಶ. ರಿದಂ ಪ್ಯಾಡ್: ಕಾರ್ತಿಕ್ ದಾತಾರ್).<br /> <br /> ಆರರ ಎಳವೆಯಲ್ಲೇ ಶಿವಪ್ರಿಯ ನೃತ್ಯಶಾಲೆಯ ಡಾ. ಸಂಜಯ್ ಶಾಂತಾರಾಮ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ಮೊದಲ ಹೆಜ್ಜೆ ಇಟ್ಟ ಕೃತಿ ಈಗ ಉದಯೋನ್ಮುಖ ಕಲಾವಿದೆ. ಒಂಬತ್ತು ವರ್ಷಗಳಿಂದ ಶ್ರದ್ಧೆಯಿಂದ ನೃತ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾಳೆ. <br /> <br /> ಭರತನಾಟ್ಯದಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆ ಉತ್ತೀರ್ಣಳಾಗಿದ್ದಾಳೆ. ಹಲವು ವೇದಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದಾಳೆ. ಪ್ರಸ್ತುತ ಸಿಂಧಿ ಹೈಸ್ಕೂಲ್ನಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಕೃತಿ ತನ್ನ ಪಾಲಕರು ಮತ್ತು ಗುರುಗಳ ಮಾರ್ಗದರ್ಶನದಿಂದ ನೃತ್ಯ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಇಡುವ ಆಕಾಂಕ್ಷೆ ಹೊಂದಿದ್ದಾಳೆ.<br /> <br /> ಡಾ. ಸಂಜಯ್ ಶಾಂತಾರಾಮ್ ನೃತ್ಯ ಕ್ಷೇತ್ರದಲ್ಲಿ ಖ್ಯಾತನಾಮರು. ಗುರು ಜಿ. ಎಸ್. ರಾಜಲಕ್ಷ್ಮಿ ಮತ್ತು ಗುರು ನರ್ಮದಾ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿರುವ ಅವರು ಸುನಂದಾ ದೇವಿ ಅವರ ಬಳಿ ಕೂಚಿಪುಡಿ ಕಲಿತರು. <br /> <br /> ಭರತನಾಟ್ಯದ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಮೊದಲ ರ್ಯಾಂಕ್ ಪಡೆದು ಉತ್ತೀರ್ಣರಾದವರು.<br /> <br /> ನೃತ್ಯದ ಜತೆ ಸುಮಧುರ ಕಂಠಸಿರಿಗಾಗಿಯೂ ಪ್ರಸಿದ್ಧಿ ಪಡೆದಿರುವ ಅವರು, ನೃತ್ಯ ಕಾರ್ಯಕ್ರಮಕ್ಕಾಗಿ ವಿಶೇಷವಾಗಿ ಹಾಡುತ್ತಾರೆ. ದೇಶ, ವಿದೇಶದ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.<br /> <strong>ಸ್ಥಳ</strong>: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6.15 </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>