ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಹಾವಿದ್ಯಾಲಯದಲ್ಲಿ ಡಿಪ್ಲೊಮಾ ವೃತ್ತಿಪರ ಕೋರ್ಸ್

35 ವಿದ್ಯಾರ್ಥಿಗಳಿಗೆ ಅವಕಾಶ: ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳ ಆಯ್ಕೆ
Last Updated 23 ಮೇ 2015, 5:55 IST
ಅಕ್ಷರ ಗಾತ್ರ

ಶಹಾಪುರ:  ಎಸ್ಸೆಸ್ಸೆಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪಿಯುಸಿ ಬದಲಾಗಿ ವೃತ್ತಿ ಶಿಕ್ಷಣವಾದ ಡಿಪ್ಲೊಮಾ (ಕೃಷಿ) ಪ್ರವೇಶ ಪಡೆಯಲು ಅವಕಾಶವಿದೆ.

ಹೈದರಾಬಾದ್‌ ಕರ್ನಾಟಕ ಕೃಷಿ ಕ್ಷೇತ್ರದ ಹೆಬ್ಬಾಗಲಿನಂತೆ  ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾ ಲಯವು ಕೃಷಿ, ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆಯ ಉದ್ದೇಶಗಳನ್ನು ಇಟ್ಟುಕೊಂಡು 2001 ರಲ್ಲಿ ಸ್ಥಾಪನೆ ಗೊಂಡಿದೆ. ನೀರಾವರಿ ಪ್ರದೇಶವಾಗಿದ್ದ ರಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಪಡೆಯಲು ಕೃಷಿಯ ನೂತನ ತಂತ್ರಜ್ಞಾನ ಗಳನ್ನು ಅಳವಡಿ ಸಿಕೊಂಡು ರೈತರು ಆರ್ಥಿಕವಾಗಿ ಸಬಲ ರಾಗಲಿ ಎನ್ನುವ ಹಿರಿದಾದ ಆಸೆ ಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಕೃಷಿ ಪದವಿಯನ್ನು ಪಡೆದುಕೊಂಡು ಹಲ ವಾರು ವಿದ್ಯಾರ್ಥಿಗಳು ಹೊರ ಬಂದಿದ್ದಾರೆ.

ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದಲ್ಲಿ 2011–12ನೇ ಶೈಕ್ಷಣಿಕ ವರ್ಷದಿಂದಲೇ ಡಿಪ್ಲೊಮಾ ಕೋರ್ಸ್ (ಕೃಷಿ) ಆರಂಭಿಸಲಾಗಿದೆ.  ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಕ್ಷೇತ್ರದ ರೈತರ ಮಕ್ಕಳಿಗೆ ಉಪಯುಕ್ತವಾದ ಕೋರ್ಸ್ ಇದಾಗಿದೆ. ಮುಂದೆ ಸಾಕಷ್ಟು ಅವಕಾಶ ಗಳಿದ್ದು ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ವಿದ್ಯಾರ್ಥಿ ಗಳಿಗೆ ಅನುಕೂಲವಾಗಲಿದೆ.

ಡಿಪ್ಲೊಮಾ (ಕೃಷಿ) ಎರಡು ವರ್ಷದ ಕೋರ್ಸ್ ಇದಾಗಿದೆ. ನಾಲ್ಕು ಸೆಮಿಸ್ಟರ್‌ ಗಳನ್ನು ಒಳಗೊಂಡಿದೆ.  ಬೋಧನೆ ಕನ್ನಡ ಮಾಧ್ಯಮದಲ್ಲಿ ಇರುತ್ತದೆ. ಇದ ರಿಂದ ಗ್ರಾಮೀಣ ಪ್ರದೇಶದ ಹೆಚ್ಚಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ವಾಗುತ್ತದೆ.

ಡಿಪ್ಲೊಮಾ ಕೋರ್ಸ್ (ಕೃಷಿ) ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹1ಸಾವಿರ ವಿದ್ಯಾರ್ಥಿ ವೇತನ  ನೀಡಲಾಗುತ್ತದೆ. ವಿದ್ಯಾರ್ಥಿ ವೇತನ ಗರಿಷ್ಠ ನಾಲ್ಕು ಸೆಮಿಸ್ಟರ್‌ಗೆ ಸೀಮಿತ ವಾಗಿದೆ. ಅಲ್ಲದೆ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿ ವೇತನವನ್ನು ಕೋರ್ಸ್ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿ ಗಳಿಗೆ ನೀಡಲಾಗುತ್ತದೆ.

ಮೀಸಲಾತಿ: ಹೈದರಾಬಾದ್‌ ಕರ್ನಾಟ ಕದ ಆರು ಜಿಲ್ಲೆಯ ವಿದ್ಯಾರ್ಥಿಗಳಿಗೆ 371 (ಜೆ) ಕಲಂ ಅನ್ವಯ ಶೇ 70ರಷ್ಟು ಸ್ಥಾನ ಲಭ್ಯವಾಗಲಿವೆ. ಅಲ್ಲದೆ ರೈತರ ಮಕ್ಕಳು ಆಗಿದ್ದರೆ ಶೇ 40ರಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ ಎಂದು ಕಾಲೇಜಿನ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿ  ವಿಶ್ವವಿದ್ಯಾಲಯದ ವೆಬ್‌ಸೈಟ್(www.uasraichur.edu.in) ನಲ್ಲಿ ಪಡೆಯಬಹುದಾಗಿದೆ.

ಮುಖ್ಯಾಂಶಗಳು
*  ಎಸ್ಸೆಸ್ಸೆಲ್ಸಿ ನಂತರ ಕೃಷಿ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶಾವಕಾಶ
* ಕನ್ನಡ ಮಾಧ್ಯಮದಲ್ಲಿ ಬೋಧನೆ
* ರೈತರ ಮಕ್ಕಳಿಗೆ ಶೇ 40ರಷ್ಟು ಸ್ಥಾನ ಲಭ್ಯ

ಹೈ.ಕ.ಜಿಲ್ಲೆಗಳ ವಿದ್ಯಾರ್ಥಿಗಳಿಗೆ  ಶೇ 70 ರಷ್ಟು ಸ್ಥಾನಗಳ ಮೀಸಲಾತಿ ನೀಡ ಲಾಗಿದೆ. ನೀರಾವರಿ ಭಾಗದ ವಿದ್ಯಾ ರ್ಥಿಗಳಿಗೆ ಕೋರ್ಸ್ ಹೆಚ್ಚು ಉಪಯುಕ್ತ
ಡಾ.ಸುರೇಶ ಎಸ್‌.ಪಾಟೀಲ್ ಡೀನ್, ಕೃಷಿ ಮಹಾವಿದ್ಯಾಲಯ, ಭೀಮರಾಯನಗುಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT