<p><strong>ಹುಬ್ಬಳ್ಳಿ: </strong>ಆ ಮನೆಯಲ್ಲಿ 22 ಯುವತಿಯರಿದ್ದಾರೆ. ಅವರೆಲ್ಲರೂ ಮುಂಬೈನ `ಕೆಂಪು ದೀಪ~ ಪ್ರದೇಶದಿಂದ ಬಲವಂತವಾಗಿ `ಮುಕ್ತ~ಗೊಂಡವರು. ಕಬ್ಬಿಣದ ಸರಳುಗಳಿಂದ ಬೇಲಿ ನಿರ್ಮಿತ ಮನೆಯಲ್ಲಿ ಈಗ `ಬಂದಿ~ಗಳಾಗಿದ್ದರೂ ಸುರಕ್ಷಿತರಾಗಿದ್ದಾರೆ!<br /> <br /> ವಿಶೇಷವೆಂದರೆ, ಸಮಾಜದ ಮುಖ್ಯ ವಾಹಿನಿಯಲ್ಲಿ ಮತ್ತೆ ಸೇರಬೇಕೆಂಬ ನಿರೀಕ್ಷೆಯಲ್ಲಿರುವ ಆ ಯುವತಿಯರ ಪೈಕಿ 10 ಮಂದಿ ಎಚ್ಐವಿ ಸೋಂಕು ಪೀಡಿತರು. ಸ್ವತಂತ್ರ ಬದುಕು ಕಟ್ಟಿಕೊಳ್ಳುವ ಆಸೆಯಿಂದ ಆಮಿಷಕ್ಕೆ ಬಲಿಯಾಗಿ ವೇಶ್ಯಾವಾಟಿಕೆ ದಂಧೆಗೆ ಬಿದ್ದು ಏಡ್ಸ್ ತಗುಲಿದ್ದರೂ, ಅದರ ಅರಿವಿಲ್ಲದ ಮುಗ್ಧರು.<br /> <br /> ಮಹಿಳೆಯರ ಮತ್ತು ಮಕ್ಕಳ ಸಾಗಾಟ ಮತ್ತು ಮಾರಾಟ ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯ ಎಸಗುವ `ಉಜ್ವಲ~ ಯೋಜನೆಯನ್ವಯ ಸರ್ಕಾರೇತರ ಸಂಸ್ಥೆಯೊಂದು ನಗರದಲ್ಲಿ ಆರಂಭಿಸಿರುವ ಕೇಂದ್ರವೊಂದರಲ್ಲಿ ಈ ಯುುವತಿಯರು ದಿನ ಕಳೆಯುತ್ತಿದ್ದಾರೆ. <br /> <br /> ಕೌಟುಂಬಿಕ ಸಮಸ್ಯೆ, ಪತಿಯ ಕಿರುಕುಳ, ಉದ್ಯೋಗ ನಿರೀಕ್ಷೆ ಮತ್ತಿತರ ಕಾರಣಗಳಿಗೆ ಮನೆ ಬಿಟ್ಟು ಹೋದವರು, ಆಕಸ್ಮಿಕವಾಗಿ ಪರಿಚಿತರಾದ `ಮಧ್ಯವರ್ತಿ~ಗಳ ಸಹವಾಸ, ಸಂಪರ್ಕದಿಂದ `ದೇಹ ಮಾರುವ~ ಅಡ್ಡೆ ಸೇರಿದ್ದರು.<br /> `ಸಾಗಾಟ, ಮಾರಾಟ ಅಥವಾ ಇನ್ಯಾವುದೋ ಕಾರಣದಿಂದ ಅಡ್ಡದಾರಿ ಹಿಡಿದ ಇಂತಹ ಯುವತಿಯರಿಗಾಗಿ ಮೀಸಲಾದ ಈ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ಉಚಿತ ಊಟ, ವಸತಿ, ವೈದ್ಯಕೀಯ, ಕಾನೂನು ನೆರವು, ವೃತ್ತಿ ತರಬೇತಿ, ಅವರ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ. <br /> <br /> ಯಾರೂ ತಪ್ಪಿಸಿಕೊಳ್ಳಬಾರದು, ಅನೈತಿಕ ಚಟುವಟಿಕೆಗೆ ಮತ್ತೆ ಮರಳಬಾರದು ಎಂಬ ಉದ್ದೇಶದಿಂದ ಸೂಕ್ತ ರಕ್ಷಣಾ ವ್ಯವಸ್ಥೆ ಇರುವ ಮನೆಯಲ್ಲಿ ಈ ಯವತಿಯರನ್ನು ಕೂಡಿಹಾಕಲಾಗಿದೆ. ಆದರೂ ಇತ್ತೀಚೆಗೆ ಒಬ್ಬಳು ತಪ್ಪಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ನೀಡಲಾಗಿದೆ~.<br /> <br /> `ಈ ಯುವತಿಯರಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕ ನಿಷೇಧಿಸಲಾಗಿದ್ದರೂ ಅವರ ಇಷ್ಟಾರ್ಥಗಳನ್ನು ಪೂರೈಸಲಾಗುತ್ತದೆ. ಆಪ್ತ ಸಮಾಲೋಚನೆ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸುವ ಪ್ರಯತ್ನ ಮುಂದುವರಿದಿದೆ~ ಎಂದು ಆ ಕೇಂದ್ರದ ಮೇಲ್ವಿಚಾರಕಿ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಇಲ್ಲಿರುವ ಯುವತಿಯರು ಬೆಂಗಳೂರು, ಹಾಸನ, ಗುಲ್ಬರ್ಗ, ತುಮಕೂರು ಜಿಲ್ಲೆಯ ನಿವಾಸಿಗಳು. ಸಾಗಾಟ, ಮಾರಾಟ ಜಾಲಕ್ಕೆ ಸಿಲುಕಿ ಮುಂಬೈಯ ಕಾಮಾಟಿಪುರದ `ಘರ್ವಾಲಿ~ಗಳ ಕೈಸೇರಿ ವೇಶ್ಯಾವಾಟಿಕೆ ವೃತ್ತಿಗೆ ಬಿದ್ದವರು. ಕೆಲವರು ಅಲ್ಲಿಂದ ಪಾರಾಗಲು ಬಯಸಿದ್ದರೂ ಸಾಧ್ಯವಾಗದೆ ನರಳಿದವರು. ಇನ್ನೂ ಕೆಲವರು ಬೇರೆ ದಾರಿ ಕಾಣದೆ ಆ ವೃತ್ತಿಗೆ ಒಗ್ಗಿಕೊಂಡವರು. ಮುಂಬೈನ ಚೆಂಬೂರಿನ ನವಜೀವನ ಮತ್ತು ಐಜಿಎಂ ಎಂಬ ಸ್ವಯಂಸೇವಾ ಸಂಸ್ಥೆ ಮತ್ತು ಸ್ಥಳೀಯ ಪೊಲೀಸರ ಕಾರ್ಯಚರಣೆ ಫಲವಾಗಿ ಈ ಯುವತಿಯರು ಹೊರಬಂದಿದ್ದಾರೆ~ ಎಂದರು.<br /> <br /> `ಲೈಂಗಿಕ ಶೋಷಣೆಗೆ ಒಳಪಟ್ಟ ಹಾಗೂ ಸಾಗಾಟ ಮತ್ತು ಮಾರಾಟ ಜಾಲದಿಂದ ರಕ್ಷಣೆಯಾದವರಿಗೆ `ಉಜ್ವಲ~ ಯೋಜಯಡಿ ರಕ್ಷಣೆ, ಪುನರ್ವಸತಿ ಹಾಗೂ ಮತ್ತೆ ಸಮಾಜದ ಮುಖ್ಯ ವಾಹಿನಿಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಅನೈತಿಕ ದಾರಿಯಲ್ಲಿ ಹೆಜ್ಜೆ ತುಳಿದ ಯುವತಿಯರಿಗೆ ಈ ಕೇಂದ್ರದಲ್ಲಿ ರಕ್ಷಣೆ, ಪುನವರ್ಸತಿ ಕಲ್ಪಿಸಲಾಗುತ್ತಿದೆ. ಜೊತೆಗೆ ಇತರರಂತೆ ಬದುಕಲು ಪೂರಕವಾದ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು. ಪೋಷಕರನ್ನು, ಪತಿಯನ್ನು ಮರಳಿ ಸೇರಲು ಬಯಸುವವರಿಗೂ ಸಹಕಾರ ನೀಡಲಾಗುವುದು~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಆ ಮನೆಯಲ್ಲಿ 22 ಯುವತಿಯರಿದ್ದಾರೆ. ಅವರೆಲ್ಲರೂ ಮುಂಬೈನ `ಕೆಂಪು ದೀಪ~ ಪ್ರದೇಶದಿಂದ ಬಲವಂತವಾಗಿ `ಮುಕ್ತ~ಗೊಂಡವರು. ಕಬ್ಬಿಣದ ಸರಳುಗಳಿಂದ ಬೇಲಿ ನಿರ್ಮಿತ ಮನೆಯಲ್ಲಿ ಈಗ `ಬಂದಿ~ಗಳಾಗಿದ್ದರೂ ಸುರಕ್ಷಿತರಾಗಿದ್ದಾರೆ!<br /> <br /> ವಿಶೇಷವೆಂದರೆ, ಸಮಾಜದ ಮುಖ್ಯ ವಾಹಿನಿಯಲ್ಲಿ ಮತ್ತೆ ಸೇರಬೇಕೆಂಬ ನಿರೀಕ್ಷೆಯಲ್ಲಿರುವ ಆ ಯುವತಿಯರ ಪೈಕಿ 10 ಮಂದಿ ಎಚ್ಐವಿ ಸೋಂಕು ಪೀಡಿತರು. ಸ್ವತಂತ್ರ ಬದುಕು ಕಟ್ಟಿಕೊಳ್ಳುವ ಆಸೆಯಿಂದ ಆಮಿಷಕ್ಕೆ ಬಲಿಯಾಗಿ ವೇಶ್ಯಾವಾಟಿಕೆ ದಂಧೆಗೆ ಬಿದ್ದು ಏಡ್ಸ್ ತಗುಲಿದ್ದರೂ, ಅದರ ಅರಿವಿಲ್ಲದ ಮುಗ್ಧರು.<br /> <br /> ಮಹಿಳೆಯರ ಮತ್ತು ಮಕ್ಕಳ ಸಾಗಾಟ ಮತ್ತು ಮಾರಾಟ ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯ ಎಸಗುವ `ಉಜ್ವಲ~ ಯೋಜನೆಯನ್ವಯ ಸರ್ಕಾರೇತರ ಸಂಸ್ಥೆಯೊಂದು ನಗರದಲ್ಲಿ ಆರಂಭಿಸಿರುವ ಕೇಂದ್ರವೊಂದರಲ್ಲಿ ಈ ಯುುವತಿಯರು ದಿನ ಕಳೆಯುತ್ತಿದ್ದಾರೆ. <br /> <br /> ಕೌಟುಂಬಿಕ ಸಮಸ್ಯೆ, ಪತಿಯ ಕಿರುಕುಳ, ಉದ್ಯೋಗ ನಿರೀಕ್ಷೆ ಮತ್ತಿತರ ಕಾರಣಗಳಿಗೆ ಮನೆ ಬಿಟ್ಟು ಹೋದವರು, ಆಕಸ್ಮಿಕವಾಗಿ ಪರಿಚಿತರಾದ `ಮಧ್ಯವರ್ತಿ~ಗಳ ಸಹವಾಸ, ಸಂಪರ್ಕದಿಂದ `ದೇಹ ಮಾರುವ~ ಅಡ್ಡೆ ಸೇರಿದ್ದರು.<br /> `ಸಾಗಾಟ, ಮಾರಾಟ ಅಥವಾ ಇನ್ಯಾವುದೋ ಕಾರಣದಿಂದ ಅಡ್ಡದಾರಿ ಹಿಡಿದ ಇಂತಹ ಯುವತಿಯರಿಗಾಗಿ ಮೀಸಲಾದ ಈ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ಉಚಿತ ಊಟ, ವಸತಿ, ವೈದ್ಯಕೀಯ, ಕಾನೂನು ನೆರವು, ವೃತ್ತಿ ತರಬೇತಿ, ಅವರ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ. <br /> <br /> ಯಾರೂ ತಪ್ಪಿಸಿಕೊಳ್ಳಬಾರದು, ಅನೈತಿಕ ಚಟುವಟಿಕೆಗೆ ಮತ್ತೆ ಮರಳಬಾರದು ಎಂಬ ಉದ್ದೇಶದಿಂದ ಸೂಕ್ತ ರಕ್ಷಣಾ ವ್ಯವಸ್ಥೆ ಇರುವ ಮನೆಯಲ್ಲಿ ಈ ಯವತಿಯರನ್ನು ಕೂಡಿಹಾಕಲಾಗಿದೆ. ಆದರೂ ಇತ್ತೀಚೆಗೆ ಒಬ್ಬಳು ತಪ್ಪಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ನೀಡಲಾಗಿದೆ~.<br /> <br /> `ಈ ಯುವತಿಯರಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕ ನಿಷೇಧಿಸಲಾಗಿದ್ದರೂ ಅವರ ಇಷ್ಟಾರ್ಥಗಳನ್ನು ಪೂರೈಸಲಾಗುತ್ತದೆ. ಆಪ್ತ ಸಮಾಲೋಚನೆ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸುವ ಪ್ರಯತ್ನ ಮುಂದುವರಿದಿದೆ~ ಎಂದು ಆ ಕೇಂದ್ರದ ಮೇಲ್ವಿಚಾರಕಿ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಇಲ್ಲಿರುವ ಯುವತಿಯರು ಬೆಂಗಳೂರು, ಹಾಸನ, ಗುಲ್ಬರ್ಗ, ತುಮಕೂರು ಜಿಲ್ಲೆಯ ನಿವಾಸಿಗಳು. ಸಾಗಾಟ, ಮಾರಾಟ ಜಾಲಕ್ಕೆ ಸಿಲುಕಿ ಮುಂಬೈಯ ಕಾಮಾಟಿಪುರದ `ಘರ್ವಾಲಿ~ಗಳ ಕೈಸೇರಿ ವೇಶ್ಯಾವಾಟಿಕೆ ವೃತ್ತಿಗೆ ಬಿದ್ದವರು. ಕೆಲವರು ಅಲ್ಲಿಂದ ಪಾರಾಗಲು ಬಯಸಿದ್ದರೂ ಸಾಧ್ಯವಾಗದೆ ನರಳಿದವರು. ಇನ್ನೂ ಕೆಲವರು ಬೇರೆ ದಾರಿ ಕಾಣದೆ ಆ ವೃತ್ತಿಗೆ ಒಗ್ಗಿಕೊಂಡವರು. ಮುಂಬೈನ ಚೆಂಬೂರಿನ ನವಜೀವನ ಮತ್ತು ಐಜಿಎಂ ಎಂಬ ಸ್ವಯಂಸೇವಾ ಸಂಸ್ಥೆ ಮತ್ತು ಸ್ಥಳೀಯ ಪೊಲೀಸರ ಕಾರ್ಯಚರಣೆ ಫಲವಾಗಿ ಈ ಯುವತಿಯರು ಹೊರಬಂದಿದ್ದಾರೆ~ ಎಂದರು.<br /> <br /> `ಲೈಂಗಿಕ ಶೋಷಣೆಗೆ ಒಳಪಟ್ಟ ಹಾಗೂ ಸಾಗಾಟ ಮತ್ತು ಮಾರಾಟ ಜಾಲದಿಂದ ರಕ್ಷಣೆಯಾದವರಿಗೆ `ಉಜ್ವಲ~ ಯೋಜಯಡಿ ರಕ್ಷಣೆ, ಪುನರ್ವಸತಿ ಹಾಗೂ ಮತ್ತೆ ಸಮಾಜದ ಮುಖ್ಯ ವಾಹಿನಿಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಅನೈತಿಕ ದಾರಿಯಲ್ಲಿ ಹೆಜ್ಜೆ ತುಳಿದ ಯುವತಿಯರಿಗೆ ಈ ಕೇಂದ್ರದಲ್ಲಿ ರಕ್ಷಣೆ, ಪುನವರ್ಸತಿ ಕಲ್ಪಿಸಲಾಗುತ್ತಿದೆ. ಜೊತೆಗೆ ಇತರರಂತೆ ಬದುಕಲು ಪೂರಕವಾದ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು. ಪೋಷಕರನ್ನು, ಪತಿಯನ್ನು ಮರಳಿ ಸೇರಲು ಬಯಸುವವರಿಗೂ ಸಹಕಾರ ನೀಡಲಾಗುವುದು~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>