<p><strong>ಕೃಷ್ಣರಾಜಪುರ : </strong> ನೀರು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಕೆ.ಆರ್.ಪುರ ವ್ಯಾಪ್ತಿಯ ಒಂಬತ್ತು ವಾರ್ಡ್ಗಳ ನಿವಾಸಿಗಳು ನೀರಿನ ಬವಣೆ ಅನುಭವಿಸುವಂತಾಗಿದೆ. ಹೀಗಾಗಿ ಈ ಭಾಗದಲ್ಲಿ ಸಮರ್ಪಕವಾಗಿ ನೀರು ಪೂರೈಸಲು ಜಲಮಂಡಳಿ ಸೂಕ್ತ ಕ್ರಮಗೊಳ್ಳಬೇಕು ಎಂದು ಕೆ.ಆರ್.ಪುರ ಕ್ಷೇಮಾಭಿವೃದಿ ಸಂಘದ ವತಿಯಿಂದ ಜಲಮಂಡಳಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.<br /> <br /> ಜಲಮಂಡಳಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ನೀರಿನ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಷೇಮಾಭಿವೃದಿ ಸಂಘದ ಕಾರ್ಯದರ್ಶಿ ಆಂಜನಪ್ಪ ಮಾತನಾಡಿ, `ಜಲಮಂಡಳಿಯು ಕೆಟ್ಟಿರುವ ಕೊಳವೆ ಬಾವಿಗಳ ಪೈಪುಗಳನ್ನು ದುರಸ್ತಿಗೊಳಿಸಬೇಕು. ನೀರು ಸರಬರಾಜಿನ ಕೊಳವೆ ಬಾವಿಗಳಲ್ಲಿ ಶೇಖರಣೆಯಾಗಿರುವ ಮಣ್ಣನ್ನು ತೆಗೆಸಬೇಕು. ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವಾಟರ್ಮನ್ಗಳು ತಾರತಮ್ಯ ಎಸಗುವುದನ್ನು ಅಧಿಕಾರಿಗಳು ತಪ್ಪಿಸಬೇಕು~ ಎಂದು ಆಗ್ರಹಿಸಿದರು.<br /> <br /> ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಯರಾಮಯ್ಯ ಮಾತನಾಡಿ, `ಅಂತರ್ಜಲ ಕುಸಿತದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಒಂಬತ್ತು ವಾರ್ಡ್ಗಳಿಗೆ 120 ಟ್ಯಾಂಕರ್ಗಳಲ್ಲಿ ಉಚಿತವಾಗಿ ನೀರು ಪೂರೈಸಲಾಗುತ್ತಿದೆ. ಬೀದಿ ನಲ್ಲಿಗಳಿಗೂ ವಾರಕ್ಕೆ ಎರಡು ಬಾರಿ ನೀರು ಸರಬರಾಜಿಗೆ ಕ್ರಮಕೈಗೊಳ್ಳಲಾಗಿದೆ~ ಎಂದರು.<br /> <br /> `ಬಡಾವಣೆಗಳಲ್ಲಿ ಕೊಳವೆ ಬಾವಿ ಕೊರೆಯಿಸುವ ಜವಾಬ್ದಾರಿಯನ್ನು ಈಗ ಬಿಬಿಎಂಪಿ ವಹಿಸಿಕೊಂಡಿದೆ. ಬಿಬಿಎಂಪಿ ಈಗಾಗಲೇ 100ಕೊಳವೆ ಬಾವಿಗಳನ್ನು ಕೊರೆಸಿದ್ದು ಇನ್ನೂ ಜಲಮಂಡಳಿಗೆ ಹಸ್ತಾಂತರಿಸಿಲ್ಲ. ಹಸ್ತಾಂತರದ ನಂತರ ನೀರಿನ ಸಮಸ್ಯೆ ಕಡಿಮೆಯಾಗಬಹುದು~ ಎಂದು ಅವರು ಆಶ್ವಾಸನೆ ನೀಡಿದರು.<br /> ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ವೇಣುಗೋಪಾಲ್, `ಬಿಬಿಎಂಪಿ ವತಿಯಿಂದ ಈಗಾಗಲೇ 98 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. <br /> <br /> ಜಲಮಂಡಳಿ ಕಾರ್ಯ ವೈಖರಿಗೆ ನಾಗರಿಕರ ದೂರುಗಳನ್ನು ಆಧರಿಸಿ ಕೊಳವೆ ಬಾವಿ ಕೊರೆಯಿಸುವ ಜವಾಬ್ದಾರಿ ಬಿಬಿಎಂಪಿ ಮೇಲಿದೆ. ಸದ್ಯ 98 ಕೊಳವೆ ಬಾವಿಗಳ ಮೂಲಕ ಸರಬರಾಜು ಆಗುತ್ತಿರುವ ನೀರನ್ನು ಜಲಮಂಡಳಿ ಅಳವಡಿಸಿದ ಪೈಪುಗಳ ಮೂಲಕ ನಾಗರಿಕರಿಗೆ ಪೂರೈಸಲಾಗುತ್ತಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೃಷ್ಣರಾಜಪುರ : </strong> ನೀರು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಕೆ.ಆರ್.ಪುರ ವ್ಯಾಪ್ತಿಯ ಒಂಬತ್ತು ವಾರ್ಡ್ಗಳ ನಿವಾಸಿಗಳು ನೀರಿನ ಬವಣೆ ಅನುಭವಿಸುವಂತಾಗಿದೆ. ಹೀಗಾಗಿ ಈ ಭಾಗದಲ್ಲಿ ಸಮರ್ಪಕವಾಗಿ ನೀರು ಪೂರೈಸಲು ಜಲಮಂಡಳಿ ಸೂಕ್ತ ಕ್ರಮಗೊಳ್ಳಬೇಕು ಎಂದು ಕೆ.ಆರ್.ಪುರ ಕ್ಷೇಮಾಭಿವೃದಿ ಸಂಘದ ವತಿಯಿಂದ ಜಲಮಂಡಳಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.<br /> <br /> ಜಲಮಂಡಳಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ನೀರಿನ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಷೇಮಾಭಿವೃದಿ ಸಂಘದ ಕಾರ್ಯದರ್ಶಿ ಆಂಜನಪ್ಪ ಮಾತನಾಡಿ, `ಜಲಮಂಡಳಿಯು ಕೆಟ್ಟಿರುವ ಕೊಳವೆ ಬಾವಿಗಳ ಪೈಪುಗಳನ್ನು ದುರಸ್ತಿಗೊಳಿಸಬೇಕು. ನೀರು ಸರಬರಾಜಿನ ಕೊಳವೆ ಬಾವಿಗಳಲ್ಲಿ ಶೇಖರಣೆಯಾಗಿರುವ ಮಣ್ಣನ್ನು ತೆಗೆಸಬೇಕು. ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವಾಟರ್ಮನ್ಗಳು ತಾರತಮ್ಯ ಎಸಗುವುದನ್ನು ಅಧಿಕಾರಿಗಳು ತಪ್ಪಿಸಬೇಕು~ ಎಂದು ಆಗ್ರಹಿಸಿದರು.<br /> <br /> ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಯರಾಮಯ್ಯ ಮಾತನಾಡಿ, `ಅಂತರ್ಜಲ ಕುಸಿತದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಒಂಬತ್ತು ವಾರ್ಡ್ಗಳಿಗೆ 120 ಟ್ಯಾಂಕರ್ಗಳಲ್ಲಿ ಉಚಿತವಾಗಿ ನೀರು ಪೂರೈಸಲಾಗುತ್ತಿದೆ. ಬೀದಿ ನಲ್ಲಿಗಳಿಗೂ ವಾರಕ್ಕೆ ಎರಡು ಬಾರಿ ನೀರು ಸರಬರಾಜಿಗೆ ಕ್ರಮಕೈಗೊಳ್ಳಲಾಗಿದೆ~ ಎಂದರು.<br /> <br /> `ಬಡಾವಣೆಗಳಲ್ಲಿ ಕೊಳವೆ ಬಾವಿ ಕೊರೆಯಿಸುವ ಜವಾಬ್ದಾರಿಯನ್ನು ಈಗ ಬಿಬಿಎಂಪಿ ವಹಿಸಿಕೊಂಡಿದೆ. ಬಿಬಿಎಂಪಿ ಈಗಾಗಲೇ 100ಕೊಳವೆ ಬಾವಿಗಳನ್ನು ಕೊರೆಸಿದ್ದು ಇನ್ನೂ ಜಲಮಂಡಳಿಗೆ ಹಸ್ತಾಂತರಿಸಿಲ್ಲ. ಹಸ್ತಾಂತರದ ನಂತರ ನೀರಿನ ಸಮಸ್ಯೆ ಕಡಿಮೆಯಾಗಬಹುದು~ ಎಂದು ಅವರು ಆಶ್ವಾಸನೆ ನೀಡಿದರು.<br /> ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ವೇಣುಗೋಪಾಲ್, `ಬಿಬಿಎಂಪಿ ವತಿಯಿಂದ ಈಗಾಗಲೇ 98 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. <br /> <br /> ಜಲಮಂಡಳಿ ಕಾರ್ಯ ವೈಖರಿಗೆ ನಾಗರಿಕರ ದೂರುಗಳನ್ನು ಆಧರಿಸಿ ಕೊಳವೆ ಬಾವಿ ಕೊರೆಯಿಸುವ ಜವಾಬ್ದಾರಿ ಬಿಬಿಎಂಪಿ ಮೇಲಿದೆ. ಸದ್ಯ 98 ಕೊಳವೆ ಬಾವಿಗಳ ಮೂಲಕ ಸರಬರಾಜು ಆಗುತ್ತಿರುವ ನೀರನ್ನು ಜಲಮಂಡಳಿ ಅಳವಡಿಸಿದ ಪೈಪುಗಳ ಮೂಲಕ ನಾಗರಿಕರಿಗೆ ಪೂರೈಸಲಾಗುತ್ತಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>