<p>`ಕೆರೆಗೆ ಹಾರ~ ಕನ್ನಡದ ಪ್ರಸಿದ್ಧ ಜನಪದ ಕಥನಗೀತೆ. ಅದರ ವಸ್ತುವನ್ನು ಆಧರಿಸಿ ಬರಗೂರು ರಾಮಚಂದ್ರಪ್ಪ ಚಿತ್ರಕತೆ, ಸಂಭಾಷಣೆ ಬರೆದು `ಭಾಗೀರತಿ~ ಹೆಸರಿನ ಚಿತ್ರ ನಿರ್ದೇಶಿಸಿದ್ದಾರೆ. ಬರಗೂರರೇ ಐದು ಗೀತೆಗಳನ್ನು ಬರೆದಿದ್ದು ಮನೋಹರ್ ರಾಗಸಂಯೋಜನೆ ಮಾಡಿದ್ದಾರೆ. ಚಿತ್ರದ ನಿರ್ಮಾಪಕರು ಬಿ.ಕೆ. ಶ್ರೀನಿವಾಸ್.<br /> <br /> ಈ ಚಿತ್ರದ ಕೇಂದ್ರ ಪಾತ್ರ ಭಾಗೀರತಿ. ಕಲ್ಲಿನಕೇರಿ ಮಲ್ಲನಗೌಡನ ಕಿರಿಯ ಸೊಸೆ. ಈಕೆಯ ಗಂಡ ಮಾದೇವರಾಯ ದೊರೆಯ ದಂಡಿನಲ್ಲಿ ಸೈನಿಕ. ಮದುವೆಯ ನಂತರ ಆತ ದಂಡಿಗೆ ಹೋಗಿರುತ್ತಾನೆ. <br /> <br /> ಇತ್ತ ಜನರ ಅನುಕೂಲಕ್ಕಾಗಿ ಕಟ್ಟಿದ ಕೆರೆಗೆ ನೀರು ಬರುವುದಿಲ್ಲ. ಕಾರಣ ಹುಡುಕಿದ ಜೋಯಿಸಲು ಮಲ್ಲನಗೌಡನ ಹಿರಿಯ ಸೊಸೆಯನ್ನು ಕೆರೆಗೆ `ಆಹಾರ~ (ಆತ್ಮಬಲಿ) ಮಾಡಬೇಕೆಂಬ ಪರಿಹಾರ ಸೂಚಿಸುತ್ತಾರೆ. <br /> <br /> ಹಿರಿಯ ಸೊಸೆಯನ್ನು ಕೆರೆಗೆಹಾರ ಮಾಡಲು ಹಿಂಜರಿದ ಮಲ್ಲನಗೌಡನಿಗೆ ಕಿರಿಯ ಸೊಸೆಯಾದರೂ ಸರಿಯೆಂದು ಜೋಯಿಸರು ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಭಾಗೀರತಿ ತಳಮಳಿಸುತ್ತಾಳೆ. <br /> <br /> ತವರಿಗೆ ಹೋಗಿ ತಾಯಿ ತಂದೆಯರಿಗೆ ವಿಷಯ ತಿಳಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಒಳಗೇ ಸಂಕಟಪಡುತ್ತಾಳೆ. ಕಡೆಗೆ ಕೆರೆಗೆ ಹಾರವಾಗುತ್ತಾಳೆ. ದಂಡಿನಿಂದ ಹಿಂತಿರುಗಿ ಬಂದ ಮಾದೇವರಾಯ ತನ್ನ ಪತ್ನಿ ಕೆರೆಗೆಹಾರವಾದ ವಿಷಯ ತಿಳಿದು ತಾನೂ ಕೆರೆಗೆಹಾರವಾಗಿ ಸಾಯುತ್ತಾನೆ.<br /> <br /> ಈ ಮೂಲಕತೆಯನ್ನು ಅನುಸರಿಸಿ ಚಿತ್ರಕತೆಯನ್ನು ಬೆಳೆಸಲಾಗಿದೆ. ಸತಿಯೊಡನೆ ಸಹಗಮನ ಮಾಡಿದ ಏಕೈಕ ಉದಾಹರಣೆಯನ್ನು ಒಳಗೊಂಡ ಕಥನದೊಂದಿಗೆ ಪತಿ-ಪತ್ನಿಯರ ಪ್ರೀತಿಯನ್ನು ವಿಶೇಷವಾಗಿ ನಿರೂಪಿಸಲಾಗಿದೆ ಮತ್ತು ಪ್ರೀತಿ ಪ್ರಸಂಗಗಳನ್ನು ಹೆಣೆಯಲಾಗಿದೆ. <br /> <br /> ಕೆರೆ ಕಟ್ಟುವಾಗ ಅವರಿಬ್ಬರ ನಡುವೆ ಪ್ರೀತಿ ಬೆಳೆಯುತ್ತದೆ. ಕೆರೆಯ ಸಾಕ್ಷಿಯಲ್ಲಿ ಮದುವೆಯಾಗುತ್ತದೆ. ಕಡೆಗೆ ಕೆರೆಯಲ್ಲೇ ಅವರ ಅಂತ್ಯವಾಗುತ್ತದೆ. ಹೀಗೆ ರೂಪುಗೊಂಡ ಚಿತ್ರಕತೆಯಲ್ಲಿ ಕೆರೆಯೇ ಒಂದು ರೂಪಕವಾಗುತ್ತದೆ. ಜೊತೆಗೆ ಮೂಢನಂಬಿಕೆಯ ದಾರುಣತೆಯನ್ನು ಕಟ್ಟಿ ಕೊಡಲಾಗಿದೆ.<br /> <br /> ಭಾವನಾ ಭಾಗೀರತಿಯ ಪಾತ್ರ ಮಾಡಿದ್ದಾರೆ. ಕಿಶೋರ್ಗೆ ಮಾದೇವರಾಯನ ಪಾತ್ರ. ಶ್ರೀನಾಥ್, ಹೇಮಾಚೌಧರಿ, ತಾರಾ, ಸಂಗೀತಾ, ಪದ್ಮವಾಸಂತಿ, ಶಿವಧ್ವಜ್, ವತ್ಸಲಾ ಮೋಹನ್, ರಾಧಾ ರಾಮಚಂದ್ರ, ಎಚ್.ಎಂ.ಟಿ. ನಂದಾ, ಹರಿಣಿ, ಹುಳಿಮಾವು ರಾಮಚಂದ್ರ, ವೆಂಕಟರಾಜು, ರವಿಶಂಕರ್ ಉಳಿದ ಕಲಾವಿದರು.<br /> <br /> ಹರೀಶ್ ಎನ್. ಸೊಂಡೆಕೊಪ್ಪ ಛಾಯಾಗ್ರಹಣ, ಮದನ್ ಹರಿಣಿ ನೃತ್ಯ ನಿರ್ದೇಶನ, ಸುರೇಶ್ ಅರಸು ಸಂಕಲನ, ನಟರಾಜ್ ಮತ್ತು ಪ್ರವೀಣ್ ಸಹನಿರ್ದೇಶನವಿದೆ.<br /> ಚನ್ನಪಟ್ಟಣ ಸಮೀಪದ ವಿರೂಪಾಕ್ಷಿಪುರ, ಮೇಲುಕೋಟೆ ಮತ್ತು ಬೆಂಗಳೂರಿನ ಅರಮನೆ ಸೆಟ್ನಲ್ಲಿ ಚಿತ್ರೀಕರಣ ನಡೆದು ಮುಕ್ತಾಯಗೊಂಡಿದೆ. ಸದ್ಯದಲ್ಲೇ ಮಾತಿನ ಧ್ವನಿಮುದ್ರಣ ಕಾರ್ಯ ಆರಂಭವಾಗಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಕೆರೆಗೆ ಹಾರ~ ಕನ್ನಡದ ಪ್ರಸಿದ್ಧ ಜನಪದ ಕಥನಗೀತೆ. ಅದರ ವಸ್ತುವನ್ನು ಆಧರಿಸಿ ಬರಗೂರು ರಾಮಚಂದ್ರಪ್ಪ ಚಿತ್ರಕತೆ, ಸಂಭಾಷಣೆ ಬರೆದು `ಭಾಗೀರತಿ~ ಹೆಸರಿನ ಚಿತ್ರ ನಿರ್ದೇಶಿಸಿದ್ದಾರೆ. ಬರಗೂರರೇ ಐದು ಗೀತೆಗಳನ್ನು ಬರೆದಿದ್ದು ಮನೋಹರ್ ರಾಗಸಂಯೋಜನೆ ಮಾಡಿದ್ದಾರೆ. ಚಿತ್ರದ ನಿರ್ಮಾಪಕರು ಬಿ.ಕೆ. ಶ್ರೀನಿವಾಸ್.<br /> <br /> ಈ ಚಿತ್ರದ ಕೇಂದ್ರ ಪಾತ್ರ ಭಾಗೀರತಿ. ಕಲ್ಲಿನಕೇರಿ ಮಲ್ಲನಗೌಡನ ಕಿರಿಯ ಸೊಸೆ. ಈಕೆಯ ಗಂಡ ಮಾದೇವರಾಯ ದೊರೆಯ ದಂಡಿನಲ್ಲಿ ಸೈನಿಕ. ಮದುವೆಯ ನಂತರ ಆತ ದಂಡಿಗೆ ಹೋಗಿರುತ್ತಾನೆ. <br /> <br /> ಇತ್ತ ಜನರ ಅನುಕೂಲಕ್ಕಾಗಿ ಕಟ್ಟಿದ ಕೆರೆಗೆ ನೀರು ಬರುವುದಿಲ್ಲ. ಕಾರಣ ಹುಡುಕಿದ ಜೋಯಿಸಲು ಮಲ್ಲನಗೌಡನ ಹಿರಿಯ ಸೊಸೆಯನ್ನು ಕೆರೆಗೆ `ಆಹಾರ~ (ಆತ್ಮಬಲಿ) ಮಾಡಬೇಕೆಂಬ ಪರಿಹಾರ ಸೂಚಿಸುತ್ತಾರೆ. <br /> <br /> ಹಿರಿಯ ಸೊಸೆಯನ್ನು ಕೆರೆಗೆಹಾರ ಮಾಡಲು ಹಿಂಜರಿದ ಮಲ್ಲನಗೌಡನಿಗೆ ಕಿರಿಯ ಸೊಸೆಯಾದರೂ ಸರಿಯೆಂದು ಜೋಯಿಸರು ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಭಾಗೀರತಿ ತಳಮಳಿಸುತ್ತಾಳೆ. <br /> <br /> ತವರಿಗೆ ಹೋಗಿ ತಾಯಿ ತಂದೆಯರಿಗೆ ವಿಷಯ ತಿಳಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಒಳಗೇ ಸಂಕಟಪಡುತ್ತಾಳೆ. ಕಡೆಗೆ ಕೆರೆಗೆ ಹಾರವಾಗುತ್ತಾಳೆ. ದಂಡಿನಿಂದ ಹಿಂತಿರುಗಿ ಬಂದ ಮಾದೇವರಾಯ ತನ್ನ ಪತ್ನಿ ಕೆರೆಗೆಹಾರವಾದ ವಿಷಯ ತಿಳಿದು ತಾನೂ ಕೆರೆಗೆಹಾರವಾಗಿ ಸಾಯುತ್ತಾನೆ.<br /> <br /> ಈ ಮೂಲಕತೆಯನ್ನು ಅನುಸರಿಸಿ ಚಿತ್ರಕತೆಯನ್ನು ಬೆಳೆಸಲಾಗಿದೆ. ಸತಿಯೊಡನೆ ಸಹಗಮನ ಮಾಡಿದ ಏಕೈಕ ಉದಾಹರಣೆಯನ್ನು ಒಳಗೊಂಡ ಕಥನದೊಂದಿಗೆ ಪತಿ-ಪತ್ನಿಯರ ಪ್ರೀತಿಯನ್ನು ವಿಶೇಷವಾಗಿ ನಿರೂಪಿಸಲಾಗಿದೆ ಮತ್ತು ಪ್ರೀತಿ ಪ್ರಸಂಗಗಳನ್ನು ಹೆಣೆಯಲಾಗಿದೆ. <br /> <br /> ಕೆರೆ ಕಟ್ಟುವಾಗ ಅವರಿಬ್ಬರ ನಡುವೆ ಪ್ರೀತಿ ಬೆಳೆಯುತ್ತದೆ. ಕೆರೆಯ ಸಾಕ್ಷಿಯಲ್ಲಿ ಮದುವೆಯಾಗುತ್ತದೆ. ಕಡೆಗೆ ಕೆರೆಯಲ್ಲೇ ಅವರ ಅಂತ್ಯವಾಗುತ್ತದೆ. ಹೀಗೆ ರೂಪುಗೊಂಡ ಚಿತ್ರಕತೆಯಲ್ಲಿ ಕೆರೆಯೇ ಒಂದು ರೂಪಕವಾಗುತ್ತದೆ. ಜೊತೆಗೆ ಮೂಢನಂಬಿಕೆಯ ದಾರುಣತೆಯನ್ನು ಕಟ್ಟಿ ಕೊಡಲಾಗಿದೆ.<br /> <br /> ಭಾವನಾ ಭಾಗೀರತಿಯ ಪಾತ್ರ ಮಾಡಿದ್ದಾರೆ. ಕಿಶೋರ್ಗೆ ಮಾದೇವರಾಯನ ಪಾತ್ರ. ಶ್ರೀನಾಥ್, ಹೇಮಾಚೌಧರಿ, ತಾರಾ, ಸಂಗೀತಾ, ಪದ್ಮವಾಸಂತಿ, ಶಿವಧ್ವಜ್, ವತ್ಸಲಾ ಮೋಹನ್, ರಾಧಾ ರಾಮಚಂದ್ರ, ಎಚ್.ಎಂ.ಟಿ. ನಂದಾ, ಹರಿಣಿ, ಹುಳಿಮಾವು ರಾಮಚಂದ್ರ, ವೆಂಕಟರಾಜು, ರವಿಶಂಕರ್ ಉಳಿದ ಕಲಾವಿದರು.<br /> <br /> ಹರೀಶ್ ಎನ್. ಸೊಂಡೆಕೊಪ್ಪ ಛಾಯಾಗ್ರಹಣ, ಮದನ್ ಹರಿಣಿ ನೃತ್ಯ ನಿರ್ದೇಶನ, ಸುರೇಶ್ ಅರಸು ಸಂಕಲನ, ನಟರಾಜ್ ಮತ್ತು ಪ್ರವೀಣ್ ಸಹನಿರ್ದೇಶನವಿದೆ.<br /> ಚನ್ನಪಟ್ಟಣ ಸಮೀಪದ ವಿರೂಪಾಕ್ಷಿಪುರ, ಮೇಲುಕೋಟೆ ಮತ್ತು ಬೆಂಗಳೂರಿನ ಅರಮನೆ ಸೆಟ್ನಲ್ಲಿ ಚಿತ್ರೀಕರಣ ನಡೆದು ಮುಕ್ತಾಯಗೊಂಡಿದೆ. ಸದ್ಯದಲ್ಲೇ ಮಾತಿನ ಧ್ವನಿಮುದ್ರಣ ಕಾರ್ಯ ಆರಂಭವಾಗಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>