<p><strong>ನವದೆಹಲಿ (ಪಿಟಿಐ): </strong>ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ ಜಾಗೃತ ಆಯೋಗದ (ಸಿವಿಸಿ) ತನಿಖಾ ವಿಭಾಗಕ್ಕೆ ಹೆಚ್ಚಿನ ಅಧಿಕಾರ ನೀಡುವ ಕುರಿತು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.<br /> <br /> ತನಿಖಾ ವಿಭಾಗಕ್ಕೆ ಹೆಚ್ಚಿನ ಸ್ವಾಯತ್ತತೆ ಹಾಗೂ ತಜ್ಞ ಸಿಬ್ಬಂದಿ ನೀಡುವ ಮೂಲಕ ಅದನ್ನು ಬಲಗೊಳಿಸುವ ಪ್ರಸ್ತಾಪವನ್ನು ಸರ್ಕಾರ ಪರಿಶೀಲಿಸುತ್ತಿದೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಅವ್ಯವಹಾರಗಳ ತನಿಖೆ ನಡೆಸಿದ್ದ ಮಾಜಿ ಮಹಾಲೇಖಪಾಲ ವಿ.ಕೆ. ಶುಂಗ್ಲು ನೇತೃತ್ವದ ಉನ್ನತ ಮಟ್ಟದ ಸಮಿತಿ ಈ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಇದು ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.<br /> <br /> ಈ ಕುರಿತು ನಿರ್ಧಾರ ಕೈಗೊಳ್ಳಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)ಯ ಹಿರಿಯ ಅಧಿಕಾರಿಗಳು, ಸಿವಿಸಿ ಹಾಗೂ ಸ್ವತಂತ್ರ ಸಲಹಾಕಾರರನ್ನು ಒಳಗೊಂಡ ಕಾರ್ಯಕಾರಿ ಗುಂಪನ್ನು ರಚಿಸುವ ಸಾಧ್ಯತೆ ಇದೆ. <br /> <br /> `ಸಿವಿಸಿ~ಯ `ಮುಖ್ಯ ತಾಂತ್ರಿಕ ಪರೀಕ್ಷಕರ~ (ಸಿಟಿಇ) ವಿಭಾಗವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಆ ವಿಭಾಗದ ಕೆಲಸವನ್ನು ಸ್ಪಷ್ಟವಾಗಿ ನಿರ್ದೇಶಿಸಲು ಸರ್ಕಾರ ಯೋಚಿಸುತ್ತಿದೆ. ಈ ಸಂಬಂಧ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹಿರಿಯ ಅಧಿಕಾರಿಗಳು, ಶೀಘ್ರವೇ ಕೇಂದ್ರ ಜಾಗೃತ ಆಯುಕ್ತ ಪ್ರದೀಪ್ ಕುಮಾರ್ ಅವರ ಜತೆ ಚರ್ಚಿಸಲಿದ್ದಾರೆ.<br /> <br /> ಶುಂಗ್ಲು ಸಮಿತಿ ಶಿಫಾರಸಿನ ಅನ್ವಯ ಸೈಬರ್ ಭದ್ರತೆ, ವಂಚನೆ ಪ್ರಕರಣಗಳ ಪತ್ತೆ ಹಾಗೂ ವಿಧಿವಿಜ್ಞಾನ ಕೆಲಸಗಳಿಗಾಗಿ ಗುತ್ತಿಗೆ ಆಧಾರದಲ್ಲಿ ಆಯಾ ಕ್ಷೇತ್ರದ ತಜ್ಞರನ್ನು ನೇಮಿಸುವ ಕುರಿತೂ ಸರ್ಕಾರ ಚಿಂತಿಸುತ್ತಿದೆ.<br /> <br /> ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣಕ್ಕೆ ಸಂಬಂಧಿಸಿ ಪ್ರಧಾನಿ ಕಾರ್ಯಾಲಯಕ್ಕೆ ಆರು ವರದಿಗಳನ್ನು ಸಲ್ಲಿಸಿರುವ ಶುಂಗ್ಲು ಸಮಿತಿ, ಸಿಎಜಿ, ಸಿವಿಸಿ ಸೇರಿದಂತೆ ಇತರ ಲೆಕ್ಕಶೋಧ ಹಾಗೂ ತನಿಖಾ ಸಂಸ್ಥೆಗಳ ರಚನೆ ಹಾಗೂ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ಮಾಡುವಂತೆ ಸಲಹೆ ನೀಡಿದೆ.<br /> <br /> ಸಿವಿಸಿಯ `ಮುಖ್ಯ ತಾಂತ್ರಿಕ ಪರೀಕ್ಷಕರ~ (ಸಿಟಿಇ) ವಿಭಾಗಕ್ಕೆ ಈಗಿರುವ ಅಧಿಕಾರ ಕಡಿಮೆ. ಅದನ್ನು ಹೆಚ್ಚಿಸಬೇಕು. ವಿನ್ಯಾಸ, ಪರೀಕ್ಷೆ ಇತ್ಯಾದಿ ವಿಚಾರಗಳಲ್ಲಿ `ಸಿಟಿಇ~ಗೆ ಸಲಹೆ ನೀಡಲು ತಜ್ಞರ ಸಮಿತಿ ನೇಮಿಸಬೇಕು. `ಸಿಟಿಇ~ ನಡೆಸುವ ತಪಾಸಣೆ ಆ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಇರಬೇಕು. ಕೇವಲ ಮರಣೋತ್ತರ ಪರೀಕ್ಷೆಯಾಗಬಾರದು ಎಂದು ಶುಂಗ್ಲು ಸಮಿತಿ ಹೇಳಿದೆ.<br /> <br /> `ಮುಖ್ಯ ತಾಂತ್ರಿಕ ಪರೀಕ್ಷಕರ~ ವಿಭಾಗ ಸರ್ಕಾರದ ವಿವಿಧ ಇಲಾಖೆಗಳು ಮಾಡಿದ ಕೆಲಸ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಖರೀದಿಸಿದ ವಸ್ತುಗಳ ಗುಣಮಟ್ಟ ಪರಿಶೀಲಿಸಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ ಜಾಗೃತ ಆಯೋಗದ (ಸಿವಿಸಿ) ತನಿಖಾ ವಿಭಾಗಕ್ಕೆ ಹೆಚ್ಚಿನ ಅಧಿಕಾರ ನೀಡುವ ಕುರಿತು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.<br /> <br /> ತನಿಖಾ ವಿಭಾಗಕ್ಕೆ ಹೆಚ್ಚಿನ ಸ್ವಾಯತ್ತತೆ ಹಾಗೂ ತಜ್ಞ ಸಿಬ್ಬಂದಿ ನೀಡುವ ಮೂಲಕ ಅದನ್ನು ಬಲಗೊಳಿಸುವ ಪ್ರಸ್ತಾಪವನ್ನು ಸರ್ಕಾರ ಪರಿಶೀಲಿಸುತ್ತಿದೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಅವ್ಯವಹಾರಗಳ ತನಿಖೆ ನಡೆಸಿದ್ದ ಮಾಜಿ ಮಹಾಲೇಖಪಾಲ ವಿ.ಕೆ. ಶುಂಗ್ಲು ನೇತೃತ್ವದ ಉನ್ನತ ಮಟ್ಟದ ಸಮಿತಿ ಈ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಇದು ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.<br /> <br /> ಈ ಕುರಿತು ನಿರ್ಧಾರ ಕೈಗೊಳ್ಳಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)ಯ ಹಿರಿಯ ಅಧಿಕಾರಿಗಳು, ಸಿವಿಸಿ ಹಾಗೂ ಸ್ವತಂತ್ರ ಸಲಹಾಕಾರರನ್ನು ಒಳಗೊಂಡ ಕಾರ್ಯಕಾರಿ ಗುಂಪನ್ನು ರಚಿಸುವ ಸಾಧ್ಯತೆ ಇದೆ. <br /> <br /> `ಸಿವಿಸಿ~ಯ `ಮುಖ್ಯ ತಾಂತ್ರಿಕ ಪರೀಕ್ಷಕರ~ (ಸಿಟಿಇ) ವಿಭಾಗವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಆ ವಿಭಾಗದ ಕೆಲಸವನ್ನು ಸ್ಪಷ್ಟವಾಗಿ ನಿರ್ದೇಶಿಸಲು ಸರ್ಕಾರ ಯೋಚಿಸುತ್ತಿದೆ. ಈ ಸಂಬಂಧ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹಿರಿಯ ಅಧಿಕಾರಿಗಳು, ಶೀಘ್ರವೇ ಕೇಂದ್ರ ಜಾಗೃತ ಆಯುಕ್ತ ಪ್ರದೀಪ್ ಕುಮಾರ್ ಅವರ ಜತೆ ಚರ್ಚಿಸಲಿದ್ದಾರೆ.<br /> <br /> ಶುಂಗ್ಲು ಸಮಿತಿ ಶಿಫಾರಸಿನ ಅನ್ವಯ ಸೈಬರ್ ಭದ್ರತೆ, ವಂಚನೆ ಪ್ರಕರಣಗಳ ಪತ್ತೆ ಹಾಗೂ ವಿಧಿವಿಜ್ಞಾನ ಕೆಲಸಗಳಿಗಾಗಿ ಗುತ್ತಿಗೆ ಆಧಾರದಲ್ಲಿ ಆಯಾ ಕ್ಷೇತ್ರದ ತಜ್ಞರನ್ನು ನೇಮಿಸುವ ಕುರಿತೂ ಸರ್ಕಾರ ಚಿಂತಿಸುತ್ತಿದೆ.<br /> <br /> ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣಕ್ಕೆ ಸಂಬಂಧಿಸಿ ಪ್ರಧಾನಿ ಕಾರ್ಯಾಲಯಕ್ಕೆ ಆರು ವರದಿಗಳನ್ನು ಸಲ್ಲಿಸಿರುವ ಶುಂಗ್ಲು ಸಮಿತಿ, ಸಿಎಜಿ, ಸಿವಿಸಿ ಸೇರಿದಂತೆ ಇತರ ಲೆಕ್ಕಶೋಧ ಹಾಗೂ ತನಿಖಾ ಸಂಸ್ಥೆಗಳ ರಚನೆ ಹಾಗೂ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ಮಾಡುವಂತೆ ಸಲಹೆ ನೀಡಿದೆ.<br /> <br /> ಸಿವಿಸಿಯ `ಮುಖ್ಯ ತಾಂತ್ರಿಕ ಪರೀಕ್ಷಕರ~ (ಸಿಟಿಇ) ವಿಭಾಗಕ್ಕೆ ಈಗಿರುವ ಅಧಿಕಾರ ಕಡಿಮೆ. ಅದನ್ನು ಹೆಚ್ಚಿಸಬೇಕು. ವಿನ್ಯಾಸ, ಪರೀಕ್ಷೆ ಇತ್ಯಾದಿ ವಿಚಾರಗಳಲ್ಲಿ `ಸಿಟಿಇ~ಗೆ ಸಲಹೆ ನೀಡಲು ತಜ್ಞರ ಸಮಿತಿ ನೇಮಿಸಬೇಕು. `ಸಿಟಿಇ~ ನಡೆಸುವ ತಪಾಸಣೆ ಆ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಇರಬೇಕು. ಕೇವಲ ಮರಣೋತ್ತರ ಪರೀಕ್ಷೆಯಾಗಬಾರದು ಎಂದು ಶುಂಗ್ಲು ಸಮಿತಿ ಹೇಳಿದೆ.<br /> <br /> `ಮುಖ್ಯ ತಾಂತ್ರಿಕ ಪರೀಕ್ಷಕರ~ ವಿಭಾಗ ಸರ್ಕಾರದ ವಿವಿಧ ಇಲಾಖೆಗಳು ಮಾಡಿದ ಕೆಲಸ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಖರೀದಿಸಿದ ವಸ್ತುಗಳ ಗುಣಮಟ್ಟ ಪರಿಶೀಲಿಸಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>