<p><strong>ನಾಗಪುರ್ (ಪಿಟಿಐ): </strong>ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಒಡೆತನದ ಪೂರ್ತಿ ಕಂಪೆನಿಯು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆರು ಜನರ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಆರೋಪಿಗಳಿಗೆ ನೋಟಿಸ್ ಜಾರಿಮಾಡಿದೆ.</p>.<p>ಗಡ್ಕರಿ ಅವರು ನಿದೇರ್ಶಕರಾಗಿರುವ ಪೂರ್ತಿ ಪವರ್ ಮತ್ತು ಶುಗರ್ ಲಿಮಿಟೆಡ್ ಕಂಪೆನಿಯು ಕೇಜ್ರಿವಾಲ್ ಮತ್ತು ನಾಗಪುರದಲ್ಲಿ ಎಎಪಿ ಲೋಕಸಭಾ ಚುನಾವಣೆಯ ಸ್ಪರ್ಧಾಳು ಆಗಿರುವ ಅಂಜಲಿ ದಮಾನಿಯಾ ಹಾಗೂ ಇತರ ಐವರ ವಿರುದ್ಧ `ಆಧಾರ ರಹಿತ ಮತ್ತು ಮಾನನಷ್ಟ'ಕರವಾದಂತಹ ಆರೋಪಗಳನ್ನು ಮಾಡಿದ್ದಾರೆ ಎಂದು ಆಪಾದಿಸಿ ಮಾನನಷ್ಟ ಮೊಕದ್ದಮೆ ಹೂಡಿತ್ತು.<br /> <br /> ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮೊಕದ್ದಮೆ ದಾಖಲಿಸಿಕೊಂಡ ಸಿವಿಲ್ ನ್ಯಾಯಾಲಯವು ಕೇಜ್ರಿವಾಲ್, ದಮಾನಿಯಾ, ಎಎಪಿ ವಕ್ತಾರ ಗಿರೀಶ್ ನಂದಗಾಂವ್ಕರ್, ಮತ್ತು ಪಕ್ಷದ ಕಾರ್ಯಕರ್ತರಾದ ರಾಹುಲ್ ಪುಗಲಿಯಾ, ದೇವೇಂದ್ರ ವಾಂಖೇಡೆ, ಪ್ರಜಕ್ತ್ ಅತುಲ್ ಉಪಾಧ್ಯಾಯ್ ಹಾಗೂ ಪ್ರಧ್ಯುಮ್ನ ಸಹಸ್ರಭೂಜನೇ ಅವರಿಗೆ ನೋಟಿಸ್ ಜಾರಿಗೊಳಿಸಿದೆ.<br /> <br /> ದ್ವೀತಿಯ ಸಿವಿಲ್ ನ್ಯಾಯಾಧೀಶ ಎಸ್. ವೈ.ಅಬಜ್ಜಿ ಅವರು ನೋಟಿಸ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಪುರ್ (ಪಿಟಿಐ): </strong>ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಒಡೆತನದ ಪೂರ್ತಿ ಕಂಪೆನಿಯು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆರು ಜನರ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಆರೋಪಿಗಳಿಗೆ ನೋಟಿಸ್ ಜಾರಿಮಾಡಿದೆ.</p>.<p>ಗಡ್ಕರಿ ಅವರು ನಿದೇರ್ಶಕರಾಗಿರುವ ಪೂರ್ತಿ ಪವರ್ ಮತ್ತು ಶುಗರ್ ಲಿಮಿಟೆಡ್ ಕಂಪೆನಿಯು ಕೇಜ್ರಿವಾಲ್ ಮತ್ತು ನಾಗಪುರದಲ್ಲಿ ಎಎಪಿ ಲೋಕಸಭಾ ಚುನಾವಣೆಯ ಸ್ಪರ್ಧಾಳು ಆಗಿರುವ ಅಂಜಲಿ ದಮಾನಿಯಾ ಹಾಗೂ ಇತರ ಐವರ ವಿರುದ್ಧ `ಆಧಾರ ರಹಿತ ಮತ್ತು ಮಾನನಷ್ಟ'ಕರವಾದಂತಹ ಆರೋಪಗಳನ್ನು ಮಾಡಿದ್ದಾರೆ ಎಂದು ಆಪಾದಿಸಿ ಮಾನನಷ್ಟ ಮೊಕದ್ದಮೆ ಹೂಡಿತ್ತು.<br /> <br /> ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮೊಕದ್ದಮೆ ದಾಖಲಿಸಿಕೊಂಡ ಸಿವಿಲ್ ನ್ಯಾಯಾಲಯವು ಕೇಜ್ರಿವಾಲ್, ದಮಾನಿಯಾ, ಎಎಪಿ ವಕ್ತಾರ ಗಿರೀಶ್ ನಂದಗಾಂವ್ಕರ್, ಮತ್ತು ಪಕ್ಷದ ಕಾರ್ಯಕರ್ತರಾದ ರಾಹುಲ್ ಪುಗಲಿಯಾ, ದೇವೇಂದ್ರ ವಾಂಖೇಡೆ, ಪ್ರಜಕ್ತ್ ಅತುಲ್ ಉಪಾಧ್ಯಾಯ್ ಹಾಗೂ ಪ್ರಧ್ಯುಮ್ನ ಸಹಸ್ರಭೂಜನೇ ಅವರಿಗೆ ನೋಟಿಸ್ ಜಾರಿಗೊಳಿಸಿದೆ.<br /> <br /> ದ್ವೀತಿಯ ಸಿವಿಲ್ ನ್ಯಾಯಾಧೀಶ ಎಸ್. ವೈ.ಅಬಜ್ಜಿ ಅವರು ನೋಟಿಸ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>