<p><strong>ಡೆಹ್ರಾಡೂನ್ (ಐಎಎನ್ಎಸ್</strong>): ಉತ್ತರಾಖಂಡದಲ್ಲಿ ಸಂಭವಿಸಿದ ಜಲಪ್ರಳಯದಿಂದ ಸಂಪೂರ್ಣ ಹಾನಿಗೊಳಗಾಗಿರುವ ಕೇದಾರನಾಥ ಮಂದಿರಕ್ಕೆ ಸಂಪರ್ಕ ಕಲ್ಪಿಸಲು `ರೋಪ್ವೇ' (ಕೇಬಲ್ ಹಳಿ) ನಿರ್ಮಿಸುವ ಕುರಿತು ಇಲ್ಲಿನ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ..<br /> <br /> ಗೌರಿಕುಂಡ್ ಮೂಲಶಿಬಿರ ಮತ್ತು ಕೇದಾರನಾಥ ಮಂದಿರ ನಡುವಿನ 14 ಕಿ.ಮೀ. ಬೆಟ್ಟ ಪ್ರದೇಶದ ಮಧ್ಯೆ, `ರೋಪ್ ವೇ' ನಿರ್ಮಾಣದ ಕಾರ್ಯಸಾಧ್ಯತೆ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.<br /> <br /> ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಯೋಜನಾ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ರಾಜೀವ್ ಶುಕ್ಲಾ, `ಕೇದಾರನಾಥಕ್ಕೆ ಸಂಪರ್ಕ ಕಲ್ಪಿಸಲು `ರೋಪ್ ವೇ' ನಿರ್ಮಿಸುವುದರಿಂದ ಯಾತ್ರಿಗಳು ಅತ್ಯಂತ ಸುಲಭವಾಗಿ ಮಂದಿರಕ್ಕೆ ಭೇಟಿ ನೀಡಬಹುದು' ಎಂದಿದ್ದಾರೆ.<br /> <br /> `ತಾಂತ್ರಿಕತೆಯ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಂದಿರವನ್ನು ಪುನರ್ ನಿರ್ಮಾಣ ಮಾಡಲಾಗುವುದು. ಮಂದಿರಕ್ಕೆ ಪಾದಯಾತ್ರೆಯಲ್ಲಿ ಸಾಗುವುದಕ್ಕೆ ಬದಲಾಗಿ ಪರ್ಯಾಯ ಮಾರ್ಗಗಳ ಶೋಧ ಮತ್ತು ಸುರಕ್ಷತೆ ಬಗ್ಗೆ ಚಿಂತನೆ ನಡೆಸಲಾಗಿದೆ. ಅಲ್ಲದೆ ಈ ಸಂಬಂಧ ಭಾರತೀಯ ಪುರಾತತ್ವ ಇಲಾಖೆ'ಯನ್ನು ಸಂಪರ್ಕಿಸಲಾಗುತ್ತಿದೆ' ಎಂದು ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.<br /> <br /> ಪೂರ್ಣಗಿರಿ ಮತ್ತು ಯಮುನೋತ್ರಿ ನಡುವೆಯೂ `ರೋಪ್ ವೇ' ನಿರ್ಮಿಸಲು ಆಲೋಚಿಸಲಾಗಿದೆ. ಜಂಕಿ ಚಟ್ಟಿ- ಯಮುನೋತ್ರಿ ನಡುವಿನ 3.84 ಕಿ.ಮೀ. `ರೋಪ್ ವೇ' ನಿರ್ಮಾಣಕ್ಕೆ ನಿರ್ಮಾಣ ವೆಚ್ಚ ರೂ. 70 ಕೋಟಿ ಎಂದು ಅಂದಾಜಿಸಲಾಗಿದೆ. ಅದರಂತೆ ತುಲಿಗಾಡ್- ಪೂರ್ಣಗಿರಿ ನಡುವಿನ ಒಂದಕ್ಕಿಂತ ಕಡಿಮೆ ಕಿ.ಮೀ. ದೂರ ನಿರ್ಮಿಸಲು ಅಂದಾಜು ವೆಚ್ಚ ರೂ. 35 ಕೋಟಿ ತಗಲಬಹುದು.<br /> <br /> ಬಿನ್ಸರ್ ರಸ್ತೆಯಿಂದ ಅಲ್ಮೊರಾದ ಕಸರ್ ದೇವಿ ದೇವಸ್ಥಾನದವರೆಗೆ , ಋಷಿಕೇಶದಿಂದ ಕುಂಜಾಪುರಿ, ಚಕ್ರತಾ- ಟೈಗರ್ ಫಾಲ್ಸ್ ಹಾಗೂ ದಯಾರಾ ಬುಗ್ಯಾಲ್ ನಡುವೆ `ರೋಪ್ ವೇ' ನಿರ್ಮಾಣಕ್ಕೆ ಸಂಬಂಧಿಸಿದ ತಾಂತ್ರಿಕ ಅಧ್ಯಯನ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ..</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹ್ರಾಡೂನ್ (ಐಎಎನ್ಎಸ್</strong>): ಉತ್ತರಾಖಂಡದಲ್ಲಿ ಸಂಭವಿಸಿದ ಜಲಪ್ರಳಯದಿಂದ ಸಂಪೂರ್ಣ ಹಾನಿಗೊಳಗಾಗಿರುವ ಕೇದಾರನಾಥ ಮಂದಿರಕ್ಕೆ ಸಂಪರ್ಕ ಕಲ್ಪಿಸಲು `ರೋಪ್ವೇ' (ಕೇಬಲ್ ಹಳಿ) ನಿರ್ಮಿಸುವ ಕುರಿತು ಇಲ್ಲಿನ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ..<br /> <br /> ಗೌರಿಕುಂಡ್ ಮೂಲಶಿಬಿರ ಮತ್ತು ಕೇದಾರನಾಥ ಮಂದಿರ ನಡುವಿನ 14 ಕಿ.ಮೀ. ಬೆಟ್ಟ ಪ್ರದೇಶದ ಮಧ್ಯೆ, `ರೋಪ್ ವೇ' ನಿರ್ಮಾಣದ ಕಾರ್ಯಸಾಧ್ಯತೆ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.<br /> <br /> ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಯೋಜನಾ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ರಾಜೀವ್ ಶುಕ್ಲಾ, `ಕೇದಾರನಾಥಕ್ಕೆ ಸಂಪರ್ಕ ಕಲ್ಪಿಸಲು `ರೋಪ್ ವೇ' ನಿರ್ಮಿಸುವುದರಿಂದ ಯಾತ್ರಿಗಳು ಅತ್ಯಂತ ಸುಲಭವಾಗಿ ಮಂದಿರಕ್ಕೆ ಭೇಟಿ ನೀಡಬಹುದು' ಎಂದಿದ್ದಾರೆ.<br /> <br /> `ತಾಂತ್ರಿಕತೆಯ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಂದಿರವನ್ನು ಪುನರ್ ನಿರ್ಮಾಣ ಮಾಡಲಾಗುವುದು. ಮಂದಿರಕ್ಕೆ ಪಾದಯಾತ್ರೆಯಲ್ಲಿ ಸಾಗುವುದಕ್ಕೆ ಬದಲಾಗಿ ಪರ್ಯಾಯ ಮಾರ್ಗಗಳ ಶೋಧ ಮತ್ತು ಸುರಕ್ಷತೆ ಬಗ್ಗೆ ಚಿಂತನೆ ನಡೆಸಲಾಗಿದೆ. ಅಲ್ಲದೆ ಈ ಸಂಬಂಧ ಭಾರತೀಯ ಪುರಾತತ್ವ ಇಲಾಖೆ'ಯನ್ನು ಸಂಪರ್ಕಿಸಲಾಗುತ್ತಿದೆ' ಎಂದು ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.<br /> <br /> ಪೂರ್ಣಗಿರಿ ಮತ್ತು ಯಮುನೋತ್ರಿ ನಡುವೆಯೂ `ರೋಪ್ ವೇ' ನಿರ್ಮಿಸಲು ಆಲೋಚಿಸಲಾಗಿದೆ. ಜಂಕಿ ಚಟ್ಟಿ- ಯಮುನೋತ್ರಿ ನಡುವಿನ 3.84 ಕಿ.ಮೀ. `ರೋಪ್ ವೇ' ನಿರ್ಮಾಣಕ್ಕೆ ನಿರ್ಮಾಣ ವೆಚ್ಚ ರೂ. 70 ಕೋಟಿ ಎಂದು ಅಂದಾಜಿಸಲಾಗಿದೆ. ಅದರಂತೆ ತುಲಿಗಾಡ್- ಪೂರ್ಣಗಿರಿ ನಡುವಿನ ಒಂದಕ್ಕಿಂತ ಕಡಿಮೆ ಕಿ.ಮೀ. ದೂರ ನಿರ್ಮಿಸಲು ಅಂದಾಜು ವೆಚ್ಚ ರೂ. 35 ಕೋಟಿ ತಗಲಬಹುದು.<br /> <br /> ಬಿನ್ಸರ್ ರಸ್ತೆಯಿಂದ ಅಲ್ಮೊರಾದ ಕಸರ್ ದೇವಿ ದೇವಸ್ಥಾನದವರೆಗೆ , ಋಷಿಕೇಶದಿಂದ ಕುಂಜಾಪುರಿ, ಚಕ್ರತಾ- ಟೈಗರ್ ಫಾಲ್ಸ್ ಹಾಗೂ ದಯಾರಾ ಬುಗ್ಯಾಲ್ ನಡುವೆ `ರೋಪ್ ವೇ' ನಿರ್ಮಾಣಕ್ಕೆ ಸಂಬಂಧಿಸಿದ ತಾಂತ್ರಿಕ ಅಧ್ಯಯನ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ..</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>