<p>ಕೋಲಾರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಹೋಬಳಿ ಕೇಂದ್ರವಾದ ಕೈವಾರ ನಾಡಿನೆಲ್ಲೆಡೆ ಪೌರಾಣಿಕ ಹಾಗೂ ಐತಿಹಾಸಿಕವಾಗಿ ಪ್ರಸಿದ್ಧವಾದ ಧರ್ಮಕ್ಷೇತ್ರ. <br /> <br /> ಅಮರನಾರಾಯಣ ಸ್ವಾಮಿ, ಭೀಮಲಿಂಗೇಶ್ವರ, ಲಕ್ಷ್ಮೀನರಸಿಂಹ ಸ್ವಾಮಿ ಮೊದಲಾದ ದೇವಾಲಯಗಳು ಇಲ್ಲಿವೆ. ಈ ಗ್ರಾಮದಲ್ಲಿ ಜನಿಸಿ ತಮ್ಮ ಆಧ್ಯಾತ್ಮಿಕ ಸಾಧನೆಯಿಂದ ಹೆಸರಾಗಿದ್ದ ಯೋಗಿನಾರೇಯಣರ (ಕಾಲಜ್ಞಾನಿ ಕೈವಾರ ತಾತಯ್ಯ) ಮಠ ವರ್ಷದುದ್ದಕ್ಕೂ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಭಕ್ತರನ್ನು ಸೆಳೆಯುತ್ತಿದೆ.<br /> <br /> ಕಾಲಜ್ಞಾನಿ ನಾರೇಯಣರು ಅಮರನಾರಾಯಣ ದೇವರ ಪರಮ ಭಕ್ತ. ಗ್ರಾಮೀಣ ಜನರೊಂದಿಗೆ ಬಾಳಿ ಬದುಕಿದ ಅವರು ವೃತ್ತಿಯಿಂದ ಬಳೆಗಾರರು. ಬದುಕಿನ ಎಲ್ಲ ಸಿಹಿ ಕಹಿಗಳನ್ನು ಅನುಭವಿಸಿದ ನಂತರ ಆಧ್ಯಾತ್ಮದ ಕಡೆಗೆ ಹೊರಳಿ ನರಸಿಂಹ ಬೆಟ್ಟದ ಗುಡಿಯಲ್ಲಿ ತಪಸ್ಸು ಮಾಡಿ ಸಿದ್ಧ ಪಡೆದರು.<br /> <br /> ತಾವು ಪಡೆದದ್ದನ್ನು ಇತರರಿಗೂ ಹಂಚಲು ಸಮಾಜಮುಖಿ ಸರಳ ಸಂಗತಿಗಳನ್ನು ಓದು ಬರಹ ಬಾರದವರಿಗೂ ಅರ್ಥವಾಗುವ ರೀತಿಯಲ್ಲಿ ಬರೆದು ತಾತಯ್ಯನೆಂಬ ಹೆಸರನ್ನು ಗಳಿಸಿದರು. ತಾತನವರ ತತ್ವಪದಗಳು ಹಳ್ಳಿಗಾಡಿನ ಜನಕ್ಕೆ ಸುಲಭವಾಗಿ ಅರ್ಥವಾಗುತ್ತಿತ್ತು. <br /> <br /> ಹೀಗಾಗಿ ಅವರನ್ನು ಗುರುಗಳೆಂದು ಒಪ್ಪಿಕೊಂಡು ಅವರಿಂದ ತಮ್ಮ ಸಮಸ್ಯೆ ಸಂಕಷ್ಟಗಳಿಗೆ ಆಧ್ಯಾತ್ಮಿಕ ಪರಿಹಾರವನ್ನು ಪಡೆಯುವ ಶಿಷ್ಯರ ಸಂಖ್ಯೆ ದಿನೇ ದಿನೇ ಹೆಚ್ಚಾಯಿತು.<br /> <br /> ಊರೂರು ಸುತ್ತಿ ಬಳೆ ಮಾರುತ್ತಿದ್ದ ನಾರೇಯಣಪ್ಪ ನಂತರ ನಾರೇಯಣ ತಾತಯ್ಯನಾಗಿ ಉತ್ತಮ ಜೀವನಕ್ಕೆ ಅಗತ್ಯವಾದ ವಿಷಯಗಳನ್ನು ತತ್ವಪದಗಳ ಮೂಲಕ ಹೇಳುತ್ತಾ ಅನೇಕ ಗ್ರಾಮಗಳನ್ನು ಸುತ್ತಿದರು. ಕೊನೆಗೆ ಕೈವಾರದಲ್ಲಿ ಪುಟ್ಟ ಮಠವನ್ನು ಅವರ ಅನುಯಾಯಿಗಳು ನಿರ್ಮಿಸಿಕೊಟ್ಟರು. ಆ ಮಠ ಈಗ ಹೆಮ್ಮರವಾಗಿ ತಾತಯ್ಯನವರ ಚಿಂತನೆಗಳನ್ನು ಸಂದೇಶಗಳನ್ನು ಜನಮಾನಸದಲ್ಲಿ ಬಿತ್ತುತ್ತಿದೆ.<br /> <br /> ಮುಂಜಾನೆಯಿಂದ ರಾತ್ರಿಯ ವರೆಗೆ ತೆರೆದಿರುವ ಯೋಗಿನಾರೇಯಣರ ಮಠ ನಾದಸುಧಾರಸ, ನಗರ ಸಂಕೀರ್ತನೆ, ಸರಳ ವಿವಾಹ, ಗುರು ಪೌರ್ಣಿಮೆ, ಸಂಗೀತ ಮಹೋತ್ಸವ, ನಿತ್ಯ ಭಜನೆ, ನಿತ್ಯ ದಾಸೋಹ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.<br /> <br /> ನಿತ್ಯ ಬೆಳಿಗ್ಗೆ 11ರಿಂದ ಸಂಜೆ 7 ಗಂಟೆ ವರೆಗೂ ದಾಸರ ಪದಗಳು, ತಾತಯ್ಯನವರ ತತ್ವಪದಗಳು, ಪೋತನ ಭಾಗವತ ಒಳಗೊಂಡ ನಾದಸುಧಾರಸ ಧಾರ್ಮಿಕ ಸಂಗೀತ ನಿರಂತರವಾಗಿ ನಡೆಯುವುದು ಕೈವಾರದ ವಿಶೇಷ. ವರ್ಷಕೊಮ್ಮೆ ನಡೆಯುವ ತಾತಯ್ಯನವರ ರಥೋತ್ಸವಕ್ಕೆ ದೂರದೂರದ ಭಕ್ತರು ಆಗಮಿಸುತ್ತಾರೆ. <br /> <br /> ಇವರಲ್ಲಿ ಬಹುಮಂದಿ ರೈತಾಪಿ ಜನರು. ತಾವು ಬೆಳೆದ ಕಾಳುಕಡಿ, ತರಕಾರಿಗಳನ್ನು ರಥೋತ್ಸವದ ಸಂದರ್ಭದಲ್ಲಿ ನಿತ್ಯ ದಾಸೋಹಕ್ಕಾಗಿ ಅರ್ಪಿಸುವುದು ರೂಢಿ. ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕಗಳ ಭಜನಾ ತಂಡಗಳು ರಥೋತ್ಸವಕ್ಕಾಗಿ ಆಗಮಿಸುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಹೋಬಳಿ ಕೇಂದ್ರವಾದ ಕೈವಾರ ನಾಡಿನೆಲ್ಲೆಡೆ ಪೌರಾಣಿಕ ಹಾಗೂ ಐತಿಹಾಸಿಕವಾಗಿ ಪ್ರಸಿದ್ಧವಾದ ಧರ್ಮಕ್ಷೇತ್ರ. <br /> <br /> ಅಮರನಾರಾಯಣ ಸ್ವಾಮಿ, ಭೀಮಲಿಂಗೇಶ್ವರ, ಲಕ್ಷ್ಮೀನರಸಿಂಹ ಸ್ವಾಮಿ ಮೊದಲಾದ ದೇವಾಲಯಗಳು ಇಲ್ಲಿವೆ. ಈ ಗ್ರಾಮದಲ್ಲಿ ಜನಿಸಿ ತಮ್ಮ ಆಧ್ಯಾತ್ಮಿಕ ಸಾಧನೆಯಿಂದ ಹೆಸರಾಗಿದ್ದ ಯೋಗಿನಾರೇಯಣರ (ಕಾಲಜ್ಞಾನಿ ಕೈವಾರ ತಾತಯ್ಯ) ಮಠ ವರ್ಷದುದ್ದಕ್ಕೂ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಭಕ್ತರನ್ನು ಸೆಳೆಯುತ್ತಿದೆ.<br /> <br /> ಕಾಲಜ್ಞಾನಿ ನಾರೇಯಣರು ಅಮರನಾರಾಯಣ ದೇವರ ಪರಮ ಭಕ್ತ. ಗ್ರಾಮೀಣ ಜನರೊಂದಿಗೆ ಬಾಳಿ ಬದುಕಿದ ಅವರು ವೃತ್ತಿಯಿಂದ ಬಳೆಗಾರರು. ಬದುಕಿನ ಎಲ್ಲ ಸಿಹಿ ಕಹಿಗಳನ್ನು ಅನುಭವಿಸಿದ ನಂತರ ಆಧ್ಯಾತ್ಮದ ಕಡೆಗೆ ಹೊರಳಿ ನರಸಿಂಹ ಬೆಟ್ಟದ ಗುಡಿಯಲ್ಲಿ ತಪಸ್ಸು ಮಾಡಿ ಸಿದ್ಧ ಪಡೆದರು.<br /> <br /> ತಾವು ಪಡೆದದ್ದನ್ನು ಇತರರಿಗೂ ಹಂಚಲು ಸಮಾಜಮುಖಿ ಸರಳ ಸಂಗತಿಗಳನ್ನು ಓದು ಬರಹ ಬಾರದವರಿಗೂ ಅರ್ಥವಾಗುವ ರೀತಿಯಲ್ಲಿ ಬರೆದು ತಾತಯ್ಯನೆಂಬ ಹೆಸರನ್ನು ಗಳಿಸಿದರು. ತಾತನವರ ತತ್ವಪದಗಳು ಹಳ್ಳಿಗಾಡಿನ ಜನಕ್ಕೆ ಸುಲಭವಾಗಿ ಅರ್ಥವಾಗುತ್ತಿತ್ತು. <br /> <br /> ಹೀಗಾಗಿ ಅವರನ್ನು ಗುರುಗಳೆಂದು ಒಪ್ಪಿಕೊಂಡು ಅವರಿಂದ ತಮ್ಮ ಸಮಸ್ಯೆ ಸಂಕಷ್ಟಗಳಿಗೆ ಆಧ್ಯಾತ್ಮಿಕ ಪರಿಹಾರವನ್ನು ಪಡೆಯುವ ಶಿಷ್ಯರ ಸಂಖ್ಯೆ ದಿನೇ ದಿನೇ ಹೆಚ್ಚಾಯಿತು.<br /> <br /> ಊರೂರು ಸುತ್ತಿ ಬಳೆ ಮಾರುತ್ತಿದ್ದ ನಾರೇಯಣಪ್ಪ ನಂತರ ನಾರೇಯಣ ತಾತಯ್ಯನಾಗಿ ಉತ್ತಮ ಜೀವನಕ್ಕೆ ಅಗತ್ಯವಾದ ವಿಷಯಗಳನ್ನು ತತ್ವಪದಗಳ ಮೂಲಕ ಹೇಳುತ್ತಾ ಅನೇಕ ಗ್ರಾಮಗಳನ್ನು ಸುತ್ತಿದರು. ಕೊನೆಗೆ ಕೈವಾರದಲ್ಲಿ ಪುಟ್ಟ ಮಠವನ್ನು ಅವರ ಅನುಯಾಯಿಗಳು ನಿರ್ಮಿಸಿಕೊಟ್ಟರು. ಆ ಮಠ ಈಗ ಹೆಮ್ಮರವಾಗಿ ತಾತಯ್ಯನವರ ಚಿಂತನೆಗಳನ್ನು ಸಂದೇಶಗಳನ್ನು ಜನಮಾನಸದಲ್ಲಿ ಬಿತ್ತುತ್ತಿದೆ.<br /> <br /> ಮುಂಜಾನೆಯಿಂದ ರಾತ್ರಿಯ ವರೆಗೆ ತೆರೆದಿರುವ ಯೋಗಿನಾರೇಯಣರ ಮಠ ನಾದಸುಧಾರಸ, ನಗರ ಸಂಕೀರ್ತನೆ, ಸರಳ ವಿವಾಹ, ಗುರು ಪೌರ್ಣಿಮೆ, ಸಂಗೀತ ಮಹೋತ್ಸವ, ನಿತ್ಯ ಭಜನೆ, ನಿತ್ಯ ದಾಸೋಹ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.<br /> <br /> ನಿತ್ಯ ಬೆಳಿಗ್ಗೆ 11ರಿಂದ ಸಂಜೆ 7 ಗಂಟೆ ವರೆಗೂ ದಾಸರ ಪದಗಳು, ತಾತಯ್ಯನವರ ತತ್ವಪದಗಳು, ಪೋತನ ಭಾಗವತ ಒಳಗೊಂಡ ನಾದಸುಧಾರಸ ಧಾರ್ಮಿಕ ಸಂಗೀತ ನಿರಂತರವಾಗಿ ನಡೆಯುವುದು ಕೈವಾರದ ವಿಶೇಷ. ವರ್ಷಕೊಮ್ಮೆ ನಡೆಯುವ ತಾತಯ್ಯನವರ ರಥೋತ್ಸವಕ್ಕೆ ದೂರದೂರದ ಭಕ್ತರು ಆಗಮಿಸುತ್ತಾರೆ. <br /> <br /> ಇವರಲ್ಲಿ ಬಹುಮಂದಿ ರೈತಾಪಿ ಜನರು. ತಾವು ಬೆಳೆದ ಕಾಳುಕಡಿ, ತರಕಾರಿಗಳನ್ನು ರಥೋತ್ಸವದ ಸಂದರ್ಭದಲ್ಲಿ ನಿತ್ಯ ದಾಸೋಹಕ್ಕಾಗಿ ಅರ್ಪಿಸುವುದು ರೂಢಿ. ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕಗಳ ಭಜನಾ ತಂಡಗಳು ರಥೋತ್ಸವಕ್ಕಾಗಿ ಆಗಮಿಸುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>