<p><strong>ತೋವಿನಕೆರೆ:</strong> ಈಗ ಹುಣಸೆ ಮರಗಳು ಬರಿದಾಗಿವೆ. ಹೂವು ತುಂಬಿ ಕಂಗೊಳಿಸುತ್ತಿದ್ದ ನಾಲ್ಕರಿಂದ ಐದು ಸಾವಿರ ಹುಣಸೆ ಮರಗಳು ಹೀಚು ಕಟ್ಟದೆ ಕೊಂಡಲಿ ಹುಳುಗಳ ಬಾಧೆಯಿಂದ ತತ್ತರಿಸಿವೆ.<br /> <br /> ವರ್ಷಕ್ಕೊಮ್ಮೆ ರೈತರ ಕೈ ಖರ್ಚಿಗೆ ಸಿಗುತ್ತಿದ್ದ ಕಾಸು ಮುಂದಿನ ವರ್ಷ ಸಿಗದಾಗಿದೆ. ಹುಣಸೆ ಹೂವಿನಿಂದ ಹೀಚಾಗಿ, ಕಾಯಿ ಹಣ್ಣಾಗುವ ಹಂತ ಮುಕ್ತಾಯಗೊಳ್ಳುವುದು ಡಿಸೆಂಬರ್-ಜನವರಿಯಲ್ಲಿ.<br /> <br /> ಈ ನಡುವೆ ಮರ ಕಾಯಿ ಕಟ್ಟಿರುವುದನ್ನು ನೋಡಿದ ಮಧ್ಯವರ್ತಿಗಳು ಅಕ್ಟೋಬರ್- ನವೆಂಬರ್ ಅವಧಿಯಲ್ಲೇ ರೈತರ ಬಳಿ ವ್ಯಾಪಾರ ಕುದುರಿಸುತ್ತಿದ್ದರು. ಇದರಿಂದ ಇಬ್ಬರಿಗೂ ಲಾಭವಾಗುತ್ತಿತ್ತು.<br /> <br /> ಆದರೆ ಇದೀಗ ಎಲ್ಲವೂ ತಲೆಕೆಳಗಾಗಿದೆ. ಹುಣಸೆ ನಂಬಿ ವಿವಿಧ ವ್ಯವಹಾರ ನಡೆಸಿದ್ದ ರೈತನಿಗೆ ದಿಕ್ಕು ತೋಚದಾಗಿದ್ದರೆ; ವ್ಯಾಪಾರಿಗೆ ಜೀವನ ನಿರ್ವಹಣೆಯ ಪ್ರಶ್ನೆ ಎದುರಾಗಿದೆ.<br /> <br /> ಈ ಸಮಸ್ಯೆ ಜಿಲ್ಲೆಯ ಬೇರೆ ಕಡೆ ಕಂಡು ಬಂದಿಲ್ಲ. ತೋಟಗಾರಿಕೆ, ಕೃಷಿ ಅಧಿಕಾರಿಗಳು ಇಪ್ಪತ್ತು ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ನೀಡಿದ್ದ ಸಲಹೆ ಉಪಯೋಗಕ್ಕೆ ಬಂದಿಲ್ಲ. ಕೊಂಡಲಿ ಹುಳುಗಳು ಒಂದು ಕಡೆಯಿಂದ ಇಡೀ ಮರಗಳ ಹೂವನ್ನೇ ತಿಂದು ನಾಶಪಡಿಸಿವೆ.<br /> <br /> ಪ್ರತಿ ಮರದಲ್ಲೂ ಸಾವಿರಾರು ಹುಳುಗಳು ಕಂಡು ಬರುತ್ತಿವೆ. ಹದಿನೈದು ದಿನಕ್ಕೂ ಹೆಚ್ಚು ಮರದ ಮೇಲೆ ಇದ್ದು ಹೂವು-ಚಿಗುರನ್ನು ತಿಂದವು.<br /> <br /> ಮೇ ಕೊನೆ ದಿನ ಬಿರುಸಾಗಿ ಸುರಿದ ಮಳೆಯಿಂದ ಕೆಲ ಹುಳುಗಳು ಸತ್ತು ಬಿದ್ದವು. ಇದರ ಜತೆ ಕಾಗೆಗಳು ಹುಳುಗಳನ್ನು ತಿಂದವು. ಇದನ್ನು ನೋಡಿದ ರೈತರು ಸಮಸ್ಯೆ ಬಗೆಹರಿಯಿತು ಅಂದುಕೊಂಡರು.<br /> <br /> ಆದರೂ ಹುಳುಗಳ ಸಂಖ್ಯೆ ದಿನೇ ದಿನೇ ಹೆಚ್ಚಿ ಮರದ ಹೂವನ್ನೆಲ್ಲ ಖಾಲಿ ಮಾಡಿವೆ. ಎಲೆಗಳು ಬಲಿತಿರುವ ಕಡೆಗಳಲ್ಲಿ ತಿನ್ನದೆ ಹೊಂಗೆ, ಹುಲುವೆ, ಬೀಟೆ ಮರಗಳ ಚಿಗುರು ತಿನ್ನುತ್ತಿರುವುದು ಕಂಡು ಬಂದಿದೆ. ಈ ಬೆಳವಣಿಗೆ ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.<br /> <br /> ಆಲಿಕಲ್ಲು ಸಹಿತ ಎಲ್ಲೆಲ್ಲಿ ಭರಣಿ ಮಳೆ ಸುರಿದಿದೆ ಆ ಭಾಗದಲ್ಲಿ ಮಾತ್ರ ಕೊಂಡಲಿ ಹುಳುಗಳು ಕಂಡು ಬಂದಿವೆ. ಬೇರೆ ಕಡೆ ಈ ರೀತಿ ಅನಾಹುತ ನಡೆದಿಲ್ಲ ಎಂದು ಓಬನಹಳ್ಳಿಯ ಜಯಣ್ಣ ಬರಿದಾದ ಹುಣಸೆ ಮರಗಳನ್ನು ತೋರಿಸಿದರು.<br /> <br /> ತುಮಕೂರು ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವ ಅಜ್ಜೇನಹಳ್ಳಿಯ ಲತಾಶ್ರೀ ಕಳೆದ ವರ್ಷ ಹುಣಸೆ ಮರಗಳಿಂದ ರೂ. 1.50 ಲಕ್ಷಕ್ಕೂ ಹೆಚ್ಚು ಹಣ ನಮ್ಮ ತಂದೆಗೆ ಬಂದಿತ್ತು. ಆದರೆ ಈ ವರ್ಷ ಒಂದು ರೂಪಾಯಿ ಸಹ ಬರುವುದಿಲ್ಲ ಎಂದು ನೊಂದು ನುಡಿದರು.<br /> <br /> ಮರಗಳಲ್ಲಿ ಕಳೆದ ಸಾಲಿಗಿಂತ ಈ ವರ್ಷ ಹೂವು ಚೆನ್ನಾಗಿತ್ತು. ಬೆಳೆ ನಂಬಿಕೊಂಡು ಸಾಲ ಮಾಡಿ ಮಗನ ಮದುವೆ ಮಾಡಿದ್ದೇನೆ. ಬೆಳೆ ಕೈಕೊಟ್ಟಿದೆ. ಮಾಡಿರುವ ಸಾಲ ಹೇಗೆ ತೀರಿಸಬೇಕು ಎಂದು ಅರ್ಥವಾಗುತ್ತಿಲ್ಲ ಎನ್ನುವ ನೋವು ಗಿಡದಾಗಲಹಳ್ಳಿ ಹೊನ್ನೇಶಪ್ಪ ಅವರದ್ದು.<br /> <br /> ಸಮಸ್ಯೆ ಕುರಿತು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ತೋವಿನಕೆರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಎಂ.ಹರೀಶ್, ಈ ಕೊಂಡಲಿ ಹುಳಗಳನ್ನು ನಿಯಂತ್ರಿಸದಿದ್ದರೆ ಮುಂದೆ ಶೇಂಗಾ ಬೆಳೆ ಸೇರಿದಂತೆ ಇತರ ಬೆಳೆಗಳ ಇಳುವರಿ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬ ಆತಂಕ ವ್ಯಕ್ತಪಡಿಸಿದರು.<br /> <br /> ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಳುಗಳ ನಿಯಂತ್ರಣ ಮಾಡಲು ಸೂಚಿಸಿದ ಸಲಹೆಗಳನ್ನು ರೈತರು ಪಾಲಿಸದಿರುವುದು ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ ಎಂದರು.<br /> <br /> <br /> <strong>ಅವರ್ನ ಬಿಟ್ ಇವರ್ನ ಬಿಟ್ ಅವರ್ಯಾರು...?</strong></p>.<p>ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಸಾದ್ ಅವರನ್ನು ಸಂಪರ್ಕಿಸಿ, ಕೊಂಡಲಿ ಹುಳು ಬಾಧೆ ಕುರಿತು ಪ್ರಶ್ನಿಸಿದಾಗ, `ನಮ್ಮ ತಾಲ್ಲೂಕು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೃಷಿಕರಿಗೆ ಬಿಎಚ್ಸಿ ಪುಡಿಯನ್ನು ಮರದ ಸುತ್ತಲೂ ಹಾಕಲು ತಿಳಿಸಿದ್ದಾರೆ' ಎಂದರು.<br /> <br /> `ಯಾವ ಅಧಿಕಾರಿ, ಯಾವ ಸ್ಥಳಕ್ಕೆ ಹೋಗಿದ್ದರು, ಯಾವ ರೈತರನ್ನು ಭೇಟಿಯಾಗಿದ್ದರು?' ಎಂದು ಮರು ಪ್ರಶ್ನಿಸಿದಾಗ, `ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದರು. ರೈತರಿಗೆ ಮಾರ್ಗದರ್ಶನ ನೀಡಿದ್ದಾರೆ. ನಮ್ಮ ಅಧಿಕಾರಿಗಳಿಗೆ ಈ ದಿನವೇ ಸ್ಥಳಕ್ಕೆ ಹೋಗಲು ತಿಳಿಸುತ್ತೇನೆ' ಎಂದು ನುಡಿದರು.<br /> <br /> `ಕೊಂಡಲಿ ಹುಳು ಬಾಧೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಹುಣಸೆ ಸಸಿಗಳನ್ನು ಅರಣ್ಯ ಇಲಾಖೆಯವರು ವಿತರಿಸುವುದರಿಂದ ನಮಗಿಂತ ಅವರಿಗೇ ಚೆನ್ನಾಗಿ ಗೊತ್ತು' ಎಂದು ಕೊರಟಗೆರೆ ತಾಲ್ಲೂಕು ಸಹಾಯಕ ತೋಟಗಾರಿಕೆ ಅಧಿಕಾರಿ ಗೀತಾ ಹೇಳಿದರು.<br /> <br /> ಹುಣಸೆ ಸಮಸ್ಯೆ ಕುರಿತು ವಲಯ ಸಂರಕ್ಷಣಾಧಿಕಾರಿ ರಮೇಶ್ ಅವರನ್ನು ಸಂಪರ್ಕಿಸಿದಾಗ, `ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ನಾನು ಬುಧವಾರವೇ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುತ್ತೇನೆ. ಈಗಾಗಲೇ ಕೊಂಡಲಿ ಹುಳುಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ' ಎಂದು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋವಿನಕೆರೆ:</strong> ಈಗ ಹುಣಸೆ ಮರಗಳು ಬರಿದಾಗಿವೆ. ಹೂವು ತುಂಬಿ ಕಂಗೊಳಿಸುತ್ತಿದ್ದ ನಾಲ್ಕರಿಂದ ಐದು ಸಾವಿರ ಹುಣಸೆ ಮರಗಳು ಹೀಚು ಕಟ್ಟದೆ ಕೊಂಡಲಿ ಹುಳುಗಳ ಬಾಧೆಯಿಂದ ತತ್ತರಿಸಿವೆ.<br /> <br /> ವರ್ಷಕ್ಕೊಮ್ಮೆ ರೈತರ ಕೈ ಖರ್ಚಿಗೆ ಸಿಗುತ್ತಿದ್ದ ಕಾಸು ಮುಂದಿನ ವರ್ಷ ಸಿಗದಾಗಿದೆ. ಹುಣಸೆ ಹೂವಿನಿಂದ ಹೀಚಾಗಿ, ಕಾಯಿ ಹಣ್ಣಾಗುವ ಹಂತ ಮುಕ್ತಾಯಗೊಳ್ಳುವುದು ಡಿಸೆಂಬರ್-ಜನವರಿಯಲ್ಲಿ.<br /> <br /> ಈ ನಡುವೆ ಮರ ಕಾಯಿ ಕಟ್ಟಿರುವುದನ್ನು ನೋಡಿದ ಮಧ್ಯವರ್ತಿಗಳು ಅಕ್ಟೋಬರ್- ನವೆಂಬರ್ ಅವಧಿಯಲ್ಲೇ ರೈತರ ಬಳಿ ವ್ಯಾಪಾರ ಕುದುರಿಸುತ್ತಿದ್ದರು. ಇದರಿಂದ ಇಬ್ಬರಿಗೂ ಲಾಭವಾಗುತ್ತಿತ್ತು.<br /> <br /> ಆದರೆ ಇದೀಗ ಎಲ್ಲವೂ ತಲೆಕೆಳಗಾಗಿದೆ. ಹುಣಸೆ ನಂಬಿ ವಿವಿಧ ವ್ಯವಹಾರ ನಡೆಸಿದ್ದ ರೈತನಿಗೆ ದಿಕ್ಕು ತೋಚದಾಗಿದ್ದರೆ; ವ್ಯಾಪಾರಿಗೆ ಜೀವನ ನಿರ್ವಹಣೆಯ ಪ್ರಶ್ನೆ ಎದುರಾಗಿದೆ.<br /> <br /> ಈ ಸಮಸ್ಯೆ ಜಿಲ್ಲೆಯ ಬೇರೆ ಕಡೆ ಕಂಡು ಬಂದಿಲ್ಲ. ತೋಟಗಾರಿಕೆ, ಕೃಷಿ ಅಧಿಕಾರಿಗಳು ಇಪ್ಪತ್ತು ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ನೀಡಿದ್ದ ಸಲಹೆ ಉಪಯೋಗಕ್ಕೆ ಬಂದಿಲ್ಲ. ಕೊಂಡಲಿ ಹುಳುಗಳು ಒಂದು ಕಡೆಯಿಂದ ಇಡೀ ಮರಗಳ ಹೂವನ್ನೇ ತಿಂದು ನಾಶಪಡಿಸಿವೆ.<br /> <br /> ಪ್ರತಿ ಮರದಲ್ಲೂ ಸಾವಿರಾರು ಹುಳುಗಳು ಕಂಡು ಬರುತ್ತಿವೆ. ಹದಿನೈದು ದಿನಕ್ಕೂ ಹೆಚ್ಚು ಮರದ ಮೇಲೆ ಇದ್ದು ಹೂವು-ಚಿಗುರನ್ನು ತಿಂದವು.<br /> <br /> ಮೇ ಕೊನೆ ದಿನ ಬಿರುಸಾಗಿ ಸುರಿದ ಮಳೆಯಿಂದ ಕೆಲ ಹುಳುಗಳು ಸತ್ತು ಬಿದ್ದವು. ಇದರ ಜತೆ ಕಾಗೆಗಳು ಹುಳುಗಳನ್ನು ತಿಂದವು. ಇದನ್ನು ನೋಡಿದ ರೈತರು ಸಮಸ್ಯೆ ಬಗೆಹರಿಯಿತು ಅಂದುಕೊಂಡರು.<br /> <br /> ಆದರೂ ಹುಳುಗಳ ಸಂಖ್ಯೆ ದಿನೇ ದಿನೇ ಹೆಚ್ಚಿ ಮರದ ಹೂವನ್ನೆಲ್ಲ ಖಾಲಿ ಮಾಡಿವೆ. ಎಲೆಗಳು ಬಲಿತಿರುವ ಕಡೆಗಳಲ್ಲಿ ತಿನ್ನದೆ ಹೊಂಗೆ, ಹುಲುವೆ, ಬೀಟೆ ಮರಗಳ ಚಿಗುರು ತಿನ್ನುತ್ತಿರುವುದು ಕಂಡು ಬಂದಿದೆ. ಈ ಬೆಳವಣಿಗೆ ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.<br /> <br /> ಆಲಿಕಲ್ಲು ಸಹಿತ ಎಲ್ಲೆಲ್ಲಿ ಭರಣಿ ಮಳೆ ಸುರಿದಿದೆ ಆ ಭಾಗದಲ್ಲಿ ಮಾತ್ರ ಕೊಂಡಲಿ ಹುಳುಗಳು ಕಂಡು ಬಂದಿವೆ. ಬೇರೆ ಕಡೆ ಈ ರೀತಿ ಅನಾಹುತ ನಡೆದಿಲ್ಲ ಎಂದು ಓಬನಹಳ್ಳಿಯ ಜಯಣ್ಣ ಬರಿದಾದ ಹುಣಸೆ ಮರಗಳನ್ನು ತೋರಿಸಿದರು.<br /> <br /> ತುಮಕೂರು ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವ ಅಜ್ಜೇನಹಳ್ಳಿಯ ಲತಾಶ್ರೀ ಕಳೆದ ವರ್ಷ ಹುಣಸೆ ಮರಗಳಿಂದ ರೂ. 1.50 ಲಕ್ಷಕ್ಕೂ ಹೆಚ್ಚು ಹಣ ನಮ್ಮ ತಂದೆಗೆ ಬಂದಿತ್ತು. ಆದರೆ ಈ ವರ್ಷ ಒಂದು ರೂಪಾಯಿ ಸಹ ಬರುವುದಿಲ್ಲ ಎಂದು ನೊಂದು ನುಡಿದರು.<br /> <br /> ಮರಗಳಲ್ಲಿ ಕಳೆದ ಸಾಲಿಗಿಂತ ಈ ವರ್ಷ ಹೂವು ಚೆನ್ನಾಗಿತ್ತು. ಬೆಳೆ ನಂಬಿಕೊಂಡು ಸಾಲ ಮಾಡಿ ಮಗನ ಮದುವೆ ಮಾಡಿದ್ದೇನೆ. ಬೆಳೆ ಕೈಕೊಟ್ಟಿದೆ. ಮಾಡಿರುವ ಸಾಲ ಹೇಗೆ ತೀರಿಸಬೇಕು ಎಂದು ಅರ್ಥವಾಗುತ್ತಿಲ್ಲ ಎನ್ನುವ ನೋವು ಗಿಡದಾಗಲಹಳ್ಳಿ ಹೊನ್ನೇಶಪ್ಪ ಅವರದ್ದು.<br /> <br /> ಸಮಸ್ಯೆ ಕುರಿತು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ತೋವಿನಕೆರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಎಂ.ಹರೀಶ್, ಈ ಕೊಂಡಲಿ ಹುಳಗಳನ್ನು ನಿಯಂತ್ರಿಸದಿದ್ದರೆ ಮುಂದೆ ಶೇಂಗಾ ಬೆಳೆ ಸೇರಿದಂತೆ ಇತರ ಬೆಳೆಗಳ ಇಳುವರಿ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬ ಆತಂಕ ವ್ಯಕ್ತಪಡಿಸಿದರು.<br /> <br /> ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಳುಗಳ ನಿಯಂತ್ರಣ ಮಾಡಲು ಸೂಚಿಸಿದ ಸಲಹೆಗಳನ್ನು ರೈತರು ಪಾಲಿಸದಿರುವುದು ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ ಎಂದರು.<br /> <br /> <br /> <strong>ಅವರ್ನ ಬಿಟ್ ಇವರ್ನ ಬಿಟ್ ಅವರ್ಯಾರು...?</strong></p>.<p>ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಸಾದ್ ಅವರನ್ನು ಸಂಪರ್ಕಿಸಿ, ಕೊಂಡಲಿ ಹುಳು ಬಾಧೆ ಕುರಿತು ಪ್ರಶ್ನಿಸಿದಾಗ, `ನಮ್ಮ ತಾಲ್ಲೂಕು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೃಷಿಕರಿಗೆ ಬಿಎಚ್ಸಿ ಪುಡಿಯನ್ನು ಮರದ ಸುತ್ತಲೂ ಹಾಕಲು ತಿಳಿಸಿದ್ದಾರೆ' ಎಂದರು.<br /> <br /> `ಯಾವ ಅಧಿಕಾರಿ, ಯಾವ ಸ್ಥಳಕ್ಕೆ ಹೋಗಿದ್ದರು, ಯಾವ ರೈತರನ್ನು ಭೇಟಿಯಾಗಿದ್ದರು?' ಎಂದು ಮರು ಪ್ರಶ್ನಿಸಿದಾಗ, `ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದರು. ರೈತರಿಗೆ ಮಾರ್ಗದರ್ಶನ ನೀಡಿದ್ದಾರೆ. ನಮ್ಮ ಅಧಿಕಾರಿಗಳಿಗೆ ಈ ದಿನವೇ ಸ್ಥಳಕ್ಕೆ ಹೋಗಲು ತಿಳಿಸುತ್ತೇನೆ' ಎಂದು ನುಡಿದರು.<br /> <br /> `ಕೊಂಡಲಿ ಹುಳು ಬಾಧೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಹುಣಸೆ ಸಸಿಗಳನ್ನು ಅರಣ್ಯ ಇಲಾಖೆಯವರು ವಿತರಿಸುವುದರಿಂದ ನಮಗಿಂತ ಅವರಿಗೇ ಚೆನ್ನಾಗಿ ಗೊತ್ತು' ಎಂದು ಕೊರಟಗೆರೆ ತಾಲ್ಲೂಕು ಸಹಾಯಕ ತೋಟಗಾರಿಕೆ ಅಧಿಕಾರಿ ಗೀತಾ ಹೇಳಿದರು.<br /> <br /> ಹುಣಸೆ ಸಮಸ್ಯೆ ಕುರಿತು ವಲಯ ಸಂರಕ್ಷಣಾಧಿಕಾರಿ ರಮೇಶ್ ಅವರನ್ನು ಸಂಪರ್ಕಿಸಿದಾಗ, `ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ನಾನು ಬುಧವಾರವೇ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುತ್ತೇನೆ. ಈಗಾಗಲೇ ಕೊಂಡಲಿ ಹುಳುಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ' ಎಂದು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>