<p><strong>ಬೀದರ್:</strong> ನಗರದ ಐತಿಹಾಸಿಕ ಕೋಟೆಯ ಸುತ್ತಲಿನ ಕಂದಕವನ್ನು ಸ್ವಚ್ಚಗೊಳಿಸುವಾಗ ಶುಕ್ರವಾರ ದಲ್ಹನ್ ದರ್ವಾಜಾ ಬಳಿ ಬರೀದ್ ಶಾಯಿ ಅವರ ಅವಧಿಯದ್ದು ಎಂದು ಹೇಳಲಾಗಿರುವ ತೋಪು ಪತ್ತೆಯಾಗಿದೆ.<br /> <br /> ಕಸ, ಒಳಚರಂಡಿಯ ಕಲ್ಮಶ ನೀರಿನ ನಡುವೆ ಇಷ್ಟು ವರ್ಷ ಇದ್ದರೂ ತೋಪು ವಿರೂಪಗೊಂಡಿಲ್ಲ. ಶುಕ್ರವಾರ ಪತ್ತೆಯಾದ ತೋಪು ಸುಮಾರು 1.8 ಮೀಟರ್ ಉದ್ದವಿದ್ದು, ಅದರಲ್ಲಿ 1 ಅಡಿ ತ್ಯಾಜ್ಯವಿದೆ. ತೋಪು ನಡುವೆ ಅದನ್ನು ಎತ್ತಲು ಕಬ್ಬಿಣದ ಕೊಂಡಿಯೂ ಇದೆ.<br /> <br /> ಕಂದಕವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮಂಡಳಿಯು ಕೈಗೊಂಡ ಬಳಿಕ ಪತ್ತೆಯಾಗುತ್ತಿರುವ ಎರಡನೇ ತೋಪು ಇದು. ಈ ಮುನ್ನ ನಯೀ ಕಮಾನ್ ಬಳಿಯು ಕಂದಕದಲ್ಲಿ ಒಂದು ತೋಪು ಪತ್ತೆಯಾಗಿತ್ತು.<br /> <br /> ಈ ಎರಡೂ ತೋಪು ಅನ್ನು ಜಿಲ್ಲಾಧಿಕಾರಿ ಸೂಚನೆಯನ್ನು ಆಧರಿಸಿ ರಾಜ್ಯ ಪ್ರಾಚ್ಯ ವಸ್ತು ಇಲಾಖೆಯ ಸುಪರ್ದಿಗೆ ಒಪ್ಪಿಸಲಾಗುವುದು ಎಂದು ಸ್ವಚ್ಛತಾ ಕಾರ್ಯದ ಮೇಲ್ವಿಚಾರಣೆ ವಹಿಸಿರುವ ಮಂಡಳಿಯ ಎಇಇ ಶಶಿಕಾಂತ ಮಳ್ಳಿ ಹೇಳಿದರು.<br /> <br /> ನಗರದಲ್ಲಿ ಜನವಾಡ ರಸ್ತೆ ಸಮೀಪದ ಟಸ್ಕರ್ ರಸ್ತೆಯಿಂದ ದಲ್ಹನ್ ದರ್ವಾಜಾವರೆಗಿನ ಸುಮಾರು 3.2 ಕಿ.ಮೀ. ಉದ್ದದ ಕಂದಕವನ್ನು ಸ್ವಚ್ಛಗೊಳಿಸುವ ಕಾರ್ಯ ಮೂರು ತಿಂಗಳ ಹಿಂದೆ ಆರಂಭವಾಗಿದೆ. ಎಡಿಬಿ ನೆರವಿನಲ್ಲಿ ಒಟ್ಟು ₨3.25 ಕೋಟಿ ವೆಚ್ಚದಲ್ಲಿ ಈ ಕಾರ್ಯವನ್ನು ಕೈಗೆತ್ತಿಗೊಳ್ಳಲಾಗಿದೆ ಎಂದರು. ಮಂಡಳಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ನಗರದ ಐತಿಹಾಸಿಕ ಕೋಟೆಯ ಸುತ್ತಲಿನ ಕಂದಕವನ್ನು ಸ್ವಚ್ಚಗೊಳಿಸುವಾಗ ಶುಕ್ರವಾರ ದಲ್ಹನ್ ದರ್ವಾಜಾ ಬಳಿ ಬರೀದ್ ಶಾಯಿ ಅವರ ಅವಧಿಯದ್ದು ಎಂದು ಹೇಳಲಾಗಿರುವ ತೋಪು ಪತ್ತೆಯಾಗಿದೆ.<br /> <br /> ಕಸ, ಒಳಚರಂಡಿಯ ಕಲ್ಮಶ ನೀರಿನ ನಡುವೆ ಇಷ್ಟು ವರ್ಷ ಇದ್ದರೂ ತೋಪು ವಿರೂಪಗೊಂಡಿಲ್ಲ. ಶುಕ್ರವಾರ ಪತ್ತೆಯಾದ ತೋಪು ಸುಮಾರು 1.8 ಮೀಟರ್ ಉದ್ದವಿದ್ದು, ಅದರಲ್ಲಿ 1 ಅಡಿ ತ್ಯಾಜ್ಯವಿದೆ. ತೋಪು ನಡುವೆ ಅದನ್ನು ಎತ್ತಲು ಕಬ್ಬಿಣದ ಕೊಂಡಿಯೂ ಇದೆ.<br /> <br /> ಕಂದಕವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮಂಡಳಿಯು ಕೈಗೊಂಡ ಬಳಿಕ ಪತ್ತೆಯಾಗುತ್ತಿರುವ ಎರಡನೇ ತೋಪು ಇದು. ಈ ಮುನ್ನ ನಯೀ ಕಮಾನ್ ಬಳಿಯು ಕಂದಕದಲ್ಲಿ ಒಂದು ತೋಪು ಪತ್ತೆಯಾಗಿತ್ತು.<br /> <br /> ಈ ಎರಡೂ ತೋಪು ಅನ್ನು ಜಿಲ್ಲಾಧಿಕಾರಿ ಸೂಚನೆಯನ್ನು ಆಧರಿಸಿ ರಾಜ್ಯ ಪ್ರಾಚ್ಯ ವಸ್ತು ಇಲಾಖೆಯ ಸುಪರ್ದಿಗೆ ಒಪ್ಪಿಸಲಾಗುವುದು ಎಂದು ಸ್ವಚ್ಛತಾ ಕಾರ್ಯದ ಮೇಲ್ವಿಚಾರಣೆ ವಹಿಸಿರುವ ಮಂಡಳಿಯ ಎಇಇ ಶಶಿಕಾಂತ ಮಳ್ಳಿ ಹೇಳಿದರು.<br /> <br /> ನಗರದಲ್ಲಿ ಜನವಾಡ ರಸ್ತೆ ಸಮೀಪದ ಟಸ್ಕರ್ ರಸ್ತೆಯಿಂದ ದಲ್ಹನ್ ದರ್ವಾಜಾವರೆಗಿನ ಸುಮಾರು 3.2 ಕಿ.ಮೀ. ಉದ್ದದ ಕಂದಕವನ್ನು ಸ್ವಚ್ಛಗೊಳಿಸುವ ಕಾರ್ಯ ಮೂರು ತಿಂಗಳ ಹಿಂದೆ ಆರಂಭವಾಗಿದೆ. ಎಡಿಬಿ ನೆರವಿನಲ್ಲಿ ಒಟ್ಟು ₨3.25 ಕೋಟಿ ವೆಚ್ಚದಲ್ಲಿ ಈ ಕಾರ್ಯವನ್ನು ಕೈಗೆತ್ತಿಗೊಳ್ಳಲಾಗಿದೆ ಎಂದರು. ಮಂಡಳಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>