<p><strong>ಬೆಂಗಳೂರು:</strong> ರಾಜ್ಯದಲ್ಲಿ ಇನ್ನೂ ಎರಡು ಜಿಲ್ಲೆಗಳಲ್ಲಿ `ಪರಿಕರ ತಯಾರಿಕೆ ಉದ್ಯಮಗಳ ರಾಷ್ಟ್ರೀಯ ಹೂಡಿಕೆ ವಲಯ'(ಎನ್ಐಎಂಜೆಡ್) ಸ್ಥಾಪಿಸಲು ಸರ್ಕಾರ ಸಜ್ಜಾಗಿದ್ದು, ಕೇಂದ್ರದಿಂದ ಅನುಮತಿ ಪಡೆಯಲು ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಹೇಳಿದರು.<br /> <br /> ನಗರದಲ್ಲಿ `ಭಾರತೀಯ ಕೈಗಾರಿಕಾ ಒಕ್ಕೂಟ'ದ(ಸಿಐಐ) ರಾಷ್ಟ್ರೀಯ ಸಮಿತಿ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದ ಅವರು, ಮೊದಲ `ಎನ್ಐಎಂಜೆಡ್' ತುಮಕೂರು ಜಿಲ್ಲೆಯಲ್ಲಿ 12 ಸಾವಿರ ಎಕರೆಯಲ್ಲಿ ನೆಲೆಗೊಳ್ಳಲಿದೆ. ಇದಕ್ಕೆ ಈಗಾಗಲೇ ಕೇಂದ್ರ ಸರ್ಕಾರದ ಅನುಮತಿಯೂ ದೊರಕಿದೆ ಎಂದರು.<br /> <br /> ಪರಿಕರ ತಯಾರಿಕಾ ಉದ್ಯಮ ವಲಯ ದೇಶದ ಕೈಗಾರಿಕಾ ರಂಗದಲ್ಲಿ ಬಹಳ ಪ್ರಮುಖವಾದುದು. ದೇಶದ ಒಟ್ಟಾರೆ ಆಂತರಿಕ ಉತ್ಪಾದನೆ(ಜಿಡಿಪಿ)ಯಲ್ಲಿ ಈ ಕ್ಷೇತ್ರದ ಪಾತ್ರ ದೊಡ್ಡದಿದೆ. ರಾಜ್ಯವೂ ತಯಾರಿಕಾ ವಲಯದ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಇದೇ ನಿಟ್ಟಿನಲ್ಲಿ ಕೋಲಾರ ಮತ್ತು ಗುಲ್ಬರ್ಗದಲ್ಲಿಯೂ `ಎನ್ಐಎಂಜೆಡ್' ಸ್ಥಾಪನೆಗೆ ಪ್ರಯತ್ನಿಸುತ್ತಿದೆ. ಬಂಡವಾಳ ಹೂಡಿಕೆಗೆ ರಾಜ್ಯವನ್ನು ಬಹಳ ಸೂಕ್ತ ಪ್ರದೇಶವಾಗಿಸುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.<br /> <br /> ಆಧುನಿಕ ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ಕೈಗಾರಿಕೆ ಮತ್ತು ಸೇವಾ ವಲಯದ ಪಾತ್ರ ದೊಡ್ಡದು. ಎರಡೂ ಕ್ಷೇತ್ರಗಳಿಂದ ಕೆಲವು ದೇಶಗಳ `ಜಿಡಿಪಿ'ಗೆ ಶೇ 70ರಿಂದ 80ರಷ್ಟು ಕೊಡುಗೆ ಸಲ್ಲುತ್ತಿದೆ. ಆದರೆ, ರಾಜ್ಯದ `ಜಿಡಿಪಿ'ಗೆ ಪರಿಕರ ತಯಾರಿಕಾ ಕ್ಷೇತ್ರ ಶೇ 25ಕ್ಕಿಂತ ಕಡಿಮೆ ಮತ್ತು ಸೇವಾ ಕ್ಷೇತ್ರ ಶೇ 59ರಷ್ಟು ಕಾಣಿಕೆ ನೀಡುತ್ತಿವೆ. ಆದರೆ, ಈ ಎರಡೂ ವಲಯ ಅಪಾರ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಿವೆ. ಹಾಗಾಗಿಯೇ ಸರ್ಕಾರವೂ ಈ ಉದ್ಯಮಗಳತ್ತ ಹೆಚ್ಚು ಗಮನ ಹರಿಸುತ್ತಿದೆ ಎಂದರು.<br /> <br /> <strong>ವಿದ್ಯುತ್-ಸ್ವಾವಲಂಬನೆ</strong><br /> ಕೈಗಾರಿಕೆ ಸ್ಥಾಪನೆಗೆ ಮೂಲ ಸೌಕರ್ಯ ಒದಗಿಸುವುದರಲ್ಲಿ ಸರ್ಕಾರ ಸದಾ ಮುಂದಿದೆ. ವಿದ್ಯುತ್ ಸರಬರಾಜು ಬಗ್ಗೆ ಉದ್ಯಮಿಗಳು ಚಿಂತಿಸಬೇಕಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಹಲವು ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.<br /> <br /> ನವೀಕರಿಸಬಹುದಾದ ಮತ್ತು ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ರಾಜ್ಯದಲ್ಲಿ ವಿಪುಲ ಅವಕಾಶಗಳಿದ್ದು, ಖಾಸಗಿ ಕಂಪೆನಿಗಳೂ ಈ ವಿಭಾಗದಲ್ಲಿ ಕಾರ್ಯನಿರತವಾಗಿವೆ. ಕರ್ನಾಟಕ 2020ರ ವೇಳೆಗೆ `ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ರಾಜ್ಯ' ಎನಿಸಿಕೊಳ್ಳಲಿದೆ. ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ವಿಭಾಗದಲ್ಲಿ ಪೂರ್ಣ ಸ್ವಾವಲಂಬನೆ ಸಾಧಿಸಲಿದೆ ಎಂದು ಭರವಸೆಯ ಮಾತನಾಡಿದರು.<br /> <br /> <strong>ಗಣಿಗಾರಿಕೆ ಅನುಮತಿ<br /> `</strong>ಟಾಟಾ ಸ್ಟೀಲ್'ನ ಮುತ್ತುರಾಮನ್ ಅವರು ಕೇಳಿದ ಗಣಿಗಾರಿಕೆ ಅನುಮತಿ ಕುರಿತ ಪ್ರಶ್ನೆಗೆ, `ಕಬ್ಬಿಣದ ಅದಿರು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸದ್ಯ ಸಿಬಿಐ ತನಿಖೆ ನಡೆಯುತ್ತಿದೆ. ಹಾಗಿದ್ದೂ ಅದಿರು ಮೌಲ್ಯವರ್ಧಿಸಿ ಉಕ್ಕು ತಯಾರಿಸಲು ಇಚ್ಛಿಸುವ ಕಂಪೆನಿಗಳಿಗೆ ಗಣಿಗಾರಿಕೆಗೆ ಅನುಮತಿ ನೀಡಲು ಅಡ್ಡಿ ಇಲ್ಲ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆಯೇ ಸರ್ಕಾರ ನಡೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ಉತ್ತರಿಸಿದರು.<br /> <br /> `ಸಿಐಐ' ಅಧ್ಯಕ್ಷ ಎಸ್.ಗೋಪಾಲಕೃಷ್ಣನ್ ಮನವಿ ಪತ್ರ ಸಲ್ಲಿಸಿದರು. ದೇಶದ ವಿವಿಧೆಡೆ ಪ್ರಮುಖ ಉದ್ಯಮಿಗಳು, `ಸಿಐಐ' ಪ್ರತಿನಿಧಿಗಳು ಇದ್ದರು.</p>.<p><strong>ಜನವರಿಗೆ ನೂತನ ಕೈಗಾರಿಕಾ ನೀತಿ</strong><br /> ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಸಲುವಾಗಿ `ನೂತನ ಕೈಗಾರಿಕಾ ನೀತಿ'ಯನ್ನು ಮುಂದಿನ ಜನವರಿಗೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.<br /> <br /> ನೂತನ ಕೈಗಾರಿಕಾ ನೀತಿ ರೂಪಿಸುವಲ್ಲಿ ಕೈಗಾರಿಕೆ ವಲಯದ ಪ್ರಾತಿನಿಧಿಕ ಸಂಸ್ಥೆಗಳು ಮತ್ತು ಉದ್ಯಮಿಗಳ ಸಹಕಾರವೂ ಅಗತ್ಯ. ಸದ್ಯ `ಸಿಐಐ' ಸಿದ್ಧಪಡಿಸಿರುವ `ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆ ಪರಿಸ್ಥಿತಿ' ಕುರಿತ ವರದಿಯ ಅಂಶಗಳೂ ನೂತನ ನೀತಿ ರೂಪಿಸುವಲ್ಲಿ ಸಹಕಾರಿಯಾಗಲಿವೆ ಎಂದು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದಲ್ಲಿ ಇನ್ನೂ ಎರಡು ಜಿಲ್ಲೆಗಳಲ್ಲಿ `ಪರಿಕರ ತಯಾರಿಕೆ ಉದ್ಯಮಗಳ ರಾಷ್ಟ್ರೀಯ ಹೂಡಿಕೆ ವಲಯ'(ಎನ್ಐಎಂಜೆಡ್) ಸ್ಥಾಪಿಸಲು ಸರ್ಕಾರ ಸಜ್ಜಾಗಿದ್ದು, ಕೇಂದ್ರದಿಂದ ಅನುಮತಿ ಪಡೆಯಲು ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಹೇಳಿದರು.<br /> <br /> ನಗರದಲ್ಲಿ `ಭಾರತೀಯ ಕೈಗಾರಿಕಾ ಒಕ್ಕೂಟ'ದ(ಸಿಐಐ) ರಾಷ್ಟ್ರೀಯ ಸಮಿತಿ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದ ಅವರು, ಮೊದಲ `ಎನ್ಐಎಂಜೆಡ್' ತುಮಕೂರು ಜಿಲ್ಲೆಯಲ್ಲಿ 12 ಸಾವಿರ ಎಕರೆಯಲ್ಲಿ ನೆಲೆಗೊಳ್ಳಲಿದೆ. ಇದಕ್ಕೆ ಈಗಾಗಲೇ ಕೇಂದ್ರ ಸರ್ಕಾರದ ಅನುಮತಿಯೂ ದೊರಕಿದೆ ಎಂದರು.<br /> <br /> ಪರಿಕರ ತಯಾರಿಕಾ ಉದ್ಯಮ ವಲಯ ದೇಶದ ಕೈಗಾರಿಕಾ ರಂಗದಲ್ಲಿ ಬಹಳ ಪ್ರಮುಖವಾದುದು. ದೇಶದ ಒಟ್ಟಾರೆ ಆಂತರಿಕ ಉತ್ಪಾದನೆ(ಜಿಡಿಪಿ)ಯಲ್ಲಿ ಈ ಕ್ಷೇತ್ರದ ಪಾತ್ರ ದೊಡ್ಡದಿದೆ. ರಾಜ್ಯವೂ ತಯಾರಿಕಾ ವಲಯದ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಇದೇ ನಿಟ್ಟಿನಲ್ಲಿ ಕೋಲಾರ ಮತ್ತು ಗುಲ್ಬರ್ಗದಲ್ಲಿಯೂ `ಎನ್ಐಎಂಜೆಡ್' ಸ್ಥಾಪನೆಗೆ ಪ್ರಯತ್ನಿಸುತ್ತಿದೆ. ಬಂಡವಾಳ ಹೂಡಿಕೆಗೆ ರಾಜ್ಯವನ್ನು ಬಹಳ ಸೂಕ್ತ ಪ್ರದೇಶವಾಗಿಸುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.<br /> <br /> ಆಧುನಿಕ ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ಕೈಗಾರಿಕೆ ಮತ್ತು ಸೇವಾ ವಲಯದ ಪಾತ್ರ ದೊಡ್ಡದು. ಎರಡೂ ಕ್ಷೇತ್ರಗಳಿಂದ ಕೆಲವು ದೇಶಗಳ `ಜಿಡಿಪಿ'ಗೆ ಶೇ 70ರಿಂದ 80ರಷ್ಟು ಕೊಡುಗೆ ಸಲ್ಲುತ್ತಿದೆ. ಆದರೆ, ರಾಜ್ಯದ `ಜಿಡಿಪಿ'ಗೆ ಪರಿಕರ ತಯಾರಿಕಾ ಕ್ಷೇತ್ರ ಶೇ 25ಕ್ಕಿಂತ ಕಡಿಮೆ ಮತ್ತು ಸೇವಾ ಕ್ಷೇತ್ರ ಶೇ 59ರಷ್ಟು ಕಾಣಿಕೆ ನೀಡುತ್ತಿವೆ. ಆದರೆ, ಈ ಎರಡೂ ವಲಯ ಅಪಾರ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಿವೆ. ಹಾಗಾಗಿಯೇ ಸರ್ಕಾರವೂ ಈ ಉದ್ಯಮಗಳತ್ತ ಹೆಚ್ಚು ಗಮನ ಹರಿಸುತ್ತಿದೆ ಎಂದರು.<br /> <br /> <strong>ವಿದ್ಯುತ್-ಸ್ವಾವಲಂಬನೆ</strong><br /> ಕೈಗಾರಿಕೆ ಸ್ಥಾಪನೆಗೆ ಮೂಲ ಸೌಕರ್ಯ ಒದಗಿಸುವುದರಲ್ಲಿ ಸರ್ಕಾರ ಸದಾ ಮುಂದಿದೆ. ವಿದ್ಯುತ್ ಸರಬರಾಜು ಬಗ್ಗೆ ಉದ್ಯಮಿಗಳು ಚಿಂತಿಸಬೇಕಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಹಲವು ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.<br /> <br /> ನವೀಕರಿಸಬಹುದಾದ ಮತ್ತು ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ರಾಜ್ಯದಲ್ಲಿ ವಿಪುಲ ಅವಕಾಶಗಳಿದ್ದು, ಖಾಸಗಿ ಕಂಪೆನಿಗಳೂ ಈ ವಿಭಾಗದಲ್ಲಿ ಕಾರ್ಯನಿರತವಾಗಿವೆ. ಕರ್ನಾಟಕ 2020ರ ವೇಳೆಗೆ `ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ರಾಜ್ಯ' ಎನಿಸಿಕೊಳ್ಳಲಿದೆ. ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ವಿಭಾಗದಲ್ಲಿ ಪೂರ್ಣ ಸ್ವಾವಲಂಬನೆ ಸಾಧಿಸಲಿದೆ ಎಂದು ಭರವಸೆಯ ಮಾತನಾಡಿದರು.<br /> <br /> <strong>ಗಣಿಗಾರಿಕೆ ಅನುಮತಿ<br /> `</strong>ಟಾಟಾ ಸ್ಟೀಲ್'ನ ಮುತ್ತುರಾಮನ್ ಅವರು ಕೇಳಿದ ಗಣಿಗಾರಿಕೆ ಅನುಮತಿ ಕುರಿತ ಪ್ರಶ್ನೆಗೆ, `ಕಬ್ಬಿಣದ ಅದಿರು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸದ್ಯ ಸಿಬಿಐ ತನಿಖೆ ನಡೆಯುತ್ತಿದೆ. ಹಾಗಿದ್ದೂ ಅದಿರು ಮೌಲ್ಯವರ್ಧಿಸಿ ಉಕ್ಕು ತಯಾರಿಸಲು ಇಚ್ಛಿಸುವ ಕಂಪೆನಿಗಳಿಗೆ ಗಣಿಗಾರಿಕೆಗೆ ಅನುಮತಿ ನೀಡಲು ಅಡ್ಡಿ ಇಲ್ಲ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆಯೇ ಸರ್ಕಾರ ನಡೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ಉತ್ತರಿಸಿದರು.<br /> <br /> `ಸಿಐಐ' ಅಧ್ಯಕ್ಷ ಎಸ್.ಗೋಪಾಲಕೃಷ್ಣನ್ ಮನವಿ ಪತ್ರ ಸಲ್ಲಿಸಿದರು. ದೇಶದ ವಿವಿಧೆಡೆ ಪ್ರಮುಖ ಉದ್ಯಮಿಗಳು, `ಸಿಐಐ' ಪ್ರತಿನಿಧಿಗಳು ಇದ್ದರು.</p>.<p><strong>ಜನವರಿಗೆ ನೂತನ ಕೈಗಾರಿಕಾ ನೀತಿ</strong><br /> ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಸಲುವಾಗಿ `ನೂತನ ಕೈಗಾರಿಕಾ ನೀತಿ'ಯನ್ನು ಮುಂದಿನ ಜನವರಿಗೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.<br /> <br /> ನೂತನ ಕೈಗಾರಿಕಾ ನೀತಿ ರೂಪಿಸುವಲ್ಲಿ ಕೈಗಾರಿಕೆ ವಲಯದ ಪ್ರಾತಿನಿಧಿಕ ಸಂಸ್ಥೆಗಳು ಮತ್ತು ಉದ್ಯಮಿಗಳ ಸಹಕಾರವೂ ಅಗತ್ಯ. ಸದ್ಯ `ಸಿಐಐ' ಸಿದ್ಧಪಡಿಸಿರುವ `ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆ ಪರಿಸ್ಥಿತಿ' ಕುರಿತ ವರದಿಯ ಅಂಶಗಳೂ ನೂತನ ನೀತಿ ರೂಪಿಸುವಲ್ಲಿ ಸಹಕಾರಿಯಾಗಲಿವೆ ಎಂದು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>