<p><strong>ಬೆಂಗಳೂರು: </strong>`ಯುಪಿಎ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದೆ' ಎಂದು ವಿರೋಧಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ ಉಲ್ಲೇಖಿಸಿದ್ದು ವಿಧಾನ ಪರಿಷತ್ನಲ್ಲಿ ಶುಕ್ರವಾರ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ವಿರೋಧಪಕ್ಷ ಸದಸ್ಯರು ವಿಷಯ ಮಂಡಿಸುವಾಗ ಕಾಂಗ್ರೆಸ್ ಸದಸ್ಯರು ಅಡ್ಡಿಪಡಿಸುತ್ತಾರೆ ಎಂದು ಆಕ್ಷೇಪಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.<br /> <br /> ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕರಿಸುವ ಕುರಿತು ಮಾತನಾಡಿದ ಸದಾನಂದ ಗೌಡ, `ರಾಜ್ಯದ ಭ್ರಷ್ಟಾಚಾರ ತಲೆ ತಗ್ಗಿಸುವಂತಹುದು ಎಂದು ರಾಜ್ಯಪಾಲರು ಕಿಡಿಕಾರಿದ್ದಾರೆ. ಆದರೆ, ಯುಪಿಎ ಸರ್ಕಾರ ಐದು ವರ್ಷಗಳಲ್ಲಿ 6.5 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರ ಎಸಗಿದೆ' ಎಂದು ಆರೋಪಿಸಿದರು.<br /> <br /> ಈ ಹೇಳಿಕೆ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಕೆರಳಿಸಿತು. `ಸದಾನಂದ ಗೌಡರು ಇಲ್ಲಿ ಅನವಶ್ಯಕ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ರಾಜ್ಯಪಾಲರ ಭಾಷಣಕ್ಕೂ ಯುಪಿಎ ಸರ್ಕಾರಕ್ಕೂ ಏನು ಸಂಬಂಧ' ಎಂದು ಅವರು ಪ್ರಶ್ನಿಸಿದರು. ದೇಶಪಾಂಡೆ ಬೆಂಬಲಕ್ಕೆ ಆಡಳಿತ ಪಕ್ಷದ ಸದಸ್ಯರು ಧಾವಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಆರೋಪ-ಪ್ರತ್ಯಾರೋಪ ಮಾಡಿದರು. ಈ ಸಂದರ್ಭ ಗದ್ದಲದ ವಾತಾವರಣ ನಿರ್ಮಾಣವಾಯಿತು.<br /> <br /> ಸಭಾಪತಿ ಡಿ.ಎಚ್.ಶಂಕರಮೂರ್ತಿ, `ಸದನದಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಲು ಅವಕಾಶ ಇಲ್ಲ. ಆದರೆ, ಸದಸ್ಯರು ಯಾವ ವಿಷಯ ಮಾತನಾಡಬೇಕು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಆ ವಿಷಯ ಸದಸ್ಯರ ವಿವೇಚನೆಗೆ ಬಿಟ್ಟಿದ್ದು' ಎಂದು ಸ್ಪಷ್ಟಪಡಿಸಿದರು.</p>.<p>ಸಭಾನಾಯಕ ಎಸ್.ಆರ್.ಪಾಟೀಲ್, `ಸದಸ್ಯರು ನಿಯಮ ಮೀರಿ ಮಾತನಾಡಿದಾಗ ನಿಯಂತ್ರಣ ಹೇರಬೇಕು' ಎಂದು ಮನವಿ ಮಾಡಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಾನಂದಗೌಡ, `ಆಡಳಿತ ಪಕ್ಷದ ನಿರ್ದೇಶನದ ಪ್ರಕಾರ, ನೀವು ಹೇಳಿದ ಹಾಗೆ ನಾವು ಮಾತನಾಡಬೇಕಾ?' ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗಲೂ ಗದ್ದಲದ ವಾತಾವರಣ ನಿರ್ಮಾಣವಾಯಿತು.</p>.<p>ಸಚಿವ ಅಭಯಚಂದ್ರ ಜೈನ್ ಹಾಗೂ ಕಾಂಗ್ರೆಸ್ನ ಪ್ರತಾಪ್ಚಂದ್ರ ಶೆಟ್ಟಿ, `ಹೊರಗೆ ಹೋಗುವುದಿದ್ದರೆ ಬೇಗ ಹೋಗಿ' ಎಂದು ಬಿಜೆಪಿ ಸದಸ್ಯರನ್ನು ಕೆಣಕಿದರು. ಈ ನುಡಿ ಬಿಜೆಪಿ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಲು ಮುಂದಾದರು.<br /> <br /> ಸದಸ್ಯರ ನಡವಳಿಕೆಗೆ ಬೇಸರ ವ್ಯಕ್ತಪಡಿಸಿದ ಡಿ.ಎಚ್.ಶಂಕರಮೂರ್ತಿ, `ಇದು ಅತಿಯಾಯಿತು. ಸದನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕಾದುದು ಎಲ್ಲರ ಜವಾಬ್ದಾರಿ. ಇಲ್ಲಿ ಆಡಳಿತ ಪಕ್ಷದ ಜವಾಬ್ದಾರಿ ಜಾಸ್ತಿ ಇದೆ' ಎಂದು ಕಿವಿಮಾತು ಹೇಳಿದರು.<br /> <br /> ಸದಾನಂದ ಗೌಡ ಮಾತನಾಡಿ, `ಸಭಾನಾಯಕರು ಒಳ್ಳೆಯ ವ್ಯಕ್ತಿ. ಕೆಳಮನೆಯಿಂದ ಬಂದ ಸಚಿವರು ಗಲಾಟೆ ಮಾಡುತ್ತಿದ್ದಾರೆ. ಯುಪಿಎ ಹೆಸರು ಉಲ್ಲೇಖವಾಗುತ್ತಿದ್ದಂತೆ ಅವರು ಉರಿದು ಬೀಳುತ್ತಿದ್ದಾರೆ. ಅವರಿಗೆ ಎಲ್ಲ ಬಯಲಾಗುತ್ತದೆ ಎಂಬ ಭಯ' ಎಂದು ಟೀಕಿಸಿದರು. ಈ ಮಾತಿಗೆ ಸಚಿವರಾದ ಆರ್.ವಿ.ದೇಶಪಾಂಡೆ, ವಿನಯಕುಮಾರ್ ಸೊರಕೆ, ಬಿ.ರಮಾನಾಥ ರೈ, ಅಭಯಚಂದ್ರ ಜೈನ್ ವಿರೋಧ ವ್ಯಕ್ತಪಡಿಸಿದರು.<br /> <br /> `ವಿಧಾನಪರಿಷತ್ಗೆ ಸಚಿವರು ಬರುವುದು ಬೇಡ ಎಂಬ ಆದೇಶ ಮಾಡಿಸಿ. ನಾವು ಇಲ್ಲಿಗೆ ಬರುವುದಿಲ್ಲ' ಎಂದು ದೇಶಪಾಂಡೆ ತಿರುಗೇಟು ನೀಡಿದರು.ಜೆಡಿಎಸ್ನ ಹಿರಿಯ ಸದಸ್ಯ ಎಂ.ಸಿ.ನಾಣಯ್ಯ ಮಧ್ಯಪ್ರವೇಶಿಸಿ, `ವಿರೋಧ ಪಕ್ಷದ ಸದಸ್ಯರು ವ್ಯಂಗ್ಯ, ಹಾಸ್ಯದ ಮೂಲಕ ಸರ್ಕಾರವನ್ನು ಮೂದಲಿಸುವ ಕೆಲಸ ಮಾಡಬೇಕು. ಸದನದಲ್ಲಿ ಆರೋಗ್ಯಕರ ಚರ್ಚೆ ಆಗಬೇಕು.</p>.<p>ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲೂ ಆಡಳಿತ ಪಕ್ಷದ ಸದಸ್ಯರು ಕೈಮಡಚಿ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದರು' ಎಂದು ನೆನಪಿಸಿದರು. `ನಾಣಯ್ಯ ಅವರು ಸದನದ ಹಾದಿ ತಪ್ಪಿಸುತ್ತಿದ್ದಾರೆ' ಎಂದು ಡಿ.ವಿ.ಎಸ್. ದೂರಿದರು. `ನಾನು ಯಾವತ್ತೂ ಸದನದ ಹಾದಿ ತಪ್ಪಿಸುವ ಕೆಲಸ ಮಾಡಿಲ್ಲ' ಎಂದು ನಾಣಯ್ಯ ನುಡಿದರು.<br /> <br /> ಆಡಳಿತ ಪಕ್ಷದ ಸದಸ್ಯರು ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಡಿ.ವಿ.ಸದಾನಂದ ಗೌಡ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಜೆಡಿಎಸ್ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, `ಸಭಾಪತಿಯವರು ಅಸಹಾಯಕತೆ ವ್ಯಕ್ತಪಡಿಸುವುದು ಸರಿಯಲ್ಲ. ತಪ್ಪು ಮಾಡಿದ ಸದಸ್ಯರನ್ನು ಸದನದಿಂದ ಹೊರಕ್ಕೆ ಹಾಕಿ' ಎಂದು ಸಲಹೆ ನೀಡಿದರು. ಬಳಿಕ ಸಭಾಪತಿ ಅವರು ಸದನವನ್ನು 15 ನಿಮಿಷ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಯುಪಿಎ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದೆ' ಎಂದು ವಿರೋಧಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ ಉಲ್ಲೇಖಿಸಿದ್ದು ವಿಧಾನ ಪರಿಷತ್ನಲ್ಲಿ ಶುಕ್ರವಾರ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ವಿರೋಧಪಕ್ಷ ಸದಸ್ಯರು ವಿಷಯ ಮಂಡಿಸುವಾಗ ಕಾಂಗ್ರೆಸ್ ಸದಸ್ಯರು ಅಡ್ಡಿಪಡಿಸುತ್ತಾರೆ ಎಂದು ಆಕ್ಷೇಪಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.<br /> <br /> ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕರಿಸುವ ಕುರಿತು ಮಾತನಾಡಿದ ಸದಾನಂದ ಗೌಡ, `ರಾಜ್ಯದ ಭ್ರಷ್ಟಾಚಾರ ತಲೆ ತಗ್ಗಿಸುವಂತಹುದು ಎಂದು ರಾಜ್ಯಪಾಲರು ಕಿಡಿಕಾರಿದ್ದಾರೆ. ಆದರೆ, ಯುಪಿಎ ಸರ್ಕಾರ ಐದು ವರ್ಷಗಳಲ್ಲಿ 6.5 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರ ಎಸಗಿದೆ' ಎಂದು ಆರೋಪಿಸಿದರು.<br /> <br /> ಈ ಹೇಳಿಕೆ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಕೆರಳಿಸಿತು. `ಸದಾನಂದ ಗೌಡರು ಇಲ್ಲಿ ಅನವಶ್ಯಕ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ರಾಜ್ಯಪಾಲರ ಭಾಷಣಕ್ಕೂ ಯುಪಿಎ ಸರ್ಕಾರಕ್ಕೂ ಏನು ಸಂಬಂಧ' ಎಂದು ಅವರು ಪ್ರಶ್ನಿಸಿದರು. ದೇಶಪಾಂಡೆ ಬೆಂಬಲಕ್ಕೆ ಆಡಳಿತ ಪಕ್ಷದ ಸದಸ್ಯರು ಧಾವಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಆರೋಪ-ಪ್ರತ್ಯಾರೋಪ ಮಾಡಿದರು. ಈ ಸಂದರ್ಭ ಗದ್ದಲದ ವಾತಾವರಣ ನಿರ್ಮಾಣವಾಯಿತು.<br /> <br /> ಸಭಾಪತಿ ಡಿ.ಎಚ್.ಶಂಕರಮೂರ್ತಿ, `ಸದನದಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಲು ಅವಕಾಶ ಇಲ್ಲ. ಆದರೆ, ಸದಸ್ಯರು ಯಾವ ವಿಷಯ ಮಾತನಾಡಬೇಕು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಆ ವಿಷಯ ಸದಸ್ಯರ ವಿವೇಚನೆಗೆ ಬಿಟ್ಟಿದ್ದು' ಎಂದು ಸ್ಪಷ್ಟಪಡಿಸಿದರು.</p>.<p>ಸಭಾನಾಯಕ ಎಸ್.ಆರ್.ಪಾಟೀಲ್, `ಸದಸ್ಯರು ನಿಯಮ ಮೀರಿ ಮಾತನಾಡಿದಾಗ ನಿಯಂತ್ರಣ ಹೇರಬೇಕು' ಎಂದು ಮನವಿ ಮಾಡಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಾನಂದಗೌಡ, `ಆಡಳಿತ ಪಕ್ಷದ ನಿರ್ದೇಶನದ ಪ್ರಕಾರ, ನೀವು ಹೇಳಿದ ಹಾಗೆ ನಾವು ಮಾತನಾಡಬೇಕಾ?' ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗಲೂ ಗದ್ದಲದ ವಾತಾವರಣ ನಿರ್ಮಾಣವಾಯಿತು.</p>.<p>ಸಚಿವ ಅಭಯಚಂದ್ರ ಜೈನ್ ಹಾಗೂ ಕಾಂಗ್ರೆಸ್ನ ಪ್ರತಾಪ್ಚಂದ್ರ ಶೆಟ್ಟಿ, `ಹೊರಗೆ ಹೋಗುವುದಿದ್ದರೆ ಬೇಗ ಹೋಗಿ' ಎಂದು ಬಿಜೆಪಿ ಸದಸ್ಯರನ್ನು ಕೆಣಕಿದರು. ಈ ನುಡಿ ಬಿಜೆಪಿ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಲು ಮುಂದಾದರು.<br /> <br /> ಸದಸ್ಯರ ನಡವಳಿಕೆಗೆ ಬೇಸರ ವ್ಯಕ್ತಪಡಿಸಿದ ಡಿ.ಎಚ್.ಶಂಕರಮೂರ್ತಿ, `ಇದು ಅತಿಯಾಯಿತು. ಸದನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕಾದುದು ಎಲ್ಲರ ಜವಾಬ್ದಾರಿ. ಇಲ್ಲಿ ಆಡಳಿತ ಪಕ್ಷದ ಜವಾಬ್ದಾರಿ ಜಾಸ್ತಿ ಇದೆ' ಎಂದು ಕಿವಿಮಾತು ಹೇಳಿದರು.<br /> <br /> ಸದಾನಂದ ಗೌಡ ಮಾತನಾಡಿ, `ಸಭಾನಾಯಕರು ಒಳ್ಳೆಯ ವ್ಯಕ್ತಿ. ಕೆಳಮನೆಯಿಂದ ಬಂದ ಸಚಿವರು ಗಲಾಟೆ ಮಾಡುತ್ತಿದ್ದಾರೆ. ಯುಪಿಎ ಹೆಸರು ಉಲ್ಲೇಖವಾಗುತ್ತಿದ್ದಂತೆ ಅವರು ಉರಿದು ಬೀಳುತ್ತಿದ್ದಾರೆ. ಅವರಿಗೆ ಎಲ್ಲ ಬಯಲಾಗುತ್ತದೆ ಎಂಬ ಭಯ' ಎಂದು ಟೀಕಿಸಿದರು. ಈ ಮಾತಿಗೆ ಸಚಿವರಾದ ಆರ್.ವಿ.ದೇಶಪಾಂಡೆ, ವಿನಯಕುಮಾರ್ ಸೊರಕೆ, ಬಿ.ರಮಾನಾಥ ರೈ, ಅಭಯಚಂದ್ರ ಜೈನ್ ವಿರೋಧ ವ್ಯಕ್ತಪಡಿಸಿದರು.<br /> <br /> `ವಿಧಾನಪರಿಷತ್ಗೆ ಸಚಿವರು ಬರುವುದು ಬೇಡ ಎಂಬ ಆದೇಶ ಮಾಡಿಸಿ. ನಾವು ಇಲ್ಲಿಗೆ ಬರುವುದಿಲ್ಲ' ಎಂದು ದೇಶಪಾಂಡೆ ತಿರುಗೇಟು ನೀಡಿದರು.ಜೆಡಿಎಸ್ನ ಹಿರಿಯ ಸದಸ್ಯ ಎಂ.ಸಿ.ನಾಣಯ್ಯ ಮಧ್ಯಪ್ರವೇಶಿಸಿ, `ವಿರೋಧ ಪಕ್ಷದ ಸದಸ್ಯರು ವ್ಯಂಗ್ಯ, ಹಾಸ್ಯದ ಮೂಲಕ ಸರ್ಕಾರವನ್ನು ಮೂದಲಿಸುವ ಕೆಲಸ ಮಾಡಬೇಕು. ಸದನದಲ್ಲಿ ಆರೋಗ್ಯಕರ ಚರ್ಚೆ ಆಗಬೇಕು.</p>.<p>ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲೂ ಆಡಳಿತ ಪಕ್ಷದ ಸದಸ್ಯರು ಕೈಮಡಚಿ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದರು' ಎಂದು ನೆನಪಿಸಿದರು. `ನಾಣಯ್ಯ ಅವರು ಸದನದ ಹಾದಿ ತಪ್ಪಿಸುತ್ತಿದ್ದಾರೆ' ಎಂದು ಡಿ.ವಿ.ಎಸ್. ದೂರಿದರು. `ನಾನು ಯಾವತ್ತೂ ಸದನದ ಹಾದಿ ತಪ್ಪಿಸುವ ಕೆಲಸ ಮಾಡಿಲ್ಲ' ಎಂದು ನಾಣಯ್ಯ ನುಡಿದರು.<br /> <br /> ಆಡಳಿತ ಪಕ್ಷದ ಸದಸ್ಯರು ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಡಿ.ವಿ.ಸದಾನಂದ ಗೌಡ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಜೆಡಿಎಸ್ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, `ಸಭಾಪತಿಯವರು ಅಸಹಾಯಕತೆ ವ್ಯಕ್ತಪಡಿಸುವುದು ಸರಿಯಲ್ಲ. ತಪ್ಪು ಮಾಡಿದ ಸದಸ್ಯರನ್ನು ಸದನದಿಂದ ಹೊರಕ್ಕೆ ಹಾಕಿ' ಎಂದು ಸಲಹೆ ನೀಡಿದರು. ಬಳಿಕ ಸಭಾಪತಿ ಅವರು ಸದನವನ್ನು 15 ನಿಮಿಷ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>