<p><strong>ಬೆಂಗಳೂರು: </strong>ಫ್ರಿಜ್ ಹಾಗೂ ಎಲ್ಇಡಿ ಟಿವಿಗಳನ್ನು ತುಂಬಿದ್ದ ಕ್ಯಾಂಟರ್ ಕಳವು ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳು, ಕೃತ್ಯ ಎಸಗಿದ 24 ತಾಸುಗಳಲ್ಲೇ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ.<br /> <br /> ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಪ್ರದೀಪ್ (25) ಹಾಗೂ ಆತನ ಸ್ನೇಹಿತ ಸಿ.ಎಚ್.ವೆಂಕಟೇಶ್ ಅಲಿಯಾಸ್ ಅರುಣ (25) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ವಿವಿಧ ಕಂಪೆನಿಗಳ 11 ಎಲ್ಇಡಿ ಟಿವಿಗಳು, ಫ್ರಿಜ್ ಹಾಗೂ ಸರಕು ಸಾಗಣೆ ಆಟೊವನ್ನು ಜಪ್ತಿ ಮಾಡಲಾಗಿದೆ.<br /> <br /> ಗೋಕುಲ್ದಾಸ್ ಪೈ ಎಂಬುವರು ಬನಶಂಕರಿಯಲ್ಲಿ ಟ್ರಾನ್ಸ್ಪೋರ್ಟ್ ಏಜೆನ್ಸಿ ನಡೆಸುತ್ತಿದ್ದು, ಅವರ ಬಳಿ ಪ್ರದೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇನ್ನು, ಮೊದಲು ಇದೇ ಏಜೆನ್ಸಿಯಲ್ಲಿ ಚಾಲಕನಾಗಿದ್ದ ಮತ್ತೊಬ್ಬ ಆರೋಪಿ ಅರುಣ್, ನಾಲ್ಕು ತಿಂಗಳ ಹಿಂದೆ ಬೇರೆಡೆ ಕೆಲಸಕ್ಕೆ ಸೇರಿದ್ದ.</p>.<p><br /> ರಾಮನಗರದ ವಂಡರ್ಲಾ ಗೇಟ್ ಬಳಿ ನೆಲೆಸಿದ್ದ ಈ ಇಬ್ಬರೂ, ಮೋಜಿನ ಜೀವನಕ್ಕಾಗಿ ಸಾಲ ಮಾಡಿಕೊಂಡಿದ್ದರು. ಸಾಲಗಾರರು ಹಣಕ್ಕಾಗಿ ನಿತ್ಯ ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಿದ್ದ ಕಾರಣ ಕಳವು ಮಾಡಲು ಸಂಚು ರೂಪಿಸಿದರು.<br /> <br /> ಸೆ.21ರಂದು ಹೆಬ್ಬಗೋಡಿ ಸಮೀಪದ ಶೋರೂಂನಿಂದ ಫ್ರಿಜ್ ಹಾಗೂ 11 ಎಲ್ಇಡಿಗಳನ್ನು ಮೈಸೂರಿಗೆ ಸಾಗಿಸಬೇಕಿತ್ತು. ಸರಕನ್ನು ಕ್ಯಾಂಟರ್ಗೆ ತುಂಬಿದ ಪ್ರದೀಪ್, ಕತ್ತಲಾದ ಕಾರಣ ಮಾಲೀಕರ ಸೂಚನೆಯಂತೆ ಮರುದಿನ ಬೆಳಿಗ್ಗೆ ಹೋಗಲು ನಿರ್ಧರಿಸಿದ್ದ.<br /> <br /> ನಂತರ ಬನಶಂಕರಿ ಸಮೀಪದ ಭುವನೇಶ್ವರಿ ನಗರದಲ್ಲಿರುವ ಪೈ ಅವರ ಮನೆ ಮುಂದೆ ಕ್ಯಾಂಟರ್ ನಿಲ್ಲಿಸಿ ಮನೆಗೆ ತೆರಳಿದ್ದ ಆತ, ಸ್ವಲ್ಪ ಸಮಯದ ನಂತರ ಸಹಚರನ ಜತೆ ಮತ್ತೆ ಅಲ್ಲಿಗೆ ಬಂದಿದ್ದ. ಯಾವುದೇ ಕೀ ಹಾಕಿದರೂ ಕ್ಯಾಂಟರ್ ಚಾಲನೆ ಆಗುತ್ತಿತ್ತು. ಈ ಬಗ್ಗೆ ಅರಿತಿದ್ದ ಆರೋಪಿಗಳು, ರಾತ್ರೋರಾತ್ರಿ ಕ್ಯಾಂಟರ್ ಕಳವು ಮಾಡಿಕೊಂಡು ಹೋಗಿದ್ದರು.<br /> <br /> ನೈಸ್ ರಸ್ತೆಯಲ್ಲಿ ಫ್ರಿಜ್ ಮತ್ತು ಎಲ್ಇಡಿಗಳನ್ನು ಸರಕು ಸಾಗಣೆ ಆಟೊಗೆ ಸ್ಥಳಾಂತರಿಸಿದ ಅವರು, ಕ್ಯಾಂಟರನ್ನು ಅಲ್ಲೇ ಬಿಟ್ಟು ಆಟೊದಲ್ಲಿ ಪರಾರಿಯಾಗಿದ್ದರು. ಮರುದಿನ ಬೆಳಿಗ್ಗೆ 6.30ಕ್ಕೆ ಪೈ ಎಚ್ಚರಗೊಂಡಾಗ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಅವರು ಸಿ.ಕೆ.ಅಚ್ಚುಕಟ್ಟು ಠಾಣೆಗೆ ದೂರು ಕೊಟ್ಟರು.<br /> <br /> <strong>ಕ್ಯಾಮೆರಾ ಸುಳಿವು:</strong> ‘ನೈಸ್ ರಸ್ತೆಯಲ್ಲಿ ಪೈ ಅವರು ಕ್ಯಾಂಟರ್ ಪತ್ತೆಯಾಯಿತು. ಟೋಲ್ ಬಳಿ ಇದ್ದ ಸಿ.ಸಿ ಟಿ.ವಿ ಕ್ಯಾಮರಾ ಪರಿಶೀಲಿಸಿದಾಗ ರಾತ್ರಿ ಆ ಕ್ಯಾಂಟರ್ ಹಿಂದೆಯೇ ಸರಕು ಸಾಗಣೆ ಆಟೊ ಬರುತ್ತಿದ್ದ ದೃಶ್ಯ ಸಿಕ್ಕಿತು. ಅನುಮಾನದ ಮೇಲೆ ಆ ವಾಹನದ ನೋಂದಣಿ ಸಂಖ್ಯೆ ಪಡೆದು ತನಿಖೆ ನಡೆಸಿದಾಗ, ಅದು ಮದ್ದೂರಿನ ವ್ಯಕ್ತಿ ಹೆಸರಲ್ಲಿರುವುದು ಗೊತ್ತಾಯಿತು’ ಎಂದು ತನಿಖಾಧಿಕಾರಿಗಳು ತಿಳಿಸಿದರು.<br /> <br /> ‘ಮದ್ದೂರಿಗೆ ಹೋಗಿ ಆ ವ್ಯಕ್ತಿಯನ್ನು ವಿಚಾರಿಸಿದಾಗ, ವಾಹನವನ್ನು ಅರುಣ್ಗೆ ಬಾಡಿಗೆ ಕೊಟ್ಟಿದ್ದಾಗಿ ಹೇಳಿದರು. ನಂತರ ಆತನ ಮನೆ ಮೇಲೆ ದಾಳಿ ನಡೆಸಿದಾಗ ಫ್ರಿಜ್ ಹಾಗೂ ಎಲ್ಇಡಿ ಗಳೊಂದಿಗೆ ಇಬ್ಬರೂ ಸಿಕ್ಕಿಬಿದ್ದರು’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಫ್ರಿಜ್ ಹಾಗೂ ಎಲ್ಇಡಿ ಟಿವಿಗಳನ್ನು ತುಂಬಿದ್ದ ಕ್ಯಾಂಟರ್ ಕಳವು ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳು, ಕೃತ್ಯ ಎಸಗಿದ 24 ತಾಸುಗಳಲ್ಲೇ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ.<br /> <br /> ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಪ್ರದೀಪ್ (25) ಹಾಗೂ ಆತನ ಸ್ನೇಹಿತ ಸಿ.ಎಚ್.ವೆಂಕಟೇಶ್ ಅಲಿಯಾಸ್ ಅರುಣ (25) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ವಿವಿಧ ಕಂಪೆನಿಗಳ 11 ಎಲ್ಇಡಿ ಟಿವಿಗಳು, ಫ್ರಿಜ್ ಹಾಗೂ ಸರಕು ಸಾಗಣೆ ಆಟೊವನ್ನು ಜಪ್ತಿ ಮಾಡಲಾಗಿದೆ.<br /> <br /> ಗೋಕುಲ್ದಾಸ್ ಪೈ ಎಂಬುವರು ಬನಶಂಕರಿಯಲ್ಲಿ ಟ್ರಾನ್ಸ್ಪೋರ್ಟ್ ಏಜೆನ್ಸಿ ನಡೆಸುತ್ತಿದ್ದು, ಅವರ ಬಳಿ ಪ್ರದೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇನ್ನು, ಮೊದಲು ಇದೇ ಏಜೆನ್ಸಿಯಲ್ಲಿ ಚಾಲಕನಾಗಿದ್ದ ಮತ್ತೊಬ್ಬ ಆರೋಪಿ ಅರುಣ್, ನಾಲ್ಕು ತಿಂಗಳ ಹಿಂದೆ ಬೇರೆಡೆ ಕೆಲಸಕ್ಕೆ ಸೇರಿದ್ದ.</p>.<p><br /> ರಾಮನಗರದ ವಂಡರ್ಲಾ ಗೇಟ್ ಬಳಿ ನೆಲೆಸಿದ್ದ ಈ ಇಬ್ಬರೂ, ಮೋಜಿನ ಜೀವನಕ್ಕಾಗಿ ಸಾಲ ಮಾಡಿಕೊಂಡಿದ್ದರು. ಸಾಲಗಾರರು ಹಣಕ್ಕಾಗಿ ನಿತ್ಯ ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಿದ್ದ ಕಾರಣ ಕಳವು ಮಾಡಲು ಸಂಚು ರೂಪಿಸಿದರು.<br /> <br /> ಸೆ.21ರಂದು ಹೆಬ್ಬಗೋಡಿ ಸಮೀಪದ ಶೋರೂಂನಿಂದ ಫ್ರಿಜ್ ಹಾಗೂ 11 ಎಲ್ಇಡಿಗಳನ್ನು ಮೈಸೂರಿಗೆ ಸಾಗಿಸಬೇಕಿತ್ತು. ಸರಕನ್ನು ಕ್ಯಾಂಟರ್ಗೆ ತುಂಬಿದ ಪ್ರದೀಪ್, ಕತ್ತಲಾದ ಕಾರಣ ಮಾಲೀಕರ ಸೂಚನೆಯಂತೆ ಮರುದಿನ ಬೆಳಿಗ್ಗೆ ಹೋಗಲು ನಿರ್ಧರಿಸಿದ್ದ.<br /> <br /> ನಂತರ ಬನಶಂಕರಿ ಸಮೀಪದ ಭುವನೇಶ್ವರಿ ನಗರದಲ್ಲಿರುವ ಪೈ ಅವರ ಮನೆ ಮುಂದೆ ಕ್ಯಾಂಟರ್ ನಿಲ್ಲಿಸಿ ಮನೆಗೆ ತೆರಳಿದ್ದ ಆತ, ಸ್ವಲ್ಪ ಸಮಯದ ನಂತರ ಸಹಚರನ ಜತೆ ಮತ್ತೆ ಅಲ್ಲಿಗೆ ಬಂದಿದ್ದ. ಯಾವುದೇ ಕೀ ಹಾಕಿದರೂ ಕ್ಯಾಂಟರ್ ಚಾಲನೆ ಆಗುತ್ತಿತ್ತು. ಈ ಬಗ್ಗೆ ಅರಿತಿದ್ದ ಆರೋಪಿಗಳು, ರಾತ್ರೋರಾತ್ರಿ ಕ್ಯಾಂಟರ್ ಕಳವು ಮಾಡಿಕೊಂಡು ಹೋಗಿದ್ದರು.<br /> <br /> ನೈಸ್ ರಸ್ತೆಯಲ್ಲಿ ಫ್ರಿಜ್ ಮತ್ತು ಎಲ್ಇಡಿಗಳನ್ನು ಸರಕು ಸಾಗಣೆ ಆಟೊಗೆ ಸ್ಥಳಾಂತರಿಸಿದ ಅವರು, ಕ್ಯಾಂಟರನ್ನು ಅಲ್ಲೇ ಬಿಟ್ಟು ಆಟೊದಲ್ಲಿ ಪರಾರಿಯಾಗಿದ್ದರು. ಮರುದಿನ ಬೆಳಿಗ್ಗೆ 6.30ಕ್ಕೆ ಪೈ ಎಚ್ಚರಗೊಂಡಾಗ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಅವರು ಸಿ.ಕೆ.ಅಚ್ಚುಕಟ್ಟು ಠಾಣೆಗೆ ದೂರು ಕೊಟ್ಟರು.<br /> <br /> <strong>ಕ್ಯಾಮೆರಾ ಸುಳಿವು:</strong> ‘ನೈಸ್ ರಸ್ತೆಯಲ್ಲಿ ಪೈ ಅವರು ಕ್ಯಾಂಟರ್ ಪತ್ತೆಯಾಯಿತು. ಟೋಲ್ ಬಳಿ ಇದ್ದ ಸಿ.ಸಿ ಟಿ.ವಿ ಕ್ಯಾಮರಾ ಪರಿಶೀಲಿಸಿದಾಗ ರಾತ್ರಿ ಆ ಕ್ಯಾಂಟರ್ ಹಿಂದೆಯೇ ಸರಕು ಸಾಗಣೆ ಆಟೊ ಬರುತ್ತಿದ್ದ ದೃಶ್ಯ ಸಿಕ್ಕಿತು. ಅನುಮಾನದ ಮೇಲೆ ಆ ವಾಹನದ ನೋಂದಣಿ ಸಂಖ್ಯೆ ಪಡೆದು ತನಿಖೆ ನಡೆಸಿದಾಗ, ಅದು ಮದ್ದೂರಿನ ವ್ಯಕ್ತಿ ಹೆಸರಲ್ಲಿರುವುದು ಗೊತ್ತಾಯಿತು’ ಎಂದು ತನಿಖಾಧಿಕಾರಿಗಳು ತಿಳಿಸಿದರು.<br /> <br /> ‘ಮದ್ದೂರಿಗೆ ಹೋಗಿ ಆ ವ್ಯಕ್ತಿಯನ್ನು ವಿಚಾರಿಸಿದಾಗ, ವಾಹನವನ್ನು ಅರುಣ್ಗೆ ಬಾಡಿಗೆ ಕೊಟ್ಟಿದ್ದಾಗಿ ಹೇಳಿದರು. ನಂತರ ಆತನ ಮನೆ ಮೇಲೆ ದಾಳಿ ನಡೆಸಿದಾಗ ಫ್ರಿಜ್ ಹಾಗೂ ಎಲ್ಇಡಿ ಗಳೊಂದಿಗೆ ಇಬ್ಬರೂ ಸಿಕ್ಕಿಬಿದ್ದರು’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>