<p><strong>`ಒಲಿಂಪಿಕ್ನಿಂದ ಹಿಂದೆ ಸರಿಯುವ ಯೋಚನೆ ಮಾಡಿರಲೇ ಇಲ್ಲ~<br /> ನವದೆಹಲಿ (ಐಎಎನ್ಎಸ್):</strong> `ಲಂಡನ್ ಒಲಿಂಪಿಕ್ ಕ್ರೀಡಾಕೂಟದಿಂದ ಹಿಂದೆ ಸರಿಯುವ ಯೋಚನೆ ಮಾಡಿರಲೇ ಇಲ್ಲ~ ಎಂದು ಕೇಂದ್ರ ಕ್ರೀಡಾ ಸಚಿವ ಅಜಯ್ ,ಮಾಕನ್ ಸ್ಪಷ್ಟಪಡಿಸಿದ್ದಾರೆ.<br /> <br /> ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಖರೀದಿಸಿದ ಡೌ ಕೆಮಿಕಲ್ಸ್ನ ಒಲಿಂಪಿಕ್ ಪ್ರಾಯೋಜಕತ್ವ ರದ್ದು ಪಡಿಸುವ ಭಾರತದ ಮನವಿಯನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತಿರಸ್ಕರಿಸಿದ ನಂತರ ಅದಕ್ಕೆ ಕಟುವಾಗಿ ಪ್ರತಿಕ್ರಿಯೆ ನೀಡಬೇಕಿತ್ತು ಎನ್ನುವ ವಾದವನ್ನು ಒಪ್ಪದ ಅವರು. `ಕ್ರೀಡಾಪಟುಗಳ ಹಿತಕ್ಕೆ ಧಕ್ಕೆ ಆಗುವಂಥ ಯಾವುದೇ ಯೋಚನೆ ನಮ್ಮ ಮನದಲ್ಲಿ ಇರಲಿಲ್ಲ~ ಎಂದು ತಿಳಿಸಿದ್ದಾರೆ.<br /> <br /> <strong>ಚೇತರಿಸಿಕೊಂಡ ಸೆಹ್ವಾಗ್<br /> ನವದೆಹಲಿ (ಪಿಟಿಐ):</strong> ಗಾಯಗೊಂಡ ಕಾರಣದಿಂದ ವಿಶ್ರಾಂತಿ ಪಡೆದಿದ್ದ ವೀರೇಂದ್ರ ಸೆಹ್ವಾಗ್ `ನಾನೀಗ ಆಡಲು ಸಜ್ಜಾಗಿದ್ದೇನೆ~ ಎಂದು ತಿಳಿಸಿದ್ದಾರೆ.<br /> <br /> ಏಷ್ಯಾಕಪ್ ಕ್ರಿಕೆಟ್ಗೆ ತಂಡವನ್ನು ಪ್ರಕಟಿಸಿದ್ದಾಗ `ವೀರೂ~ಗೆ ಒತ್ತಾಯದ ವಿಶ್ರಾಂತಿ ನೀಡಲಾಗಿದೆ ಎಂದು ಆಯ್ಕೆ ಸಮಿತಿ ವಿರುದ್ಧ ಟೀಕೆ ಮಾಡಲಾಗಿತ್ತು. ಅಷ್ಟೇ ಅಲ್ಲ ಅದೇ ಸಂದರ್ಭದಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್ ನೀಡಿದ್ದ ಹೇಳಿಕೆಯೂ ವಿವಾದಕ್ಕೆ ಕಾರಣವಾಗಿತ್ತು. ಆದರೆ ಈ ಎಲ್ಲ ವಿವಾದಕ್ಕೆ ತೆರೆ ಎಳೆದಿರುವ ಸೆಹ್ವಾಗ್ ವಿಶ್ರಾಂತಿಯ ನಂತರ ಚೇತರಿಸಿಕೊಂಡಿದ್ದೇನೆಂದು ಹೇಳಿದ್ದಾರೆ. <br /> <br /> ಬಾಂಗ್ಲಾದೇಶದಲ್ಲಿ ಆಡದಿರುವ ಕಾರಣ ಸಚಿನ್ ತೆಂಡೂಲ್ಕರ್ ಅವರ ನೂರನೇ ಅಂತರರಾಷ್ಟ್ರೀಯ ಶತಕ ಸಾಧನೆಗೆ ಸಾಕ್ಷಿಯಾಗುವ ಅವಕಾಶ ತಪ್ಪಿತೆಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.<br /> <br /> <strong>`ಬುಕ್ ಮೈ ಶೋ~ನಲ್ಲಿ ಐಪಿಎಲ್ ಟಿಕೆಟ್<br /> ನವದೆಹಲಿ (ಪಿಟಿಐ):</strong> ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಟಿಕೆಟ್ ಮಾರಾಟಕ್ಕಾಗಿ `ಬುಕ್ ಮೈ ಶೋ~ ಜೊತೆಗೆ ಐಪಿಎಲ್ ಆಡಳಿತವು ಒಪ್ಪಂದ ಮಾಡಿಕೊಂಡಿದೆ. <a href="http://www.bookmyshow.com">www.bookmyshow.com</a> ನಲ್ಲಿ ಕ್ರಿಕೆಟ್ ಆಸಕ್ತರಿಗೆ ಟಿಕೆಟ್ಗಳು ಲಭ್ಯವಾಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.<br /> <br /> <strong>ಕ್ರಿಕೆಟ್: ದಕ್ಷಿಣ ವಲಯಕ್ಕೆ ಜಯ<br /> ಗುವಾಹಟಿ (ಐಎಎನ್ಎಸ್): </strong>ಸತೀಶ್ ವಿಶ್ವನಾಥ್ (64; 11 ಬೌಂಡರಿ, 1 ಸಿಕ್ಸರ್) ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ವಲಯ ತಂಡದವರು ಭಾರತ ಕ್ರೀಡಾ ಪತ್ರಕರ್ತರ ಫೆಡರೇಷನ್ (ಎಸ್ಜೆಎಫ್ಐ) ಆಶ್ರಯದ ಜೆ.ಕೆ.ಬೋಸ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಲೀಗ್ ಪಂದ್ಯದಲ್ಲಿ ಬುಧವಾರ ಎಂಟು ವಿಕೆಟ್ಗಳ ಅಂತರದಿಂದ ಪಶ್ಚಿಮ ವಲಯ ವಿರುದ್ಧ ಜಯ ಸಾಧಿಸಿದರು.<br /> <br /> ದಕ್ಷಿಣ ವಲಯವನ್ನು ಪ್ರತಿನಿಧಿಸಿರುವ ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್)ದ ಸದಸ್ಯರು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆದರು.<br /> <br /> ಸಂಕ್ಷಿಪ್ತ ಸ್ಕೋರ್: ಪಶ್ಚಿಮ ವಲಯ: 20 ಓವರುಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 174 (ದೇವೇಂದ್ರ ಪಾಂಡೆ 43, ಅಭಿಜಿತ್ ಕುಲಕರ್ಣಿ 32, ಮಲ್ಲಿಕಾಚರಣ ವಾಡಿ 26ಕ್ಕೆ2, ಮೊಹಮ್ಮದ್ ನೂಮಾನ್ 27ಕ್ಕೆ1); ದಕ್ಷಿಣ ವಲಯ: 17.5 ಓವರುಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 176 (ಸತೀಶ್ ವಿಶ್ವನಾಥ್ 64, ಸತೀಶ್ ಪಾಲ್ ಔಟಾಗದೆ 30, ಮಲ್ಲಿಕಾಚರಣ ವಾಡಿ ಔಟಾಗದೆ 28).<br /> <strong><br /> ಹಾಕಿ ಆಟಗಾರರಿಗೆ ಬಹುಮಾನ <br /> ಲಖನೌ (ಪಿಟಿಐ):</strong>ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತ ಹಾಕಿ ತಂಡದವರಿಗೆ ಬಹುಮಾನಗಳ ಮಳೆ ಇನ್ನೂ ಸುರಿಯುತ್ತಲೇ ಇದೆ. <br /> <br /> ಸಹಾರಾ ಇಂಡಿಯನ್ ಪರಿವಾರ್ ಗ್ರೂಪ್ ಬುಧವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ದಾರ್ ಸಿಂಗ್ ಹಾಗೂ ಸಂದೀಪ್ ಸಿಂಗ್ ಅವರಿಗೆ ತಲಾ 11 ಲಕ್ಷ ರೂಪಾಯಿ ಬಹುಮಾನ ನೀಡಿತು.<br /> ಒಟ್ಟಾರೆಯಾಗಿ ಹಾಕಿ ತಂಡಕ್ಕೆ 1 ಕೋಟಿ 16 ಲಕ್ಷ ರೂಪಾಯಿಯನ್ನು ಪ್ರದಾನ ಮಾಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>`ಒಲಿಂಪಿಕ್ನಿಂದ ಹಿಂದೆ ಸರಿಯುವ ಯೋಚನೆ ಮಾಡಿರಲೇ ಇಲ್ಲ~<br /> ನವದೆಹಲಿ (ಐಎಎನ್ಎಸ್):</strong> `ಲಂಡನ್ ಒಲಿಂಪಿಕ್ ಕ್ರೀಡಾಕೂಟದಿಂದ ಹಿಂದೆ ಸರಿಯುವ ಯೋಚನೆ ಮಾಡಿರಲೇ ಇಲ್ಲ~ ಎಂದು ಕೇಂದ್ರ ಕ್ರೀಡಾ ಸಚಿವ ಅಜಯ್ ,ಮಾಕನ್ ಸ್ಪಷ್ಟಪಡಿಸಿದ್ದಾರೆ.<br /> <br /> ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಖರೀದಿಸಿದ ಡೌ ಕೆಮಿಕಲ್ಸ್ನ ಒಲಿಂಪಿಕ್ ಪ್ರಾಯೋಜಕತ್ವ ರದ್ದು ಪಡಿಸುವ ಭಾರತದ ಮನವಿಯನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತಿರಸ್ಕರಿಸಿದ ನಂತರ ಅದಕ್ಕೆ ಕಟುವಾಗಿ ಪ್ರತಿಕ್ರಿಯೆ ನೀಡಬೇಕಿತ್ತು ಎನ್ನುವ ವಾದವನ್ನು ಒಪ್ಪದ ಅವರು. `ಕ್ರೀಡಾಪಟುಗಳ ಹಿತಕ್ಕೆ ಧಕ್ಕೆ ಆಗುವಂಥ ಯಾವುದೇ ಯೋಚನೆ ನಮ್ಮ ಮನದಲ್ಲಿ ಇರಲಿಲ್ಲ~ ಎಂದು ತಿಳಿಸಿದ್ದಾರೆ.<br /> <br /> <strong>ಚೇತರಿಸಿಕೊಂಡ ಸೆಹ್ವಾಗ್<br /> ನವದೆಹಲಿ (ಪಿಟಿಐ):</strong> ಗಾಯಗೊಂಡ ಕಾರಣದಿಂದ ವಿಶ್ರಾಂತಿ ಪಡೆದಿದ್ದ ವೀರೇಂದ್ರ ಸೆಹ್ವಾಗ್ `ನಾನೀಗ ಆಡಲು ಸಜ್ಜಾಗಿದ್ದೇನೆ~ ಎಂದು ತಿಳಿಸಿದ್ದಾರೆ.<br /> <br /> ಏಷ್ಯಾಕಪ್ ಕ್ರಿಕೆಟ್ಗೆ ತಂಡವನ್ನು ಪ್ರಕಟಿಸಿದ್ದಾಗ `ವೀರೂ~ಗೆ ಒತ್ತಾಯದ ವಿಶ್ರಾಂತಿ ನೀಡಲಾಗಿದೆ ಎಂದು ಆಯ್ಕೆ ಸಮಿತಿ ವಿರುದ್ಧ ಟೀಕೆ ಮಾಡಲಾಗಿತ್ತು. ಅಷ್ಟೇ ಅಲ್ಲ ಅದೇ ಸಂದರ್ಭದಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್ ನೀಡಿದ್ದ ಹೇಳಿಕೆಯೂ ವಿವಾದಕ್ಕೆ ಕಾರಣವಾಗಿತ್ತು. ಆದರೆ ಈ ಎಲ್ಲ ವಿವಾದಕ್ಕೆ ತೆರೆ ಎಳೆದಿರುವ ಸೆಹ್ವಾಗ್ ವಿಶ್ರಾಂತಿಯ ನಂತರ ಚೇತರಿಸಿಕೊಂಡಿದ್ದೇನೆಂದು ಹೇಳಿದ್ದಾರೆ. <br /> <br /> ಬಾಂಗ್ಲಾದೇಶದಲ್ಲಿ ಆಡದಿರುವ ಕಾರಣ ಸಚಿನ್ ತೆಂಡೂಲ್ಕರ್ ಅವರ ನೂರನೇ ಅಂತರರಾಷ್ಟ್ರೀಯ ಶತಕ ಸಾಧನೆಗೆ ಸಾಕ್ಷಿಯಾಗುವ ಅವಕಾಶ ತಪ್ಪಿತೆಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.<br /> <br /> <strong>`ಬುಕ್ ಮೈ ಶೋ~ನಲ್ಲಿ ಐಪಿಎಲ್ ಟಿಕೆಟ್<br /> ನವದೆಹಲಿ (ಪಿಟಿಐ):</strong> ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಟಿಕೆಟ್ ಮಾರಾಟಕ್ಕಾಗಿ `ಬುಕ್ ಮೈ ಶೋ~ ಜೊತೆಗೆ ಐಪಿಎಲ್ ಆಡಳಿತವು ಒಪ್ಪಂದ ಮಾಡಿಕೊಂಡಿದೆ. <a href="http://www.bookmyshow.com">www.bookmyshow.com</a> ನಲ್ಲಿ ಕ್ರಿಕೆಟ್ ಆಸಕ್ತರಿಗೆ ಟಿಕೆಟ್ಗಳು ಲಭ್ಯವಾಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.<br /> <br /> <strong>ಕ್ರಿಕೆಟ್: ದಕ್ಷಿಣ ವಲಯಕ್ಕೆ ಜಯ<br /> ಗುವಾಹಟಿ (ಐಎಎನ್ಎಸ್): </strong>ಸತೀಶ್ ವಿಶ್ವನಾಥ್ (64; 11 ಬೌಂಡರಿ, 1 ಸಿಕ್ಸರ್) ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ವಲಯ ತಂಡದವರು ಭಾರತ ಕ್ರೀಡಾ ಪತ್ರಕರ್ತರ ಫೆಡರೇಷನ್ (ಎಸ್ಜೆಎಫ್ಐ) ಆಶ್ರಯದ ಜೆ.ಕೆ.ಬೋಸ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಲೀಗ್ ಪಂದ್ಯದಲ್ಲಿ ಬುಧವಾರ ಎಂಟು ವಿಕೆಟ್ಗಳ ಅಂತರದಿಂದ ಪಶ್ಚಿಮ ವಲಯ ವಿರುದ್ಧ ಜಯ ಸಾಧಿಸಿದರು.<br /> <br /> ದಕ್ಷಿಣ ವಲಯವನ್ನು ಪ್ರತಿನಿಧಿಸಿರುವ ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್)ದ ಸದಸ್ಯರು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆದರು.<br /> <br /> ಸಂಕ್ಷಿಪ್ತ ಸ್ಕೋರ್: ಪಶ್ಚಿಮ ವಲಯ: 20 ಓವರುಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 174 (ದೇವೇಂದ್ರ ಪಾಂಡೆ 43, ಅಭಿಜಿತ್ ಕುಲಕರ್ಣಿ 32, ಮಲ್ಲಿಕಾಚರಣ ವಾಡಿ 26ಕ್ಕೆ2, ಮೊಹಮ್ಮದ್ ನೂಮಾನ್ 27ಕ್ಕೆ1); ದಕ್ಷಿಣ ವಲಯ: 17.5 ಓವರುಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 176 (ಸತೀಶ್ ವಿಶ್ವನಾಥ್ 64, ಸತೀಶ್ ಪಾಲ್ ಔಟಾಗದೆ 30, ಮಲ್ಲಿಕಾಚರಣ ವಾಡಿ ಔಟಾಗದೆ 28).<br /> <strong><br /> ಹಾಕಿ ಆಟಗಾರರಿಗೆ ಬಹುಮಾನ <br /> ಲಖನೌ (ಪಿಟಿಐ):</strong>ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತ ಹಾಕಿ ತಂಡದವರಿಗೆ ಬಹುಮಾನಗಳ ಮಳೆ ಇನ್ನೂ ಸುರಿಯುತ್ತಲೇ ಇದೆ. <br /> <br /> ಸಹಾರಾ ಇಂಡಿಯನ್ ಪರಿವಾರ್ ಗ್ರೂಪ್ ಬುಧವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ದಾರ್ ಸಿಂಗ್ ಹಾಗೂ ಸಂದೀಪ್ ಸಿಂಗ್ ಅವರಿಗೆ ತಲಾ 11 ಲಕ್ಷ ರೂಪಾಯಿ ಬಹುಮಾನ ನೀಡಿತು.<br /> ಒಟ್ಟಾರೆಯಾಗಿ ಹಾಕಿ ತಂಡಕ್ಕೆ 1 ಕೋಟಿ 16 ಲಕ್ಷ ರೂಪಾಯಿಯನ್ನು ಪ್ರದಾನ ಮಾಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>