<p>ಹಸಿರಿನಿಂದ ಆವೃತವಾದ ಫಾರ್ಮ್ಹೌಸ್ನಲ್ಲಿ ಮಂದಸ್ಮಿತರಾಗಿ ಕುಳಿತಿದ್ದರು ಅಗ್ನಿಶ್ರೀಧರ್. ಅವರ ಕಥೆ- ಚಿತ್ರಕಥೆಯ `ಕಳ್ಳರ ಸಂತೆ~ ಚಿತ್ರ ಎರಡು ರಾಜ್ಯಪ್ರಶಸ್ತಿಗಳನ್ನು ಪಡೆದ ಸಂಭ್ರಮ ಅವರಲ್ಲಿ ಕಾಣುತ್ತಿತ್ತು. ಜೊತೆಗೆ ತಮ್ಮ ಕಾದಂಬರಿಯನ್ನು ಸಿನಿಮಾ ರೂಪಕ್ಕಿಳಿಸುವ ಬಹುದಿನಗಳ ಕನಸು ಸಾಕಾರಗೊಳ್ಳುತ್ತಿರುವ ಸಂತಸವನ್ನು ಗಡ್ಡ ಉಬ್ಬಿಸಿದ್ದ ಅವರ ನಗುವೇ ಸಾರುತ್ತಿತ್ತು. <br /> <br /> ನೈಜ ಘಟನೆಯನ್ನು ಆಧರಿಸಿ ವಿಶಿಷ್ಟವಾಗಿ ಹೆಣೆದ ಕಾದಂಬರಿಯನ್ನು ಸಿನಿಮಾ ಆಗಿಸುತ್ತಿರುವ ಹಂಬಲ ಶ್ರೀಧರ್ ಅವರಲ್ಲಿತ್ತು. ಆದರೆ ಎರಡು ಮುಖ್ಯ ಪಾತ್ರಗಳ ನಡುವಿನ ಸಂಭಾಷಣೆಗೆ ಒತ್ತು ನೀಡುವ ಈ ಕಥೆಯನ್ನು ಸಿನಿಮಾ ಮಾಡುವುದು ಸುಲಭವಲ್ಲ ಎಂಬ ಭಯವೂ ಅವರನ್ನು ಕಾಡುತ್ತಿತ್ತು.<br /> <br /> ರಾಜೇಂದ್ರಸಿಂಗ್ ಬಾಬು ಅವರಂತಹ ನಿರ್ದೇಶಕರು ಚಿತ್ರ ನಿರ್ದೇಶಿಸಲು ಒಲವು ತೋರಿಸಿದ್ದರೂ ಅದು ಕೈಗೂಡಿರಲಿಲ್ಲ. ಕೊನೆಗೆ ಪುಸ್ತಕವನ್ನು ಚಿತ್ರಕಥೆಯನ್ನಾಗಿಸಲು ಕೈ ಜೋಡಿಸಿದ ಸುಮನಾ ಕಿತ್ತೂರು ತಾವೇ ನಿರ್ದೇಶನ ಮಾಡುತ್ತೇನೆ ಎಂದು ಪಟ್ಟು ಹಿಡಿದರು. ಹೀಗೆ, ತಮ್ಮ ಪುಸ್ತಕ `ಎದೆಗಾರಿಕೆ~ ಅದೇ ಹೆಸರಿನಲ್ಲಿ ಚಿತ್ರರೂಪ ತಳೆಯುತ್ತಿರುವ ಬಗೆಯನ್ನು ಶ್ರೀಧರ್ ವಿವರಿಸಿದರು.<br /> <br /> ಅಪರಾಧ ಜಗತ್ತಿನ ಸುತ್ತ ಸುತ್ತುವ ಈ ಕಥೆ ಹಿಮಕಂದರಗಳಲ್ಲಿ ಸಿಕ್ಕಿಬಿದ್ದ ಎಸ್ಕಿಮೋಗಳ ಕಥೆಯನ್ನು ನೆನಪಿಸುತ್ತದೆ. ಸಾಯುವ ಗಳಿಗೆಯ ಕಥಾನಕವಿದು. ಕೊಲೆ ಮಾಡಲಿರುವ ವೃತ್ತಿಪರ ಕೊಲೆಗಡುಕ ಮತ್ತು ಕೊಲೆಯಾಗಲಿರುವ ವ್ಯಕ್ತಿ ಇಬ್ಬರೂ ಒಟ್ಟಿಗೆ ಕುಳಿತು ಮಾತನಾಡುತ್ತ ಒಬ್ಬರೊಳಗೊಬ್ಬರು ಬೇರು ಬಿಟ್ಟುಕೊಳ್ಳುತ್ತಾ ಹೋಗುವ ಸನ್ನಿವೇಶವೇ ಚಿತ್ರದ ಕಥಾವಸ್ತು. <br /> <br /> ನೇರವಾಗಿ ಸಾವಿಗೆ ಮುಖಾಮುಖಿಯಾಗುವ ವ್ಯಕ್ತಿ ಅದನ್ನು ಎದುರಿಸಲು ಯಾವ್ಯಾವ ತಂತ್ರಗಳನ್ನು ಪ್ರಯೋಗಿಸುತ್ತಾನೆ ಎಂಬ ಕುತೂಹಲ ಚಿತ್ರಕಥೆಯಲ್ಲಿದೆ ಎಂದರು. <br /> <br /> ಅಂದಹಾಗೆ, ಈ ಚಿತ್ರವನ್ನು ಯಾವ ವರ್ಗಕ್ಕೆ ಸೇರಿಸುವುದು ಎಂಬ ಗೊಂದಲ ಶ್ರೀಧರ್ ಅವರನ್ನು ತೀವ್ರವಾಗಿ ಕಾಡುತ್ತಿದೆ. ಇದು ಗಿರೀಶ್ ಕಾಸರವಳ್ಳಿ ಚಿತ್ರದಂತೆ ಪರಿಪೂರ್ಣ ಕಲಾತ್ಮಕವೂ ಅಲ್ಲದ, ಯೋಗರಾಜ್ ಭಟ್ ಚಿತ್ರದಂತೆ ಸಂಪೂರ್ಣ ಕಮರ್ಷಿಯಲ್ ಕೂಡ ಅಲ್ಲದ ಚಿತ್ರ ಎಂಬ ಘೋಷಣೆಯನ್ನು ಅವರು ಮಾಡಿದರು.<br /> <br /> ಚಿತ್ರಕಥೆ ಬರೆಯುವಾಗಲೇ ಈ ಚಿತ್ರವನ್ನು ನಾನೇ ನಿರ್ದೇಶಿಸಬೇಕೆಂಬ ಹಂಬಲವಿತ್ತು. ಪುಸ್ತಕದ ಪದಗಳಲ್ಲಿ ಕಟ್ಟಿಕೊಟ್ಟ ಸನ್ನಿವೇಶಗಳನ್ನು ದೃಶ್ಯವಾಗಿ ಮೂಡಿಸುವುದು ಸುಲಭವಲ್ಲ. ನೈಜ ಘಟನೆ ಆಧರಿಸಿರುವುದರಿಂದ ಈ ಚಿತ್ರ ಮಾಡುವುದು ತಪಸ್ಸು ಮಾಡಿದಂತೆ ಎಂದರು ಸುಮನಾ ಕಿತ್ತೂರು.<br /> <br /> ಮೂಲ ಕಥೆಗೆ ಧಕ್ಕೆ ಬಾರದಂತೆ ಚಿತ್ರದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ತುಕಾರಾಂ ಎಂಬ ಹೊಸ ಪಾತ್ರ ಸೃಷ್ಟಿಸಲಾಗಿದೆ. ಈ ಪಾತ್ರವನ್ನು ಅಚ್ಯುತ್ರಾವ್ ನಿರ್ವಹಿಸಲಿದ್ದಾರೆ. <br /> <br /> ಮುತ್ತಪ್ಪ ರೈ ಆಗಿ ಶಶಿಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಶ್ರೀಧರ್ ಪಾತ್ರವನ್ನು ಅತುಲ್ ಕುಲಕರ್ಣಿ, ಬಚ್ಚನ್ ಪಾತ್ರವನ್ನು ಸೃಜನ್ ಲೋಕೇಶ್, ಕಾಲಿಯಾ ಪಾತ್ರವನ್ನು ಶರತ್ ಲೋಹಿತಾಶ್ವ ನಿರ್ವಹಿಸಲಿದ್ದಾರೆ.<br /> <br /> ಕೆಲವು ವರ್ಷಗಳ ಹಿಂದೆಯೇ ಈ ಪಾತ್ರವನ್ನು ಮಾಡುವ ಆಫರ್ ನಟ ಆದಿತ್ಯ ಅವರಿಗೆ ಬಂದಿತ್ತಂತೆ. ಶ್ರೀಧರ್ ತಮ್ಮ ಪಾತ್ರ ಹೀಗೆ ಇರುತ್ತದೆ ಎಂದು ವಿವರಿಸುವಾಗಲೇ ಆದಿತ್ಯ ನರ್ವಸ್ ಆಗಿದ್ದರಂತೆ. ಇದುವರೆಗಿನ ಪಾತ್ರಗಳೆಲ್ಲಾ ಫಿಕ್ಷನಲ್ ಆಗಿದ್ದರಿಂದ ಸ್ವಾತಂತ್ರ್ಯವಿತ್ತು. ಆದರೆ ಈ ಚಿತ್ರದಲ್ಲಿ ಚೌಕಟ್ಟಿನ ಮಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದರು ಆದಿತ್ಯ.<br /> <br /> `ಎದೆಗಾರಿಕೆ~ ಪುಸ್ತಕ ಓದಿ ರೋಮಾಂಚನಗೊಂಡಿದ್ದ ನಟಿ ಭಾವನಾಗೆ ನಾಯಕಿಯಾಗಿ ನಟಿಸುತ್ತಿರುವುದು ಸಾಕಷ್ಟು ಖುಷಿ ನೀಡಿದೆ. ನಾವು ನೋಡದಿರುವ ಜಗತ್ತಿನ ಭಾವನೆಗಳನ್ನು ಈ ಚಿತ್ರ ಪರಿಚಯಿಸಲಿದೆ ಎಂಬ ವಿಶ್ವಾಸ ಅವರದು.<br /> <br /> ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ಯಮುನಾಮೂರ್ತಿ ಮತ್ತು ಶರತ್ ಲೋಹಿತಾಶ್ವ ಅವರಿಗೂ ಕಥೆ ಸಾಕಷ್ಟು ರೋಮಾಂಚನ ಉಂಟುಮಾಡಿದೆಯಂತೆ. ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಸಿರಿನಿಂದ ಆವೃತವಾದ ಫಾರ್ಮ್ಹೌಸ್ನಲ್ಲಿ ಮಂದಸ್ಮಿತರಾಗಿ ಕುಳಿತಿದ್ದರು ಅಗ್ನಿಶ್ರೀಧರ್. ಅವರ ಕಥೆ- ಚಿತ್ರಕಥೆಯ `ಕಳ್ಳರ ಸಂತೆ~ ಚಿತ್ರ ಎರಡು ರಾಜ್ಯಪ್ರಶಸ್ತಿಗಳನ್ನು ಪಡೆದ ಸಂಭ್ರಮ ಅವರಲ್ಲಿ ಕಾಣುತ್ತಿತ್ತು. ಜೊತೆಗೆ ತಮ್ಮ ಕಾದಂಬರಿಯನ್ನು ಸಿನಿಮಾ ರೂಪಕ್ಕಿಳಿಸುವ ಬಹುದಿನಗಳ ಕನಸು ಸಾಕಾರಗೊಳ್ಳುತ್ತಿರುವ ಸಂತಸವನ್ನು ಗಡ್ಡ ಉಬ್ಬಿಸಿದ್ದ ಅವರ ನಗುವೇ ಸಾರುತ್ತಿತ್ತು. <br /> <br /> ನೈಜ ಘಟನೆಯನ್ನು ಆಧರಿಸಿ ವಿಶಿಷ್ಟವಾಗಿ ಹೆಣೆದ ಕಾದಂಬರಿಯನ್ನು ಸಿನಿಮಾ ಆಗಿಸುತ್ತಿರುವ ಹಂಬಲ ಶ್ರೀಧರ್ ಅವರಲ್ಲಿತ್ತು. ಆದರೆ ಎರಡು ಮುಖ್ಯ ಪಾತ್ರಗಳ ನಡುವಿನ ಸಂಭಾಷಣೆಗೆ ಒತ್ತು ನೀಡುವ ಈ ಕಥೆಯನ್ನು ಸಿನಿಮಾ ಮಾಡುವುದು ಸುಲಭವಲ್ಲ ಎಂಬ ಭಯವೂ ಅವರನ್ನು ಕಾಡುತ್ತಿತ್ತು.<br /> <br /> ರಾಜೇಂದ್ರಸಿಂಗ್ ಬಾಬು ಅವರಂತಹ ನಿರ್ದೇಶಕರು ಚಿತ್ರ ನಿರ್ದೇಶಿಸಲು ಒಲವು ತೋರಿಸಿದ್ದರೂ ಅದು ಕೈಗೂಡಿರಲಿಲ್ಲ. ಕೊನೆಗೆ ಪುಸ್ತಕವನ್ನು ಚಿತ್ರಕಥೆಯನ್ನಾಗಿಸಲು ಕೈ ಜೋಡಿಸಿದ ಸುಮನಾ ಕಿತ್ತೂರು ತಾವೇ ನಿರ್ದೇಶನ ಮಾಡುತ್ತೇನೆ ಎಂದು ಪಟ್ಟು ಹಿಡಿದರು. ಹೀಗೆ, ತಮ್ಮ ಪುಸ್ತಕ `ಎದೆಗಾರಿಕೆ~ ಅದೇ ಹೆಸರಿನಲ್ಲಿ ಚಿತ್ರರೂಪ ತಳೆಯುತ್ತಿರುವ ಬಗೆಯನ್ನು ಶ್ರೀಧರ್ ವಿವರಿಸಿದರು.<br /> <br /> ಅಪರಾಧ ಜಗತ್ತಿನ ಸುತ್ತ ಸುತ್ತುವ ಈ ಕಥೆ ಹಿಮಕಂದರಗಳಲ್ಲಿ ಸಿಕ್ಕಿಬಿದ್ದ ಎಸ್ಕಿಮೋಗಳ ಕಥೆಯನ್ನು ನೆನಪಿಸುತ್ತದೆ. ಸಾಯುವ ಗಳಿಗೆಯ ಕಥಾನಕವಿದು. ಕೊಲೆ ಮಾಡಲಿರುವ ವೃತ್ತಿಪರ ಕೊಲೆಗಡುಕ ಮತ್ತು ಕೊಲೆಯಾಗಲಿರುವ ವ್ಯಕ್ತಿ ಇಬ್ಬರೂ ಒಟ್ಟಿಗೆ ಕುಳಿತು ಮಾತನಾಡುತ್ತ ಒಬ್ಬರೊಳಗೊಬ್ಬರು ಬೇರು ಬಿಟ್ಟುಕೊಳ್ಳುತ್ತಾ ಹೋಗುವ ಸನ್ನಿವೇಶವೇ ಚಿತ್ರದ ಕಥಾವಸ್ತು. <br /> <br /> ನೇರವಾಗಿ ಸಾವಿಗೆ ಮುಖಾಮುಖಿಯಾಗುವ ವ್ಯಕ್ತಿ ಅದನ್ನು ಎದುರಿಸಲು ಯಾವ್ಯಾವ ತಂತ್ರಗಳನ್ನು ಪ್ರಯೋಗಿಸುತ್ತಾನೆ ಎಂಬ ಕುತೂಹಲ ಚಿತ್ರಕಥೆಯಲ್ಲಿದೆ ಎಂದರು. <br /> <br /> ಅಂದಹಾಗೆ, ಈ ಚಿತ್ರವನ್ನು ಯಾವ ವರ್ಗಕ್ಕೆ ಸೇರಿಸುವುದು ಎಂಬ ಗೊಂದಲ ಶ್ರೀಧರ್ ಅವರನ್ನು ತೀವ್ರವಾಗಿ ಕಾಡುತ್ತಿದೆ. ಇದು ಗಿರೀಶ್ ಕಾಸರವಳ್ಳಿ ಚಿತ್ರದಂತೆ ಪರಿಪೂರ್ಣ ಕಲಾತ್ಮಕವೂ ಅಲ್ಲದ, ಯೋಗರಾಜ್ ಭಟ್ ಚಿತ್ರದಂತೆ ಸಂಪೂರ್ಣ ಕಮರ್ಷಿಯಲ್ ಕೂಡ ಅಲ್ಲದ ಚಿತ್ರ ಎಂಬ ಘೋಷಣೆಯನ್ನು ಅವರು ಮಾಡಿದರು.<br /> <br /> ಚಿತ್ರಕಥೆ ಬರೆಯುವಾಗಲೇ ಈ ಚಿತ್ರವನ್ನು ನಾನೇ ನಿರ್ದೇಶಿಸಬೇಕೆಂಬ ಹಂಬಲವಿತ್ತು. ಪುಸ್ತಕದ ಪದಗಳಲ್ಲಿ ಕಟ್ಟಿಕೊಟ್ಟ ಸನ್ನಿವೇಶಗಳನ್ನು ದೃಶ್ಯವಾಗಿ ಮೂಡಿಸುವುದು ಸುಲಭವಲ್ಲ. ನೈಜ ಘಟನೆ ಆಧರಿಸಿರುವುದರಿಂದ ಈ ಚಿತ್ರ ಮಾಡುವುದು ತಪಸ್ಸು ಮಾಡಿದಂತೆ ಎಂದರು ಸುಮನಾ ಕಿತ್ತೂರು.<br /> <br /> ಮೂಲ ಕಥೆಗೆ ಧಕ್ಕೆ ಬಾರದಂತೆ ಚಿತ್ರದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ತುಕಾರಾಂ ಎಂಬ ಹೊಸ ಪಾತ್ರ ಸೃಷ್ಟಿಸಲಾಗಿದೆ. ಈ ಪಾತ್ರವನ್ನು ಅಚ್ಯುತ್ರಾವ್ ನಿರ್ವಹಿಸಲಿದ್ದಾರೆ. <br /> <br /> ಮುತ್ತಪ್ಪ ರೈ ಆಗಿ ಶಶಿಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಶ್ರೀಧರ್ ಪಾತ್ರವನ್ನು ಅತುಲ್ ಕುಲಕರ್ಣಿ, ಬಚ್ಚನ್ ಪಾತ್ರವನ್ನು ಸೃಜನ್ ಲೋಕೇಶ್, ಕಾಲಿಯಾ ಪಾತ್ರವನ್ನು ಶರತ್ ಲೋಹಿತಾಶ್ವ ನಿರ್ವಹಿಸಲಿದ್ದಾರೆ.<br /> <br /> ಕೆಲವು ವರ್ಷಗಳ ಹಿಂದೆಯೇ ಈ ಪಾತ್ರವನ್ನು ಮಾಡುವ ಆಫರ್ ನಟ ಆದಿತ್ಯ ಅವರಿಗೆ ಬಂದಿತ್ತಂತೆ. ಶ್ರೀಧರ್ ತಮ್ಮ ಪಾತ್ರ ಹೀಗೆ ಇರುತ್ತದೆ ಎಂದು ವಿವರಿಸುವಾಗಲೇ ಆದಿತ್ಯ ನರ್ವಸ್ ಆಗಿದ್ದರಂತೆ. ಇದುವರೆಗಿನ ಪಾತ್ರಗಳೆಲ್ಲಾ ಫಿಕ್ಷನಲ್ ಆಗಿದ್ದರಿಂದ ಸ್ವಾತಂತ್ರ್ಯವಿತ್ತು. ಆದರೆ ಈ ಚಿತ್ರದಲ್ಲಿ ಚೌಕಟ್ಟಿನ ಮಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದರು ಆದಿತ್ಯ.<br /> <br /> `ಎದೆಗಾರಿಕೆ~ ಪುಸ್ತಕ ಓದಿ ರೋಮಾಂಚನಗೊಂಡಿದ್ದ ನಟಿ ಭಾವನಾಗೆ ನಾಯಕಿಯಾಗಿ ನಟಿಸುತ್ತಿರುವುದು ಸಾಕಷ್ಟು ಖುಷಿ ನೀಡಿದೆ. ನಾವು ನೋಡದಿರುವ ಜಗತ್ತಿನ ಭಾವನೆಗಳನ್ನು ಈ ಚಿತ್ರ ಪರಿಚಯಿಸಲಿದೆ ಎಂಬ ವಿಶ್ವಾಸ ಅವರದು.<br /> <br /> ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ಯಮುನಾಮೂರ್ತಿ ಮತ್ತು ಶರತ್ ಲೋಹಿತಾಶ್ವ ಅವರಿಗೂ ಕಥೆ ಸಾಕಷ್ಟು ರೋಮಾಂಚನ ಉಂಟುಮಾಡಿದೆಯಂತೆ. ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>