<p><strong>ಲಂಡನ್ (ಪಿಟಿಐ): </strong>ವಾಯವ್ಯ ಭಾರತದಲ್ಲಿ ಹಠಾತ್ತಾಗಿ ಮುಂಗಾರು ದುರ್ಬಲ ಗೊಂಡದ್ದೇ 4,000 ವರ್ಷಗಳ ಹಿಂದೆ ಸಿಂಧೂ ಕಣಿವೆ ನಾಗರಿಕತೆ ಕುಸಿಯಲು ಕಾರಣ ಎಂದು ಪ್ರಾಚೀನ ನಾಗರಿಕತೆಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಬಗೆಗಿನ ಕೇಂಬ್ರಿಜ್ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೇಳಿದೆ.<br /> <br /> ಸಿಂಧೂ ಕಣಿವೆ ನಗರೀಕರಣಗೊಳ್ಳುತ್ತಿದ್ದ ಆರಂಭಿಕ ದಿನಗಳಲ್ಲಿ ಮುಂಗಾರು ದುರ್ಬಲಗೊಂಡಿದ್ದರಿಂದಾಗಿ ತೀವ್ರ ಕ್ಷಾಮ ಉಂಟಾಯಿತು. <br /> ಈಶಾನ್ಯ ಭಾರತದ ಮೇಘಾಲಯ, ಒಮಾನ್ ಮತ್ತು ಅರಬ್ಬಿ ಸಮುದ್ರಗಳ ಪುರಾವೆಗಳನ್ನೂ ಒಟ್ಟಾಗಿ ಇಟ್ಟು ನೋಡಿದಾಗ ಭಾರತದ ದೊಡ್ಡ ಭೂಪ್ರದೇಶದಲ್ಲಿ ಮುಂಗಾರು ದುರ್ಬಲಗೊಂಡಿರುವುದು ದೃಢವಾಗುತ್ತದೆ ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಡೇವಿಡ್ ಹೊಡೆಲ್ ಹೇಳಿದ್ದಾರೆ.<br /> <br /> ದೊಡ್ಡ ನಗರಗಳಲ್ಲಿ ವಾಸಿಸುತ್ತಿದ್ದ ಜನರು ಚದುರಿ ಹೋಗಿರುವುದು ನಿಜ. ಆದರೆ ಯಾವುದಾದರೂ ಒಂದೇ ಕಾರಣದಿಂದ ಹಾಗೆ ಆಗಿರಬಹುದು ಎಂದು ಹೇಳುವುದು ಅಸಾಧ್ಯ. ಆದರೆ ಹವಾಮಾನ ಬದಲಾವಣೆ ಒಂದು ಮುಖ್ಯವಾದಕಾರಣವಂತೂ ಹೌದು ಎಂದು ಅವರು ವಿಶ್ಲೇಷಿಸಿದ್ದಾರೆ.<br /> <br /> ಬ್ರಿಟನ್– ಭಾರತ ಶಿಕ್ಷಣ ಮತ್ತು ಸಂಶೋಧನಾ ಉಪಕ್ರಮ ಈ ಅಧ್ಯಯನಕ್ಕೆ ಅನುದಾನ ಒದಗಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್ (ಪಿಟಿಐ): </strong>ವಾಯವ್ಯ ಭಾರತದಲ್ಲಿ ಹಠಾತ್ತಾಗಿ ಮುಂಗಾರು ದುರ್ಬಲ ಗೊಂಡದ್ದೇ 4,000 ವರ್ಷಗಳ ಹಿಂದೆ ಸಿಂಧೂ ಕಣಿವೆ ನಾಗರಿಕತೆ ಕುಸಿಯಲು ಕಾರಣ ಎಂದು ಪ್ರಾಚೀನ ನಾಗರಿಕತೆಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಬಗೆಗಿನ ಕೇಂಬ್ರಿಜ್ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೇಳಿದೆ.<br /> <br /> ಸಿಂಧೂ ಕಣಿವೆ ನಗರೀಕರಣಗೊಳ್ಳುತ್ತಿದ್ದ ಆರಂಭಿಕ ದಿನಗಳಲ್ಲಿ ಮುಂಗಾರು ದುರ್ಬಲಗೊಂಡಿದ್ದರಿಂದಾಗಿ ತೀವ್ರ ಕ್ಷಾಮ ಉಂಟಾಯಿತು. <br /> ಈಶಾನ್ಯ ಭಾರತದ ಮೇಘಾಲಯ, ಒಮಾನ್ ಮತ್ತು ಅರಬ್ಬಿ ಸಮುದ್ರಗಳ ಪುರಾವೆಗಳನ್ನೂ ಒಟ್ಟಾಗಿ ಇಟ್ಟು ನೋಡಿದಾಗ ಭಾರತದ ದೊಡ್ಡ ಭೂಪ್ರದೇಶದಲ್ಲಿ ಮುಂಗಾರು ದುರ್ಬಲಗೊಂಡಿರುವುದು ದೃಢವಾಗುತ್ತದೆ ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಡೇವಿಡ್ ಹೊಡೆಲ್ ಹೇಳಿದ್ದಾರೆ.<br /> <br /> ದೊಡ್ಡ ನಗರಗಳಲ್ಲಿ ವಾಸಿಸುತ್ತಿದ್ದ ಜನರು ಚದುರಿ ಹೋಗಿರುವುದು ನಿಜ. ಆದರೆ ಯಾವುದಾದರೂ ಒಂದೇ ಕಾರಣದಿಂದ ಹಾಗೆ ಆಗಿರಬಹುದು ಎಂದು ಹೇಳುವುದು ಅಸಾಧ್ಯ. ಆದರೆ ಹವಾಮಾನ ಬದಲಾವಣೆ ಒಂದು ಮುಖ್ಯವಾದಕಾರಣವಂತೂ ಹೌದು ಎಂದು ಅವರು ವಿಶ್ಲೇಷಿಸಿದ್ದಾರೆ.<br /> <br /> ಬ್ರಿಟನ್– ಭಾರತ ಶಿಕ್ಷಣ ಮತ್ತು ಸಂಶೋಧನಾ ಉಪಕ್ರಮ ಈ ಅಧ್ಯಯನಕ್ಕೆ ಅನುದಾನ ಒದಗಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>