<p><strong>ಕಾರವಾರ:</strong> ಜಿಲ್ಲೆಯ ಕರಾವಳಿಯ ತಾಲ್ಲೂಕುಗಳಲ್ಲಿ ಬೆಳಿಗ್ಗೆ ಬಿರುಸಿನಿಂದ ಸುರಿದ ಮಳೆ ಮಧ್ಯಾಹ್ನದ ನಂತರ ಬಿಡುವು ನೀಡಿತು. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದೆ.<br /> <br /> ಬುಧವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡು ಜಿಲ್ಲೆಯಾದ್ಯಂತ 33.1 ಸೆಂ.ಮೀ. ಮಳೆಯಾಗಿದೆ. ಅಂಕೋಲಾ- 62.6, ಭಟ್ಕಳ 46, ಹಳಿಯಾಳ 1.6, ಹೊನ್ನಾವರ 69.8, ಕಾರವಾರ 72.2, ಕುಮಟಾ 58.3, ಮುಂಡಗೋಡ 4.4, ಸಿದ್ದಾಪುರ 13.6, ಶಿರಸಿ 11, ಜೋಯಿಡಾ 16 ಹಾಗೂ ಯಲ್ಲಾಪುರದಲ್ಲಿ 8.6 ಮಳೆಯಾಗಿದೆ. ಜೂ.1 ರಿಂದ 19ರ ವರೆಗೆ ಸರಾಸರಿ 514.7 ಮಿ.ಮೀ ಮಳೆಯಾಗಿದೆ.<br /> <br /> `ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಬುಧವಾರ ಸಂಜೆಯ ಹೊತ್ತಿಗೆ ಕ್ಷೀಣಗೊಂಡಿದೆ. ಗುರುವಾರವೂ ಮಳೆ ಬಿಡುವು ನೀಡಲಿದ್ದು ಆಗಾಗ ಬಿರುಸಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ' ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.<br /> <br /> ಯಾತ್ರಾರ್ಥಿಗಳು ಸುರಕ್ಷಿತ: ಕೇದಾರನಾಥ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿರುವ ಜಿಲ್ಲೆಯ ಒಂಬತ್ತು ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ.<br /> ಮನುಕಟಿಯಾರ್ ಪರ್ವತದಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 200ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.<br /> <br /> <strong>ಮುಂಡಳ್ಳಿಯಲ್ಲಿ ಮನೆ ಕುಸಿತ</strong><br /> ಭಟ್ಕಳ: ಮಳೆ ಗಾಳಿಗೆ ತಾಲ್ಲೂಕಿನ ಮುಂಡಳ್ಳಿಯಲ್ಲಿ ಮಂಗಳವಾರ ಮತ್ತೊಂದು ಮನೆ ಕುಸಿದು ಬಿದ್ದು ಹಾನಿಯಾಗಿದೆ.<br /> <br /> ಮುಂಡಳ್ಳಿಯ ತಿಮ್ಮಪ್ಪ ಮಂಜುನಾಥ ಮೊಗೇರ ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದು ಸುಮಾರು 10 ಸಾವಿರ ರೂಪಾಯಿ ಹಾನಿಯನ್ನು ಅಂದಾಜಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಡಾ.ಮಧುಕೇಶ್ವರ್, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.<br /> ಬುಧವಾರ ಬೆಳಿಗ್ಗೆ ಸ್ವಲ್ಪ ಹೊತ್ತು ಸುರಿದ ಮಳೆ ನಂತರ ಮಾಯವಾಗಿದೆ.</p>.<p><strong>ಮೀನು ದುಬಾರಿ...</strong><br /> ಕಳೆದು ಒಂದುವಾರದಿಂದ ಅರಬ್ಬೀ ಸಮುದ್ರದಲ್ಲಿ ಗಾಳಿ, ಮಳೆ ಸುರಿಯುತ್ತಿದ್ದರಿಂದ ಮೀನುಗಾರಿಕೆ ಸ್ಥಗಿತಗೊಂಡಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮೀನಿಗೆ ಬರ ಬಂದಿದ್ದು ಬೆಲೆ ಗಗನಕ್ಕೆ ಏರಿದೆ.<br /> <br /> ಸಾಧಾರಣ ಗಾತ್ರದ ಎರಡು ಬಂಗಡೆ ಬೆಲೆ ರೂ. 100. ಮಧ್ಯಮ ಗಾತ್ರದ ನಾಲ್ಕು ಬಂಗಡೆಗೆ ರೂ. 100. 20 ವೈಟ್ ಸಿಗಡಿಯ ಬೆಲೆ ರೂ. 500. 15 ತಾರ್ಲೆ ಮೀನಿಗೆ ರೂ. 50. ಹತ್ತು ಏಡಿಗೆ 150 ರೂಪಾಯಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಜಿಲ್ಲೆಯ ಕರಾವಳಿಯ ತಾಲ್ಲೂಕುಗಳಲ್ಲಿ ಬೆಳಿಗ್ಗೆ ಬಿರುಸಿನಿಂದ ಸುರಿದ ಮಳೆ ಮಧ್ಯಾಹ್ನದ ನಂತರ ಬಿಡುವು ನೀಡಿತು. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದೆ.<br /> <br /> ಬುಧವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡು ಜಿಲ್ಲೆಯಾದ್ಯಂತ 33.1 ಸೆಂ.ಮೀ. ಮಳೆಯಾಗಿದೆ. ಅಂಕೋಲಾ- 62.6, ಭಟ್ಕಳ 46, ಹಳಿಯಾಳ 1.6, ಹೊನ್ನಾವರ 69.8, ಕಾರವಾರ 72.2, ಕುಮಟಾ 58.3, ಮುಂಡಗೋಡ 4.4, ಸಿದ್ದಾಪುರ 13.6, ಶಿರಸಿ 11, ಜೋಯಿಡಾ 16 ಹಾಗೂ ಯಲ್ಲಾಪುರದಲ್ಲಿ 8.6 ಮಳೆಯಾಗಿದೆ. ಜೂ.1 ರಿಂದ 19ರ ವರೆಗೆ ಸರಾಸರಿ 514.7 ಮಿ.ಮೀ ಮಳೆಯಾಗಿದೆ.<br /> <br /> `ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಬುಧವಾರ ಸಂಜೆಯ ಹೊತ್ತಿಗೆ ಕ್ಷೀಣಗೊಂಡಿದೆ. ಗುರುವಾರವೂ ಮಳೆ ಬಿಡುವು ನೀಡಲಿದ್ದು ಆಗಾಗ ಬಿರುಸಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ' ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.<br /> <br /> ಯಾತ್ರಾರ್ಥಿಗಳು ಸುರಕ್ಷಿತ: ಕೇದಾರನಾಥ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿರುವ ಜಿಲ್ಲೆಯ ಒಂಬತ್ತು ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ.<br /> ಮನುಕಟಿಯಾರ್ ಪರ್ವತದಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 200ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.<br /> <br /> <strong>ಮುಂಡಳ್ಳಿಯಲ್ಲಿ ಮನೆ ಕುಸಿತ</strong><br /> ಭಟ್ಕಳ: ಮಳೆ ಗಾಳಿಗೆ ತಾಲ್ಲೂಕಿನ ಮುಂಡಳ್ಳಿಯಲ್ಲಿ ಮಂಗಳವಾರ ಮತ್ತೊಂದು ಮನೆ ಕುಸಿದು ಬಿದ್ದು ಹಾನಿಯಾಗಿದೆ.<br /> <br /> ಮುಂಡಳ್ಳಿಯ ತಿಮ್ಮಪ್ಪ ಮಂಜುನಾಥ ಮೊಗೇರ ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದು ಸುಮಾರು 10 ಸಾವಿರ ರೂಪಾಯಿ ಹಾನಿಯನ್ನು ಅಂದಾಜಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಡಾ.ಮಧುಕೇಶ್ವರ್, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.<br /> ಬುಧವಾರ ಬೆಳಿಗ್ಗೆ ಸ್ವಲ್ಪ ಹೊತ್ತು ಸುರಿದ ಮಳೆ ನಂತರ ಮಾಯವಾಗಿದೆ.</p>.<p><strong>ಮೀನು ದುಬಾರಿ...</strong><br /> ಕಳೆದು ಒಂದುವಾರದಿಂದ ಅರಬ್ಬೀ ಸಮುದ್ರದಲ್ಲಿ ಗಾಳಿ, ಮಳೆ ಸುರಿಯುತ್ತಿದ್ದರಿಂದ ಮೀನುಗಾರಿಕೆ ಸ್ಥಗಿತಗೊಂಡಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮೀನಿಗೆ ಬರ ಬಂದಿದ್ದು ಬೆಲೆ ಗಗನಕ್ಕೆ ಏರಿದೆ.<br /> <br /> ಸಾಧಾರಣ ಗಾತ್ರದ ಎರಡು ಬಂಗಡೆ ಬೆಲೆ ರೂ. 100. ಮಧ್ಯಮ ಗಾತ್ರದ ನಾಲ್ಕು ಬಂಗಡೆಗೆ ರೂ. 100. 20 ವೈಟ್ ಸಿಗಡಿಯ ಬೆಲೆ ರೂ. 500. 15 ತಾರ್ಲೆ ಮೀನಿಗೆ ರೂ. 50. ಹತ್ತು ಏಡಿಗೆ 150 ರೂಪಾಯಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>