<p><strong>ನವದೆಹಲಿ (ಪಿಟಿಐ):</strong> ಸಂಸದರ ಕ್ಷೇತ್ರ ಅಭಿವೃದ್ಧಿ ನಿಧಿಯನ್ನು (ಎಂಪಿಎಲ್ಎಡಿ) ಐದು ಕೋಟಿ ರೂಪಾಯಿಗೆ ಏರಿಸುವ ಸಲುವಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಶುಕ್ರವಾರ 2,370 ಕೋಟಿ ರೂಪಾಯಿಗಳ ಇಡುಗಂಟು ತೆಗೆದಿರಿಸಿದ್ದಾರೆ.<br /> <br /> ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯನ್ನು ಕೊನೆಗೊಳಿಸಿದ ಸಂದರ್ಭದಲ್ಲಿ ಸಂಸದರ ಒಕ್ಕೊರಲ ಬೇಡಿಕೆಯಾದ ಕ್ಷೇತ್ರ ಅಭಿವೃದ್ಧಿ ನಿಧಿಯನ್ನು ಹೆಚ್ಚಿಸುವ ನಿರ್ಧಾರವನ್ನು ಅವರು ಪ್ರಕಟಿಸಿದರು. ಇದುವರೆಗೆ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಮೂಲಕ ರೂ 2 ಕೋಟಿ ಒದಗಿಸಲಾಗುತ್ತಿತ್ತು. ಐದು ಕೋಟಿ ರೂಪಾಯಿಗೆ ಏರಿಸುವ ಸರ್ಕಾರದ ನಿರ್ಧಾರವನ್ನು ಸದಸ್ಯರೆಲ್ಲರೂ ಪಕ್ಷಭೇದ ಮರೆತು ಸ್ವಾಗತಿಸಿದರು. ಬಳಿಕ 2010-11ನೇ ಸಾಲಿನ ಪೂರಕ ಬೇಡಿಕೆಗಳನ್ನು ಮತ್ತು ಸೂಕ್ತ ಮಸೂದೆಗಳಿಗೆ ಲೋಕಸಭೆ ಅನುಮೋದನೆ ನೀಡಿತು.<br /> <br /> ಈ ಮೂಲಕ ಮೂರು ಹಂತದ ಬಜೆಟ್ ಪ್ರಕ್ರಿಯೆಯ ಮೊದಲ ಹಂತ ಕೊನೆಗೊಂಡಂತಾಯಿತು.ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮಾರ್ಚ್ 25ರೊಳಗೆ ಇಡೀ ಬಜೆಟ್ ಪ್ರಕ್ರಿಯೆ ಕೊನೆಗೊಳ್ಳಲಿದೆ. ಹೀಗಾಗಿ ಈ ವರ್ಷ ಲೇಖಾನುದಾನ ಪ್ರಕ್ರಿಯೆ ಇರುವುದಿಲ್ಲ. ಮೀನುಗಾರಿಕೆಯಲ್ಲಿ ತೊಡಗಿರುವ 20 ಲಕ್ಷ ಜನರಿಗೆ ಅನುಕೂಲ ಮಾಡಿಕೊಡಲು ಅವರಿಗೆ ನೀಡುತ್ತಿರುವ ಬಡ್ಡಿ ರಿಯಾಯ್ತಿ ಯೋಜನೆಯನ್ನು ಮುಂದುವರಿಸುವುದಾಗಿ ಪ್ರಣವ್ ತಿಳಿಸಿದರು.<br /> <br /> ಆರೋಗ್ಯ ಕ್ಷೇತ್ರಕ್ಕೆ ವಿಧಿಸಲಾಗಿರುವ ಸೇವಾ ತೆರಿಗೆ ಹಿಂದೆಗೆತ ಸಹಿತ ಇತರ ಬೇಡಿಕೆಗಳು ಪರಿಶೀಲನೆಯಲ್ಲಿದ್ದು, 2011ರ ಹಣಕಾಸು ಮಸೂದೆ ಮೇಲೆ ಚರ್ಚೆ ನಡೆಯುವ ವೇಳೆ ಇದಕ್ಕೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದರ ಹೆಚ್ಚುತ್ತಿರುವುದು ಆತಂಕದ ಸಂಗತಿಯಾದರೂ ದೇಶವು 2011-12ರಲ್ಲಿ ಶೇ 9ರ ಆರ್ಥಿಕ ಪ್ರಗತಿ ಕಾಣುವ ವಿಶ್ವಾಸವನ್ನು ಪ್ರಣವ್ ಮುಖರ್ಜಿ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಸಂಸದರ ಕ್ಷೇತ್ರ ಅಭಿವೃದ್ಧಿ ನಿಧಿಯನ್ನು (ಎಂಪಿಎಲ್ಎಡಿ) ಐದು ಕೋಟಿ ರೂಪಾಯಿಗೆ ಏರಿಸುವ ಸಲುವಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಶುಕ್ರವಾರ 2,370 ಕೋಟಿ ರೂಪಾಯಿಗಳ ಇಡುಗಂಟು ತೆಗೆದಿರಿಸಿದ್ದಾರೆ.<br /> <br /> ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯನ್ನು ಕೊನೆಗೊಳಿಸಿದ ಸಂದರ್ಭದಲ್ಲಿ ಸಂಸದರ ಒಕ್ಕೊರಲ ಬೇಡಿಕೆಯಾದ ಕ್ಷೇತ್ರ ಅಭಿವೃದ್ಧಿ ನಿಧಿಯನ್ನು ಹೆಚ್ಚಿಸುವ ನಿರ್ಧಾರವನ್ನು ಅವರು ಪ್ರಕಟಿಸಿದರು. ಇದುವರೆಗೆ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಮೂಲಕ ರೂ 2 ಕೋಟಿ ಒದಗಿಸಲಾಗುತ್ತಿತ್ತು. ಐದು ಕೋಟಿ ರೂಪಾಯಿಗೆ ಏರಿಸುವ ಸರ್ಕಾರದ ನಿರ್ಧಾರವನ್ನು ಸದಸ್ಯರೆಲ್ಲರೂ ಪಕ್ಷಭೇದ ಮರೆತು ಸ್ವಾಗತಿಸಿದರು. ಬಳಿಕ 2010-11ನೇ ಸಾಲಿನ ಪೂರಕ ಬೇಡಿಕೆಗಳನ್ನು ಮತ್ತು ಸೂಕ್ತ ಮಸೂದೆಗಳಿಗೆ ಲೋಕಸಭೆ ಅನುಮೋದನೆ ನೀಡಿತು.<br /> <br /> ಈ ಮೂಲಕ ಮೂರು ಹಂತದ ಬಜೆಟ್ ಪ್ರಕ್ರಿಯೆಯ ಮೊದಲ ಹಂತ ಕೊನೆಗೊಂಡಂತಾಯಿತು.ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮಾರ್ಚ್ 25ರೊಳಗೆ ಇಡೀ ಬಜೆಟ್ ಪ್ರಕ್ರಿಯೆ ಕೊನೆಗೊಳ್ಳಲಿದೆ. ಹೀಗಾಗಿ ಈ ವರ್ಷ ಲೇಖಾನುದಾನ ಪ್ರಕ್ರಿಯೆ ಇರುವುದಿಲ್ಲ. ಮೀನುಗಾರಿಕೆಯಲ್ಲಿ ತೊಡಗಿರುವ 20 ಲಕ್ಷ ಜನರಿಗೆ ಅನುಕೂಲ ಮಾಡಿಕೊಡಲು ಅವರಿಗೆ ನೀಡುತ್ತಿರುವ ಬಡ್ಡಿ ರಿಯಾಯ್ತಿ ಯೋಜನೆಯನ್ನು ಮುಂದುವರಿಸುವುದಾಗಿ ಪ್ರಣವ್ ತಿಳಿಸಿದರು.<br /> <br /> ಆರೋಗ್ಯ ಕ್ಷೇತ್ರಕ್ಕೆ ವಿಧಿಸಲಾಗಿರುವ ಸೇವಾ ತೆರಿಗೆ ಹಿಂದೆಗೆತ ಸಹಿತ ಇತರ ಬೇಡಿಕೆಗಳು ಪರಿಶೀಲನೆಯಲ್ಲಿದ್ದು, 2011ರ ಹಣಕಾಸು ಮಸೂದೆ ಮೇಲೆ ಚರ್ಚೆ ನಡೆಯುವ ವೇಳೆ ಇದಕ್ಕೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದರ ಹೆಚ್ಚುತ್ತಿರುವುದು ಆತಂಕದ ಸಂಗತಿಯಾದರೂ ದೇಶವು 2011-12ರಲ್ಲಿ ಶೇ 9ರ ಆರ್ಥಿಕ ಪ್ರಗತಿ ಕಾಣುವ ವಿಶ್ವಾಸವನ್ನು ಪ್ರಣವ್ ಮುಖರ್ಜಿ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>