<p><strong>ಗಂಗಾವತಿ: </strong>ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದಿಂದ ಸದ್ಯದ ಸಾರಿಗೆಯ ದರಕ್ಕೇ ಸಾರ್ವಜನಿಕರು ತತ್ತರಿಸುತ್ತಿದ್ದಾರೆ. ಉತ್ತಮ ಸೇವೆ ಮತ್ತು ನಿಗದಿತ ಸಮಯಕ್ಕೆ ಉದ್ದೇಶಿತ ಸ್ಥಳ ಸೇರಬಹುದು ಎಂಬ ಕಾರಣಕ್ಕೆ ಪ್ರಯಾಣಿಕರು ದೂರದೂರಿಗೆ ಹೋಗಲು ಹೆಚ್ಚಿನ ದರ ನೀಡಿ ಖಾಸಗಿ ವಾಹನ ಅವಲಂಬಿಸುತ್ತಿದ್ದಾರೆ.<br /> <br /> ಆದರೆ ಸಾರ್ವಜನಿಕರ ಈ ಬಯಕೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಖಾಸಗಿ ವಾಹನ ಸಂಸ್ಥೆಗಳು ಹಬ್ಬದ ನೆಪದಲ್ಲಿ ಸಾಧಾರಣ ದಿನದ ದರಕ್ಕಿಂತಲೂ 80ರಿಂದ ಸುಮಾರು 200 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. <br /> <br /> ಈ ಬಗ್ಗೆ ಖಾಸಗಿ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರೊಬ್ಬರನ್ನು `ಪ್ರಜಾವಾಣಿ~ ವಿಚಾರಿಸಿದರೆ `ಹಬ್ಬದ ಸಂದರ್ಭದಲ್ಲಿ ಸಿಬ್ಬಂದಿಗೆ ಸಮವಸ್ತ್ರ, ಬೋನಸ್, ವಾಹನ ಪೂಜೆ, ಸಾರಿಗೆ ಅಧಿಕಾರಿಗಳಿಗೆ ಮಾಮೂಲು ಇತ್ಯಾದಿ, ಇತ್ಯಾದಿ ನೀಡಬೇಕಿರುತ್ತದೆ. ಹಬ್ಬಕ್ಕೆ ಮಾತ್ರ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಅ. 28ರವರೆಗೂ ಮಾತ್ರ ವಿಶೇಷ ದರ.. ಇನ್ನೂಳಿದ ದಿನದಂದು ನಿಗದಿತ ದರ ಮಾತ್ರ ವಿಧಿಸಲಾಗುತ್ತಿದೆ~ ಎನ್ನುತ್ತಾರೆ ಹೈದ್ರಬಾದ್, ಗಂಗಾವತಿ, ಹೊಸಪೇಟೆ, ಚಿತ್ರದುರ್ಗಾ, ಬೆಂಗಳೂರು, ನಡುವೆ ವಾಹನ ಓಡಿಸುವ ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕ.<br /> <br /> ದಸರಾ, ದೀಪಾವಳಿ ಸೇರಿದಂತೆ ಬಹುತೇಕ ಎಲ್ಲ ಹಬ್ಬದ ಸಂದರ್ಭದಲ್ಲೂ ಹೆಚ್ಚುವರಿ ದರ ನಿಗದಿಮಾಡುತ್ತಾರೆ. <br /> ಹಬ್ಬದ ಮುಂಚಿನ ಹಾಗೂ ನಂತರದ ಎರಡು ಸೇರಿ ಒಟ್ಟು ಮೂರರಿಂದ ಐದು ದಿನ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ. <br /> <br /> `ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್ ಸೇರಿದಂತೆ ಇತರ ಪಟ್ಟಣ ಪ್ರದೇಶಗಳಿಗೆ ಉದ್ಯೋಗ ಅರಸಿ ಹೋದ ಸಾವಿರಾರು ನೌಕರರು ಹಬ್ಬದ ಸಂದರ್ಭದಲ್ಲಿ ತಮ್ಮೂರಿಗೆ ಬರಲು ಕಾತುರರಾಗಿರುತ್ತಾರೆ.<br /> <br /> ಏಕಾಏಕಿ ದರ ಹೆಚ್ಚಳದಿಂದ ಹೊರೆಯಾಗುತ್ತದೆ~ ಎನ್ನುತ್ತಾರೆ ಬಸವಪಟ್ಟಣದ ಸುರೇಶ ಕುಮಾರ,<br /> `ಸಹೋದರಿಯನ್ನು ಹುಬ್ಬಳ್ಳಿಗೆ ಕಳಿಸಬೇಕಿತ್ತು. ಟಿಕೆಟ್ ಬುಕ್ ಮಾಡಲು ಹೋದಾಗಲೇ ಖಾಸಗಿ ವಾಹನಗಳು ಹೆಚ್ಚುವರಿ ದರ ವಿಧಿಸುತ್ತಿರುವುದು ತಿಳಿಯಿತು. ಬಸ್ ಪ್ರಯಾಣ ರದ್ದು ಮಾಡಿ, ರೈಲ್ವೆ ಟಿಕೆಟ್ ಬುಕ್ ಮಾಡಬೇಕಾಯಿತು~ ಎಂದು ಪ್ರಸನ್ನ ದೇಸಾಯಿ ತಿಳಿಸಿದ್ದಾರೆ. <br /> <br /> ಪೂರ್ವ ಮಾಹಿತಿ ನೀಡದೇ ಖಾಸಗಿ ವಾಹನ ಸಂಸ್ಥೆಯವರು ದರ ಹೆಚ್ಚಳ ಮಾಡುತ್ತಾರೆ. ಇದು ಸಾರ್ವಜನಿಕ ವಂಚನೆಯಾಗಿದ್ದು, ಜಿಲ್ಲೆಯಲ್ಲಿರುವ ಸಾರಿಗೆ ನಿಯಂತ್ರಣ ಅಧಿಕಾರಿ ಅಥವಾ ಸಂಬಂಧಿತ ಇಲಾಖೆಯವರು ಗಮನ ಹರಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ. <br /> <br /> ಇದು ದರಪಟ್ಟಿ : ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ ಮತ್ತು ಖಾಸಗಿ ವಾಹನಗಳ ದರಕ್ಕೂ ಸಾಮಾನ್ಯದಿನ ಹಾಗೂ ವಿಶೇಷದಿನದಲ್ಲಿ ಇರುವ ವ್ಯತ್ಯಾಸದ ದರಗಳ ಮಾಹಿತಿ ಲಭ್ಯವಾಗಿದೆ. <br /> <br /> ಸಾರಿಗೆ ಸಂಸ್ಥೆಯ ಪ್ರಯಾಣದರ ಎಲ್ಲ ದಿನದಲ್ಲೂ ಏಕರೂಪವಾಗಿದೆ. ಗಂಗಾವತಿ-ಬೆಂಗಳೂರು ನಡುವಿನ ವೇಗದೂತಕ್ಕೆ 232, ಸ್ಲೀಪರ್ ಕೋಚ್ಗೆ 473 ಹಾಗೂ 360 (ಮಕ್ಕಳಿಗೆ) ದರ ವಿಧಿಸಲಾಗುತ್ತಿದೆ.<br /> <br /> ಆದರೆ ರಾಜ್ಯದ ಪ್ರತಿಷ್ಠಿತ ಖಾಸಗಿ ಸಾರಿಗೆ ಸಂಸ್ಥೆಯೊಂದರ 2್ಡ2 ಆಸನವುಳ್ಳ ವಾಹನಕ್ಕೆ ರೂ, 360 (660), ಸ್ಲೀಪರ್ ಕೋಚ್ ವಾಹನಕ್ಕೆ ಲೋವರ್ ಬರ್ತ್ 410 (710), ಅಪ್ಪರ್ ಬರ್ತ್ 460 (760) ಹಾಗೂ ಸಿಟ್ಟಿಂಗ್ 368 (578) ನಿಗದಿ ಗೊಳಿಸಲಾಗಿದೆ. <br /> <br /> ಆವರಣದಲ್ಲಿ ಸೂಚಿಸಿರುವಷ್ಟು ಅಂದರೆ ಪ್ರತಿ ಪ್ರಯಾಣಿಕರಿಂದ ಸುಮಾರು ತಲಾ 300 ರೂಪಾಯಿ ಹಣವನ್ನು ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ವಸೂಲಿ ಮಾಡುತ್ತಿರುವ ಖಾಸಗಿ ಸಂಸ್ಥೆಯ ವಾಹನಗಳ ಸ್ವೇಚ್ಛೆಗೆ ಕಡಿವಾಣ ಹಾಕಬೇಕಿದೆ. ಹೈದರಾಬಾದ್ ನಡುವೆ ವಾಹನಗಳನ್ನು ಓಡಿಸುತ್ತಿರುವ ಮತ್ತೊಂದು ಸಂಸ್ಥೆ 2*3 ಆಸನದ ವಾಹನಕ್ಕೆ ಸಾಮಾನ್ಯ ದರ ರೂ, 295 (370) ಹವಾನಿಯಂತ್ರಿತ 460 (540) ಮತ್ತು ಡಿಲಕ್ಸ್ ವಾಹನಕ್ಕೆ 380 (460) ರೂಪಾಯಿ ಪಡೆಯಲಾಗುತ್ತಿದೆ.<br /> <br /> ಮಾಹಿತಿ ನೀಡದೇ ಹೆಚ್ಚುವರಿ ಹಣ ಪಡೆಯುವುದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದ್ದು ಈ ಬಗ್ಗೆ ಸಾರಿಗೆ ಇಲಾಖೆ (ಆರ್ಟಿಓ) ಮತ್ತು ಸಂಬಂಧಿತರು ಮಾತ್ರ ಯಾವ ಕಾನೂನು ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರಲ್ಲಿ ಅಸಮಧಾನಕ್ಕೆ ಕಾರಣವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದಿಂದ ಸದ್ಯದ ಸಾರಿಗೆಯ ದರಕ್ಕೇ ಸಾರ್ವಜನಿಕರು ತತ್ತರಿಸುತ್ತಿದ್ದಾರೆ. ಉತ್ತಮ ಸೇವೆ ಮತ್ತು ನಿಗದಿತ ಸಮಯಕ್ಕೆ ಉದ್ದೇಶಿತ ಸ್ಥಳ ಸೇರಬಹುದು ಎಂಬ ಕಾರಣಕ್ಕೆ ಪ್ರಯಾಣಿಕರು ದೂರದೂರಿಗೆ ಹೋಗಲು ಹೆಚ್ಚಿನ ದರ ನೀಡಿ ಖಾಸಗಿ ವಾಹನ ಅವಲಂಬಿಸುತ್ತಿದ್ದಾರೆ.<br /> <br /> ಆದರೆ ಸಾರ್ವಜನಿಕರ ಈ ಬಯಕೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಖಾಸಗಿ ವಾಹನ ಸಂಸ್ಥೆಗಳು ಹಬ್ಬದ ನೆಪದಲ್ಲಿ ಸಾಧಾರಣ ದಿನದ ದರಕ್ಕಿಂತಲೂ 80ರಿಂದ ಸುಮಾರು 200 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. <br /> <br /> ಈ ಬಗ್ಗೆ ಖಾಸಗಿ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರೊಬ್ಬರನ್ನು `ಪ್ರಜಾವಾಣಿ~ ವಿಚಾರಿಸಿದರೆ `ಹಬ್ಬದ ಸಂದರ್ಭದಲ್ಲಿ ಸಿಬ್ಬಂದಿಗೆ ಸಮವಸ್ತ್ರ, ಬೋನಸ್, ವಾಹನ ಪೂಜೆ, ಸಾರಿಗೆ ಅಧಿಕಾರಿಗಳಿಗೆ ಮಾಮೂಲು ಇತ್ಯಾದಿ, ಇತ್ಯಾದಿ ನೀಡಬೇಕಿರುತ್ತದೆ. ಹಬ್ಬಕ್ಕೆ ಮಾತ್ರ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಅ. 28ರವರೆಗೂ ಮಾತ್ರ ವಿಶೇಷ ದರ.. ಇನ್ನೂಳಿದ ದಿನದಂದು ನಿಗದಿತ ದರ ಮಾತ್ರ ವಿಧಿಸಲಾಗುತ್ತಿದೆ~ ಎನ್ನುತ್ತಾರೆ ಹೈದ್ರಬಾದ್, ಗಂಗಾವತಿ, ಹೊಸಪೇಟೆ, ಚಿತ್ರದುರ್ಗಾ, ಬೆಂಗಳೂರು, ನಡುವೆ ವಾಹನ ಓಡಿಸುವ ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕ.<br /> <br /> ದಸರಾ, ದೀಪಾವಳಿ ಸೇರಿದಂತೆ ಬಹುತೇಕ ಎಲ್ಲ ಹಬ್ಬದ ಸಂದರ್ಭದಲ್ಲೂ ಹೆಚ್ಚುವರಿ ದರ ನಿಗದಿಮಾಡುತ್ತಾರೆ. <br /> ಹಬ್ಬದ ಮುಂಚಿನ ಹಾಗೂ ನಂತರದ ಎರಡು ಸೇರಿ ಒಟ್ಟು ಮೂರರಿಂದ ಐದು ದಿನ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ. <br /> <br /> `ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್ ಸೇರಿದಂತೆ ಇತರ ಪಟ್ಟಣ ಪ್ರದೇಶಗಳಿಗೆ ಉದ್ಯೋಗ ಅರಸಿ ಹೋದ ಸಾವಿರಾರು ನೌಕರರು ಹಬ್ಬದ ಸಂದರ್ಭದಲ್ಲಿ ತಮ್ಮೂರಿಗೆ ಬರಲು ಕಾತುರರಾಗಿರುತ್ತಾರೆ.<br /> <br /> ಏಕಾಏಕಿ ದರ ಹೆಚ್ಚಳದಿಂದ ಹೊರೆಯಾಗುತ್ತದೆ~ ಎನ್ನುತ್ತಾರೆ ಬಸವಪಟ್ಟಣದ ಸುರೇಶ ಕುಮಾರ,<br /> `ಸಹೋದರಿಯನ್ನು ಹುಬ್ಬಳ್ಳಿಗೆ ಕಳಿಸಬೇಕಿತ್ತು. ಟಿಕೆಟ್ ಬುಕ್ ಮಾಡಲು ಹೋದಾಗಲೇ ಖಾಸಗಿ ವಾಹನಗಳು ಹೆಚ್ಚುವರಿ ದರ ವಿಧಿಸುತ್ತಿರುವುದು ತಿಳಿಯಿತು. ಬಸ್ ಪ್ರಯಾಣ ರದ್ದು ಮಾಡಿ, ರೈಲ್ವೆ ಟಿಕೆಟ್ ಬುಕ್ ಮಾಡಬೇಕಾಯಿತು~ ಎಂದು ಪ್ರಸನ್ನ ದೇಸಾಯಿ ತಿಳಿಸಿದ್ದಾರೆ. <br /> <br /> ಪೂರ್ವ ಮಾಹಿತಿ ನೀಡದೇ ಖಾಸಗಿ ವಾಹನ ಸಂಸ್ಥೆಯವರು ದರ ಹೆಚ್ಚಳ ಮಾಡುತ್ತಾರೆ. ಇದು ಸಾರ್ವಜನಿಕ ವಂಚನೆಯಾಗಿದ್ದು, ಜಿಲ್ಲೆಯಲ್ಲಿರುವ ಸಾರಿಗೆ ನಿಯಂತ್ರಣ ಅಧಿಕಾರಿ ಅಥವಾ ಸಂಬಂಧಿತ ಇಲಾಖೆಯವರು ಗಮನ ಹರಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ. <br /> <br /> ಇದು ದರಪಟ್ಟಿ : ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ ಮತ್ತು ಖಾಸಗಿ ವಾಹನಗಳ ದರಕ್ಕೂ ಸಾಮಾನ್ಯದಿನ ಹಾಗೂ ವಿಶೇಷದಿನದಲ್ಲಿ ಇರುವ ವ್ಯತ್ಯಾಸದ ದರಗಳ ಮಾಹಿತಿ ಲಭ್ಯವಾಗಿದೆ. <br /> <br /> ಸಾರಿಗೆ ಸಂಸ್ಥೆಯ ಪ್ರಯಾಣದರ ಎಲ್ಲ ದಿನದಲ್ಲೂ ಏಕರೂಪವಾಗಿದೆ. ಗಂಗಾವತಿ-ಬೆಂಗಳೂರು ನಡುವಿನ ವೇಗದೂತಕ್ಕೆ 232, ಸ್ಲೀಪರ್ ಕೋಚ್ಗೆ 473 ಹಾಗೂ 360 (ಮಕ್ಕಳಿಗೆ) ದರ ವಿಧಿಸಲಾಗುತ್ತಿದೆ.<br /> <br /> ಆದರೆ ರಾಜ್ಯದ ಪ್ರತಿಷ್ಠಿತ ಖಾಸಗಿ ಸಾರಿಗೆ ಸಂಸ್ಥೆಯೊಂದರ 2್ಡ2 ಆಸನವುಳ್ಳ ವಾಹನಕ್ಕೆ ರೂ, 360 (660), ಸ್ಲೀಪರ್ ಕೋಚ್ ವಾಹನಕ್ಕೆ ಲೋವರ್ ಬರ್ತ್ 410 (710), ಅಪ್ಪರ್ ಬರ್ತ್ 460 (760) ಹಾಗೂ ಸಿಟ್ಟಿಂಗ್ 368 (578) ನಿಗದಿ ಗೊಳಿಸಲಾಗಿದೆ. <br /> <br /> ಆವರಣದಲ್ಲಿ ಸೂಚಿಸಿರುವಷ್ಟು ಅಂದರೆ ಪ್ರತಿ ಪ್ರಯಾಣಿಕರಿಂದ ಸುಮಾರು ತಲಾ 300 ರೂಪಾಯಿ ಹಣವನ್ನು ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ವಸೂಲಿ ಮಾಡುತ್ತಿರುವ ಖಾಸಗಿ ಸಂಸ್ಥೆಯ ವಾಹನಗಳ ಸ್ವೇಚ್ಛೆಗೆ ಕಡಿವಾಣ ಹಾಕಬೇಕಿದೆ. ಹೈದರಾಬಾದ್ ನಡುವೆ ವಾಹನಗಳನ್ನು ಓಡಿಸುತ್ತಿರುವ ಮತ್ತೊಂದು ಸಂಸ್ಥೆ 2*3 ಆಸನದ ವಾಹನಕ್ಕೆ ಸಾಮಾನ್ಯ ದರ ರೂ, 295 (370) ಹವಾನಿಯಂತ್ರಿತ 460 (540) ಮತ್ತು ಡಿಲಕ್ಸ್ ವಾಹನಕ್ಕೆ 380 (460) ರೂಪಾಯಿ ಪಡೆಯಲಾಗುತ್ತಿದೆ.<br /> <br /> ಮಾಹಿತಿ ನೀಡದೇ ಹೆಚ್ಚುವರಿ ಹಣ ಪಡೆಯುವುದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದ್ದು ಈ ಬಗ್ಗೆ ಸಾರಿಗೆ ಇಲಾಖೆ (ಆರ್ಟಿಓ) ಮತ್ತು ಸಂಬಂಧಿತರು ಮಾತ್ರ ಯಾವ ಕಾನೂನು ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರಲ್ಲಿ ಅಸಮಧಾನಕ್ಕೆ ಕಾರಣವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>