<p><strong>ವಿಜಾಪುರ: </strong>ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ ಖೇಣಿ ಅವರ 62ನೇ ಜನ್ಮದಿನವನ್ನು ನಗರದಲ್ಲಿ ಅಕ್ಟೋಬರ್ 9 ರಂದು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಖಿಲ ಕರ್ನಾಟಕ ಅಶೋಕ ಖೇಣಿ ಯೂಥ್ ಮೂವ್ಮೆಂಟ್ನ ರಾಜ್ಯ ಘಟಕದ ಧ್ಯಕ್ಷ ನಾಗೇಂಧ್ರ ಪ್ರಸಾದ ಅವರು ಹೇಳಿದ್ದಾರೆ.<br /> <br /> ವಿಜಾಪುರ ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಅವರು, ಈ ಕಾರ್ಯಕ್ರಮದ ಅಂಗವಾಗಿ ಅ. 1ರಿಂದ 8ರ ವರೆಗೆ ಯೋಗ ಶಿಬಿರ, ಅ. 9 ರಂದು ಸರ್ವಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ನಗರದ ಬಿ.ಎಲ್.ಡಿ.ಇ. ನ್ಯೂ. ಕ್ಯಾಂಪಸ್ ಆವರಣದಲ್ಲಿ ಸಕಲ ಸಿದ್ಧತೆ ನಡೆಸಲಾಗುತ್ತಿದೆ ಎಂದರು.<br /> <br /> ಈ ಹಿಂದೆ ಖೇಣಿ ಅವರ ಜನ್ಮದಿನವನ್ನು ಮೈಸೂರು, ದಾವಣಗೆರೆ, ಮಂಡ್ಯ ಜಿಲ್ಲೆಗಳಲ್ಲಿ ಆಚರಿಸಲಾಗಿದ್ದು, ಆ ನೆನಪಿಗೋಸ್ಕರ ಬಡ ಮಕ್ಕಳಿಗೆ ವಸತಿ ನಿಲಯದಂತಹ ಕುರುಹುಗಳನ್ನು ಮಾಡಿದ್ದೇವೆ. ಈ ಜಿಲ್ಲೆಯಲ್ಲೂ ಕೂಡ ಖೇಣಿ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ಬಡ ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ಐ.ಎ.ಎಸ್. ಮತ್ತು ಐ.ಪಿ.ಎಸ್. ಕೊರ್ಸ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. <br /> <br /> ಅದರಲ್ಲಿ ಮೊದಲು ವಿಜಾಪುರ ಜಿಲ್ಲೆಯ 20 ಅರ್ಹ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ಅಖಿಲ ಕರ್ನಾಟಕ ಯೂಥ್ ಮೂವ್ಮೆಂಟ್ನ ಗೌರವಾಧ್ಯಕ್ಷ ಸಿದ್ರಾಮಪ್ಪ ಉಪ್ಪಿನ ಮಾತನಾಡಿ, ಈ ಕಾರ್ಯಕ್ರಮದಲ್ಲಿ ನಾಡಿನ ಹಲವು ಮಠಾಧೀಶರು ಭಾಗವಹಿಸಲಿದ್ದಾರೆ. <br /> <br /> ವಿವಾಹವಾಗುವ ವಧು-ವರ ಸಂಬಂದಿಕರಿಗೆ ಉಚಿತ ವಾಹನ, ಊಟದ ವ್ಯವಸ್ಥೆ, ವಧು-ವರರಿಗೆ ಬಟ್ಟೆ, ತಾಳಿ ನೀಡಲಾಗುವುದು.ಈ ಕಾರ್ಯಕ್ರಮದಲ್ಲಿ ಸುಮಾರು 6 ಲಕ್ಷ ಜನಸಂಖ್ಯೆ ಸೇರಲಿದೆ. <br /> <br /> ಜಿಲ್ಲೆಯಲ್ಲಿ ಈ ನೆನಪಿಗಾಗಿ ಸರ್ವಧರ್ಮದ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಏನಾದರೊಂದು ಕಾರ್ಯ ಮಾಡೋಣ ಅದಕ್ಕೆ ಜಿಲ್ಲೆಯ ಗಣ್ಯರು ಸಲಹೆ, ಸೂಚನೆಗಳನ್ನು ನೀಡಬಹುದು ಎಂದರು.<br /> <br /> ಪತ್ರಿಕಾಗೋಷ್ಠಿಯಲ್ಲಿ ಈ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಸದಸ್ಯ ಶ್ರೀಶೈಲಗೌಡ ಬಿರಾದಾರ, ಸೋಮನಗೌಡ ಪಾಟೀಲ, ಸುನೀಲ ಬೈರಾವಡಗಿ, ಶಂಕರಗೌಡ ಪಾಟೀಲ, ಎಂ. ಆರ್. ಪಾಟೀಲ, ರವಿ ಖಾನಾಪೂರ ಹಾಗೂ ಗುರುಶಾಂತ ನಿಡೋಣಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ: </strong>ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ ಖೇಣಿ ಅವರ 62ನೇ ಜನ್ಮದಿನವನ್ನು ನಗರದಲ್ಲಿ ಅಕ್ಟೋಬರ್ 9 ರಂದು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಖಿಲ ಕರ್ನಾಟಕ ಅಶೋಕ ಖೇಣಿ ಯೂಥ್ ಮೂವ್ಮೆಂಟ್ನ ರಾಜ್ಯ ಘಟಕದ ಧ್ಯಕ್ಷ ನಾಗೇಂಧ್ರ ಪ್ರಸಾದ ಅವರು ಹೇಳಿದ್ದಾರೆ.<br /> <br /> ವಿಜಾಪುರ ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಅವರು, ಈ ಕಾರ್ಯಕ್ರಮದ ಅಂಗವಾಗಿ ಅ. 1ರಿಂದ 8ರ ವರೆಗೆ ಯೋಗ ಶಿಬಿರ, ಅ. 9 ರಂದು ಸರ್ವಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ನಗರದ ಬಿ.ಎಲ್.ಡಿ.ಇ. ನ್ಯೂ. ಕ್ಯಾಂಪಸ್ ಆವರಣದಲ್ಲಿ ಸಕಲ ಸಿದ್ಧತೆ ನಡೆಸಲಾಗುತ್ತಿದೆ ಎಂದರು.<br /> <br /> ಈ ಹಿಂದೆ ಖೇಣಿ ಅವರ ಜನ್ಮದಿನವನ್ನು ಮೈಸೂರು, ದಾವಣಗೆರೆ, ಮಂಡ್ಯ ಜಿಲ್ಲೆಗಳಲ್ಲಿ ಆಚರಿಸಲಾಗಿದ್ದು, ಆ ನೆನಪಿಗೋಸ್ಕರ ಬಡ ಮಕ್ಕಳಿಗೆ ವಸತಿ ನಿಲಯದಂತಹ ಕುರುಹುಗಳನ್ನು ಮಾಡಿದ್ದೇವೆ. ಈ ಜಿಲ್ಲೆಯಲ್ಲೂ ಕೂಡ ಖೇಣಿ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ಬಡ ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ಐ.ಎ.ಎಸ್. ಮತ್ತು ಐ.ಪಿ.ಎಸ್. ಕೊರ್ಸ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. <br /> <br /> ಅದರಲ್ಲಿ ಮೊದಲು ವಿಜಾಪುರ ಜಿಲ್ಲೆಯ 20 ಅರ್ಹ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ಅಖಿಲ ಕರ್ನಾಟಕ ಯೂಥ್ ಮೂವ್ಮೆಂಟ್ನ ಗೌರವಾಧ್ಯಕ್ಷ ಸಿದ್ರಾಮಪ್ಪ ಉಪ್ಪಿನ ಮಾತನಾಡಿ, ಈ ಕಾರ್ಯಕ್ರಮದಲ್ಲಿ ನಾಡಿನ ಹಲವು ಮಠಾಧೀಶರು ಭಾಗವಹಿಸಲಿದ್ದಾರೆ. <br /> <br /> ವಿವಾಹವಾಗುವ ವಧು-ವರ ಸಂಬಂದಿಕರಿಗೆ ಉಚಿತ ವಾಹನ, ಊಟದ ವ್ಯವಸ್ಥೆ, ವಧು-ವರರಿಗೆ ಬಟ್ಟೆ, ತಾಳಿ ನೀಡಲಾಗುವುದು.ಈ ಕಾರ್ಯಕ್ರಮದಲ್ಲಿ ಸುಮಾರು 6 ಲಕ್ಷ ಜನಸಂಖ್ಯೆ ಸೇರಲಿದೆ. <br /> <br /> ಜಿಲ್ಲೆಯಲ್ಲಿ ಈ ನೆನಪಿಗಾಗಿ ಸರ್ವಧರ್ಮದ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಏನಾದರೊಂದು ಕಾರ್ಯ ಮಾಡೋಣ ಅದಕ್ಕೆ ಜಿಲ್ಲೆಯ ಗಣ್ಯರು ಸಲಹೆ, ಸೂಚನೆಗಳನ್ನು ನೀಡಬಹುದು ಎಂದರು.<br /> <br /> ಪತ್ರಿಕಾಗೋಷ್ಠಿಯಲ್ಲಿ ಈ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಸದಸ್ಯ ಶ್ರೀಶೈಲಗೌಡ ಬಿರಾದಾರ, ಸೋಮನಗೌಡ ಪಾಟೀಲ, ಸುನೀಲ ಬೈರಾವಡಗಿ, ಶಂಕರಗೌಡ ಪಾಟೀಲ, ಎಂ. ಆರ್. ಪಾಟೀಲ, ರವಿ ಖಾನಾಪೂರ ಹಾಗೂ ಗುರುಶಾಂತ ನಿಡೋಣಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>