<p><strong>ಬೆಂಗಳೂರು:</strong> ಭೀಕರ ನೆರೆ ಹಾವಳಿಯಲ್ಲಿ ಸಂತ್ರಸ್ತರಾದ ಉತ್ತರಾಖಂಡದ ಜನತೆಗೆ ಸೊಷೆಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐಸಿ -ಕಮ್ಯುನಿಸ್ಟ್) ತನ್ನ ವೈದ್ಯಕೀಯ ಘಟಕದಿಂದ ಚಿಕಿತ್ಸಾ ವ್ಯವಸ್ಥೆ ಮಾಡಿದೆ.<br /> <br /> ಡಾ. ಅನ್ಷುಮನ್ ಮಿತ್ರ ಅವರ ನೇತೃತ್ವದಲ್ಲಿ ರುದ್ರಪ್ರಯಾಗದ ಪ್ರಮುಖ ಮಾರುಕಟ್ಟೆ ಸಂಕೀರ್ಣದಲ್ಲಿ ಪ್ರಧಾನ ಶಿಬಿರ ಪ್ರಾರಂಭಿಸಲಾಗಿದೆ. ಸಂತ್ರಸ್ತ ಹಳ್ಳಿಗಳಲ್ಲಿ ಚಿಕಿತ್ಸೆ ನೀಡಲು ಸಂಚಾರಿ ತಂಡಗಳನ್ನು ಗುಡ್ಡಗಾಡಿನ ಹಳ್ಳಿಗಳಿಗೆ ಕಳುಹಿಸಲಾಗಿದೆ.<br /> <br /> ಇದುವರೆಗೂ 37 ಶಿಬಿರಗಳನ್ನು ವ್ಯವಸ್ಥೆ ಮಾಡಲಾಗಿದೆ. ಸುಮಾರು 250 ಹಳ್ಳಿಗಳಲ್ಲಿ 5,000 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಸುಮಾರು ರೂ 7.5 ಲಕ್ಷ ಮೊತ್ತದ ಔಷಧಿಯನ್ನು ವಿತರಿಸಲಾಗಿದೆ.<br /> <br /> ಎಲ್ಲೆಡೆ ನೀರಿನಿಂದ ಹರಡುವ ರೋಗಗಳು ಪ್ರಮುಖವಾಗಿ ಕಂಡು ಬಂದಿವೆ. ಕಾಮಾಲೆ, ವಾಂತಿಭೇದಿ, ಜಂತು ಹುಳುಗಳು ಹೆಚ್ಚಾಗಿವೆ. ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಸಮಸ್ಯೆ ಉಲ್ಬಣಿಸಿದೆ. ಜನಗಳಲ್ಲಿ ಜಾಗೃತಿ ಉಂಟುಮಾಡಲು ಪ್ರಯತ್ನಿಸಲಾಗುತ್ತಿದೆ.<br /> <br /> ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಆಘಾತ ವ್ಯಾಪಕವಾಗಿ ಯಾರ ಮನೆಗಳಲ್ಲಿ ವ್ಯಕ್ತಿಗಳು ಕಾಣೆಯಾಗಿದ್ದಾರೊ ಅಂತಹವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದು ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಯುಸಿಐಸಿ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಭೀಕರ ನೆರೆ ಹಾವಳಿಯಲ್ಲಿ ಸಂತ್ರಸ್ತರಾದ ಉತ್ತರಾಖಂಡದ ಜನತೆಗೆ ಸೊಷೆಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐಸಿ -ಕಮ್ಯುನಿಸ್ಟ್) ತನ್ನ ವೈದ್ಯಕೀಯ ಘಟಕದಿಂದ ಚಿಕಿತ್ಸಾ ವ್ಯವಸ್ಥೆ ಮಾಡಿದೆ.<br /> <br /> ಡಾ. ಅನ್ಷುಮನ್ ಮಿತ್ರ ಅವರ ನೇತೃತ್ವದಲ್ಲಿ ರುದ್ರಪ್ರಯಾಗದ ಪ್ರಮುಖ ಮಾರುಕಟ್ಟೆ ಸಂಕೀರ್ಣದಲ್ಲಿ ಪ್ರಧಾನ ಶಿಬಿರ ಪ್ರಾರಂಭಿಸಲಾಗಿದೆ. ಸಂತ್ರಸ್ತ ಹಳ್ಳಿಗಳಲ್ಲಿ ಚಿಕಿತ್ಸೆ ನೀಡಲು ಸಂಚಾರಿ ತಂಡಗಳನ್ನು ಗುಡ್ಡಗಾಡಿನ ಹಳ್ಳಿಗಳಿಗೆ ಕಳುಹಿಸಲಾಗಿದೆ.<br /> <br /> ಇದುವರೆಗೂ 37 ಶಿಬಿರಗಳನ್ನು ವ್ಯವಸ್ಥೆ ಮಾಡಲಾಗಿದೆ. ಸುಮಾರು 250 ಹಳ್ಳಿಗಳಲ್ಲಿ 5,000 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಸುಮಾರು ರೂ 7.5 ಲಕ್ಷ ಮೊತ್ತದ ಔಷಧಿಯನ್ನು ವಿತರಿಸಲಾಗಿದೆ.<br /> <br /> ಎಲ್ಲೆಡೆ ನೀರಿನಿಂದ ಹರಡುವ ರೋಗಗಳು ಪ್ರಮುಖವಾಗಿ ಕಂಡು ಬಂದಿವೆ. ಕಾಮಾಲೆ, ವಾಂತಿಭೇದಿ, ಜಂತು ಹುಳುಗಳು ಹೆಚ್ಚಾಗಿವೆ. ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಸಮಸ್ಯೆ ಉಲ್ಬಣಿಸಿದೆ. ಜನಗಳಲ್ಲಿ ಜಾಗೃತಿ ಉಂಟುಮಾಡಲು ಪ್ರಯತ್ನಿಸಲಾಗುತ್ತಿದೆ.<br /> <br /> ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಆಘಾತ ವ್ಯಾಪಕವಾಗಿ ಯಾರ ಮನೆಗಳಲ್ಲಿ ವ್ಯಕ್ತಿಗಳು ಕಾಣೆಯಾಗಿದ್ದಾರೊ ಅಂತಹವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದು ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಯುಸಿಐಸಿ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>