<p><strong>ನವದೆಹಲಿ (ಪಿಟಿಐ</strong>): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಆದೇಶದ ಮೇರೆಗೆ `ಸದ್ಭಾವನಾ ಉಪವಾಸ~ ಕೈಗೊಂಡಿದ್ದರು ಎಂಬ ಗುಜರಾತ್ ಸರ್ಕಾರದ ಹೇಳಿಕೆಗೆ ಕಾಂಗ್ರೆಸ್ ಭಾನುವಾರ ತಿರುಗೇಟು ನೀಡಿದೆ.</p>.<p>`ಭಾರತದ ಜನತೆ ಹುಲ್ಲು ತಿನ್ನುತ್ತಿದ್ದಾರೆಂದು ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ತಿಳಿದುಕೊಂಡಂತಿದೆ. ಇಲ್ಲದಿದ್ದಲ್ಲಿ ಇಂತಹ ನಗೆಪಾಟಲಿಗೀಡಾಗುವ ಹೇಳಿಕೆಗಳನ್ನು ಅವರು ನೀಡುತ್ತಿರಲಿಲ್ಲ~ ಎಂದು ಟೀಕಿಸಿದೆ.<br /> <br /> `ಒಂದು ವೇಳೆ ಕೇಂದ್ರದ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸುವಷ್ಟು ವಿಧೇಯತೆ ನರೇಂದ್ರ ಮೋದಿ ಅವರಿಗಿದ್ದಲ್ಲಿ `ರಾಜ ಧರ್ಮ~ವನ್ನು ಅನುಸರಿಸುವಂತೆ ಅವರದೇ ಪಕ್ಷ ನೀಡಿದ್ದ ಕರೆಯನ್ನು ಏಕೆ ಮನ್ನಿಸಲಿಲ್ಲ? ಅವರದೇ ಕಣ್ಣೆದುರು ನರಹತ್ಯೆ ನಡೆಯುತ್ತಿದ್ದಾಗ ಅಂಧರಾಗಿ ಕುಳಿತುಕೊಳ್ಳಲು ಕೇಂದ್ರ ಸರ್ಕಾರ ಆದೇಶ ನೀಡಿತ್ತೇ?~ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಹರಿಹಾಯ್ದಿದ್ದಾರೆ.<br /> <br /> ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಉತ್ತೇಜಿಸುವ ಮೂಲಕ ರಾಷ್ಟ್ರೀಯ ಏಕತೆ ಬಲಪಡಿಸುವ ಸಲುವಾಗಿ `ಸದ್ಭಾವನಾ ಉಪವಾಸ~ ಕೈಗೊಳ್ಳುವಂತೆ ಕೇಂದ್ರದ ವಿವಿಧ ಸಚಿವಾಲಯಗಳು ಆದೇಶ ನೀಡಿದ್ದಾಗಿ ಗುಜರಾತ್ ಗೃಹ ಸಚಿವಾಲಯವು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿತ್ತು ಎಂಬ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಕಟು ಟೀಕೆ ವ್ಯಕ್ತಪಡಿಸಿದೆ. ಕಳೆದ ಸೆಪ್ಟೆಂಬರ್ 17ರಂದು ತಮ್ಮ ಜನ್ಮದಿನದ ಸಂದರ್ಭದಲ್ಲಿ 3 ದಿನಗಳ ಉಪವಾಸ ನಡೆಸುವುದರೊಂದಿಗೆ ಮೋದಿ ತಮ್ಮ `ಸದ್ಭಾವನಾ ಉಪವಾಸ~ವನ್ನು ಆರಂಭಿಸಿದ್ದರು. ಇಂತಹ 33 ಉಪವಾಸಗಳನ್ನು ಫೆ.12ರವರೆಗೆ ಅವರು ಕೈಗೊಂಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ</strong>): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಆದೇಶದ ಮೇರೆಗೆ `ಸದ್ಭಾವನಾ ಉಪವಾಸ~ ಕೈಗೊಂಡಿದ್ದರು ಎಂಬ ಗುಜರಾತ್ ಸರ್ಕಾರದ ಹೇಳಿಕೆಗೆ ಕಾಂಗ್ರೆಸ್ ಭಾನುವಾರ ತಿರುಗೇಟು ನೀಡಿದೆ.</p>.<p>`ಭಾರತದ ಜನತೆ ಹುಲ್ಲು ತಿನ್ನುತ್ತಿದ್ದಾರೆಂದು ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ತಿಳಿದುಕೊಂಡಂತಿದೆ. ಇಲ್ಲದಿದ್ದಲ್ಲಿ ಇಂತಹ ನಗೆಪಾಟಲಿಗೀಡಾಗುವ ಹೇಳಿಕೆಗಳನ್ನು ಅವರು ನೀಡುತ್ತಿರಲಿಲ್ಲ~ ಎಂದು ಟೀಕಿಸಿದೆ.<br /> <br /> `ಒಂದು ವೇಳೆ ಕೇಂದ್ರದ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸುವಷ್ಟು ವಿಧೇಯತೆ ನರೇಂದ್ರ ಮೋದಿ ಅವರಿಗಿದ್ದಲ್ಲಿ `ರಾಜ ಧರ್ಮ~ವನ್ನು ಅನುಸರಿಸುವಂತೆ ಅವರದೇ ಪಕ್ಷ ನೀಡಿದ್ದ ಕರೆಯನ್ನು ಏಕೆ ಮನ್ನಿಸಲಿಲ್ಲ? ಅವರದೇ ಕಣ್ಣೆದುರು ನರಹತ್ಯೆ ನಡೆಯುತ್ತಿದ್ದಾಗ ಅಂಧರಾಗಿ ಕುಳಿತುಕೊಳ್ಳಲು ಕೇಂದ್ರ ಸರ್ಕಾರ ಆದೇಶ ನೀಡಿತ್ತೇ?~ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಹರಿಹಾಯ್ದಿದ್ದಾರೆ.<br /> <br /> ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಉತ್ತೇಜಿಸುವ ಮೂಲಕ ರಾಷ್ಟ್ರೀಯ ಏಕತೆ ಬಲಪಡಿಸುವ ಸಲುವಾಗಿ `ಸದ್ಭಾವನಾ ಉಪವಾಸ~ ಕೈಗೊಳ್ಳುವಂತೆ ಕೇಂದ್ರದ ವಿವಿಧ ಸಚಿವಾಲಯಗಳು ಆದೇಶ ನೀಡಿದ್ದಾಗಿ ಗುಜರಾತ್ ಗೃಹ ಸಚಿವಾಲಯವು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿತ್ತು ಎಂಬ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಕಟು ಟೀಕೆ ವ್ಯಕ್ತಪಡಿಸಿದೆ. ಕಳೆದ ಸೆಪ್ಟೆಂಬರ್ 17ರಂದು ತಮ್ಮ ಜನ್ಮದಿನದ ಸಂದರ್ಭದಲ್ಲಿ 3 ದಿನಗಳ ಉಪವಾಸ ನಡೆಸುವುದರೊಂದಿಗೆ ಮೋದಿ ತಮ್ಮ `ಸದ್ಭಾವನಾ ಉಪವಾಸ~ವನ್ನು ಆರಂಭಿಸಿದ್ದರು. ಇಂತಹ 33 ಉಪವಾಸಗಳನ್ನು ಫೆ.12ರವರೆಗೆ ಅವರು ಕೈಗೊಂಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>