<p>ಗಿರೀಶ ಕಾಸರವಳ್ಳಿ ನಿರ್ದೇಶನದ `ಕನಸೆಂಬೊ ಕುದುರೆಯನೇರಿ~ ಸಿನಿಮಾದ ಬಗ್ಗೆ ಮಾತನಾಡುತ್ತಾ, `ಇದು ಅಪ್ಪಟ ಕನ್ನಡದ ಕಥೆ~ ಎಂದಿದ್ದರು ಜ್ಞಾನಪೀಠ ಪುರಸ್ಕೃತ ಲೇಖಕ ಯು.ಆರ್.ಅನಂತಮೂರ್ತಿ.</p>.<p>ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಈ ಸಿನಿಮಾ ಗಳಿಸಿತ್ತು. ಆದರೆ, 2009ರ ಸಾಲಿನ ರಾಜ್ಯ ಪ್ರಶಸ್ತಿಗಳ ಪಟ್ಟಿಯಲ್ಲಿ ಗಿರೀಶರ ಸಿನಿಮಾದ ಹೆಸರೇ ಇಲ್ಲ. ಚಿತ್ರದ ಮೂಲಕಥೆಗಾರ ಅಮರೇಶ ನುಗಡೋಣಿ ಅವರಿಗೂ ಮನ್ನಣೆ ದೊರೆತಿಲ್ಲ. <br /> <br /> ~ಕನಸೆಂಬೊ ಕುದುರೆಯನೇರಿ~ ಚಿತ್ರದ ಕೇಂದ್ರವಾದ ಈರ್ಯನಾಗಿ ವೈಜನಾಥ ಬಿರಾದಾರ್ ಅವರ ಪಾತ್ರ ನಿರ್ವಹಣೆಗೆ ಅಂತರರಾಷ್ಟ್ರೀಯ ಪ್ರಶಸ್ತಿಯೊಂದು ದೊರೆತಿದೆ. 2009ರ ರಾಷ್ಟ್ರಪ್ರಶಸ್ತಿಗಳ ಆಯ್ಕೆ ಸಂದರ್ಭದಲ್ಲಿ ಕೂಡ ಬಿರಾದಾರ್ ಹೆಸರು ಪ್ರಸ್ತಾಪದಲ್ಲಿತ್ತು. <br /> <br /> ಆದರೆ, `ಪಾ~ ಚಿತ್ರದ ಅಮಿತಾಭ್ ಬಚ್ಚನ್ ಅವರಿಂದಾಗಿ ಬಿರಾದಾರ್ ಪ್ರಶಸ್ತಿ ವಂಚಿತರಾದರು. ರಾಜ್ಯಪ್ರಶಸ್ತಿ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರಿಗಾಗಿ ಬಿರಾದಾರ್ ಪೇಲವ ಮುಖ (ತಮ್ಮ ಪಾತ್ರಗಳಂತೆ) ಹೊಂದಬೇಕಾಯಿತು. <br /> <br /> `ಕನಸೆಂಬೊ ಕುದುರೆಯನೇರಿ~ ಚಿತ್ರದ ಬಗ್ಗೆ ಮಾತ್ರವಲ್ಲ, ಹೊಸ ಪ್ರತಿಭೆಗಳ ಅನೇಕ ಚಿತ್ರಗಳಿಗೆ 2009ರ ರಾಜ್ಯ ಪ್ರಶಸ್ತಿ ಪಟ್ಟಿಯಲ್ಲಿ ಅವಕಾಶವೇ ದೊರೆತಿಲ್ಲ. ಅಗ್ನಿ ಶ್ರೀಧರ್ ಬಳಗದ `ಕಳ್ಳರ ಸಂತೆ~, ಅಮರ್ ನಿರ್ದೇಶನದ `ದಿಲ್ದಾರ~, ಅರವಿಂದ್ ನಿರ್ದೇಶನದ `ಜುಗಾರಿ~, ಗುರುಪ್ರಸಾದ್ ನಿರ್ದೇಶನದ `ಎದ್ದೇಳು ಮಂಜುನಾಥಾ~, ನಾಗತಿಹಳ್ಳಿ ಚಂದ್ರಶೇಖರರ `ಒಲವೇ ಜೀವನ ಲೆಕ್ಕಾಚಾರ~, ಚಿರು ರವೀಂದ್ರರ `ಪರೀಕ್ಷೆ~ ಸಿನಿಮಾಗಳು ವಿವಿಧ ಕಾರಣಗಳಿಂದಾಗಿ ಗಮನಸೆಳೆದಿದ್ದವು. <br /> <br /> ಆದರೆ, ಈ ಯಾವ ಸಿನಿಮಾಗಳಿಗೂ ತಕ್ಕ ಮಾನ್ಯತೆ ದೊರೆತಿಲ್ಲ. ನಾಗತಿಹಳ್ಳಿ ಅವರಿಗೆ ಮಾತ್ರ ಕಥಾ ಬರಹಕ್ಕೆ ಪ್ರಶಸ್ತಿ ಕೊಟ್ಟ ಶಾಸ್ತ್ರ ಮಾಡಲಾಗಿದೆ. <br /> <br /> ನಂಬಲರ್ಹ ಮೂಲಗಳ ಪ್ರಕಾರ, ಪ್ರಶಸ್ತಿ ಆಯ್ಕೆಯ ಅಂತಿಮ ಸಭೆ ನಡೆಯುವ ವೇಳೆಗಾಗಲೇ ಕೆಲವು ಪ್ರಶಸ್ತಿಗಳು ನಿರ್ಧಾರವಾಗಿ ಹೋಗಿದ್ದವು. `ರಸಋಷಿ ಕುವೆಂಪು~ ಚಿತ್ರವನ್ನು ಮೊದಲ ಅತ್ಯುತ್ತಮ ಚಿತ್ರವಾಗಿ ಆಯ್ಕೆ ಮಾಡಲು ಕೆಲವರು ವಿಪರೀತ ಉತ್ಸಾಹ ತೋರಿದರು. <br /> <br /> ಚಿತ್ರದ ಗುಣಮಟ್ಟದ ಬಗ್ಗೆ ಚರ್ಚೆಯಾಗದೆ, ಕುವೆಂಪು ಹೆಸರಿನ ಕಾರಣದಿಂದಲೇ ಪ್ರಶಸ್ತಿಯನ್ನು ನೀಡಲಾಯಿತು. ಸಿ.ಆರ್.ಸಿಂಹ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿಸುವ ಪ್ರಯತ್ನಗಳು ನಡೆದವು. (ಕೊನೆಯ ಚಿತ್ರ ಎನ್ನುವ ಭಾವನಾತ್ಮಕ ಕಾರಣದಿಂದಾಗಿ ಅತ್ಯುತ್ತಮ ನಟ ವಿಷ್ಣುವರ್ಧನ್ರ ಪಾಲಾಯಿತು. `ಎದ್ದೇಳು ಮಂಜುನಾಥಾ~ ಚಿತ್ರದ ಜಗ್ಗೇಶ್ ಮತ್ತೊಮ್ಮೆ ರಾಜ್ಯಪ್ರಶಸ್ತಿ ವಂಚಿತರಾದರು).<br /> <br /> `ಎದ್ದೇಳು ಮಂಜುನಾಥಾ~ ಚಿತ್ರದ ತಬಲಾ ನಾಣಿ ಹಾಗೂ `ದಿಲ್ದಾರ~ ಚಿತ್ರದ ರಂಗಾಯಣ ರಘು ಮತ್ತಿಬ್ಬರು ನತದೃಷ್ಟ ಕಲಾವಿದರು. ಪೋಷಕ ನಟ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ಈ ಇಬ್ಬರ ಅತ್ಯುತ್ತಮ ನಿರ್ವಹಣೆ ಮೂಲೆಗುಂಪಾಯಿತು. ಮಕ್ಕಳ ಚಿತ್ರಗಳ ಆಯ್ಕೆಯ ಸಂದರ್ಭದಲ್ಲಿ `ಗುರುಕುಲ~ದ ಬಗೆಗಿನ ಕೆಲವು ಸದಸ್ಯರ ಆಸ್ಥೆಯಿಂದಾಗಿ, `ಕಿನ್ನರಬಾಲೆ~ ಪ್ರಶಸ್ತಿಯನ್ನು ಹಂಚಿಕೊಳ್ಳಬೇಕಾಯಿತು.<br /> <br /> ಕಳೆದ ವರ್ಷ `ಸೈಕೊ~ ಚಿತ್ರದ ಸಂಗೀತಕ್ಕೆ ಪ್ರಶಸ್ತಿ ತಪ್ಪಿಸಿಕೊಂಡಿದ್ದ ರಘು ದೀಕ್ಷಿತ್ ಈ ಸಲವೂ (ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಸಂಗೀತ) ನಿರಾಶರಾಗಬೇಕಾಯಿತು. ಇದಕ್ಕೆ ಸಮಿತಿಯಲ್ಲಿನ ತಜ್ಞರು ಮಂಡಿಸಿದ ವಾದ- `ರಘು ದೀಕ್ಷಿತರ ಸಂಗೀತ ಈ ನೆಲದ್ದಲ್ಲ~. <br /> <br /> ಆದರೆ, `ರಾಜ್~ ಚಿತ್ರಕ್ಕಾಗಿ ಪ್ರಶಸ್ತಿ ಪಡೆದಿರುವ ಹರಿಕೃಷ್ಣರ ಸಂಗೀತ ಎಷ್ಟು ಸಾಚಾ ಎನ್ನುವ ಬಗ್ಗೆ ಚರ್ಚೆಗಳೇ ನಡೆದಂತಿಲ್ಲ. ಇನ್ನು ಈ ನೆಲದ್ದೇ ಸಂಗೀತವನ್ನು ನೆಚ್ಚಿಕೊಂಡ ಪ್ರವೀಣ್ ಡಿ. ರಾವ್ (ಚಿತ್ರ: ದಿಲ್ದಾರ), ವೀರ್ ಸಮರ್ಥ್ (ಚಿತ್ರ: ಕಾರಂಜಿ) ಅವರನ್ನೂ ಪ್ರಶಸ್ತಿಗೆ ಪರಿಗಣಿಸಿಲ್ಲ.<br /> <br /> ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ವಿಷ್ಣುವರ್ಧನ್ ಪ್ರಶಸ್ತಿ ನಿರ್ಣಯಗಳು ಪೂರ್ವ ನಿರ್ಧರಿತವಾಗಿದ್ದವು ಎನ್ನಲಾಗಿದೆ. ನಿರ್ಮಾಪಕರಾಗಿ, ಗೀತರಚನಕಾರರಾಗಿ ಹೆಚ್ಚಿನ ಸೇವೆ ಸಲ್ಲಿಸಿದ್ದರೂ ಸಿ.ವಿ.ಶಿವಶಂಕರ್ ಅವರನ್ನು ನಿರ್ದೇಶನಕ್ಕಾಗಿ ನೀಡುವ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಪರಿಗಣಿಸಿದ್ದು ಕೆಲವರನ್ನು ತೃಪ್ತಿಪಡಿಸುವ ಉಪಾಯದಂತಿತ್ತು.<br /> <br /> ಚಿತ್ರೋದ್ಯಮದಲ್ಲಿ ಕೂಡ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಬಗ್ಗೆ ಸಮಾಧಾನದ ಮಾತುಗಳಿಲ್ಲ. ಗಾಂಧಿನಗರದಲ್ಲಿಗ, ಆಯ್ಕೆ ಸಮಿತಿಯ ಬಂಧುಮಿತ್ರರಿಗೆ ಕೆಲವು ಪ್ರಶಸ್ತಿಗಳು ಹಂಚಿಕೆಯಾಗಿವೆ ಎನ್ನುವ ಗುಲ್ಲು. ಪ್ರಶಸ್ತಿಗಳ ಬಗ್ಗೆ ಇಷ್ಟೆಲ್ಲ ಅಪಸ್ವರಗಳಿದ್ದರೂ `ಗುಣಮಟ್ಟದ ಪ್ರಶಸ್ತಿಗಳನ್ನು ನೀಡಿದ್ದೇವೆ~ ಎಂದು ಆಯ್ಕೆ ಸಮಿತಿ ಹಿಗ್ಗಿದೆ. <br /> <br /> ರಾಜಕಾರಣದಲ್ಲಿ ಮೌಲ್ಯಗಳ ಅರ್ಥವೇ ಬದಲಾಗಿರುವ ಸಂದರ್ಭವಿದು. ಹಾಗಾಗಿ, ಸಿನಿಮಾದಲ್ಲೂ `ಗುಣಮಟ್ಟ~ದ ಅರ್ಥ ಬದಲಾಗಿರಬೇಕು!<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಿರೀಶ ಕಾಸರವಳ್ಳಿ ನಿರ್ದೇಶನದ `ಕನಸೆಂಬೊ ಕುದುರೆಯನೇರಿ~ ಸಿನಿಮಾದ ಬಗ್ಗೆ ಮಾತನಾಡುತ್ತಾ, `ಇದು ಅಪ್ಪಟ ಕನ್ನಡದ ಕಥೆ~ ಎಂದಿದ್ದರು ಜ್ಞಾನಪೀಠ ಪುರಸ್ಕೃತ ಲೇಖಕ ಯು.ಆರ್.ಅನಂತಮೂರ್ತಿ.</p>.<p>ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಈ ಸಿನಿಮಾ ಗಳಿಸಿತ್ತು. ಆದರೆ, 2009ರ ಸಾಲಿನ ರಾಜ್ಯ ಪ್ರಶಸ್ತಿಗಳ ಪಟ್ಟಿಯಲ್ಲಿ ಗಿರೀಶರ ಸಿನಿಮಾದ ಹೆಸರೇ ಇಲ್ಲ. ಚಿತ್ರದ ಮೂಲಕಥೆಗಾರ ಅಮರೇಶ ನುಗಡೋಣಿ ಅವರಿಗೂ ಮನ್ನಣೆ ದೊರೆತಿಲ್ಲ. <br /> <br /> ~ಕನಸೆಂಬೊ ಕುದುರೆಯನೇರಿ~ ಚಿತ್ರದ ಕೇಂದ್ರವಾದ ಈರ್ಯನಾಗಿ ವೈಜನಾಥ ಬಿರಾದಾರ್ ಅವರ ಪಾತ್ರ ನಿರ್ವಹಣೆಗೆ ಅಂತರರಾಷ್ಟ್ರೀಯ ಪ್ರಶಸ್ತಿಯೊಂದು ದೊರೆತಿದೆ. 2009ರ ರಾಷ್ಟ್ರಪ್ರಶಸ್ತಿಗಳ ಆಯ್ಕೆ ಸಂದರ್ಭದಲ್ಲಿ ಕೂಡ ಬಿರಾದಾರ್ ಹೆಸರು ಪ್ರಸ್ತಾಪದಲ್ಲಿತ್ತು. <br /> <br /> ಆದರೆ, `ಪಾ~ ಚಿತ್ರದ ಅಮಿತಾಭ್ ಬಚ್ಚನ್ ಅವರಿಂದಾಗಿ ಬಿರಾದಾರ್ ಪ್ರಶಸ್ತಿ ವಂಚಿತರಾದರು. ರಾಜ್ಯಪ್ರಶಸ್ತಿ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರಿಗಾಗಿ ಬಿರಾದಾರ್ ಪೇಲವ ಮುಖ (ತಮ್ಮ ಪಾತ್ರಗಳಂತೆ) ಹೊಂದಬೇಕಾಯಿತು. <br /> <br /> `ಕನಸೆಂಬೊ ಕುದುರೆಯನೇರಿ~ ಚಿತ್ರದ ಬಗ್ಗೆ ಮಾತ್ರವಲ್ಲ, ಹೊಸ ಪ್ರತಿಭೆಗಳ ಅನೇಕ ಚಿತ್ರಗಳಿಗೆ 2009ರ ರಾಜ್ಯ ಪ್ರಶಸ್ತಿ ಪಟ್ಟಿಯಲ್ಲಿ ಅವಕಾಶವೇ ದೊರೆತಿಲ್ಲ. ಅಗ್ನಿ ಶ್ರೀಧರ್ ಬಳಗದ `ಕಳ್ಳರ ಸಂತೆ~, ಅಮರ್ ನಿರ್ದೇಶನದ `ದಿಲ್ದಾರ~, ಅರವಿಂದ್ ನಿರ್ದೇಶನದ `ಜುಗಾರಿ~, ಗುರುಪ್ರಸಾದ್ ನಿರ್ದೇಶನದ `ಎದ್ದೇಳು ಮಂಜುನಾಥಾ~, ನಾಗತಿಹಳ್ಳಿ ಚಂದ್ರಶೇಖರರ `ಒಲವೇ ಜೀವನ ಲೆಕ್ಕಾಚಾರ~, ಚಿರು ರವೀಂದ್ರರ `ಪರೀಕ್ಷೆ~ ಸಿನಿಮಾಗಳು ವಿವಿಧ ಕಾರಣಗಳಿಂದಾಗಿ ಗಮನಸೆಳೆದಿದ್ದವು. <br /> <br /> ಆದರೆ, ಈ ಯಾವ ಸಿನಿಮಾಗಳಿಗೂ ತಕ್ಕ ಮಾನ್ಯತೆ ದೊರೆತಿಲ್ಲ. ನಾಗತಿಹಳ್ಳಿ ಅವರಿಗೆ ಮಾತ್ರ ಕಥಾ ಬರಹಕ್ಕೆ ಪ್ರಶಸ್ತಿ ಕೊಟ್ಟ ಶಾಸ್ತ್ರ ಮಾಡಲಾಗಿದೆ. <br /> <br /> ನಂಬಲರ್ಹ ಮೂಲಗಳ ಪ್ರಕಾರ, ಪ್ರಶಸ್ತಿ ಆಯ್ಕೆಯ ಅಂತಿಮ ಸಭೆ ನಡೆಯುವ ವೇಳೆಗಾಗಲೇ ಕೆಲವು ಪ್ರಶಸ್ತಿಗಳು ನಿರ್ಧಾರವಾಗಿ ಹೋಗಿದ್ದವು. `ರಸಋಷಿ ಕುವೆಂಪು~ ಚಿತ್ರವನ್ನು ಮೊದಲ ಅತ್ಯುತ್ತಮ ಚಿತ್ರವಾಗಿ ಆಯ್ಕೆ ಮಾಡಲು ಕೆಲವರು ವಿಪರೀತ ಉತ್ಸಾಹ ತೋರಿದರು. <br /> <br /> ಚಿತ್ರದ ಗುಣಮಟ್ಟದ ಬಗ್ಗೆ ಚರ್ಚೆಯಾಗದೆ, ಕುವೆಂಪು ಹೆಸರಿನ ಕಾರಣದಿಂದಲೇ ಪ್ರಶಸ್ತಿಯನ್ನು ನೀಡಲಾಯಿತು. ಸಿ.ಆರ್.ಸಿಂಹ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿಸುವ ಪ್ರಯತ್ನಗಳು ನಡೆದವು. (ಕೊನೆಯ ಚಿತ್ರ ಎನ್ನುವ ಭಾವನಾತ್ಮಕ ಕಾರಣದಿಂದಾಗಿ ಅತ್ಯುತ್ತಮ ನಟ ವಿಷ್ಣುವರ್ಧನ್ರ ಪಾಲಾಯಿತು. `ಎದ್ದೇಳು ಮಂಜುನಾಥಾ~ ಚಿತ್ರದ ಜಗ್ಗೇಶ್ ಮತ್ತೊಮ್ಮೆ ರಾಜ್ಯಪ್ರಶಸ್ತಿ ವಂಚಿತರಾದರು).<br /> <br /> `ಎದ್ದೇಳು ಮಂಜುನಾಥಾ~ ಚಿತ್ರದ ತಬಲಾ ನಾಣಿ ಹಾಗೂ `ದಿಲ್ದಾರ~ ಚಿತ್ರದ ರಂಗಾಯಣ ರಘು ಮತ್ತಿಬ್ಬರು ನತದೃಷ್ಟ ಕಲಾವಿದರು. ಪೋಷಕ ನಟ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ಈ ಇಬ್ಬರ ಅತ್ಯುತ್ತಮ ನಿರ್ವಹಣೆ ಮೂಲೆಗುಂಪಾಯಿತು. ಮಕ್ಕಳ ಚಿತ್ರಗಳ ಆಯ್ಕೆಯ ಸಂದರ್ಭದಲ್ಲಿ `ಗುರುಕುಲ~ದ ಬಗೆಗಿನ ಕೆಲವು ಸದಸ್ಯರ ಆಸ್ಥೆಯಿಂದಾಗಿ, `ಕಿನ್ನರಬಾಲೆ~ ಪ್ರಶಸ್ತಿಯನ್ನು ಹಂಚಿಕೊಳ್ಳಬೇಕಾಯಿತು.<br /> <br /> ಕಳೆದ ವರ್ಷ `ಸೈಕೊ~ ಚಿತ್ರದ ಸಂಗೀತಕ್ಕೆ ಪ್ರಶಸ್ತಿ ತಪ್ಪಿಸಿಕೊಂಡಿದ್ದ ರಘು ದೀಕ್ಷಿತ್ ಈ ಸಲವೂ (ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಸಂಗೀತ) ನಿರಾಶರಾಗಬೇಕಾಯಿತು. ಇದಕ್ಕೆ ಸಮಿತಿಯಲ್ಲಿನ ತಜ್ಞರು ಮಂಡಿಸಿದ ವಾದ- `ರಘು ದೀಕ್ಷಿತರ ಸಂಗೀತ ಈ ನೆಲದ್ದಲ್ಲ~. <br /> <br /> ಆದರೆ, `ರಾಜ್~ ಚಿತ್ರಕ್ಕಾಗಿ ಪ್ರಶಸ್ತಿ ಪಡೆದಿರುವ ಹರಿಕೃಷ್ಣರ ಸಂಗೀತ ಎಷ್ಟು ಸಾಚಾ ಎನ್ನುವ ಬಗ್ಗೆ ಚರ್ಚೆಗಳೇ ನಡೆದಂತಿಲ್ಲ. ಇನ್ನು ಈ ನೆಲದ್ದೇ ಸಂಗೀತವನ್ನು ನೆಚ್ಚಿಕೊಂಡ ಪ್ರವೀಣ್ ಡಿ. ರಾವ್ (ಚಿತ್ರ: ದಿಲ್ದಾರ), ವೀರ್ ಸಮರ್ಥ್ (ಚಿತ್ರ: ಕಾರಂಜಿ) ಅವರನ್ನೂ ಪ್ರಶಸ್ತಿಗೆ ಪರಿಗಣಿಸಿಲ್ಲ.<br /> <br /> ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ವಿಷ್ಣುವರ್ಧನ್ ಪ್ರಶಸ್ತಿ ನಿರ್ಣಯಗಳು ಪೂರ್ವ ನಿರ್ಧರಿತವಾಗಿದ್ದವು ಎನ್ನಲಾಗಿದೆ. ನಿರ್ಮಾಪಕರಾಗಿ, ಗೀತರಚನಕಾರರಾಗಿ ಹೆಚ್ಚಿನ ಸೇವೆ ಸಲ್ಲಿಸಿದ್ದರೂ ಸಿ.ವಿ.ಶಿವಶಂಕರ್ ಅವರನ್ನು ನಿರ್ದೇಶನಕ್ಕಾಗಿ ನೀಡುವ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಪರಿಗಣಿಸಿದ್ದು ಕೆಲವರನ್ನು ತೃಪ್ತಿಪಡಿಸುವ ಉಪಾಯದಂತಿತ್ತು.<br /> <br /> ಚಿತ್ರೋದ್ಯಮದಲ್ಲಿ ಕೂಡ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಬಗ್ಗೆ ಸಮಾಧಾನದ ಮಾತುಗಳಿಲ್ಲ. ಗಾಂಧಿನಗರದಲ್ಲಿಗ, ಆಯ್ಕೆ ಸಮಿತಿಯ ಬಂಧುಮಿತ್ರರಿಗೆ ಕೆಲವು ಪ್ರಶಸ್ತಿಗಳು ಹಂಚಿಕೆಯಾಗಿವೆ ಎನ್ನುವ ಗುಲ್ಲು. ಪ್ರಶಸ್ತಿಗಳ ಬಗ್ಗೆ ಇಷ್ಟೆಲ್ಲ ಅಪಸ್ವರಗಳಿದ್ದರೂ `ಗುಣಮಟ್ಟದ ಪ್ರಶಸ್ತಿಗಳನ್ನು ನೀಡಿದ್ದೇವೆ~ ಎಂದು ಆಯ್ಕೆ ಸಮಿತಿ ಹಿಗ್ಗಿದೆ. <br /> <br /> ರಾಜಕಾರಣದಲ್ಲಿ ಮೌಲ್ಯಗಳ ಅರ್ಥವೇ ಬದಲಾಗಿರುವ ಸಂದರ್ಭವಿದು. ಹಾಗಾಗಿ, ಸಿನಿಮಾದಲ್ಲೂ `ಗುಣಮಟ್ಟ~ದ ಅರ್ಥ ಬದಲಾಗಿರಬೇಕು!<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>