<p><strong>ದೇಸಾಯ್ ಅವಾರ್ಡಿಗೆ ಕೇಂದ್ರದ ಪೂರ್ಣ ಒಪ್ಪಿಗೆ<br /> ನವದೆಹಲಿ, ಜುಲೈ </strong>4 - ಈಗಿರುವ ತುಟ್ಟಿಭತ್ಯದ ಅಧಿಕಾಂಶವನ್ನು ಮೂಲವೇತನದೊಂದಿಗೆ ಸೇರ್ಪಡೆ ಮಾಡುವುದು, ವೇತನ ಪ್ರಮಾಣದಲ್ಲಿ ಅಧಿಕ್ಯ ಮತ್ತು ಮೂರು ವರ್ಗಗಳಾಗಿ ಬ್ಯಾಂಕುಗಳ ವರ್ಗೀಕರಣ - ಇವು ಮೂರು ಪ್ರಮುಖ ಶಿಫಾರಸುಗಳನ್ನು ಮಾಡಿದ್ದ ದೇಸಾಯಿ ಬ್ಯಾಂಕ್ ಅವಾರ್ಡ್ ಅನ್ನು ಕೇಂದ್ರ ಸರಕಾರ ಪೂರ್ಣವಾಗಿ ಒಪ್ಪಿಕೊಂಡಿದೆ.<br /> <br /> <strong>ಚಿನ್ನದ ಗಣಿಗಳ ವರ್ಗಾವಣೆ<br /> ಬೆಂಗಳೂರು, ಜುಲೈ 4</strong> - ಪರಿಹಾರ ಹಾಗೂ ಚಿನ್ನದ ಮೇಲಿನ ರಾಜ್ಯ ಧನದ ಪ್ರಶ್ನೆಗಳು ಇತ್ಯರ್ಥವಾದ ಮೇಲೆ ಮಾತ್ರ ಕೋಲಾರದ ಚಿನ್ನದ ಗಣಿಗಳನ್ನು ಕೇಂದ್ರಕ್ಕೆ ವರ್ಗಾಯಿಸುವುದಾಗಿ ಕೈಗಾರಿಕೆ ಸಚಿವ ಶ್ರೀ ಕೆ. ಮಲ್ಲಪ್ಪನವರು ಇಂದು ವಿಧಾನ ಸಭೆಯಲ್ಲಿ ತಿಳಿಸಿದರು.<br /> <br /> ವರ್ಗಾವಣೆಯ ಷರತ್ತುಗಳನ್ನು ಕುರಿತು ಕೇಂದ್ರದೊಡನೆ ಸಂಧಾನ ನಡೆಸಲು ಸಂಪುಟದ ಸಮಿತಿಯೊಂದನ್ನು ರಾಜ್ಯ ಸರಕಾರ ನೇಮಿಸಿದೆಯೆಂದೂ ಸಚಿವರು ತಿಳಿಸಿದರು.<br /> ಶ್ರೀ ಬಿ. ವಿ. ಕದಂ ಅವರು ಕಳುಹಿಸಿದ್ದ ಮೂಲ ಪ್ರಶ್ನೆಯ ಮೇಲೆ ಸಭೆಯಲ್ಲಿ ವಿಫುಲ ಪ್ರಶ್ನೋತ್ತರಗಳಾದವು.<br /> <br /> ಚಿನ್ನದ ಗಣಿಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆಯೆಂದು ಸಚಿವರು ಶ್ರೀ ಕದಂ ಅವರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇಸಾಯ್ ಅವಾರ್ಡಿಗೆ ಕೇಂದ್ರದ ಪೂರ್ಣ ಒಪ್ಪಿಗೆ<br /> ನವದೆಹಲಿ, ಜುಲೈ </strong>4 - ಈಗಿರುವ ತುಟ್ಟಿಭತ್ಯದ ಅಧಿಕಾಂಶವನ್ನು ಮೂಲವೇತನದೊಂದಿಗೆ ಸೇರ್ಪಡೆ ಮಾಡುವುದು, ವೇತನ ಪ್ರಮಾಣದಲ್ಲಿ ಅಧಿಕ್ಯ ಮತ್ತು ಮೂರು ವರ್ಗಗಳಾಗಿ ಬ್ಯಾಂಕುಗಳ ವರ್ಗೀಕರಣ - ಇವು ಮೂರು ಪ್ರಮುಖ ಶಿಫಾರಸುಗಳನ್ನು ಮಾಡಿದ್ದ ದೇಸಾಯಿ ಬ್ಯಾಂಕ್ ಅವಾರ್ಡ್ ಅನ್ನು ಕೇಂದ್ರ ಸರಕಾರ ಪೂರ್ಣವಾಗಿ ಒಪ್ಪಿಕೊಂಡಿದೆ.<br /> <br /> <strong>ಚಿನ್ನದ ಗಣಿಗಳ ವರ್ಗಾವಣೆ<br /> ಬೆಂಗಳೂರು, ಜುಲೈ 4</strong> - ಪರಿಹಾರ ಹಾಗೂ ಚಿನ್ನದ ಮೇಲಿನ ರಾಜ್ಯ ಧನದ ಪ್ರಶ್ನೆಗಳು ಇತ್ಯರ್ಥವಾದ ಮೇಲೆ ಮಾತ್ರ ಕೋಲಾರದ ಚಿನ್ನದ ಗಣಿಗಳನ್ನು ಕೇಂದ್ರಕ್ಕೆ ವರ್ಗಾಯಿಸುವುದಾಗಿ ಕೈಗಾರಿಕೆ ಸಚಿವ ಶ್ರೀ ಕೆ. ಮಲ್ಲಪ್ಪನವರು ಇಂದು ವಿಧಾನ ಸಭೆಯಲ್ಲಿ ತಿಳಿಸಿದರು.<br /> <br /> ವರ್ಗಾವಣೆಯ ಷರತ್ತುಗಳನ್ನು ಕುರಿತು ಕೇಂದ್ರದೊಡನೆ ಸಂಧಾನ ನಡೆಸಲು ಸಂಪುಟದ ಸಮಿತಿಯೊಂದನ್ನು ರಾಜ್ಯ ಸರಕಾರ ನೇಮಿಸಿದೆಯೆಂದೂ ಸಚಿವರು ತಿಳಿಸಿದರು.<br /> ಶ್ರೀ ಬಿ. ವಿ. ಕದಂ ಅವರು ಕಳುಹಿಸಿದ್ದ ಮೂಲ ಪ್ರಶ್ನೆಯ ಮೇಲೆ ಸಭೆಯಲ್ಲಿ ವಿಫುಲ ಪ್ರಶ್ನೋತ್ತರಗಳಾದವು.<br /> <br /> ಚಿನ್ನದ ಗಣಿಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆಯೆಂದು ಸಚಿವರು ಶ್ರೀ ಕದಂ ಅವರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>