<p><strong>ಗಂಗಾವತಿ:</strong>ವಿದ್ಯೆ ಕಲಿಸಿ ನಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸಿದ ಗುರುಗಳಿಗೆ ನಮನ ಸಲ್ಲಿಸಲು ಏರ್ಪಡಿಸುವ ಗುರು ಸ್ಮರಣೆ ನಮ್ಮ ಪರಂಪರೆ ಮತ್ತು ಗುರು-ಶಿಷ್ಯರ ಸಂಬಂಧದ ಪ್ರತೀಕ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.ನಗರದ ಭಾರತೀಯ ವೈದ್ಯ ಭವನ (ಐಎಂಎ)ದಲ್ಲಿ ಭಾನುವಾರ ಇಲ್ಲಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನ 1965-66ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> </p>.<p>“ನಮ್ಮ ಸಾಧನೆ, ಪ್ರಗತಿಯ ಬಗ್ಗೆ ಒಡಹುಟ್ಟಿದವರು ಸೇರಿದಂತೆ ನೆರೆಹೊರೆಯವರು ಮತ್ಸರ ಪಡುತ್ತಾರೆ. ಅದು ಲೋಕಾರೂಢಿ . ಆದರೆ ತಾಯಿ ಮತ್ತು ಗುರು ಮಾತ್ರ ನಮ್ಮ ಸಾಧನೆಯ ಬಗ್ಗೆ ಹೆಮ್ಮೆಪಡುವಪಡುತ್ತಾರೆ.’’ ಎಂದರು.<br /> <br /> ‘‘ಇಂದು ಕಂಪ್ಯೂಟರ್ ಗುರುವಿನ ಸ್ಥಾನದಲ್ಲಿದೆ. ನಮಗೆ ಎಲ್ಲವನ್ನೂ ಕಲಿಸಿ ಕೊಡುತ್ತದೆ, ಗುರುವಿನ ಸ್ಥಾನ ತುಂಬಬಲ್ಲ ವ್ಯಕ್ತಿಯೇ ಬೇಕಿಲ್ಲ ಎಂದೆನಿಸುತ್ತದೆ. ಆದರೆ ಆ ವಿದ್ಯೆ ಪರಿಪೂರ್ಣವಲ್ಲ. ಆದರ್ಶ ಇದ್ದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.<br /> </p>.<p>“ಆದರ್ಶವನ್ನು ಕೇವಲ ಗುರು ಮಾತ್ರ ತನ್ನ ಶಿಷ್ಯನಿಗೆ ಧಾರೆ ಎರೆಯಬಲ್ಲ. ಅಪ್ಪ ಸಂಪಾದಿಸುವ ಆಸ್ತಿ ದಯಾದಿಗಳ ಪಾಲಾಗಬಹುದು, ಸಂಪತ್ತು ಕಳ್ಳಕಾಕರ ಪಾಲಾಬಹುದು. ಆದರೆ ಗುರು ಕಲಿಸಿದ ವಿದ್ಯಾಸಂಪತ್ತು ಎಂದಿಗೂ ನಶಿಸಲಾರದು” ಎಂದರು.<br /> <br /> ಈ ಸಂದರ್ಭದಲ್ಲಿ 1965-66ನೇ ಸಾಲಿನ ಗುರುಗಳಾದ ಎನ್.ಆರ್. ದೀಕ್ಷಿತ್, ಬಿ.ವಿ. ಸಜ್ಜನ್, ಪಿ.ಎನ್. ರೆಡ್ಡಿ, ಕರಿಬಸಪ್ಪ ಗುತ್ತಿ ಅವರನ್ನು ಸನ್ಮಾನಿಸಲಾಯಿತು. ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong>ವಿದ್ಯೆ ಕಲಿಸಿ ನಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸಿದ ಗುರುಗಳಿಗೆ ನಮನ ಸಲ್ಲಿಸಲು ಏರ್ಪಡಿಸುವ ಗುರು ಸ್ಮರಣೆ ನಮ್ಮ ಪರಂಪರೆ ಮತ್ತು ಗುರು-ಶಿಷ್ಯರ ಸಂಬಂಧದ ಪ್ರತೀಕ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.ನಗರದ ಭಾರತೀಯ ವೈದ್ಯ ಭವನ (ಐಎಂಎ)ದಲ್ಲಿ ಭಾನುವಾರ ಇಲ್ಲಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನ 1965-66ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> </p>.<p>“ನಮ್ಮ ಸಾಧನೆ, ಪ್ರಗತಿಯ ಬಗ್ಗೆ ಒಡಹುಟ್ಟಿದವರು ಸೇರಿದಂತೆ ನೆರೆಹೊರೆಯವರು ಮತ್ಸರ ಪಡುತ್ತಾರೆ. ಅದು ಲೋಕಾರೂಢಿ . ಆದರೆ ತಾಯಿ ಮತ್ತು ಗುರು ಮಾತ್ರ ನಮ್ಮ ಸಾಧನೆಯ ಬಗ್ಗೆ ಹೆಮ್ಮೆಪಡುವಪಡುತ್ತಾರೆ.’’ ಎಂದರು.<br /> <br /> ‘‘ಇಂದು ಕಂಪ್ಯೂಟರ್ ಗುರುವಿನ ಸ್ಥಾನದಲ್ಲಿದೆ. ನಮಗೆ ಎಲ್ಲವನ್ನೂ ಕಲಿಸಿ ಕೊಡುತ್ತದೆ, ಗುರುವಿನ ಸ್ಥಾನ ತುಂಬಬಲ್ಲ ವ್ಯಕ್ತಿಯೇ ಬೇಕಿಲ್ಲ ಎಂದೆನಿಸುತ್ತದೆ. ಆದರೆ ಆ ವಿದ್ಯೆ ಪರಿಪೂರ್ಣವಲ್ಲ. ಆದರ್ಶ ಇದ್ದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.<br /> </p>.<p>“ಆದರ್ಶವನ್ನು ಕೇವಲ ಗುರು ಮಾತ್ರ ತನ್ನ ಶಿಷ್ಯನಿಗೆ ಧಾರೆ ಎರೆಯಬಲ್ಲ. ಅಪ್ಪ ಸಂಪಾದಿಸುವ ಆಸ್ತಿ ದಯಾದಿಗಳ ಪಾಲಾಗಬಹುದು, ಸಂಪತ್ತು ಕಳ್ಳಕಾಕರ ಪಾಲಾಬಹುದು. ಆದರೆ ಗುರು ಕಲಿಸಿದ ವಿದ್ಯಾಸಂಪತ್ತು ಎಂದಿಗೂ ನಶಿಸಲಾರದು” ಎಂದರು.<br /> <br /> ಈ ಸಂದರ್ಭದಲ್ಲಿ 1965-66ನೇ ಸಾಲಿನ ಗುರುಗಳಾದ ಎನ್.ಆರ್. ದೀಕ್ಷಿತ್, ಬಿ.ವಿ. ಸಜ್ಜನ್, ಪಿ.ಎನ್. ರೆಡ್ಡಿ, ಕರಿಬಸಪ್ಪ ಗುತ್ತಿ ಅವರನ್ನು ಸನ್ಮಾನಿಸಲಾಯಿತು. ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>