<p><strong>ಸೊರಬ:</strong> ಗೆಂಡ್ಲ ಗ್ರಾಮ ವ್ಯಾಪ್ತಿಯಲ್ಲಿರುವ ಗೋಮಾಳವನ್ನು ಖಾಸಗಿಯವರು ವಶಪಡಿಸಿಕೊಂಡು, ಸಾಗುವಳಿ ಮಾಡುತ್ತಿದ್ದಾರೆ. ಕೂಡಲೇ ಜಾಗವನ್ನು ಗೋಮಾಳಕ್ಕೆ ತೆರವುಗೊಳಿಸಿಕೊಡಬೇಕು ಎಂದು ಆಗ್ರಹಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಹಕಾರದೊಂದಿಗೆ ಗ್ರಾಮಸ್ಥರು ವಿವಾದಿತ ಜಮೀನಿನ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.<br /> <br /> ಜಾಗ ಹಿಂದಿನಿಂದಲೂ ಜಾನುವಾರು ಮೇವಿಗೆ ಬಳಸಲ್ಪಡುತ್ತಿದ್ದು, ಪಹಣಿಯಲ್ಲಿ ದನಗಳ ಮುಫತ್ತು ಎಂದು ನಮೂದಾಗಿದೆ. ಆದರೆ, ಬಗರ್ಹುಕುಂ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಅದನ್ನು ಸಾಗುವಳಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.<br /> <br /> ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳದಲ್ಲಿಯೇ ದಿಗ್ಬಂಧನಕ್ಕೆ ಒಳಪಡಿಸಿದರು. ಕಾನೂನಿನ ತೊಡಕು ಇರುವ ಕುರಿತು ಅಧಿಕಾರಿಗಳು ಹಾಗೂ ಪೊಲೀಸರು ತಿಳಿಸಿದರೂ ಮಣಿಯದೇ, ಕೂಡಲೇ ಗೋಮಾಳಕ್ಕೆ ಜಮೀನನ್ನು ಹಿಂತಿರುಗಿಸಬೇಕು ಎಂದು ಪಟ್ಟು ಹಿಡಿದರು.ಸಂಜೆ ನಂತರವೂ ಪ್ರತಿಭಟನೆ ಮುಂದುವರಿದಿತ್ತು.<br /> <br /> ಜೆಡಿಎಸ್ ಮುಖಂಡ ವೀರೇಶ್, ಪುಟ್ಟಸ್ವಾಮಿಗೌಡ, ಸೋಮಪ್ಪ, ಪರಸಪ್ಪ, ಗುಡ್ಡಪ್ಪ, ದಸಂಸ ಸಂಚಾಲಕ ಗುರುರಾಜ್, ಬಂಗಾರಪ್ಪ, ಬಾಲಚಂದ್ರ, ಪ್ರಕಾಶ್, ಪರಮೇಶ್ವರಪ್ಪ, ವೀರಭದ್ರಪ್ಪ, ಚಂದ್ರಪ್ಪ ಇತರರು ಹಾಜರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೊರಬ:</strong> ಗೆಂಡ್ಲ ಗ್ರಾಮ ವ್ಯಾಪ್ತಿಯಲ್ಲಿರುವ ಗೋಮಾಳವನ್ನು ಖಾಸಗಿಯವರು ವಶಪಡಿಸಿಕೊಂಡು, ಸಾಗುವಳಿ ಮಾಡುತ್ತಿದ್ದಾರೆ. ಕೂಡಲೇ ಜಾಗವನ್ನು ಗೋಮಾಳಕ್ಕೆ ತೆರವುಗೊಳಿಸಿಕೊಡಬೇಕು ಎಂದು ಆಗ್ರಹಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಹಕಾರದೊಂದಿಗೆ ಗ್ರಾಮಸ್ಥರು ವಿವಾದಿತ ಜಮೀನಿನ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.<br /> <br /> ಜಾಗ ಹಿಂದಿನಿಂದಲೂ ಜಾನುವಾರು ಮೇವಿಗೆ ಬಳಸಲ್ಪಡುತ್ತಿದ್ದು, ಪಹಣಿಯಲ್ಲಿ ದನಗಳ ಮುಫತ್ತು ಎಂದು ನಮೂದಾಗಿದೆ. ಆದರೆ, ಬಗರ್ಹುಕುಂ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಅದನ್ನು ಸಾಗುವಳಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.<br /> <br /> ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳದಲ್ಲಿಯೇ ದಿಗ್ಬಂಧನಕ್ಕೆ ಒಳಪಡಿಸಿದರು. ಕಾನೂನಿನ ತೊಡಕು ಇರುವ ಕುರಿತು ಅಧಿಕಾರಿಗಳು ಹಾಗೂ ಪೊಲೀಸರು ತಿಳಿಸಿದರೂ ಮಣಿಯದೇ, ಕೂಡಲೇ ಗೋಮಾಳಕ್ಕೆ ಜಮೀನನ್ನು ಹಿಂತಿರುಗಿಸಬೇಕು ಎಂದು ಪಟ್ಟು ಹಿಡಿದರು.ಸಂಜೆ ನಂತರವೂ ಪ್ರತಿಭಟನೆ ಮುಂದುವರಿದಿತ್ತು.<br /> <br /> ಜೆಡಿಎಸ್ ಮುಖಂಡ ವೀರೇಶ್, ಪುಟ್ಟಸ್ವಾಮಿಗೌಡ, ಸೋಮಪ್ಪ, ಪರಸಪ್ಪ, ಗುಡ್ಡಪ್ಪ, ದಸಂಸ ಸಂಚಾಲಕ ಗುರುರಾಜ್, ಬಂಗಾರಪ್ಪ, ಬಾಲಚಂದ್ರ, ಪ್ರಕಾಶ್, ಪರಮೇಶ್ವರಪ್ಪ, ವೀರಭದ್ರಪ್ಪ, ಚಂದ್ರಪ್ಪ ಇತರರು ಹಾಜರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>