<p><strong>ಶಿವಮೊಗ್ಗ:</strong> ರೈತರ ಮನೆಯ ಸದಸ್ಯನಾಗಿ, ಅವಿಭಾಜ್ಯ ಅಂಗವಾಗಿ ಕುಟುಂಬ ನಿರ್ವಹಣೆಗೆ ಆಸರೆಯಾದ ಗೋವುಗಳು ನಮ್ಮ ನಿಜವಾದ ದೇವರು ಎಂದು ಶಿವಮೊಗ್ಗ ಹಾಲು ಒಕ್ಕೂಟ ಅಧ್ಯಕ್ಷ ಕೆ.ಎಲ್. ಜಗದೀಶ್ವರ್ ಹೇಳಿದರು.<br /> <br /> ನಗರದ ಹೊರವಲಯದ ಹಸೂಡಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಆವರಣದಲ್ಲಿ ಗುರುವಾರ ದೀಪಾವಳಿ ಹಬ್ಬ ಹಾಗೂ ಹಾಲು ಒಕ್ಕೂಟದ 25ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗೋಪೂಜೆ ವಿಶಿಷ್ಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಅನಾದಿ ಕಾಲದಿಂದಲೂ ರೈತಸ್ನೇಹಿಯಾಗಿರುವ ಗೋವುಗಳು ಆರ್ಥಿಕವಾಗಿ ರೈತರನ್ನು ಸಬಲರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಮನೆಯಲ್ಲಿ ಒಂದು ಹಸುವಿದ್ದರೆ ಆ ಮನೆ ಎಂದಿಗೂ ಆರ್ಥಿಕವಾಗಿ ಸಮಸ್ಥಿತಿ ಕಾಯ್ದುಕೊಂಡಿರುತ್ತದೆ ಎಂದ ಅವರು, ಹೈನುಗಾರಿಕೆ ಹೆಚ್ಚಿಸುವ ಹಾಗೂ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಸ್ಥೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.<br /> <br /> ಜಾಗತೀಕರಣದಿಂದಾಗಿ ಜನರು ಪಟ್ಟಣದತ್ತ ಮುಖ ಮಾಡಿದ್ದಾರೆ. ಅಲ್ಲದೇ, ಗೋವುಗಳ ಲಾಲನೆ-ಪಾಲನೆ ಮಾಡುವವರಿಲ್ಲದೇ ದೇಶಿಯ ಗೋವುಗಳು ಕಣ್ಮರೆಯಾಗುತ್ತಿವೆ ಎಂದ ಅವರು, ದೇಶಿಯ ಗೋತಳಿಗಳನ್ನು ಗುರುತಿಸಿ ಅವುಗಳನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.<br /> <br /> ರಾಜ್ಯದಲ್ಲಿ ಹೆಚ್ಚು ಹಾಲು ಸಂಗ್ರಹಣೆಯಾಗುತ್ತಿದ್ದು, ರೈತರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೂ 2 ಪ್ರೋತ್ಸಾಹ ಧನದ ಜತೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಮತ್ತೆ ರೈತರಿಗೆ ರೂ 90 ಪೈಸೆ ಹೆಚ್ಚಳ ಮಾಡಲಾಗಿದ್ದು, ಈಗ ಪ್ರತಿ ಲೀಟರ್ಗೆ ರೂ 20 ನೀಡಲಾಗುತ್ತಿದೆ ಎಂದರು. <br /> <br /> ಹಾಲು ಒಕ್ಕೂಟದ ನಿರ್ದೇಶಕ ಜಯರಾಂ ಗೋಂದಿ ಮಾತನಾಡಿ, ಒಕ್ಕೂಟದ ಕಾರ್ಯ ರೈತರ ಮತ್ತು ಹಾಲು ಒಕ್ಕೂಟದ ನಡುವೆ ಉತ್ತಮ ಸಂಬಂಧ ಏರ್ಪಡಿಸುವುದಾಗಿದ್ದು, ನಿಟ್ಟಿನಲ್ಲಿ ಈ ಗೋಪೂಜೆ ಕಾರ್ಯಕ್ರಮ ಒಕ್ಕೂಟದ ಮೊದಲ ಹೆಜ್ಜೆಯಾಗಿದೆ ಎಂದರು.<br /> <br /> ಹಾಲು ಒಕ್ಕೂಟದ ನಿರ್ದೇಶಕ ಗಂಗಾಧರ ಮಾತನಾಡಿ, ಹಿಂದಿನ ದಿನಗಳಲ್ಲಿ ಕೇವಲ ಮನೆ ಬಳಕೆಗೆ ಮಾತ್ರವೇ <br /> ಮೀಸಲಾಗಿದ್ದ ಹೈನುಗಾರಿಕೆ ಇಂದು ಉದ್ಯಮವಾಗಿ ಬೆಳೆದಿದೆ ಎಂದ ಅವರು, ಹೊಸೂಡಿ ಗ್ರಾಮದಲ್ಲಿ ಎಚ್ಎಫ್, ಜರ್ಸಿ ಹಾಗೂ ಗುಜರಾತಿ ತಳಿಗಳನ್ನು ಸಹ ಪೋಷಣೆ ಮಾಡಲಾಗಿದ್ದು, ಹೆಚ್ಚು ಹಾಲು ಉತ್ಪಾದಕರು ಈ ಗ್ರಾಮದಲ್ಲಿದ್ದಾರೆ ಎಂದರು.<br /> <br /> ಭಾರತದಲ್ಲಿ ಗೋಮಾತೆಗೆ ಪವಿತ್ರ ಸ್ಥಾನ ನೀಡಲಾಗಿದ್ದು, ಹಿಂದೂ ಸಂಸ್ಕೃತಿಯ ಈ ದೀಪಾವಳಿಯಂದು ಹಮ್ಮಿಕೊಂಡಿರುವ ಗೋಪೂಜೆ ಹೆಚ್ಚು ಮಹತ್ವಪೂರ್ಣವಾಗಿದೆ ಎಂದರು.<br /> <br /> ಮಾಜಿ ಶಾಸಕ ಚಂದ್ರಶೇಖರ್, ಹೊಸೂಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಈಶ್ವರಗೌಡ, ಕಾರ್ಯದರ್ಶಿ ಚಿದಂಬರಂ, ಸಹಾಯಕ ವ್ಯವಸ್ಥಾಪಕ ಎಸ್. ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.<br /> ಉಮಾ ಪಾಟೀಲ್ ಪ್ರಾರ್ಥಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ರೈತರ ಮನೆಯ ಸದಸ್ಯನಾಗಿ, ಅವಿಭಾಜ್ಯ ಅಂಗವಾಗಿ ಕುಟುಂಬ ನಿರ್ವಹಣೆಗೆ ಆಸರೆಯಾದ ಗೋವುಗಳು ನಮ್ಮ ನಿಜವಾದ ದೇವರು ಎಂದು ಶಿವಮೊಗ್ಗ ಹಾಲು ಒಕ್ಕೂಟ ಅಧ್ಯಕ್ಷ ಕೆ.ಎಲ್. ಜಗದೀಶ್ವರ್ ಹೇಳಿದರು.<br /> <br /> ನಗರದ ಹೊರವಲಯದ ಹಸೂಡಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಆವರಣದಲ್ಲಿ ಗುರುವಾರ ದೀಪಾವಳಿ ಹಬ್ಬ ಹಾಗೂ ಹಾಲು ಒಕ್ಕೂಟದ 25ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗೋಪೂಜೆ ವಿಶಿಷ್ಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಅನಾದಿ ಕಾಲದಿಂದಲೂ ರೈತಸ್ನೇಹಿಯಾಗಿರುವ ಗೋವುಗಳು ಆರ್ಥಿಕವಾಗಿ ರೈತರನ್ನು ಸಬಲರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಮನೆಯಲ್ಲಿ ಒಂದು ಹಸುವಿದ್ದರೆ ಆ ಮನೆ ಎಂದಿಗೂ ಆರ್ಥಿಕವಾಗಿ ಸಮಸ್ಥಿತಿ ಕಾಯ್ದುಕೊಂಡಿರುತ್ತದೆ ಎಂದ ಅವರು, ಹೈನುಗಾರಿಕೆ ಹೆಚ್ಚಿಸುವ ಹಾಗೂ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಸ್ಥೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.<br /> <br /> ಜಾಗತೀಕರಣದಿಂದಾಗಿ ಜನರು ಪಟ್ಟಣದತ್ತ ಮುಖ ಮಾಡಿದ್ದಾರೆ. ಅಲ್ಲದೇ, ಗೋವುಗಳ ಲಾಲನೆ-ಪಾಲನೆ ಮಾಡುವವರಿಲ್ಲದೇ ದೇಶಿಯ ಗೋವುಗಳು ಕಣ್ಮರೆಯಾಗುತ್ತಿವೆ ಎಂದ ಅವರು, ದೇಶಿಯ ಗೋತಳಿಗಳನ್ನು ಗುರುತಿಸಿ ಅವುಗಳನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.<br /> <br /> ರಾಜ್ಯದಲ್ಲಿ ಹೆಚ್ಚು ಹಾಲು ಸಂಗ್ರಹಣೆಯಾಗುತ್ತಿದ್ದು, ರೈತರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೂ 2 ಪ್ರೋತ್ಸಾಹ ಧನದ ಜತೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಮತ್ತೆ ರೈತರಿಗೆ ರೂ 90 ಪೈಸೆ ಹೆಚ್ಚಳ ಮಾಡಲಾಗಿದ್ದು, ಈಗ ಪ್ರತಿ ಲೀಟರ್ಗೆ ರೂ 20 ನೀಡಲಾಗುತ್ತಿದೆ ಎಂದರು. <br /> <br /> ಹಾಲು ಒಕ್ಕೂಟದ ನಿರ್ದೇಶಕ ಜಯರಾಂ ಗೋಂದಿ ಮಾತನಾಡಿ, ಒಕ್ಕೂಟದ ಕಾರ್ಯ ರೈತರ ಮತ್ತು ಹಾಲು ಒಕ್ಕೂಟದ ನಡುವೆ ಉತ್ತಮ ಸಂಬಂಧ ಏರ್ಪಡಿಸುವುದಾಗಿದ್ದು, ನಿಟ್ಟಿನಲ್ಲಿ ಈ ಗೋಪೂಜೆ ಕಾರ್ಯಕ್ರಮ ಒಕ್ಕೂಟದ ಮೊದಲ ಹೆಜ್ಜೆಯಾಗಿದೆ ಎಂದರು.<br /> <br /> ಹಾಲು ಒಕ್ಕೂಟದ ನಿರ್ದೇಶಕ ಗಂಗಾಧರ ಮಾತನಾಡಿ, ಹಿಂದಿನ ದಿನಗಳಲ್ಲಿ ಕೇವಲ ಮನೆ ಬಳಕೆಗೆ ಮಾತ್ರವೇ <br /> ಮೀಸಲಾಗಿದ್ದ ಹೈನುಗಾರಿಕೆ ಇಂದು ಉದ್ಯಮವಾಗಿ ಬೆಳೆದಿದೆ ಎಂದ ಅವರು, ಹೊಸೂಡಿ ಗ್ರಾಮದಲ್ಲಿ ಎಚ್ಎಫ್, ಜರ್ಸಿ ಹಾಗೂ ಗುಜರಾತಿ ತಳಿಗಳನ್ನು ಸಹ ಪೋಷಣೆ ಮಾಡಲಾಗಿದ್ದು, ಹೆಚ್ಚು ಹಾಲು ಉತ್ಪಾದಕರು ಈ ಗ್ರಾಮದಲ್ಲಿದ್ದಾರೆ ಎಂದರು.<br /> <br /> ಭಾರತದಲ್ಲಿ ಗೋಮಾತೆಗೆ ಪವಿತ್ರ ಸ್ಥಾನ ನೀಡಲಾಗಿದ್ದು, ಹಿಂದೂ ಸಂಸ್ಕೃತಿಯ ಈ ದೀಪಾವಳಿಯಂದು ಹಮ್ಮಿಕೊಂಡಿರುವ ಗೋಪೂಜೆ ಹೆಚ್ಚು ಮಹತ್ವಪೂರ್ಣವಾಗಿದೆ ಎಂದರು.<br /> <br /> ಮಾಜಿ ಶಾಸಕ ಚಂದ್ರಶೇಖರ್, ಹೊಸೂಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಈಶ್ವರಗೌಡ, ಕಾರ್ಯದರ್ಶಿ ಚಿದಂಬರಂ, ಸಹಾಯಕ ವ್ಯವಸ್ಥಾಪಕ ಎಸ್. ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.<br /> ಉಮಾ ಪಾಟೀಲ್ ಪ್ರಾರ್ಥಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>