<p><strong>ನೆಲಮಂಗಲ:</strong> ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಯುಗದಲ್ಲಿಯೂ ಗ್ರಾಮೀಣ ಮಹಿಳೆಯರ ಬದುಕು ಶೋಚನೀಯವಾಗುತ್ತಿರುವುದು ವಿಷಾದನೀಯ ಎಂದು ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ವಿಷಾದಿಸಿದರು.<br /> <br /> ಭಾರತೀಯ ವೈದ್ಯ ಸಂಘದ ಸ್ಥಳೀಯ ಶಾಖೆ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ಮಹಿಳಾ ದಿನಾಚರಣೆಯಿಂದ ಸ್ಫೂರ್ತಿ ಪಡೆದು ನಾವು ಸಬಲೀಕರಣದತ್ತ ಸಾಗಬೇಕು~ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಡಾ. ಎಂ.ಜಯ ಪ್ರಸಾದ್, `ಸ್ವಾಭಿಮಾನದ ಖನಿಯಾದ ವಚನಕಾರ್ತಿ ಅಕ್ಕಮಹಾದೇವಿ, ಸಮಾಜ ಸೇವೆಗೆ ಹೆಸರಾದ ಮದರ್ ತೆರೇಸಾ ಎಲ್ಲ ಸವಾಲುಗಳನ್ನೂ ಮೀರಿ ಬೆಳೆದುದು ಮಹಿಳೆಯರಿಗೆ ಮಾದರಿ~ ಎಂದರು.<br /> <br /> ಡಾ. ಲೀಲಾವತಿ ಪ್ರಸಾದ್ ಸ್ವಾಗತಿಸಿದರು. ಡಾ. ಸುಶ್ಮಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಾರುಣಿ ವಸಂತಕುಮಾರ್ ವಂದಿಸಿದರು. ರೇಣುಕಾ ಜಯಪ್ರಸಾದ್ ನಿರೂಪಿಸಿದರು. ವೇದಿಕೆಯಲ್ಲಿ ಖಜಾಂಚಿ ಡಾ. ವಸಂತ ಕುಮಾರ್, ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಲಮಂಗಲ:</strong> ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಯುಗದಲ್ಲಿಯೂ ಗ್ರಾಮೀಣ ಮಹಿಳೆಯರ ಬದುಕು ಶೋಚನೀಯವಾಗುತ್ತಿರುವುದು ವಿಷಾದನೀಯ ಎಂದು ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ವಿಷಾದಿಸಿದರು.<br /> <br /> ಭಾರತೀಯ ವೈದ್ಯ ಸಂಘದ ಸ್ಥಳೀಯ ಶಾಖೆ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ಮಹಿಳಾ ದಿನಾಚರಣೆಯಿಂದ ಸ್ಫೂರ್ತಿ ಪಡೆದು ನಾವು ಸಬಲೀಕರಣದತ್ತ ಸಾಗಬೇಕು~ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಡಾ. ಎಂ.ಜಯ ಪ್ರಸಾದ್, `ಸ್ವಾಭಿಮಾನದ ಖನಿಯಾದ ವಚನಕಾರ್ತಿ ಅಕ್ಕಮಹಾದೇವಿ, ಸಮಾಜ ಸೇವೆಗೆ ಹೆಸರಾದ ಮದರ್ ತೆರೇಸಾ ಎಲ್ಲ ಸವಾಲುಗಳನ್ನೂ ಮೀರಿ ಬೆಳೆದುದು ಮಹಿಳೆಯರಿಗೆ ಮಾದರಿ~ ಎಂದರು.<br /> <br /> ಡಾ. ಲೀಲಾವತಿ ಪ್ರಸಾದ್ ಸ್ವಾಗತಿಸಿದರು. ಡಾ. ಸುಶ್ಮಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಾರುಣಿ ವಸಂತಕುಮಾರ್ ವಂದಿಸಿದರು. ರೇಣುಕಾ ಜಯಪ್ರಸಾದ್ ನಿರೂಪಿಸಿದರು. ವೇದಿಕೆಯಲ್ಲಿ ಖಜಾಂಚಿ ಡಾ. ವಸಂತ ಕುಮಾರ್, ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>