<p><strong>ಬೆಂಗಳೂರು</strong>: ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯು ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ಕುರಿತು ಮಾಡಿದ್ದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ ಕ್ರಮಕ್ಕೆ ಶನಿವಾರವೂ ಕೆಲ ಗಣ್ಯರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. <br /> <br /> ‘ಕನ್ನಡದ ಮೊದಲ ದರ್ಜೆಯ ಸಂಶೋಧಕರಾದ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಶಿಫಾರಸನ್ನು ತಿರಸ್ಕರಿಸಿದ ಮಾನ್ಯ ರಾಜ್ಯಪಾಲರ ಕ್ರಮವು ಕನ್ನಡದ ವಿದ್ವತ್ ವಲಯಕ್ಕೆ ಮಾಡಿದ ಅಪಚಾರವಾಗಿದೆ’ ಎಂದು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರು ಟೀಕಿಸಿದ್ದಾರೆ.<br /> <br /> ‘ಈ ಕುರಿತು ವ್ಯಕ್ತವಾಗಿರುವ ವ್ಯಾಪಕವಾದ ಖಂಡನೆಗೆ ನನ್ನ ಸಹಮತವಿದೆ. ರಾಜ್ಯಪಾಲರ ಈ ಕ್ರಮದ ಹಿಂದೆ ವಿವೇಚನೆಗಿಂತ ರಾಜಕೀಯ ಪಕ್ಷಪಾತವೇ ಮಿಗಿಲಾದಂತೆ ತೋರುವುದು ವಿಷಾದನೀಯ ಸಂಗತಿಯಾಗಿದೆ. <br /> 1949ರಲ್ಲಿ ನಾನು ಅಧ್ಯಾಪನಕ್ಕೆ ದಾವಣಗೆರೆಗೆ ಹೋದಾಗ ಚಿದಾನಂದಮೂರ್ತಿ ಅವರು ನನ್ನ ಮೊದಲ ವಿದ್ಯಾರ್ಥಿಯಾಗಿದ್ದರು. <br /> <br /> ಎಂಜಿನಿಯರಿಂಗ್, ಮೆಡಿಕಲ್ ಮತ್ತಿತರ ಕ್ಷೇತ್ರಗಳಿಗೆ ಹೋಗುವ ಅವಕಾಶವಿದ್ದರೂ ಅದನ್ನು ತ್ಯಜಿಸಿ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರಿಗೆ ಒಂದಲ್ಲ ಹತ್ತು ಡಾಕ್ಟರೇಟ್ ಪದವಿ ನೀಡಿದರೂ ಕಡಿಮೆಯೇ’ ಎಂದರು.<br /> <br /> ‘ಚಿದಾನಂದಮೂರ್ತಿ ಅವರು ಹಿರಿಯ ಚೇತನ. ನಾಡಿನ ಸಾಕ್ಷಿ ಪ್ರಜ್ಞೆ. ಅವರ ಸೇವೆ, ಮೇಧಾವಿತನ ಗೊತ್ತಿರುವವರು ಅವರ ಹೆಸರನ್ನು ತಿರಸ್ಕರಿಸುತ್ತಿರಲಿಲ್ಲ’ ಎಂದು ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ಅವರು ಬಂಟ್ವಾಳದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯು ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ಕುರಿತು ಮಾಡಿದ್ದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ ಕ್ರಮಕ್ಕೆ ಶನಿವಾರವೂ ಕೆಲ ಗಣ್ಯರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. <br /> <br /> ‘ಕನ್ನಡದ ಮೊದಲ ದರ್ಜೆಯ ಸಂಶೋಧಕರಾದ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಶಿಫಾರಸನ್ನು ತಿರಸ್ಕರಿಸಿದ ಮಾನ್ಯ ರಾಜ್ಯಪಾಲರ ಕ್ರಮವು ಕನ್ನಡದ ವಿದ್ವತ್ ವಲಯಕ್ಕೆ ಮಾಡಿದ ಅಪಚಾರವಾಗಿದೆ’ ಎಂದು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರು ಟೀಕಿಸಿದ್ದಾರೆ.<br /> <br /> ‘ಈ ಕುರಿತು ವ್ಯಕ್ತವಾಗಿರುವ ವ್ಯಾಪಕವಾದ ಖಂಡನೆಗೆ ನನ್ನ ಸಹಮತವಿದೆ. ರಾಜ್ಯಪಾಲರ ಈ ಕ್ರಮದ ಹಿಂದೆ ವಿವೇಚನೆಗಿಂತ ರಾಜಕೀಯ ಪಕ್ಷಪಾತವೇ ಮಿಗಿಲಾದಂತೆ ತೋರುವುದು ವಿಷಾದನೀಯ ಸಂಗತಿಯಾಗಿದೆ. <br /> 1949ರಲ್ಲಿ ನಾನು ಅಧ್ಯಾಪನಕ್ಕೆ ದಾವಣಗೆರೆಗೆ ಹೋದಾಗ ಚಿದಾನಂದಮೂರ್ತಿ ಅವರು ನನ್ನ ಮೊದಲ ವಿದ್ಯಾರ್ಥಿಯಾಗಿದ್ದರು. <br /> <br /> ಎಂಜಿನಿಯರಿಂಗ್, ಮೆಡಿಕಲ್ ಮತ್ತಿತರ ಕ್ಷೇತ್ರಗಳಿಗೆ ಹೋಗುವ ಅವಕಾಶವಿದ್ದರೂ ಅದನ್ನು ತ್ಯಜಿಸಿ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರಿಗೆ ಒಂದಲ್ಲ ಹತ್ತು ಡಾಕ್ಟರೇಟ್ ಪದವಿ ನೀಡಿದರೂ ಕಡಿಮೆಯೇ’ ಎಂದರು.<br /> <br /> ‘ಚಿದಾನಂದಮೂರ್ತಿ ಅವರು ಹಿರಿಯ ಚೇತನ. ನಾಡಿನ ಸಾಕ್ಷಿ ಪ್ರಜ್ಞೆ. ಅವರ ಸೇವೆ, ಮೇಧಾವಿತನ ಗೊತ್ತಿರುವವರು ಅವರ ಹೆಸರನ್ನು ತಿರಸ್ಕರಿಸುತ್ತಿರಲಿಲ್ಲ’ ಎಂದು ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ಅವರು ಬಂಟ್ವಾಳದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>