<p>ಬುಧವಾರ, 26-6-1963<br /> <strong>ಚೀಣಿ ದುರಾಕ್ರಮಣದ ವಿರುದ್ಧ ಸೂಕ್ತ ಕ್ರಮ<br /> ನವದೆಹಲಿ, ಜೂನ್ 25 </strong>- ಲಡಕ್ನಲ್ಲಿ ಕಾರಾಕೊರಂ ಕಣಿವೆಗೆ ಹೋಗುವ ಭಾರತದ ಎಂದಿನ ಕಾರವಾನ್ ರಸ್ತೆಯ ದೌಲತ್ಬೇಗ್ ಓಲ್ಡಿ ಎಂಬಲ್ಲಿಗೆ ಸಮೀಪದಲ್ಲಿ ಇತ್ತೀಚೆಗೆ ಚೀಣೀಯರು ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿ ಸೇನಾ ನೆಲೆ ಒಂದನ್ನು ಸ್ಥಾಪಿಸಿರುವುದನ್ನು ಭಾರತ ಸರ್ಕಾರ ತುಂಬಾ ತೀವ್ರವಾಗಿ ಪರಿಗಣಿಸಿದೆ.<br /> <br /> ಕಾಶ್ಮೀರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಪ್ರಧಾನ ಮಂತ್ರಿ ನೆಹರೂರವರು ಈ ಬಗೆಗೆ ಘಳಿಗೆ ಘಳಿಗೆಗೂ ಹೆಚ್ಚಿನ ವರ್ತಮಾನ ತರಿಸಿಕೊಳ್ಳುತ್ತಿರುವರು. ಚೀಣೀಯರ ಈ ಅತಿಕ್ರಮಣದ ಬಗೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಭಾರತ ಸರ್ಕಾರ ಪರ್ಯಾಲೋಚಿಸುತ್ತಿದೆಯೆಂದು ಗೊತ್ತಾಗಿದೆ.<br /> <br /> <strong>ಕೀಲರ್ಳ ಚಟುವಟಿಕೆಗಳ ಬಗ್ಗೆ ಅಮೆರಿಕದ ಆತಂಕ<br /> ಲಂಡನ್, ಜೂನ್ 25 -</strong> ಪ್ರೋಫುಮೊ ಪ್ರಕರಣದ ಮುಖ್ಯ ವ್ಯಕ್ತಿಯೊಬ್ಬಳಾದ ಬೆಲೆವೆಣ್ಣು ಕ್ರಿಸ್ಟೈನ್ ಕೀಲರ್ಳ ಚಟುವಟಿಕೆಗಳು ವಾಸ್ತವವಾಗಿ ಮ್ಯಾಕ್ಮಿಲನ್ ಸರ್ಕಾರವನ್ನು ನಾಶ ಮಾಡಿರುವುದಷ್ಟೇ ಅಲ್ಲ ಅದರಿಂದ ಈಗ ಬ್ರಿಟನ್ - ಅಮೆರಿಕ ಸಂಬಂಧಕ್ಕೂ ಆಘಾತ ಬಿದ್ದಿದೆ.<br /> <br /> <strong>ರಾಷ್ಟ್ರಪತಿ ಆರೋಗ್ಯ ಉತ್ತಮ<br /> ನವದೆಹಲಿ, ಜೂನ್ 25</strong> -ನಿನ್ನೆ ಅನಾರೋಗ್ಯಕ್ಕೊಳಗಾಗಿದ್ದ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ರವರು ಈಗ ಹುಷಾರಾಗಿದ್ದಾರೆ. ಇಂದು ಅವರಿಗೆ ಜ್ವರ ಇರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬುಧವಾರ, 26-6-1963<br /> <strong>ಚೀಣಿ ದುರಾಕ್ರಮಣದ ವಿರುದ್ಧ ಸೂಕ್ತ ಕ್ರಮ<br /> ನವದೆಹಲಿ, ಜೂನ್ 25 </strong>- ಲಡಕ್ನಲ್ಲಿ ಕಾರಾಕೊರಂ ಕಣಿವೆಗೆ ಹೋಗುವ ಭಾರತದ ಎಂದಿನ ಕಾರವಾನ್ ರಸ್ತೆಯ ದೌಲತ್ಬೇಗ್ ಓಲ್ಡಿ ಎಂಬಲ್ಲಿಗೆ ಸಮೀಪದಲ್ಲಿ ಇತ್ತೀಚೆಗೆ ಚೀಣೀಯರು ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿ ಸೇನಾ ನೆಲೆ ಒಂದನ್ನು ಸ್ಥಾಪಿಸಿರುವುದನ್ನು ಭಾರತ ಸರ್ಕಾರ ತುಂಬಾ ತೀವ್ರವಾಗಿ ಪರಿಗಣಿಸಿದೆ.<br /> <br /> ಕಾಶ್ಮೀರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಪ್ರಧಾನ ಮಂತ್ರಿ ನೆಹರೂರವರು ಈ ಬಗೆಗೆ ಘಳಿಗೆ ಘಳಿಗೆಗೂ ಹೆಚ್ಚಿನ ವರ್ತಮಾನ ತರಿಸಿಕೊಳ್ಳುತ್ತಿರುವರು. ಚೀಣೀಯರ ಈ ಅತಿಕ್ರಮಣದ ಬಗೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಭಾರತ ಸರ್ಕಾರ ಪರ್ಯಾಲೋಚಿಸುತ್ತಿದೆಯೆಂದು ಗೊತ್ತಾಗಿದೆ.<br /> <br /> <strong>ಕೀಲರ್ಳ ಚಟುವಟಿಕೆಗಳ ಬಗ್ಗೆ ಅಮೆರಿಕದ ಆತಂಕ<br /> ಲಂಡನ್, ಜೂನ್ 25 -</strong> ಪ್ರೋಫುಮೊ ಪ್ರಕರಣದ ಮುಖ್ಯ ವ್ಯಕ್ತಿಯೊಬ್ಬಳಾದ ಬೆಲೆವೆಣ್ಣು ಕ್ರಿಸ್ಟೈನ್ ಕೀಲರ್ಳ ಚಟುವಟಿಕೆಗಳು ವಾಸ್ತವವಾಗಿ ಮ್ಯಾಕ್ಮಿಲನ್ ಸರ್ಕಾರವನ್ನು ನಾಶ ಮಾಡಿರುವುದಷ್ಟೇ ಅಲ್ಲ ಅದರಿಂದ ಈಗ ಬ್ರಿಟನ್ - ಅಮೆರಿಕ ಸಂಬಂಧಕ್ಕೂ ಆಘಾತ ಬಿದ್ದಿದೆ.<br /> <br /> <strong>ರಾಷ್ಟ್ರಪತಿ ಆರೋಗ್ಯ ಉತ್ತಮ<br /> ನವದೆಹಲಿ, ಜೂನ್ 25</strong> -ನಿನ್ನೆ ಅನಾರೋಗ್ಯಕ್ಕೊಳಗಾಗಿದ್ದ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ರವರು ಈಗ ಹುಷಾರಾಗಿದ್ದಾರೆ. ಇಂದು ಅವರಿಗೆ ಜ್ವರ ಇರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>