<p><strong>ಬಳ್ಳಾರಿ: ಏ</strong>ಪ್ರಿಲ್ 17ರಂದು ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಕರ್ತವ್ಯಕ್ಕೆ ನಿಯುಕ್ತಗೊಂಡಿರುವ ಫ್ಲೈಯಿಂಗ್ ವಿಚಕ್ಷಣಾ ತಂಡ ಹಾಗೂ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳಿಗೆ ವಿಶೇಷ ಭದ್ರತೆ ಒದಗಿಸಿ, ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದರು.<br /> <br /> ಕ್ರೀಡಾ ಇಲಾಖೆಯ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳಿಗೆ ನಡೆದ ಚುನಾವಣಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸಮಾಜದ ಶಾಂತಿ ಕದಡುವ 250 ಜನರಿಂದ ಐಪಿಸಿ ಸೆಕ್ಷನ್ 107ರ ಅಡಿ ಈಗಾಗಲೇ ಶಾಂತಿಗೆ ಭಂಗವಾಗದಂತೆ ಸಹಕರಿಸುವುದಾಗಿ ಬಾಂಡ್ ಬರೆಸಿಕೊಳ್ಳಲಾಗಿದೆ ಎಂದರು.<br /> <br /> ರೌಡಿ ಶೀಟರ್ನಲ್ಲಿ ಇರುವವರ ವಿವರವನ್ನು ಸಿದ್ಧಪಡಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಇವರ ವಿವರವನ್ನು ಫ್ಲೈಯಿಂಗ್ ವಿಚಕ್ಷಣಾ ತಂಡಗಳಿಗೆ ರವಾನಿಸಲಾಗುವುದು. ಈಗಾಗಲೇ 6 ಮಂದಿಯನ್ನು ಕಾರಾಗೃಹದಲ್ಲಿ ಇರಿಸಲಾಗಿದೆ. ಕೆಲವರನ್ನು ಈಗಾಗಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅತ್ಯಂತ ಸೂಕ್ಷ್ಮ ಮತಗಟ್ಟೆಗಳಿಗೆ ಅಳವಡಿಸುವ ವೆಬ್ ಕ್ಯಾಮೆರಾಗಳಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸಿ ಮತಗಟ್ಟೆಗಳಲ್ಲಿ ನಡೆಯುವ ಪ್ರಕ್ರಿಯೆಗಳನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.<br /> <br /> ಮತದಾರರಿಗೆ ಜಿಲ್ಲಾಡಳಿತದಿಂದ ಮತದಾರರ ಗುರುತಿನ ಚೀಟಿ ಹಾಗೂ ವಾಹನ ಪಾಸ್ಗಳಿಗೆ ಹಾಲೋಗ್ರಾಂ ಅಳವಡಿಸಿ ವಿತರಿಸಲಾಗುವುದು. ಸಂಬಂಧಿಸಿದ ಎಲ್ಲರೂ ನಿಗಾ ವಹಿಸಿ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾ ಮಟ್ಟದಲ್ಲಿ ಎಂಸಿಸಿ ತಂಡವನ್ನು ಜಿಲ್ಲಾ ಪಂಚಾಯ್ತಿ ಸಿಇಒ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ ಎಂದರು.<br /> <br /> ಪ್ರತಿ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಎಂಸಿಸಿ ತಂಡ, ಹೋಬಳಿ ಮಟ್ಟ ಹಾಗೂ ಗ್ರಾಮ ಮಟ್ಟದಲ್ಲೂ ಎಂಸಿಸಿ ತಂಡಗಳನ್ನು ರಚಿಸಲಾಗಿದೆ. ನಿಯೋಜಿತರಿಗೆ ಸಿಮ್ ಕಾರ್ಡ್ಗಳನ್ನು ನೀಡಲಾಗುವುದು. ಚುನಾವಣಾ ಅಕ್ರಮ ಚಟುವಟಿಕೆಗಳು ಕಂಡು ಬಂದ ಕೂಡಲೇ ಗ್ರೂಪ್ ಎಸ್ಎಂಎಸ್ ಮೂಲಕ ಮೇಲಾಧಿಕಾರಿಗಳಿಗೆ ತಿಳಿಸಿದ ಕೂಡಲೇ ಫ್ಲೈಯಿಂಗ್ ವಿಚಕ್ಷಣಾ ತಂಡ ಹಾಗೂ ಎಂಸಿಸಿ ತಂಡವು ಮುಂದಿನ ಕ್ರಮ ಕೈಗೊಳ್ಳಲಿದೆ. ಗೌಪ್ಯವಾಗಿ ಮಾಹಿತಿಯನ್ನು ನೀಡಬೇಕು. ಹೋಬಳಿ ಮಟ್ಟದ ಅಧಿಕಾರಿಗಳಿಗೂ ವಾಹನವನ್ನು ಒದಗಿಸಲಾಗುವುದು. ಕಡಿಮೆ ಮತದಾನ ಆಗಿರುವ ಕಡೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.<br /> <br /> ಮಾಧ್ಯಮಗಳಲ್ಲಿ ಪ್ರಕಟವಾಗಬಹುದಾದ ‘ಕಾಸಿಗಾಗಿ ಸುದ್ದಿ’, ‘ಜಾಹೀರಾತು’ಗಳ ಪರಿಶೀಲನೆಗಾಗಿ ಎಂಸಿಎಂಸಿ ತಂಡ, ಸಂಚಾರಿ ವಿಚಕ್ಷಣಾ ತಂಡ, ಸೆಕ್ಟರ್ ಅಧಿಕಾರಿಗಳು, ಅಬಕಾರಿ ತಂಡ, ಪೊಲೀಸ್ ಅಧಿಕಾರಿಗಳ ತಂಡ, ಖರ್ಚು ವೆಚ್ಚಕ್ಕಾಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ಚುನಾವಣಾ ವೆಚ್ಚದ ಪರಿಶೀಲನಾ ತಂಡ ಸೇರಿದಂತೆ ಅನೇಕ ಸಮಿತಿಗಳನ್ನು ರಚಿಸಿ, ಅವರು ಮಾಡಬೇಕಾದ ಕರ್ತವ್ಯಗಳ ಕುರಿತ ಆದೇಶವನ್ನೂ ಈಗಾಗಲೇ ಕಳುಹಿಸಲಾಗಿದೆ. ನಿಯೋಜಿತರೆಲ್ಲರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಬಿಸ್ವಾಸ್ ಹೇಳಿದರು.<br /> <br /> ಆಂಧ್ರದ ಗಡಿ ಪ್ರದೇಶಗಳಲ್ಲಿ 9 ಸೇರಿದಂತೆ ಜಿಲ್ಲೆಯಾದ್ಯಂತ 23 ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗುವುದು. ಸಾರ್ವಜನಿಕರು, ರಾಜಕೀಯ ಪಕ್ಷದವರು ದೂರು ನೀಡಬಹುದು. 48 ಅಧಿಕಾರಿಗಳನ್ನು ಕಾರ್ಯ ನಿರ್ವಾಹಕ ದಂಡಾಧಿಕಾರಿಗಳನ್ನಾಗಿ ನೇಮಿಸಲಾಗುವುದು. ಇವರಿಗೆ ದಂಡಾಧಿಕಾರಿಯ ಅಧಿಕಾರವನ್ನೂ ನೀಡಲಾಗಿರುತ್ತದೆ. ಯಾವುದೇ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದಿರುವುದರ ಬಗ್ಗೆ ಸುಳಿವು ಬಂದರೆ ಅಂತಹವರ ಮನೆಗೆ ಯಾವುದೇ ಅನುಮತಿ ಇಲ್ಲದೇ ಪ್ರವೇಶಿಸಿ ಜಪ್ತಿ ಮಾಡಬಹುದು ಎಂದು ವಿವರಿಸಿದರು.<br /> <br /> ವಿಧಾನಸಭೆ ಕ್ಷೇತ್ರ ಮಟ್ಟದ ತಂಡಗಳಿಗೆ ಬೆಂಬಲಿತ ತಂಡ ನೇಮಿಸಲಾಗುವುದು. ಈ ತಂಡ ದಿನದ ಕಾರ್ಯಕ್ರಮಗಳ ವರದಿಯನ್ನು ನೀಡಬೇಕು. ಪ್ರಚಾರ ಸಭೆ, ಕಾರ್ಯಕ್ರಮಗಳ ಬಗ್ಗೆ ಗ್ರಾಮ ಮಟ್ಟದ ತಂಡವು ವಿಡಿಯೋ ಚಿತ್ರೀಕರಣ ನಡೆಸಬೇಕು. ಅಭ್ಯರ್ಥಿ, ಬೆಂಬಲಿಗರು ವಾಹನ ಪರವಾನಗಿ ಪಡೆದು ಬಳಕೆ ಮಾಡಬೇಕು. ವಾಹನಗಳಿಗೆ ಮೈಕ್ ಅಳವಡಿಸುವಂತಿಲ್ಲ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮೈಕ್ ಬಳಕೆ ಮಾಡಲು ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕು ಎಂದರು.<br /> <br /> ನೀತಿ ಸಂಹಿತೆ ಉಲ್ಲಂಘನೆ, ದೇವಸ್ಥಾನಗಳಲ್ಲಿ ಸಭೆ, ಸಮಾರಂಭ ಸೇರಿದಂತೆ ಯಾವುದೇ ಘಟನೆಗಳನ್ನು ಮುಂಚಿತವಾಗಿ ತಿಳಿಸಬೇಕು. ಸಾಧನೆ ಕುರಿತು ಜಾಹೀರಾತು ನೀಡಬಾರದು. ಗೋಡೆ ಬರಹ, ಮನೆ ಬಾಗಿಲುಗಳ ಮೇಲೆ ಪಕ್ಷಗಳು ಬರೆದ ಸೂಕ್ಷ್ಮ ಬರಹಗಳನ್ನು ಅಳಿಸಬೇಕು. ವಸತಿ ನಿಲಯ, ಅಂಗನವಾಡಿ, ಗೋದಾಮು ಪರಿಶೀಲಿಸಬೇಕು. ಸರ್ಕಾರಿ ಕಚೇರಿ, ಸರ್ಕಾರದ ಅನುದಾನದಿಂದ ನಿರ್ಮಿಸಿದ ಸಮುದಾಯ ಭವನಗಳಲ್ಲಿ, ವಿಮ್ಸ್ ಮತ್ತು ವಿಶ್ವವಿದ್ಯಾಲಯದ ಆವರಣದಲ್ಲಿ ರಾಜಕೀಯ, ಪ್ರಚಾರ ಸಭೆಗಳನ್ನು ನಡೆಸಬಾರದು.<br /> <br /> ದೇವಸ್ಥಾನ ಆವರಣದಲ್ಲಿ ರಾಜಕೀಯ ಸಭೆ ನಡೆಸಿದ್ದು ರುಜುವಾತಾದರೆ 10 ವರ್ಷಗಳ ಅವಧಿ ಕಾರಾಗೃಹ ವಾಸ ಅನುಭವಿಸಬೇಕಾಗುತ್ತದೆ. ನಿಯೋಜಿತ ಎಲ್ಲ ಅಧಿಕಾರಿ/ ಸಿಬ್ಬಂದಿ ಕಾರ್ಯಕ್ಷೇತ್ರದಲ್ಲೇ ಇರಬೇಕು. ಅನುಮತಿ ಪಡೆಯದೇ ಕ್ಷೇತ್ರದಿಂದ ಹೊರಗೆ ಪ್ರಯಾಣಿಸಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.<br /> <br /> ಬಳ್ಳಾರಿ ಕ್ಷೇತ್ರ ವ್ಯಾಪ್ತಿಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಸಂಡೂರು, ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರಗಳಿಗೆ ಮನೋಹರ್ (ಮೊಬೈಲ್ ದೂರವಾಣಿ ಸಂಖ್ಯೆ 94813– 01259) ಹಾಗೂ ವಿಜಯನಗರ, ಕಂಪ್ಲಿ, ಬಳ್ಳಾರಿ ಗ್ರಾಮಾಂತರ, ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರಗಳಿಗೆ ಸುಂದರರಾಜ್ (94813– 01258) ಅವರನ್ನು ಆಯೋಗವು ಚುನಾವಣಾ ವೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು ಅವರು ಘೋಷಿಸಿದರು.<br /> <br /> ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಹಾಗೂ ಸಂಬಂಧಿಸಿದ ಎಲ್ಲ ತಂಡಗಳು ಕಡ್ಡಾಯವಾಗಿ ಖರ್ಚು, ವೆಚ್ಚದ ವಿವರವನ್ನು ವೆಚ್ಚ ನಿರ್ವಹಣಾ ಸಮಿತಿಗೆ ನೀಡಬೇಕು ಎಂದು ಚುನಾವಣಾ ವೆಚ್ಚ ವೀಕ್ಷಕರಾದ ಸುಂದರ್ರಾಜ್ ಮತ್ತು ಮನೋಹರ್ ಸೂಚಿಸಿದರು.<br /> ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್, ಜಿ.ಪಂ. ಸಿಇಒ ಮಹಮ್ಮದ್ ಸಲಾವುದ್ದೀನ್, ಸಹಾಯಕ ಆಯುಕ್ತರಾದ ಅನಿರುದ್ಧ್ ಶ್ರವಣ್, ಸುನೀಲಕುಮಾರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ನಿತೀಶ್ ಪಾಟೀಲ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: ಏ</strong>ಪ್ರಿಲ್ 17ರಂದು ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಕರ್ತವ್ಯಕ್ಕೆ ನಿಯುಕ್ತಗೊಂಡಿರುವ ಫ್ಲೈಯಿಂಗ್ ವಿಚಕ್ಷಣಾ ತಂಡ ಹಾಗೂ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳಿಗೆ ವಿಶೇಷ ಭದ್ರತೆ ಒದಗಿಸಿ, ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದರು.<br /> <br /> ಕ್ರೀಡಾ ಇಲಾಖೆಯ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳಿಗೆ ನಡೆದ ಚುನಾವಣಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸಮಾಜದ ಶಾಂತಿ ಕದಡುವ 250 ಜನರಿಂದ ಐಪಿಸಿ ಸೆಕ್ಷನ್ 107ರ ಅಡಿ ಈಗಾಗಲೇ ಶಾಂತಿಗೆ ಭಂಗವಾಗದಂತೆ ಸಹಕರಿಸುವುದಾಗಿ ಬಾಂಡ್ ಬರೆಸಿಕೊಳ್ಳಲಾಗಿದೆ ಎಂದರು.<br /> <br /> ರೌಡಿ ಶೀಟರ್ನಲ್ಲಿ ಇರುವವರ ವಿವರವನ್ನು ಸಿದ್ಧಪಡಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಇವರ ವಿವರವನ್ನು ಫ್ಲೈಯಿಂಗ್ ವಿಚಕ್ಷಣಾ ತಂಡಗಳಿಗೆ ರವಾನಿಸಲಾಗುವುದು. ಈಗಾಗಲೇ 6 ಮಂದಿಯನ್ನು ಕಾರಾಗೃಹದಲ್ಲಿ ಇರಿಸಲಾಗಿದೆ. ಕೆಲವರನ್ನು ಈಗಾಗಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅತ್ಯಂತ ಸೂಕ್ಷ್ಮ ಮತಗಟ್ಟೆಗಳಿಗೆ ಅಳವಡಿಸುವ ವೆಬ್ ಕ್ಯಾಮೆರಾಗಳಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸಿ ಮತಗಟ್ಟೆಗಳಲ್ಲಿ ನಡೆಯುವ ಪ್ರಕ್ರಿಯೆಗಳನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.<br /> <br /> ಮತದಾರರಿಗೆ ಜಿಲ್ಲಾಡಳಿತದಿಂದ ಮತದಾರರ ಗುರುತಿನ ಚೀಟಿ ಹಾಗೂ ವಾಹನ ಪಾಸ್ಗಳಿಗೆ ಹಾಲೋಗ್ರಾಂ ಅಳವಡಿಸಿ ವಿತರಿಸಲಾಗುವುದು. ಸಂಬಂಧಿಸಿದ ಎಲ್ಲರೂ ನಿಗಾ ವಹಿಸಿ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾ ಮಟ್ಟದಲ್ಲಿ ಎಂಸಿಸಿ ತಂಡವನ್ನು ಜಿಲ್ಲಾ ಪಂಚಾಯ್ತಿ ಸಿಇಒ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ ಎಂದರು.<br /> <br /> ಪ್ರತಿ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಎಂಸಿಸಿ ತಂಡ, ಹೋಬಳಿ ಮಟ್ಟ ಹಾಗೂ ಗ್ರಾಮ ಮಟ್ಟದಲ್ಲೂ ಎಂಸಿಸಿ ತಂಡಗಳನ್ನು ರಚಿಸಲಾಗಿದೆ. ನಿಯೋಜಿತರಿಗೆ ಸಿಮ್ ಕಾರ್ಡ್ಗಳನ್ನು ನೀಡಲಾಗುವುದು. ಚುನಾವಣಾ ಅಕ್ರಮ ಚಟುವಟಿಕೆಗಳು ಕಂಡು ಬಂದ ಕೂಡಲೇ ಗ್ರೂಪ್ ಎಸ್ಎಂಎಸ್ ಮೂಲಕ ಮೇಲಾಧಿಕಾರಿಗಳಿಗೆ ತಿಳಿಸಿದ ಕೂಡಲೇ ಫ್ಲೈಯಿಂಗ್ ವಿಚಕ್ಷಣಾ ತಂಡ ಹಾಗೂ ಎಂಸಿಸಿ ತಂಡವು ಮುಂದಿನ ಕ್ರಮ ಕೈಗೊಳ್ಳಲಿದೆ. ಗೌಪ್ಯವಾಗಿ ಮಾಹಿತಿಯನ್ನು ನೀಡಬೇಕು. ಹೋಬಳಿ ಮಟ್ಟದ ಅಧಿಕಾರಿಗಳಿಗೂ ವಾಹನವನ್ನು ಒದಗಿಸಲಾಗುವುದು. ಕಡಿಮೆ ಮತದಾನ ಆಗಿರುವ ಕಡೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.<br /> <br /> ಮಾಧ್ಯಮಗಳಲ್ಲಿ ಪ್ರಕಟವಾಗಬಹುದಾದ ‘ಕಾಸಿಗಾಗಿ ಸುದ್ದಿ’, ‘ಜಾಹೀರಾತು’ಗಳ ಪರಿಶೀಲನೆಗಾಗಿ ಎಂಸಿಎಂಸಿ ತಂಡ, ಸಂಚಾರಿ ವಿಚಕ್ಷಣಾ ತಂಡ, ಸೆಕ್ಟರ್ ಅಧಿಕಾರಿಗಳು, ಅಬಕಾರಿ ತಂಡ, ಪೊಲೀಸ್ ಅಧಿಕಾರಿಗಳ ತಂಡ, ಖರ್ಚು ವೆಚ್ಚಕ್ಕಾಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ಚುನಾವಣಾ ವೆಚ್ಚದ ಪರಿಶೀಲನಾ ತಂಡ ಸೇರಿದಂತೆ ಅನೇಕ ಸಮಿತಿಗಳನ್ನು ರಚಿಸಿ, ಅವರು ಮಾಡಬೇಕಾದ ಕರ್ತವ್ಯಗಳ ಕುರಿತ ಆದೇಶವನ್ನೂ ಈಗಾಗಲೇ ಕಳುಹಿಸಲಾಗಿದೆ. ನಿಯೋಜಿತರೆಲ್ಲರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಬಿಸ್ವಾಸ್ ಹೇಳಿದರು.<br /> <br /> ಆಂಧ್ರದ ಗಡಿ ಪ್ರದೇಶಗಳಲ್ಲಿ 9 ಸೇರಿದಂತೆ ಜಿಲ್ಲೆಯಾದ್ಯಂತ 23 ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗುವುದು. ಸಾರ್ವಜನಿಕರು, ರಾಜಕೀಯ ಪಕ್ಷದವರು ದೂರು ನೀಡಬಹುದು. 48 ಅಧಿಕಾರಿಗಳನ್ನು ಕಾರ್ಯ ನಿರ್ವಾಹಕ ದಂಡಾಧಿಕಾರಿಗಳನ್ನಾಗಿ ನೇಮಿಸಲಾಗುವುದು. ಇವರಿಗೆ ದಂಡಾಧಿಕಾರಿಯ ಅಧಿಕಾರವನ್ನೂ ನೀಡಲಾಗಿರುತ್ತದೆ. ಯಾವುದೇ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದಿರುವುದರ ಬಗ್ಗೆ ಸುಳಿವು ಬಂದರೆ ಅಂತಹವರ ಮನೆಗೆ ಯಾವುದೇ ಅನುಮತಿ ಇಲ್ಲದೇ ಪ್ರವೇಶಿಸಿ ಜಪ್ತಿ ಮಾಡಬಹುದು ಎಂದು ವಿವರಿಸಿದರು.<br /> <br /> ವಿಧಾನಸಭೆ ಕ್ಷೇತ್ರ ಮಟ್ಟದ ತಂಡಗಳಿಗೆ ಬೆಂಬಲಿತ ತಂಡ ನೇಮಿಸಲಾಗುವುದು. ಈ ತಂಡ ದಿನದ ಕಾರ್ಯಕ್ರಮಗಳ ವರದಿಯನ್ನು ನೀಡಬೇಕು. ಪ್ರಚಾರ ಸಭೆ, ಕಾರ್ಯಕ್ರಮಗಳ ಬಗ್ಗೆ ಗ್ರಾಮ ಮಟ್ಟದ ತಂಡವು ವಿಡಿಯೋ ಚಿತ್ರೀಕರಣ ನಡೆಸಬೇಕು. ಅಭ್ಯರ್ಥಿ, ಬೆಂಬಲಿಗರು ವಾಹನ ಪರವಾನಗಿ ಪಡೆದು ಬಳಕೆ ಮಾಡಬೇಕು. ವಾಹನಗಳಿಗೆ ಮೈಕ್ ಅಳವಡಿಸುವಂತಿಲ್ಲ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮೈಕ್ ಬಳಕೆ ಮಾಡಲು ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕು ಎಂದರು.<br /> <br /> ನೀತಿ ಸಂಹಿತೆ ಉಲ್ಲಂಘನೆ, ದೇವಸ್ಥಾನಗಳಲ್ಲಿ ಸಭೆ, ಸಮಾರಂಭ ಸೇರಿದಂತೆ ಯಾವುದೇ ಘಟನೆಗಳನ್ನು ಮುಂಚಿತವಾಗಿ ತಿಳಿಸಬೇಕು. ಸಾಧನೆ ಕುರಿತು ಜಾಹೀರಾತು ನೀಡಬಾರದು. ಗೋಡೆ ಬರಹ, ಮನೆ ಬಾಗಿಲುಗಳ ಮೇಲೆ ಪಕ್ಷಗಳು ಬರೆದ ಸೂಕ್ಷ್ಮ ಬರಹಗಳನ್ನು ಅಳಿಸಬೇಕು. ವಸತಿ ನಿಲಯ, ಅಂಗನವಾಡಿ, ಗೋದಾಮು ಪರಿಶೀಲಿಸಬೇಕು. ಸರ್ಕಾರಿ ಕಚೇರಿ, ಸರ್ಕಾರದ ಅನುದಾನದಿಂದ ನಿರ್ಮಿಸಿದ ಸಮುದಾಯ ಭವನಗಳಲ್ಲಿ, ವಿಮ್ಸ್ ಮತ್ತು ವಿಶ್ವವಿದ್ಯಾಲಯದ ಆವರಣದಲ್ಲಿ ರಾಜಕೀಯ, ಪ್ರಚಾರ ಸಭೆಗಳನ್ನು ನಡೆಸಬಾರದು.<br /> <br /> ದೇವಸ್ಥಾನ ಆವರಣದಲ್ಲಿ ರಾಜಕೀಯ ಸಭೆ ನಡೆಸಿದ್ದು ರುಜುವಾತಾದರೆ 10 ವರ್ಷಗಳ ಅವಧಿ ಕಾರಾಗೃಹ ವಾಸ ಅನುಭವಿಸಬೇಕಾಗುತ್ತದೆ. ನಿಯೋಜಿತ ಎಲ್ಲ ಅಧಿಕಾರಿ/ ಸಿಬ್ಬಂದಿ ಕಾರ್ಯಕ್ಷೇತ್ರದಲ್ಲೇ ಇರಬೇಕು. ಅನುಮತಿ ಪಡೆಯದೇ ಕ್ಷೇತ್ರದಿಂದ ಹೊರಗೆ ಪ್ರಯಾಣಿಸಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.<br /> <br /> ಬಳ್ಳಾರಿ ಕ್ಷೇತ್ರ ವ್ಯಾಪ್ತಿಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಸಂಡೂರು, ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರಗಳಿಗೆ ಮನೋಹರ್ (ಮೊಬೈಲ್ ದೂರವಾಣಿ ಸಂಖ್ಯೆ 94813– 01259) ಹಾಗೂ ವಿಜಯನಗರ, ಕಂಪ್ಲಿ, ಬಳ್ಳಾರಿ ಗ್ರಾಮಾಂತರ, ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರಗಳಿಗೆ ಸುಂದರರಾಜ್ (94813– 01258) ಅವರನ್ನು ಆಯೋಗವು ಚುನಾವಣಾ ವೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು ಅವರು ಘೋಷಿಸಿದರು.<br /> <br /> ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಹಾಗೂ ಸಂಬಂಧಿಸಿದ ಎಲ್ಲ ತಂಡಗಳು ಕಡ್ಡಾಯವಾಗಿ ಖರ್ಚು, ವೆಚ್ಚದ ವಿವರವನ್ನು ವೆಚ್ಚ ನಿರ್ವಹಣಾ ಸಮಿತಿಗೆ ನೀಡಬೇಕು ಎಂದು ಚುನಾವಣಾ ವೆಚ್ಚ ವೀಕ್ಷಕರಾದ ಸುಂದರ್ರಾಜ್ ಮತ್ತು ಮನೋಹರ್ ಸೂಚಿಸಿದರು.<br /> ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್, ಜಿ.ಪಂ. ಸಿಇಒ ಮಹಮ್ಮದ್ ಸಲಾವುದ್ದೀನ್, ಸಹಾಯಕ ಆಯುಕ್ತರಾದ ಅನಿರುದ್ಧ್ ಶ್ರವಣ್, ಸುನೀಲಕುಮಾರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ನಿತೀಶ್ ಪಾಟೀಲ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>