<p><strong>ಬಳ್ಳಾರಿ: </strong>ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಬಿಐನಿಂದ ಸೆ 5ರಂದು ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿ ದೊರೆತಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತುಗಳಲ್ಲಿ ವಜ್ರ ಖಚಿತ ಚಿನ್ನದ ಕುರ್ಚಿ, ವೆಂಕಟೇಶ್ವರ ಹಾಗೂ ಪದ್ಮಾವತಿಯ ಮೂರ್ತಿ ಒಳಗೊಂಡಿವೆ.<br /> <br /> ಲೆಕ್ಕವಿಲ್ಲದಷ್ಟು ಚಿನ್ನದ ಆಭರಣಗಳು, ಕೋಟ್ಯಂತರ ರೂಪಾಯಿ ನಗದು, ಚಿನ್ನದ ತಟ್ಟೆ, ಪೂಜಾ ಸಾಮಗ್ರಿ, ಆರತಿ ಮತ್ತಿತರ ವಸ್ತುಗಳಲ್ಲಿ ಸಿಂಹಾಸನದ ಮಾದರಿಯ ಚಿನ್ನದ ಕುರ್ಚಿಯೇ ಆಕರ್ಷಣೀಯ. <br /> <br /> ಈ ಕುರ್ಚಿಯಲ್ಲಿ ಚಿನ್ನದಲ್ಲೇ `ಜಿಜೆಆರ್~ಎಂದು ಬರೆಯಲಾಗಿದೆ. ಕುರ್ಚಿಯ ನಾಲ್ಕೂ ಕಾಲುಗಳು, ಮತ್ತಿತರ ಕಡೆಯೆಲ್ಲ ಚಿನ್ನವನ್ನೇ ಬಳಸಲಾಗಿದ್ದು, ಕೆಂಪು ಬಣ್ಣದ ಕುಷನ್ ಕೆಲಸವೂ ಇದೆ. <br /> <br /> ಬಹುತೇಕ ಬಳ್ಳಾರಿಯಲ್ಲೇ ಖರೀದಿಸಿರುವ ಚಿನ್ನ ಮತ್ತು ಪ್ಲಾಟಿನಂನ ಆಭರಣಗಳನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ, ಒಟ್ಟು ರೂ 3 ಕೋಟಿ ನಗದನ್ನು ನೋಟು ಎಣಿಸುವ ಯಂತ್ರದ ಸಹಾಯದಿಂದ ಲೆಕ್ಕ ಹಾಕಿದ ಸಿಬಿಐ ಸಿಬ್ಬಂದಿ ರೆಡ್ಡಿ ಕುಟುಂಬ ಸದಸ್ಯರ ಕೋರಿಕೆಯ ಮೇರೆಗೆ ಕೆಲವು ಚಿನ್ನದ ಆಭರಣಗಳನ್ನು ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.<br /> <br /> ಸಂಬಂಧಿಯೊಬ್ಬರ ಮದುವೆ ಇರುವುದರಿಂದ ಕೆಲವು ಚಿನ್ನಾಭರಣಗಳನ್ನು ಬಿಟ್ಟು ಹೋಗುವಂತೆ ಕೋರಿದ ಹಿನ್ನೆಲೆಯಲ್ಲಿ ಕರುಣೆ ತೋರಿದ ಸಿಬ್ಬಂದಿ ಕೆಲವನ್ನು ವಶಪಡಿಸಿಕೊಳ್ಳದೆ ಬಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಬಿಐನಿಂದ ಸೆ 5ರಂದು ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿ ದೊರೆತಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತುಗಳಲ್ಲಿ ವಜ್ರ ಖಚಿತ ಚಿನ್ನದ ಕುರ್ಚಿ, ವೆಂಕಟೇಶ್ವರ ಹಾಗೂ ಪದ್ಮಾವತಿಯ ಮೂರ್ತಿ ಒಳಗೊಂಡಿವೆ.<br /> <br /> ಲೆಕ್ಕವಿಲ್ಲದಷ್ಟು ಚಿನ್ನದ ಆಭರಣಗಳು, ಕೋಟ್ಯಂತರ ರೂಪಾಯಿ ನಗದು, ಚಿನ್ನದ ತಟ್ಟೆ, ಪೂಜಾ ಸಾಮಗ್ರಿ, ಆರತಿ ಮತ್ತಿತರ ವಸ್ತುಗಳಲ್ಲಿ ಸಿಂಹಾಸನದ ಮಾದರಿಯ ಚಿನ್ನದ ಕುರ್ಚಿಯೇ ಆಕರ್ಷಣೀಯ. <br /> <br /> ಈ ಕುರ್ಚಿಯಲ್ಲಿ ಚಿನ್ನದಲ್ಲೇ `ಜಿಜೆಆರ್~ಎಂದು ಬರೆಯಲಾಗಿದೆ. ಕುರ್ಚಿಯ ನಾಲ್ಕೂ ಕಾಲುಗಳು, ಮತ್ತಿತರ ಕಡೆಯೆಲ್ಲ ಚಿನ್ನವನ್ನೇ ಬಳಸಲಾಗಿದ್ದು, ಕೆಂಪು ಬಣ್ಣದ ಕುಷನ್ ಕೆಲಸವೂ ಇದೆ. <br /> <br /> ಬಹುತೇಕ ಬಳ್ಳಾರಿಯಲ್ಲೇ ಖರೀದಿಸಿರುವ ಚಿನ್ನ ಮತ್ತು ಪ್ಲಾಟಿನಂನ ಆಭರಣಗಳನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ, ಒಟ್ಟು ರೂ 3 ಕೋಟಿ ನಗದನ್ನು ನೋಟು ಎಣಿಸುವ ಯಂತ್ರದ ಸಹಾಯದಿಂದ ಲೆಕ್ಕ ಹಾಕಿದ ಸಿಬಿಐ ಸಿಬ್ಬಂದಿ ರೆಡ್ಡಿ ಕುಟುಂಬ ಸದಸ್ಯರ ಕೋರಿಕೆಯ ಮೇರೆಗೆ ಕೆಲವು ಚಿನ್ನದ ಆಭರಣಗಳನ್ನು ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.<br /> <br /> ಸಂಬಂಧಿಯೊಬ್ಬರ ಮದುವೆ ಇರುವುದರಿಂದ ಕೆಲವು ಚಿನ್ನಾಭರಣಗಳನ್ನು ಬಿಟ್ಟು ಹೋಗುವಂತೆ ಕೋರಿದ ಹಿನ್ನೆಲೆಯಲ್ಲಿ ಕರುಣೆ ತೋರಿದ ಸಿಬ್ಬಂದಿ ಕೆಲವನ್ನು ವಶಪಡಿಸಿಕೊಳ್ಳದೆ ಬಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>