<p><strong>ನವದೆಹಲಿ (ಐಎಎನ್ಎಸ್):</strong> `ಅಣು ಸೋರಿಕೆ, ಸುನಾಮಿ ಮತ್ತು ಭೂಕಂಪದಿಂದ ತತ್ತರಿಸಿದ್ದ ತಮ್ಮ ದೇಶ ಈಗ ಮತ್ತಷ್ಟು ಸುರಕ್ಷಿತ ಮತ್ತು ಚೇತರಿಸಿಕೊಂಡಿದೆ~ ಎಂದು ಭಾರತದಲ್ಲಿನ ಜಪಾನ್ ರಾಯಭಾರಿ ಅಕಿಟಾಕ್ ಸೇಕಿ ಹೇಳಿದ್ದಾರೆ.<br /> <br /> ಜಪಾನ್ನಲ್ಲಿ ಸಂಭವಿಸಿದ್ದ ಸುನಾಮಿ ಮತ್ತು ಭೂಕಂಪಕ್ಕೆ ಒಂದು ವರ್ಷ ಸಂದ ಬಳಿಕ ಭಾನುವಾರ ಇಲ್ಲಿ ನಡೆದ ಪ್ರಥಮ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, `ಈ ದುರಂತದಲ್ಲಿ ಸುಮಾರು 15 ಸಾವಿರ ಜನರು ಮೃತರಾಗಿದ್ದಾರೆ. ಘಟನೆ ಬಳಿಕ ಪುನ ರುಜ್ಜೀವನಗೊಂಡಿರುವ ದೇಶವನ್ನು ಕಣ್ಣಾರೆ ನೋಡಲು ಜಪಾನ್ಗೆ ಹೋಗಿ~ ಎಂದರು.<br /> <br /> `ದುರಂತದ ಬಳಿಕ 71,124 ಜನರನ್ನು ಸ್ಥಳಾಂತರಿಸಲಾಗಿದ್ದು, ತಮ್ಮ ದೇಶ ಅತೀ ಬೇಗ ಸುಧಾರಿಸಿದೆ~ ಎಂದು ಹೇಳಿದರು. `ಜಪಾನ್ನಲ್ಲಿ ದುರಂತ ಸಂಭವಿಸಿದಾಗ ಭಾರತ ಸಹಾಯ ಹಸ್ತ ಚಾಚಿದ್ದು, ಪರಿಹಾರ ಕಾರ್ಯಕ್ಕೆ ದೇಣಿಗೆ ನೀಡಿದೆ~ ಎಂದು ಶ್ಲಾಘಿಸಿದರು.<br /> <br /> ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಶಶಿಧರ ರೆಡ್ಡಿ ಮಾತನಾಡಿ, ಜಪಾನ್ ಜನರಿಗೆ ಭಾರತೀಯರ ಬೆಂಬಲ ಇದೆ ಎಂದರು. ಇದೇ ಸಂದರ್ಭದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್):</strong> `ಅಣು ಸೋರಿಕೆ, ಸುನಾಮಿ ಮತ್ತು ಭೂಕಂಪದಿಂದ ತತ್ತರಿಸಿದ್ದ ತಮ್ಮ ದೇಶ ಈಗ ಮತ್ತಷ್ಟು ಸುರಕ್ಷಿತ ಮತ್ತು ಚೇತರಿಸಿಕೊಂಡಿದೆ~ ಎಂದು ಭಾರತದಲ್ಲಿನ ಜಪಾನ್ ರಾಯಭಾರಿ ಅಕಿಟಾಕ್ ಸೇಕಿ ಹೇಳಿದ್ದಾರೆ.<br /> <br /> ಜಪಾನ್ನಲ್ಲಿ ಸಂಭವಿಸಿದ್ದ ಸುನಾಮಿ ಮತ್ತು ಭೂಕಂಪಕ್ಕೆ ಒಂದು ವರ್ಷ ಸಂದ ಬಳಿಕ ಭಾನುವಾರ ಇಲ್ಲಿ ನಡೆದ ಪ್ರಥಮ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, `ಈ ದುರಂತದಲ್ಲಿ ಸುಮಾರು 15 ಸಾವಿರ ಜನರು ಮೃತರಾಗಿದ್ದಾರೆ. ಘಟನೆ ಬಳಿಕ ಪುನ ರುಜ್ಜೀವನಗೊಂಡಿರುವ ದೇಶವನ್ನು ಕಣ್ಣಾರೆ ನೋಡಲು ಜಪಾನ್ಗೆ ಹೋಗಿ~ ಎಂದರು.<br /> <br /> `ದುರಂತದ ಬಳಿಕ 71,124 ಜನರನ್ನು ಸ್ಥಳಾಂತರಿಸಲಾಗಿದ್ದು, ತಮ್ಮ ದೇಶ ಅತೀ ಬೇಗ ಸುಧಾರಿಸಿದೆ~ ಎಂದು ಹೇಳಿದರು. `ಜಪಾನ್ನಲ್ಲಿ ದುರಂತ ಸಂಭವಿಸಿದಾಗ ಭಾರತ ಸಹಾಯ ಹಸ್ತ ಚಾಚಿದ್ದು, ಪರಿಹಾರ ಕಾರ್ಯಕ್ಕೆ ದೇಣಿಗೆ ನೀಡಿದೆ~ ಎಂದು ಶ್ಲಾಘಿಸಿದರು.<br /> <br /> ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಶಶಿಧರ ರೆಡ್ಡಿ ಮಾತನಾಡಿ, ಜಪಾನ್ ಜನರಿಗೆ ಭಾರತೀಯರ ಬೆಂಬಲ ಇದೆ ಎಂದರು. ಇದೇ ಸಂದರ್ಭದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>