<p>ವಿರಾಜಪೇಟೆ: ಜನಸೇವೆ ಮಾಡುವವರು ನೈಜ ಫಲಾನುಭಾವಿಗಳನ್ನು ಗುರ್ತಿಸಿ ಮೂಲ ಸೌಕರ್ಯ ಒದಗಿಸಬೇಕು. ಇಲ್ಲವಾದಲ್ಲಿ ಉಳ್ಳವರಿಗೂ ಇಲ್ಲದವರಿಗೂ ಮಧ್ಯೆ ಅಂತರ ಹೆಚ್ಚಾಗುತ್ತದೆ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.<br /> <br /> ಗೋಣಿಕೊಪ್ಪ ಸಮೀಪದ ಮಾಯಮುಡಿ ಗ್ರಾಮ ಪಂಚಾಯಿತಿಯ ಚನ್ನಂಕೋಲ್ಲಿ ಪೈಸಾರಿಯಲ್ಲಿ ಜಮಾತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕದಿಂದ ~ವಸತಿ ಹೀನರಿಗೆ ಗೃಹ ಯೋಜನೆ~ಯಡಿಯಲ್ಲಿ ನಿರ್ಮಿಸಲಾಗಿರುವ ಸೌಹಾರ್ದ ಭವನದ ಕೀಲಿ ಕೈ ಹಸ್ತಾಂತರಿಸಿ ಅವರು ಮಾತನಾಡಿದರು. <br /> <br /> ದೇಶದಲ್ಲಿ ಶೇಕಡಾ 35ರಷ್ಟು ಜನರು ಸ್ವಂತ ಮನೆಯಿಲ್ಲದವರು ಮಾತ್ರವಲ್ಲ ಆಕಾಶವೇ ಮೇಲ್ಛಾವಣಿ ಭೂಮಿಯೇ ಹಾಸು ಎಂಬ ಅರ್ಥದಲ್ಲಿ ಬದುಕುತ್ತ್ದ್ದಿದ್ದಾರೆ. ಇಂಥವರಿಗೆ ಸಮಾಜಸೇವಾ ಸಂಸ್ಥೆಗಳು ಮೂಲ ಸೌಕರ್ಯ ಒದಗಿಸಿ ಸಮಾಜಮುಖೀ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. <br /> <br /> ಜಮಾತೆ ಇಸ್ಲಾಮೀ ಹಿಂದ್ ಕೊಡಗು ಜಿಲ್ಲಾ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹ್ಮಾನ್ ಮಾತನಾಡಿ, ಜಮಾತ್ ತನ್ನ ಆರು ದಶಕಗಳ ಇತಿಹಾಸದಲ್ಲಿ ~ಜನಸೇವೆಯೇ ದೇವಾರಾಧನೆ~ ಎಂಬ ಧ್ಯೇಯದಡಿಯಲ್ಲಿ ದೇಶದ ಉದ್ದಗಲಕ್ಕೂ ಜಾತಿ, ವರ್ಗ ಭೇದವಿಲ್ಲದೆ ಜನಸೇವೆ ಮಾಡುತ್ತ ಬಂದಿದೆ ಎಂದರು.<br /> <br /> ಸಿ.ವಿ.ಸೋಮಯ್ಯ, ವಿನ್ಸೆಂಟ್ ಬಾಬು, ಅಲ್ಪಸಂಖ್ಯಾತ ಮುಖಂಡ ಪಿ.ಕೆ.ಮುಹಮ್ಮದ್ ಚೆರುದು ಮೊದಲಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿರಾಜಪೇಟೆ: ಜನಸೇವೆ ಮಾಡುವವರು ನೈಜ ಫಲಾನುಭಾವಿಗಳನ್ನು ಗುರ್ತಿಸಿ ಮೂಲ ಸೌಕರ್ಯ ಒದಗಿಸಬೇಕು. ಇಲ್ಲವಾದಲ್ಲಿ ಉಳ್ಳವರಿಗೂ ಇಲ್ಲದವರಿಗೂ ಮಧ್ಯೆ ಅಂತರ ಹೆಚ್ಚಾಗುತ್ತದೆ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.<br /> <br /> ಗೋಣಿಕೊಪ್ಪ ಸಮೀಪದ ಮಾಯಮುಡಿ ಗ್ರಾಮ ಪಂಚಾಯಿತಿಯ ಚನ್ನಂಕೋಲ್ಲಿ ಪೈಸಾರಿಯಲ್ಲಿ ಜಮಾತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕದಿಂದ ~ವಸತಿ ಹೀನರಿಗೆ ಗೃಹ ಯೋಜನೆ~ಯಡಿಯಲ್ಲಿ ನಿರ್ಮಿಸಲಾಗಿರುವ ಸೌಹಾರ್ದ ಭವನದ ಕೀಲಿ ಕೈ ಹಸ್ತಾಂತರಿಸಿ ಅವರು ಮಾತನಾಡಿದರು. <br /> <br /> ದೇಶದಲ್ಲಿ ಶೇಕಡಾ 35ರಷ್ಟು ಜನರು ಸ್ವಂತ ಮನೆಯಿಲ್ಲದವರು ಮಾತ್ರವಲ್ಲ ಆಕಾಶವೇ ಮೇಲ್ಛಾವಣಿ ಭೂಮಿಯೇ ಹಾಸು ಎಂಬ ಅರ್ಥದಲ್ಲಿ ಬದುಕುತ್ತ್ದ್ದಿದ್ದಾರೆ. ಇಂಥವರಿಗೆ ಸಮಾಜಸೇವಾ ಸಂಸ್ಥೆಗಳು ಮೂಲ ಸೌಕರ್ಯ ಒದಗಿಸಿ ಸಮಾಜಮುಖೀ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. <br /> <br /> ಜಮಾತೆ ಇಸ್ಲಾಮೀ ಹಿಂದ್ ಕೊಡಗು ಜಿಲ್ಲಾ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹ್ಮಾನ್ ಮಾತನಾಡಿ, ಜಮಾತ್ ತನ್ನ ಆರು ದಶಕಗಳ ಇತಿಹಾಸದಲ್ಲಿ ~ಜನಸೇವೆಯೇ ದೇವಾರಾಧನೆ~ ಎಂಬ ಧ್ಯೇಯದಡಿಯಲ್ಲಿ ದೇಶದ ಉದ್ದಗಲಕ್ಕೂ ಜಾತಿ, ವರ್ಗ ಭೇದವಿಲ್ಲದೆ ಜನಸೇವೆ ಮಾಡುತ್ತ ಬಂದಿದೆ ಎಂದರು.<br /> <br /> ಸಿ.ವಿ.ಸೋಮಯ್ಯ, ವಿನ್ಸೆಂಟ್ ಬಾಬು, ಅಲ್ಪಸಂಖ್ಯಾತ ಮುಖಂಡ ಪಿ.ಕೆ.ಮುಹಮ್ಮದ್ ಚೆರುದು ಮೊದಲಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>