<p>ಅಳ್ನಾವರ: ನಮ್ಮ ಗ್ರಾಮೀಣ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಜಾನಪದ ಕಲೆಗಳನ್ನು ಉಳಿಸಲು ಜಾತ್ರೆಯ ವೇದಿಕೆಗಳು ಸಹಕಾರಿಯಾಗಿವೆ ಎಂದು ಡಾ.ಬಸವರಾಜ ಮೂಡಬಾಗಿಲ್ ಹೇಳಿದರು.<br /> <br /> ಪಟ್ಟಣದ ಗ್ರಾಮದೇವಿ ಜಾತ್ರೆ ಅಂಗವಾಗಿ ದೇವಿ ಪಾದಗಟ್ಟಿ ಹತ್ತಿರ ನಿರ್ಮಿಸಿದ ವೇದಿಕೆಯಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಇಂದಿನ ಅಧುನಿಕ ಯುಗದ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಲೆಗಳು ನಶಿಸಿಹೋಗುತ್ತಿದ್ದು, ಸೋಬಾನ ಪದ, ಗೀ ಗೀ ಪದ, ಅಲಾವಿ ಹಾಡುಗಳು ಮಾಯವಾಗುತ್ತಿವೆ. ಇಂತಹ ಕಲೆಗಳ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದರು.<br /> <br /> ಕೃಷ್ಣಾ ಅಷ್ಟೇಕರ ಅಧ್ಯಕ್ಷತೆ ವಹಿಸಿದ್ದರು, ಧರ್ಮದರ್ಶಿ ಬಿ.ಎ. ಪಾಟೀಲ, ಜಾನಪದ ಕಲಾವಿದ ಶಂಕರಣ್ಣ ಸಂಕಣ್ಣವರ, ಎಸ್.ಬಿ. ಪಾಟೀಲ, ಸುಭಾಷ ರಾವೂತ, ಗುರುರಾಜ ಸಬನೀಸ್, ಡಿ.ಎನ್.ಲಲಿತಾ, ಬಾಬು ಸುಣಗಾರ ಮುಂತಾದವರು ಹಾಜರಿದ್ದರು,<br /> <br /> ಜಾತ್ರೆಯ ಯಶಸ್ವಿಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ಎಸ್.ಜಿ.ಗೌರಿ ಸ್ವಾಗತಿಸಿದರು. ಲಕ್ಷ್ಮಿ ಸಾತೇರಿ ನಿರೂಪಿಸಿದರು. ಪುಂಡಲಿಕ ಪಾರದಿ ವಂದಿಸಿದರು. ನಂತರ ರೋಣ ತಾಲ್ಲೂಕಿನ ಅರುಣೋದಯ ಕಲಾ ತಂಡದವರು ನಡೆಸಿಕೊಟ್ಟ ಜಾನಪದ ಕಾರ್ಯಕ್ರಮ ನೆರೆದವರ ಗಮನ ಸೆಳೆಯಿತು.<br /> <br /> ವಿಶೇಷವಾಗಿ ಜೋಗತಿ ನೃತ್ಯ ನೋಡಲು ಜನ ಮಧ್ಯೆ ರಾತ್ರಿಯವರೆಗೆ ಕಾಯ್ದು ಕುಳಿತಿದ್ದರು. ಟಿ.ವಿ. ಕಲಾವಿದ ಬಸವರಾಜ ಪಾಗಾದ ಅವರ ಹಾಸ್ಯ ಚಟಾಕಿಗಳ ನಡುವೆ ವಿವಿಧ ಜಾನಪದ ಕಲೆಗಳು ಜನರ ಮನಸ್ಸನ್ನು ಮುದಗೊಳಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಳ್ನಾವರ: ನಮ್ಮ ಗ್ರಾಮೀಣ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಜಾನಪದ ಕಲೆಗಳನ್ನು ಉಳಿಸಲು ಜಾತ್ರೆಯ ವೇದಿಕೆಗಳು ಸಹಕಾರಿಯಾಗಿವೆ ಎಂದು ಡಾ.ಬಸವರಾಜ ಮೂಡಬಾಗಿಲ್ ಹೇಳಿದರು.<br /> <br /> ಪಟ್ಟಣದ ಗ್ರಾಮದೇವಿ ಜಾತ್ರೆ ಅಂಗವಾಗಿ ದೇವಿ ಪಾದಗಟ್ಟಿ ಹತ್ತಿರ ನಿರ್ಮಿಸಿದ ವೇದಿಕೆಯಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಇಂದಿನ ಅಧುನಿಕ ಯುಗದ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಲೆಗಳು ನಶಿಸಿಹೋಗುತ್ತಿದ್ದು, ಸೋಬಾನ ಪದ, ಗೀ ಗೀ ಪದ, ಅಲಾವಿ ಹಾಡುಗಳು ಮಾಯವಾಗುತ್ತಿವೆ. ಇಂತಹ ಕಲೆಗಳ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದರು.<br /> <br /> ಕೃಷ್ಣಾ ಅಷ್ಟೇಕರ ಅಧ್ಯಕ್ಷತೆ ವಹಿಸಿದ್ದರು, ಧರ್ಮದರ್ಶಿ ಬಿ.ಎ. ಪಾಟೀಲ, ಜಾನಪದ ಕಲಾವಿದ ಶಂಕರಣ್ಣ ಸಂಕಣ್ಣವರ, ಎಸ್.ಬಿ. ಪಾಟೀಲ, ಸುಭಾಷ ರಾವೂತ, ಗುರುರಾಜ ಸಬನೀಸ್, ಡಿ.ಎನ್.ಲಲಿತಾ, ಬಾಬು ಸುಣಗಾರ ಮುಂತಾದವರು ಹಾಜರಿದ್ದರು,<br /> <br /> ಜಾತ್ರೆಯ ಯಶಸ್ವಿಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ಎಸ್.ಜಿ.ಗೌರಿ ಸ್ವಾಗತಿಸಿದರು. ಲಕ್ಷ್ಮಿ ಸಾತೇರಿ ನಿರೂಪಿಸಿದರು. ಪುಂಡಲಿಕ ಪಾರದಿ ವಂದಿಸಿದರು. ನಂತರ ರೋಣ ತಾಲ್ಲೂಕಿನ ಅರುಣೋದಯ ಕಲಾ ತಂಡದವರು ನಡೆಸಿಕೊಟ್ಟ ಜಾನಪದ ಕಾರ್ಯಕ್ರಮ ನೆರೆದವರ ಗಮನ ಸೆಳೆಯಿತು.<br /> <br /> ವಿಶೇಷವಾಗಿ ಜೋಗತಿ ನೃತ್ಯ ನೋಡಲು ಜನ ಮಧ್ಯೆ ರಾತ್ರಿಯವರೆಗೆ ಕಾಯ್ದು ಕುಳಿತಿದ್ದರು. ಟಿ.ವಿ. ಕಲಾವಿದ ಬಸವರಾಜ ಪಾಗಾದ ಅವರ ಹಾಸ್ಯ ಚಟಾಕಿಗಳ ನಡುವೆ ವಿವಿಧ ಜಾನಪದ ಕಲೆಗಳು ಜನರ ಮನಸ್ಸನ್ನು ಮುದಗೊಳಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>