<p><strong>ಜಾವಗಲ್:</strong> ಶಾಶ್ವತ ಬರಗಾಲ ಹಣೆಪಟ್ಟಿ ಕಟ್ಟಿಕೊಂಡಿರುವ ಹಾಗೂ ಮುಗಿಲ ಮಳೆಯನ್ನಷ್ಟೇ ಆಶ್ರಯಿಸಿಕೊಂಡಿರುವ ಜಾವಗಲ್ ಹೋಬಳಿಗೆ ಈ ಬಾರಿಯೂ ಮತ್ತೆ ಬರಗಾಲ ಒಕ್ಕರಿಸಿಕೊಂಡಿದೆ. <br /> <br /> ಗ್ರಾಮೀಣ ಭಾಗದಲ್ಲಿ ನಾಟಿ ಮಾಡಿರುವ ರಾಗಿ ಒಣಗುತ್ತಿದ್ದು, ರೈತರು ತೀವ್ರ ಕಂಗಾಲಾಗಿದ್ದಾರೆ. <br /> ಪ್ರಸಕ್ತ ವರ್ಷ ವರುಣನ ಅವಕೃಪೆಗೆ ಒಳಗಾಗಿ ಬರದ ಛಾಯೆ ಕಾಣಿಸಿಕೊಂಡಿದೆ. ಈ ಹೋಬಳಿಯ ಜನ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಮುಂಗಾರು ವೈಫಲ್ಯ ಹೋಬಳಿ ರೈತ ಸಮುದಾಯದ ಪಾಲಿಗೆ ಅಕ್ಷರಶಃ ಶಾಪವಾಗಿ ಪರಿಣಮಿಸಿದೆ.<br /> <br /> ಜುಲೈ ಅಂತ್ಯಕ್ಕೆ 300ಮಿ.ಮಿ. ವಾಡಿಕೆ ಮಳೆ ಆಗ ಬೇಕಾಗಿತ್ತು. ಆದರೆ ಈ ಬಾರಿ ಮಳೆ ಬಾರಿ ಕಡಿಮೆಯಾಗಿದೆ. ಈಗಾಗಲೆ 9 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಬೇಕಾಗಿತ್ತು. ಹೋಬಳಿಯಲ್ಲಿ ಮಳೆಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವ ಕಾರಣ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಈಗ 6 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯ ನಡೆದಿದೆ. ರೈತರು ಪ್ರತಿ ದಿನ ಮುಗಿಲು ನೋಡುವಂತಾಗಿದ್ದು, ಈ ಬಾರಿ ರೈತರ ಕನಸೆಲ್ಲ ನುಚ್ಚು ನೂರಾಗಿದೆ. <br /> <br /> ಜಾವಗಲ್ ಹೋಬಳಿಯ ಪ್ರಮುಖ ಬೆಳೆ ರಾಗಿ ಬಿತ್ತನೆಗೆ ಕಾಲಾವಕಾಶ ಮುಗಿದಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಬಯಲು ಸೀಮೆಯ ಹಣೆಪಟ್ಟಿ ಹೊಂದಿರುವ ಈ ಹೋಬಳಿಗೆ ನೀರಾವರಿ ಮರೀಚಿಕೆಯಾಗಿದೆ. ಅಗತ್ಯ ಸಂದರ್ಭದಲ್ಲಿ ವರುಣನು ರೈತರಿಗೆ ಕೈಕೊಟ್ಟಿರುವುದರಿಂದ ಅನ್ನದಾತ ಮುಗಿಲಿನತ್ತ ಮುಖ ಮಾಡುವಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಬರಪೀಡಿತ ಪಟ್ಟಿಗೆ ಸೇರಿಸಿ ಪರಿಹಾರನೀಡ ಬೇಕೆಂಬುದು ರೈತರ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಾವಗಲ್:</strong> ಶಾಶ್ವತ ಬರಗಾಲ ಹಣೆಪಟ್ಟಿ ಕಟ್ಟಿಕೊಂಡಿರುವ ಹಾಗೂ ಮುಗಿಲ ಮಳೆಯನ್ನಷ್ಟೇ ಆಶ್ರಯಿಸಿಕೊಂಡಿರುವ ಜಾವಗಲ್ ಹೋಬಳಿಗೆ ಈ ಬಾರಿಯೂ ಮತ್ತೆ ಬರಗಾಲ ಒಕ್ಕರಿಸಿಕೊಂಡಿದೆ. <br /> <br /> ಗ್ರಾಮೀಣ ಭಾಗದಲ್ಲಿ ನಾಟಿ ಮಾಡಿರುವ ರಾಗಿ ಒಣಗುತ್ತಿದ್ದು, ರೈತರು ತೀವ್ರ ಕಂಗಾಲಾಗಿದ್ದಾರೆ. <br /> ಪ್ರಸಕ್ತ ವರ್ಷ ವರುಣನ ಅವಕೃಪೆಗೆ ಒಳಗಾಗಿ ಬರದ ಛಾಯೆ ಕಾಣಿಸಿಕೊಂಡಿದೆ. ಈ ಹೋಬಳಿಯ ಜನ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಮುಂಗಾರು ವೈಫಲ್ಯ ಹೋಬಳಿ ರೈತ ಸಮುದಾಯದ ಪಾಲಿಗೆ ಅಕ್ಷರಶಃ ಶಾಪವಾಗಿ ಪರಿಣಮಿಸಿದೆ.<br /> <br /> ಜುಲೈ ಅಂತ್ಯಕ್ಕೆ 300ಮಿ.ಮಿ. ವಾಡಿಕೆ ಮಳೆ ಆಗ ಬೇಕಾಗಿತ್ತು. ಆದರೆ ಈ ಬಾರಿ ಮಳೆ ಬಾರಿ ಕಡಿಮೆಯಾಗಿದೆ. ಈಗಾಗಲೆ 9 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಬೇಕಾಗಿತ್ತು. ಹೋಬಳಿಯಲ್ಲಿ ಮಳೆಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವ ಕಾರಣ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಈಗ 6 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯ ನಡೆದಿದೆ. ರೈತರು ಪ್ರತಿ ದಿನ ಮುಗಿಲು ನೋಡುವಂತಾಗಿದ್ದು, ಈ ಬಾರಿ ರೈತರ ಕನಸೆಲ್ಲ ನುಚ್ಚು ನೂರಾಗಿದೆ. <br /> <br /> ಜಾವಗಲ್ ಹೋಬಳಿಯ ಪ್ರಮುಖ ಬೆಳೆ ರಾಗಿ ಬಿತ್ತನೆಗೆ ಕಾಲಾವಕಾಶ ಮುಗಿದಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಬಯಲು ಸೀಮೆಯ ಹಣೆಪಟ್ಟಿ ಹೊಂದಿರುವ ಈ ಹೋಬಳಿಗೆ ನೀರಾವರಿ ಮರೀಚಿಕೆಯಾಗಿದೆ. ಅಗತ್ಯ ಸಂದರ್ಭದಲ್ಲಿ ವರುಣನು ರೈತರಿಗೆ ಕೈಕೊಟ್ಟಿರುವುದರಿಂದ ಅನ್ನದಾತ ಮುಗಿಲಿನತ್ತ ಮುಖ ಮಾಡುವಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಬರಪೀಡಿತ ಪಟ್ಟಿಗೆ ಸೇರಿಸಿ ಪರಿಹಾರನೀಡ ಬೇಕೆಂಬುದು ರೈತರ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>